ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯು ರಾಜ್ಯದಲ್ಲಿರುವ ಅರ್ಹ ಕಾರ್ಮಿಕರಿಗೆ ಲೇಬರ್ ಕಾರ್ಡ್ (Labour Card) ವಿತರಿಸುತ್ತದೆ. ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಈ ಲೇಬರ್ ಕಾರ್ಡ್ ಗಳನ್ನು ಪಡೆಯಬಹುದು. ಆದರೆ ಇದಕ್ಕೆ ಹಲವಾರು ಕಂಡೀಷನ್ ಗಳಿದ್ದು ಇದನ್ನು ಪೂರೈಸುವ ಮತ್ತು ಇದಕ್ಕೆ ಸಂಬಂಧಿತ ದಾಖಲೆ ಪತ್ರಗಳನ್ನು ನೀಡುವವರು ಮಾತ್ರ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಲೇಬರ್ ಕಾರ್ಡ್ ಪಡೆಯಬಹುದು.
ಅದರಲ್ಲಿ ಮುಖ್ಯವಾಗಿ 18 ವರ್ಷ ಮೇಲ್ಪಟ್ಟು 60 ವರ್ಷ ವಯಸ್ಸಿನ ಒಳಗಿರುವ ಅರ್ಹ ಕಾರ್ಮಿಕನು ಲೇಬರ್ ಕಾರ್ಡ್ ನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಿದ್ದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಪಡೆಯಲು ಸಾಧ್ಯ. ಇದೆಲ್ಲವನ್ನು ಮೀರಿ ರಾಜ್ಯದಲ್ಲಿ ಹಲವಾರು ನಕಲಿ ಲೇಬರ್ ಕಾರ್ಡ್ ಗಳು (fake Labiur Card) ಇರುವುದು ಕಂಡು ಬಂದಿದೆ.
ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!
ಈ ರೀತಿ ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಪ್ರಯೋಜನ ಪಡೆಯುವ ದುರುದ್ದೇಶದಿಂದ ಕಟ್ಟಡ ಕಾರ್ಮಿಕರಲ್ಲದವರು ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ಕೂಡ ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ವಂ’ಚಿ’ಸುತ್ತಿದ್ದಾರೆ, ಇದರಿಂದ ಅಸಲಿ ಫಲಾನುಭವಿಗಳಿಗೆ ಅ’ನ್ಯಾ’ಯವಾಗುತ್ತಿದೆ.
ಅಂಕಿ ಅಂಶಗಳ ಪ್ರಕಾರ ತಿಳಿದು ಬಂದ ಆಶ್ಚರ್ಯಕರ ಸಂಗತಿ ಏನೆಂದರೆ 2016ರಲ್ಲಿ ಲೇಬರ್ ಕಾರ್ಡ್ ಯೋಜನೆಗಳನ್ನು ಪರಿಚಯಿಸಲಾಯಿತು. ಆದರೆ ಆ ಸಮಯದಲ್ಲಿ ಮಂಡಳಿಯಲ್ಲಿ ನೋಂದಣಿಯಾಗಿದ್ದ ಕಾರ್ಮಿಕರ ಸಂಖ್ಯೆ ಕೇವಲ 12 ಲಕ್ಷ ಆದರೆ ಈಗ ನೋಂದಾಯಿಸಿಕೊಂಡಿರುವ ಫಲಾನುಭವಿಗಳ ಸಂಖ್ಯೆ 53 ಲಕ್ಷ ತಲುಪಿದೆ.
ಈ ಸುದ್ದಿ ಓದಿ:-ನಿಧಿ ಭಾಗ್ಯ ಯಾರಿಗೆ ಇರುತ್ತದೆ. ದಿಢೀರ್ ಅಗರ್ಭ ಶ್ರೀಮಂತರಾಗುವ ಜಾಕ್ ಪಾಟ್ ಜಾತಕದಲ್ಲಿ ನಿರ್ಧಾರವಾಗಿರುತ್ತದೆಯೇ ಇಲ್ಲಿದೆ ನೋಡಿ ಮಾಹಿತಿ.!
ಇದರಲ್ಲಿ ಮಾಹಿತಿ ಕೊರತೆಯಿಂದ ಇದುವರೆಗೂ ನೋಂದಣಿ ಆಗದೆ ಉಳಿದಿದ್ದ ಕಾರ್ಮಿಕರ ಸಂಖ್ಯೆ ಜೊತೆಗೆ ನಕಲಿ ಕಾರ್ಮಿಕರ ಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೇರಿದೆ. ಇದನ್ನು ಪತ್ತೆ ಹಚ್ಚಿದ ಇಲಾಖೆಯು ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧ, ಇಂತಹವರಿಗೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಮತ್ತು ಈಗ ಸರ್ಕಾರದಿಂದ ಲೇಬರ್ ಕಾರ್ಡ್ ಗಳ ಪರಿಶೀಲನ ಕಾರ್ಯವು ಕೂಡ ನಡೆಯುತ್ತಿದೆ.
ಹಾಗಾಗಿ ಇಂತಹ ಅನಧಿಕೃತ ಲೇಬರ್ ಕಾಡುಗಳನ್ನು ಹೊಂದಿದ್ದರೆ ಕೂಡಲೇ ಅಂತವರು ತಾವೇ ಕ್ಯಾನ್ಸಲ್ ಮಾಡಿಕೊಳ್ಳುವುದು ಉತ್ತಮ ಎಂದು ಕಾರ್ಡ್ ಕ್ಯಾನ್ಸಲ್ ಮಾಡಿಸಿಕೊಳ್ಳುವುದಕ್ಕೆ ಅವಕಾಶವೊಂದನ್ನು ಸರ್ಕಾರ ನೀಡಿದೆ. ಸರ್ಕಾರದ ವತಿಯಿಂದ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಸರ್ಕಾರವು ಕಾರ್ಮಿಕರ ಪರವಾಗಿ ಇದನ್ನು ಆರಂಭಿಸಿ ಆರರಿಂದ ಏಳು ಲಕ್ಷ ಕಾರ್ಡ್ ಪತ್ತೆ ಹಚ್ಚಿ ರದ್ದು ಕೂಡ ಮಾಡಿದೆ. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಕೂಡ ಈ ವಿಚಾರದ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
ಅರ್ಹ ಲೇಬರ್ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದಿಂದ ಈ ಕೆಳಕಂಡ ಯೋಜನೆಗಳ ಪ್ರಯೋಜನ ಸಿಗುತ್ತಿದೆ:-
* ಅಪ.ಘಾ.ತ ಪರಿಹಾರ
* ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
* ತಾಯಿ ಮಗು ಸಹಾಯಹಸ್ತ
* ದುರ್ಬಲತೆ ಪಿಂಚಣಿ ಮುಂದುವರಿಕೆ
* ಪಿಂಚಣಿ ಮುಂದುವರಿಕೆ
* ಹೆರಿಗೆ ಸೌಲಭ್ಯ
* ದುರ್ಬಲತೆ ಪಿಂಚಣಿ ಸಾಲಭ್ಯ
* ಶೈಕ್ಷಣಿಕ ಸಹಾಯಧನ
* ಅಂತ್ಯಕ್ರಿಯೆ ವೆಚ್ಚ
* ಮದುವೆ ಸಹಾಯಧನ
* ವೈದ್ಯಕೀಯ ಸಹಾಯಧನ
* ಪಿಂಚಣಿ ಸೌಲಭ್ಯ
* ಶ್ರಮಸಾಮರ್ಥ್ಯ ಟೂಲ್ ಕಿಟ್
* ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ.
* ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಮತ್ತು ಉಚಿತ ಲ್ಯಾಪ್ಟಾಪ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ
* ಇನ್ನಿತರ ಯೋಜನೆಗಳು.