Home Blog Page 107

5 ನಿಮಿಷದಲ್ಲಿ ಸೊಳ್ಳೆಯನ್ನು ಓಡಿಸುವ ಸುಲಭವಾದ ಆರೋಗ್ಯಕರ ಮನೆಮದ್ದುಗಳು ಇವು.!

 

ಸೊಳ್ಳೆಗಳಿಂದ ಮನುಷ್ಯನಿಗೆ ಅನೇಕ ರೀತಿಯ ರೋಗಗಳು ಬರುತ್ತವೆ. ಡೆಂಗ್ಯೂ ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಮಾ’ರ’ಣಾಂ’ತಿ’ಕ ಕಾಯಿಲೆಗಳು ಕೂಡ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಹೀಗಾಗಿ ಆರೋಗ್ಯ ಇಲಾಖೆಯು ಕೂಡ ಸೊಳ್ಳೆ ನಿಯಂತ್ರಣದ ಬಗ್ಗೆ ಅನೇಕ ಮಾರ್ಗಸೂಚಿಗಳನ್ನು ಹೇಳಿ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸುತ್ತಿದೆ.

ಹೀಗಿದ್ದರೂ ಜನರ ನಿರ್ಲಕ್ಷತೆಯಿಂದ ಪ್ರತಿನಿತ್ಯವೂ ಈ ಕಾಯಿಲೆಗಳಿಗೆ ಸಾವಿರಾರು ಜನ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ಕಾಲರ ಡೈರಿಯಾ ಅಲರ್ಜಿ ವೈರಲ್ ಫೀವರ್ ಗಳು ಇನ್ನು ಮುಂತಾದ ಅನೇಕ ಕಾಯಿಲೆಗಳು ಸೊಳ್ಳೆ ಕಡಿತದಿಂದ ಬರುತ್ತಿವೆ. ಇದರಿಂದ ತಪ್ಪಿಸಿಕೊಳ್ಳಬೇಕು ಎಂದರೆ ಮನೆ ಸುತ್ತಮುತ್ತ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

ಯಾವುದೇ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬೇಕು, ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತದೆ ಹಾಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತೇವೆ.

ಮೈತುಂಬ ಬಟ್ಟೆ ಧರಿಸುವುದು, ಸಂಜೆ ಆಗುತ್ತಿದ್ದಂತೆ ಸೊಳ್ಳೆ ಬತ್ತಿ ಹಚ್ಚುವುದು, ಸೊಳ್ಳೆ ಕಾಯಿಲ್ ಗಳನ್ನು ಹಾಕುವುದು, ಸೊಳ್ಳೆ ಬ್ಯಾಟ್ ಇಂದ ಸೊಳ್ಳೆ ಹೊಡೆದು ಸಾಯಿಸುವುದು ಈಗಂತೂ ಸೊಳ್ಳೆ ಕಚ್ಚಬಾರದು ಎಂದು ಲೋಶನ್ ಗಳು ಬಂದಿವೆ ಅವುಗಳನ್ನು ಕೈಗೆ ಕಾಲುಗಳಿಗೆ ಹಚ್ಚಿಕೊಳ್ಳುವುದು ಇನ್ನು ಎಷ್ಟೆಷ್ಟು ಹರಸಾಹಸ ಪಡುತ್ತೇವೆ.

ಆದರೆ ಈ ರೀತಿ ಸೊಳ್ಳೆ ಹೋಗಿಸುವುದಕ್ಕೆ ಉಪಯೋಗಿಸುವ ರಾಸಾಯನಿಕಗಳು ಉರಿವಾಗ ಹೊರ ಹಾಕುವ ವಾಸನೆಯೂ ಬಹಳ ಕೆಟ್ಟದಾಗಿದ್ದು ಇದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ ನ್ಯಾಚುರಲ್ ಆಗಿ ಸೊಳ್ಳೆಗಳನ್ನು ಓಡಿಸುವ ಪ್ರಯತ್ನ ಪಡುವುದು ಒಳ್ಳೆಯದು.

ಅದಕ್ಕಾಗಿ ಹೇಗೆ ನ್ಯಾಚುರಲ್ ಆಗಿ ಮನೆಮದ್ದುಗಳನ್ನು ಮಾಡಿಕೊಂಡು ಸೊಳ್ಳೆಗಳು ಸಾಯುವಂತೆ ಅಥವಾ ಇನ್ಯಾವತ್ತು ಸೊಳ್ಳೆಗಳು ನಮ್ಮ ಮನೆ ಕಾಲಿಡದಂತೆ ‌ಮಾಡಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೀವು ಟ್ರೈ ಮಾಡಿ ಸೊಳ್ಳೆಗಳಿಂದ ಮುಕ್ತಿ ಹೊಂದಿ.

* ನಾಟಿ ಹಸುವಿನ ಬೆರಣಿ ಅನೇಕ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿದೆ. ಈ ಬೆರಣಿಯನ್ನು ಉರಿಸುವುದರಿಂದ ಹೊಗೆ ಬರುತ್ತದೆ ಆ ಹೊಗೆಯು ಮನೆ ತುಂಬ ಹರಡಿದಾಗ ಸೊಳ್ಳೆಗಳು ಮನೆ ಬಿಟ್ಟು ಹೋಗುತ್ತವೆ, ಹಾಗಾಗಿ ನಾಟಿ ಹಸುವಿನ ಬೆರಣಿಯನ್ನು ಬಳಸಿ ಈ ಬೆರಣಿ ಉರಿಯುವಾಗ ಬೇವಿನ ಎಲೆಗಳನ್ನು ಹಾಕುವುದರಿಂದ ಕೂಡ ಉತ್ತಮ ಪರಿಣಾಮಗಳು ಉಂಟಾಗುತ್ತದೆ.

* ಒಂದು ವೇಳೆ ಪಟ್ಟಣ ಪ್ರದೇಶದಲ್ಲಿ ಇರುವವರು ಈ ಬೆರಣಿಯ ಪ್ರಯೋಗ ಮಾಡಲು ಸಾಧ್ಯವಾಗದೆ ಇದ್ದರೆ ಪಚ್ಚ ಕರ್ಪೂರದನ್ನು ಹಚ್ಚಿ ಅದರ ಮೇಲೆ ಪಲಾವ್ ಎಲೆಗಳನ್ನು ಹಾಕಿ ಅದು ಹೊಗೆ ಬರುತ್ತದೆ. ಇದನ್ನು ಮನೆಯ ಮೂಲೆ ಮೂಲೆಗಳಿಗೂ ಓಡಾಡಿ ನಂತರ ತಂದು ಒಂದು ಕಡೆ ಇಡಿ, ಸೊಳ್ಳೆಗಳು ಮನೆ ಬಿಟ್ಟು ಹೋಗುತ್ತವೆ.

* ಕೆಲವರು ಮನೆಗಳಲ್ಲಿ ಕಾಯಿಲ್ ಗಳನ್ನು ಉಪಯೋಗಿಸುತ್ತಿರುತ್ತಾರೆ. ಆ ಕಾಯಿಲ್ ಇದ್ದರೆ ಅದರ ಟ್ಯೂಬ್ ನಲ್ಲಿ ಇರುವ ದ್ರಾವಣವನ್ನು ಚೆಲ್ಲಿ ಈಗ ನೀವೇ ಒಂದು ದ್ರಾವಣವನ್ನು ಮಾಡಿ ಹಾಕಿ. ಹೇಗೆ ಮಾಡಬೇಕು ಎಂದರೆ 2ಗ್ರಾಂ ಪಚ್ಚ ಕರ್ಪೂರ, 5 ಗ್ರಾಂ ಬೇವಿನ ಎಲೆ ಹಾಗೂ 5 ಗ್ರಾಂ ನೀಲಗಿರಿ ಎಲೆ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ಒಂದು ಕಾಟನ್ ಬಟ್ಟೆಗೆ ಅದನ್ನು ಹಾಕಿ ಹಿಂಡಿ ರಸ ತೆಗಿಯಬೇಕು.

ಆ ರಸವನ್ನು ಕಾಯಿಲ್ ಗೆ ಲಿಕ್ವಿಡ್ ನಂತೆ ಹಾಕಿ ಪ್ಲಗ್ ಆನ್ ಮಾಡುವುದರಿಂದ ಸೊಳ್ಳೆ ಮನೆಗೆ ಬರುವುದಿಲ್ಲ ಇದ್ದರೂ ಹೊರಟು ಹೋಗುತ್ತದೆ. ಕಾಟನ್ ಬಟ್ಟೆಯನ್ನು ಉಂಡೆ ಉಂಡೆಗಳನ್ನಾಗಿ ಮಾಡಿಕೊಂಡು ಅದನ್ನು ಬೇವಿನ ಎಣ್ಣೆಗೆ ಹದ್ದಿ ನಂತರ ಬೆಂಕಿ ಹಚ್ಚಿ ಉರಿಸುವುದರಿಂದ ಉಂಟಾಗುವ ಹೊಗೆಯಿಂದ ಕೂಡ ಸೊಳ್ಳೆಗಳು ನಾಶವಾಗುತ್ತವೆ.

https://youtu.be/ZxRaNQy6wO8?si=b-k22Y7Exf5ugjc4

ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!

 

ಬೆಳಗಾವಿಯ ಚಿಕ್ಕೋಡಿಯ ಬಳಿ ರೂಪಿನಾಳ ಎನ್ನುವ ಗ್ರಾಮದಲ್ಲಿ ಇಂದು ಅಚ್ಚರಿಯ ಘಟನೆ ಎಂದು ನಡೆದಿದೆ. ಆ ಭಾಗದಲ್ಲಿ ಕೆಲ ದಿನಗಳಿಂದ ಇಂತಹದೊಂದು ಗುಮಾನಿ ಇತ್ತಾದರೂ ಇಂದು ಅಂಗಡಿಯಲ್ಲಿದ್ದ CCTV ಕ್ಯಾಮೆರದಲ್ಲಿ ಈ ಹಿಪ್ನಾಟಿಸಂ ಕೈಚಳಕ ಬಯಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರೆಲ್ಲಾ ಬೆಚ್ಚಿ ಬೀಳುವತಾಗಿದೆ.

ವಿಷಯ ಏನೆಂದರೆ ಚಿಕ್ಕೋಡಿಯ ಬಳಿ ಹಲವು ದಿನಗಳಿಂದ ಚೀಟಿ ಗ್ಯಾಂಗ್ ಒಂದು ಸುತ್ತಾಡುತ್ತಿದೆ, ಈ ಚೀಟಿ ಗ್ಯಾಂಗ್ ಎನ್ನುವ ಹೆಸರು ಏಕೆ ಬಂತು ಎಂದರೆ ಇವರು ಬಿಳಿ ಹಾಳೆಯನ್ನು ತೋರಿಸುತ್ತಾರೆ ಆ ಹಾಳೆಯನ್ನು ನೋಡಿದ ತಕ್ಷಣ ನೋಡಿದವರಿಗೆ ಏನಾಗುತ್ತದೆ ಗೊತ್ತಿಲ್ಲ ಅವರು ಹೇಳಿದಂತೆ ಎಲ್ಲವನ್ನು ಕೇಳಲು ಶುರು ಮಾಡುತ್ತಾರೆ.

ಒಂಟಿ ಹೆಂಗಸರನ್ನು, ಅಂಗಡಿ ಮುಂಗಟುಗಳಲ್ಲಿ ಗ್ರಾಹಕರು ಇಲ್ಲದಿದ್ದನ್ನು ಹೊಂಚು ಹಾಕಿ ಕಾದು ಹಣ ಚಿನ್ನ ಹೊಡೆಯುವ ಹು’ನ್ನಾ’ರ’ಕ್ಕೆ ಕೈ ಹಾಕುವ ಇವರು ಬಹಳ ಭೀ’ಕ’ರವಾಗಿ ಎಲ್ಲೆಡೆ ಕಾಡುತ್ತಿದ್ದಾರೆ. ಅದೇ ರೀತಿ ಇಂದು ಚಿಕ್ಕೋಡಿಯ ರೂಪಿನಾಳ ಎನ್ನುವ ಗ್ರಾಮದಲ್ಲಿ ಸಾವಿತ್ರಿ ಪೋರೆವಲ್ ಎನ್ನುವವರ ಅಂಗಡಿಗೆ ಹೋಗಿದ್ದಾರೆ, CCTV ಯಲ್ಲಿ ಕಾಣುತ್ತಿರುವ ದೃಶ್ಯಗಳನ್ನು ಆಧರಿಸಿ ಹೇಳುವುದಾದರೆ ಅಂಗಡಿಗೆ ಬಂದ ಇವರು ಮೊದಲು ವಿಮಲ್ ಕೊಂಡುಕೊಂಡಿದ್ದಾರೆ.

ಅಷ್ಟರಲ್ಲಿ ಬೇರೆ ಯಾರೋ ಗ್ರಾಹಕ ಅಲ್ಲಿಗೆ ಬಂದ ಕಾರಣ ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳುವಂತೆ ನಾಟಕವಾಡಿ ಅಲ್ಲೇ ಕೆಲಸ ಸಮಯ ಕಳೆದಿದ್ದಾರೆ. ಮೊದಲಿಗೆ 30 ರೂ. ಕೊಟ್ಟಿದ್ದಾರೆ ಸಾವಿತ್ರಿ ಅವರು ಆ ಹಣವನ್ನು ತೆಗೆದುಕೊಂಡಿದ್ದಾರೆ ನಂತರ ಜೇಬಿನಿಂದ ಒಂದು ಬಿಳಿ ಖಾಲಿ ಹಾಳೆಯನ್ನು ಕೊಟ್ಟಿದ್ದಾರೆ.

ಸಾವಿತ್ರಿ ಅವರು ಅಲ್ಲೇನಾಗುತ್ತಿದೆ ಎನ್ನುವುದನ್ನು ಅರಿಯಲಾಗದಷ್ಟು ಮಂಕಾಗಿ ಹೋಗಿದ್ದಾರೆ. ಬಳಿಕ ಆ ವ್ಯಕ್ತಿ ಹೇಳಿದ್ದನ್ನೆಲ್ಲ ಕೇಳಲು ಶುರು ಮಾಡಿದ್ದಾರೆ. ಮಾಂಗಲ್ಯ ಸರ ಕಳಚಿ, ಬಿಳಿ ಹಾಳೆ ಮೇಲೆ ಮೇಲೆ ಇಡುವಂತೆ ಹೇಳಿದ್ದಾರೆ, ಹಿಂದೂ ಮುಂದು ಯೋಚನೆ ಮಾಡದೆ ಆ ಮಹಿಳೆ ಮಾಂಗಲ್ಯ ಸರವನ್ನು ಬಿಚ್ಚಿ ಬಿಳಿ ಹಾಳೆ ಮೇಲೆ ಇಡುತ್ತಿರುವುದನ್ನು ನಾವು ಕಾಣಬಹುದಾಗಿದೆ ನಂತರ ಅದನ್ನು ಗಲ್ಲಾ ಪೆಟ್ಟಿಗೆಯಲ್ಲಿ ಇಡುವಂತೆ ಹೇಳಿದ್ದಾರೆ ಆಕೆ ಮಾಡಿದ್ದಾರೆ.

ಬಳಿಕ ತನ್ನ ಜೇಬಿನಲ್ಲಿದ್ದ ಮತ್ತೊಂದು ಚೀಟಿ ತೆಗೆದು ಅದರಲ್ಲಿ ಇದ್ದ ಮರಳನ್ನು ತೆಗೆದುಕೊಂಡು ಅದನ್ನು ಸಹ ಡ್ರಾ ನಲ್ಲಿ ಇಡುವಂತೆ ಮಾಡಿ ಸರ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತ ಹೋದ ಸುಮಾರು ಹೊತ್ತು ನಲ್ಲಿ ಇದ್ದ ಸರ ಕಾಣದನ್ನು ನೋಡಿ ಪತಿಗೆ ಕರೆ ಮಾಡಿ ಕರೆಸಿದ್ದಾರೆ, CCTV ಚೆಕ್ ಮಾಡಿದಾಗ ತನಗೆ ಆಗಿರುವ ಮೋ’ಸ ಅರಿವಾಗಿವಾಗಿ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆ ವ್ಯಕ್ತಿ ಬಂದು ಹಾಳೆ ತೋರಿಸಿರಿದ್ದಾಗಿನಿಂದ ಬಹಳ ತಲೆ ಸುತ್ತು ಬಂತು ಮತ್ತು ಆತ ಏನು ಹೇಳುತ್ತಿದ್ದ ಎನ್ನುವುದರ ಅರಿವು ನನಗೆ ಇಲ್ಲ, ಎಚ್ಚರವಾಗಿದ್ದರೆ ನಾನು ಕೊರಳಲ್ಲಿ ಇದ್ದ ಮಾಂಗಲ್ಯ ಸರವನ್ನು ತೆಗೆಯುತ್ತಿರಲಿಲ್ಲ. ನಾನು ಏನು ಮಾಡುತ್ತಿದ್ದೆ ಎನ್ನುವುದರ ಮೇಲೆ ನನಗೆ ಪ್ರಜ್ಞೆ ಇರಲಿಲ್ಲ CCTV ಚೆಕ್ ಮಾಡಿದ ಮೇಲೆ ನನಗೆ ಆಶ್ಚರ್ಯ ಆಗುತ್ತಿದೆ ನಾನು ಇದನ್ನೆಲ್ಲ ಮಾಡಿದೆನಾ ಎನಿಸುತ್ತಿದೆ ಎಂದು ತಮಗಾದ ಕ’ಹಿ ಅನುಭವದ ಬಗ್ಗೆ ಮಾಧ್ಯಮಗಳ ಜೊತೆಗೆ ಸಾವಿತ್ರಿ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಇಂತಹ ಕೇಸ್ ಗಳು ಹೆಚ್ಚಾಗುತ್ತಿದ್ದು ಬಿಳಿ ಹಾಳೆ ಇಟ್ಟುಕೊಂಡು ಅವರೇನು ಮಾಡಿದರು ಎನ್ನುವುದರ ಮೇಲೆ ಕುತೂಹಲ ಹೆಚ್ಚಾಗುತ್ತಿದೆ ಮತ್ತು ಈ ರೀತಿ ಒಂದು ವಿದ್ಯೆ ಇದೆಯಾ ಎನ್ನುವ ಅ’ನು’ಮಾ’ನ ಹುಟ್ಟುತ್ತಿದೆ, ಹಾಗೆ ಕ್ಯಾಮೆರಾ ಇದೆ ಎನ್ನುವ ವಿಚಾರ ಗೊತ್ತಿದ್ದರೂ ಇಷ್ಟು ರಾಜರೋಷವಾಗಿ ಓಡಾಡುತ್ತಿರುವ ಇವರ ಮಾಸ್ಟರ್ ಪ್ಲಾನ್ ಏನು ಎನ್ನುವುದರ ಬಗ್ಗೆ ಚಿಂತೆ ಹುಟ್ಟಿಸುತ್ತಿದೆ. ಸದ್ಯಕ್ಕೆ ಪೊಲೀಸರು ಬಲೆ ಬೀಸಿ ಖದೀಮನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಈ ಸುದ್ದಿಯನ್ನು ಅತಿ ಹೆಚ್ಚು ಶೇರ್ ಮಾಡಿ ಆದಷ್ಟು ಎಲ್ಲರೂ ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿ.

 

ಎಷ್ಟೇ ತೆಳ್ಳಗಿದ್ದರು ಕೇವಲ 1 ತಿಂಗಳಲ್ಲಿ ದಪ್ಪ ಆಗುವ ಮನೆಮದ್ದು.!

 

ಮನುಷ್ಯ ದಪ್ಪ ಹಾಗೂ ಸಣ್ಣ ಇರುವುದು ಕೆಲವೊಮ್ಮೆ ಅವರ ಜೆನಟಿಕ್ ರೀಸನ್ ನಿಂದ ಕೂಡ ಆಗಿರುತ್ತದೆ. ತಂದೆ ಅಥವಾ ತಾಯಿಯಲ್ಲಿ ಒಬ್ಬರು ತುಂಬಾ ಸಣ್ಣ ಇದ್ದರೆ ಮಕ್ಕಳು ಕೂಡ ಸಣ್ಣ ಆಗುತ್ತಾರೆ ಇದನ್ನು ಹೊರತುಪಡಿಸಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆ ಆಗಿಬಿಡುತ್ತದೆ.

ಆಗ ಅವರು ನೋಡಲು ಚೆನ್ನಾಗಿ ಕಾಣುವುದಿಲ್ಲ ಅಥವಾ ಕೆಲವೊಂದು ಉದ್ಯೋಗಗಳಿಗೆ ಇಂತಿಷ್ಟೇ ತೂಕ ಇರಬೇಕು ಎನ್ನುವ ನಿಯಮ ಇರುತ್ತದೆ. ಇಂತಹ ಸಮಯದಲ್ಲಿ ಕಳೆದುಕೊಂಡಿರುವ ತೂಕವನ್ನು ಹೇಗೆ ಗಳಿಸಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದಕ್ಕೂ ಮುನ್ನ ಏಕೆ ಸಣ್ಣವಾಗುತ್ತೇವೆ ಎಂದು ತಿಳಿದುಕೊಳ್ಳಬೇಕು.

ಸಕ್ಕರೆ ಕಾಯಿಲೆ ಬಂದ ವ್ಯಕ್ತಿ ಇದ್ದಕ್ಕಿದ್ದಂತೆ 5kg ರಿಂದ 10kg ಸಣ್ಣ ಆಗಿಬಿಡುತ್ತಾರೆ, ಅತಿ ಹೆಚ್ಚು ವ್ಯಾಯಾಮ ಮಾಡುವವರು ಸಣ್ಣ ಆಗುತ್ತಾರೆ, ಹೈಪೋಥೈರಾಯಿಡಿಸಂ ನಿಂದ ಕೂಡ ದಪ್ಪ ಆಗುತ್ತಾರೆ ಇದನ್ನು ಹೊರತುಪಡಿಸಿ ಜೀವನದಲ್ಲಿ ಯಾವುದೋ ಒಂದು ವಿಷಯದಿಂದ ಬಹಳ ಕೊರಗಿದಾಗ ಕೂಡ ವ್ಯಕ್ತಿ ಸಣ್ಣ ಆಗುತ್ತಾನೆ.

ಹಾಗಾಗಿ ಮೊದಲು ಇವುಗಳನ್ನು ಸರಿಪಡಿಸಿಕೊಳ್ಳಬೇಕು. ಹೈಪೋಥೈರಾಯಿಡಿಸಂ ಸಕ್ಕರೆ, ಕಾಯಿಲೆಗಳು ಇದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಂಡು ಆ ಡಿಸಾರ್ಡರ್ ಸರಿಪಡಿಸಿಕೊಳ್ಳಬೇಕು ಮತ್ತು ಆಗಿಹೋದ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು. ನಾವು ಮೋ’ಸ ಹೋಗಿದ್ದಕ್ಕಾಗಿ, ಹಣ ಕಳೆದುಕೊಂಡಿದ್ದಕ್ಕಾಗಿ, ಉದ್ಯೋಗ ಹೋಗಿದ್ದಕ್ಕಾಗಿ, ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂತು ಎಂದು ಬಹಳ ಯೋಚನೆ ಹಿಡಿದಾಗ ಸಣ್ಣವಾಗುತ್ತೇವೆ.

ಆಗಿದ್ದು ಆಯ್ತು ಮುಂದೇನು ಎನ್ನುವುದರ ಬಗ್ಗೆ ಯೋಚನೆ ಮಾಡಿ ಆ ನೋವಿನಿಂದ ಹೊರ ಬರಬೇಕು. ಸದಾ ಮನಸ್ಸಿನಲ್ಲಿ ಖುಷಿಯಾಗಿ ಇರಬೇಕು ಇದು ಕೂಡ ಮನುಷ್ಯ ದಪ್ಪ ಆಗಲು ಸಹಾಯ ಮಾಡುತ್ತದೆ. ಇನ್ನೊಬ್ಬರ ಬಗ್ಗೆ ಅ’ಸೂ’ಯೆ ಇರಬಾರದು, ಇದನ್ನು ಹೊರತುಪಡಿಸಿ ಯಾವ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಬಹಳ ಬೇಗ ದೇಹ ದಪ್ಪವಾಗುತ್ತದೆ ಎನ್ನುವುದರ ವಿವರ ಹೀಗಿದೆ.

ಪ್ರತಿನಿತ್ಯ ಆಹಾರದಲ್ಲಿ ತಪ್ಪದೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದರ ಮೂಲಕ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು. ಧಾನ್ಯಗಳಲ್ಲಿ ಹುರುಳಿಕಾಳು ಉದ್ದಿನಕಾಳು ಹೆಚ್ಚು ಸೇವನೆ ಮಾಡುವುದರಿಂದ ಅಥವಾ ಉದ್ದಿನಬೇಳೆಯಿಂದ ತಯಾರಿಸುವ ಇಡ್ಲಿ ದೋಸೆ ವಡೆ ಇತ್ಯಾದಿ ಪದಾರ್ಥಗಳನ್ನು ಸೇವಿಸುವುದರಿಂದ ಬಹಳ ಬೇಗ ದಪ್ಪ ಆಗಬಹುದು.

ಪಪ್ಪಾಯಿ, ಸೇಬು ಸೇವನೆ ಅದರಲ್ಲೂ ಅತಿ ಮುಖ್ಯವಾಗಿ ಬಾಳೆಹಣ್ಣಿನ ಸೇವನೆಯು ನಾವು ಬೇಗ ದಪ್ಪ ಆಗುವಂತೆ ಮಾಡುತ್ತದೆ. ಊಟ ಆದ ನಂತರ ಬಾದಾಮಿ ಚೂರ್ಣ ಅಥವಾ ಬಾದಾಮಿ ಪುಡಿ ಹಾಕಿಕೊಂಡು ಹಾಲು ಕುಡಿದು ಮಲಗುವುದರಿಂದ ಕೂಡ ಬಹಳ ಬೇಗ ದಪ್ಪ ಆಗುತ್ತಾರೆ.

ಮಾಂಸಾಹಾರಿಗಳಾಗಿದ್ದರೆ ಅತಿ ಹೆಚ್ಚು ಮಾಂಸದ ಸೇವನೆ ಮಾಡುವುದರಿಂದ ದಪ್ಪ ಆಗುತ್ತಾರೆ, ಇವರು ಊಟ ಆದನಂತರ ಮೊಟ್ಟೆ ತಿಂದು ಮಲಗಬೇಕು. ಆಗ ಬಹಳ ಬೇಗ ದಪ್ಪವಾಗುತ್ತಾರೆ. ಇದರೊಂದಿಗೆ ಮೂರು ಸಮಯವು ಕೂಡ ಚೆನ್ನಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಊಟದಲ್ಲಿ ಸೊಪ್ಪು ತರಕಾರಿ ಕಾಳುಗಳು ಹೀಗೆ ಎಲ್ಲವೂ ಇರಬೇಕು.

ಊಟ ಆದ ನಂತರ ಸಿಹಿ ಪದಾರ್ಥವನ್ನು ಸೇವಿಸಬೇಕು ಬೇಕರಿ ಪದಾರ್ಥಗಳ ಮೊರೆ ಹೋಗುವುದು ತಪ್ಪು, ಮನೆಯಲ್ಲೇ ಮಾಡಿದ ಪಾಯಸ ರಸಾಯನ ಅಥವಾ ಸಿಹಿ ಅನ್ನ, ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥಗಳನ್ನು ತಿನ್ನಬೇಕು ಆಗ ಬಹಳ ಬೇಗ ದೇಹದ ತೂಕ ಹೆಚ್ಚಾಗುತ್ತದೆ. ಇದರೊಂದಿಗೆ ನೆಮ್ಮದಿಯಾಗಿ ಕನಿಷ್ಠ 8 ಗಂಟೆಗಳಾದರೂ ನಿದ್ದೆ ಮಾಡಬೇಕು ವಾರಕ್ಕೊಮ್ಮೆ ಎಳ್ಳಣ್ಣೆಯಿಂದ ದೇಹವನ್ನು ಮಸಾಜ್ ಮಾಡಬೇಕು ಹೀಗಿದ್ದಾಗ ಆಟೋಮೆಟಿಕ್ ಆಗಿ ಬಹಳ ಬೇಗ ದಪ್ಪ ಆಗುತ್ತಾರೆ.

ನಿಮ್ಮ ತಲೆ ಕೂದಲು ನ್ಯಾಚುರಲ್ ಆಗಿ ಬುಡದಿಂದ ಕಪ್ಪಾಗಲು 9 ದಿನ ಈ ರೆಮಿಡಿ ಮಾಡಿ ಸಾಕು.!

0

 

ತಲೆ ಕೂದಲು ಬೆಳ್ಳಗಾಗುವುದು ವಯಸ್ಸಾಗುವುದರ ಸಂಕೇತ ಎಂದುಕೊಳ್ಳಲಾಗುತ್ತಿತ್ತು. ಆದರೆ ಈಗ ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ತಲೆಕೂದಲು ಬೆಳ್ಳಗಾಗುತ್ತಿದೆ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗಿರುವುದು. ಇಂದು ನಾವು ಹೆಚ್ಚು ರಾಸಾಯನಿಕಯುಕ್ತ ಆಹಾರಗಳನ್ನು ಸೇವಿಸುತ್ತಿರುವುದರಿಂದ ದೇಹದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳಲ್ಲಿ ತಲೆಕೂದಲು ಬೆಳ್ಳಗಾಗುವುದು ಕೂಡ ಒಂದು.

ಈ ತಲೆ ಕೂದಲನ್ನು ಕಪ್ಪಾಗಿಸುವುದಕ್ಕೆ ನಾವು ಪಡುವ ಶ್ರಮ ಅಷ್ಟಿಷ್ಟಲ್ಲ. ದುಬಾರಿ ಬೆಲೆಗಳ ಎಣ್ಣೆಗಳನ್ನು ಹಾಕಿ ಪ್ರಯೋಗ ಮಾಡುತ್ತೇವೆ, ಅಷ್ಟೇ ದುಬಾರಿ ಬ್ರಾಂಡೆಡ್ ಶಾಂಪೂಗಳನ್ನು ಉಪಯೋಗಿಸಿ ತಲೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಇದೆಲ್ಲಕ್ಕಿಂತಲೂ ಬೆಸ್ಟ್ ಆದ ಒಂದು ಅತ್ಯುತ್ತಮವಾದ ಆಯುರ್ವೇದಿಕ್ ಮನೆ ಮದ್ದು ಇದೆ ಕೇವಲ ಒಂಬತ್ತು ದಿನಗಳಲ್ಲಿ ತಯಾರಿಸಬಹುದಾದ ಈ ರೆಮೆಡಿ ಇಂದ ನಿಮ್ಮ ತಲೆ ಕೂದಲು ನ್ಯಾಚುರಲ್ ಆಗಿ ಬುಡದಿಂದ ಕಪ್ಪಾಗುತ್ತದೆ.

ತಲೆ ಕೂದಲು ಬೆಳ್ಳಗಾಗಿರುವುದು ಕಪ್ಪಾಗಬೇಕು ಎಂದರೆ ದೇಹದಲ್ಲಿ ಮೆಲನಿನ್ ಮತ್ತು ಹೇರ್ ಗ್ರೋತ್ ಗೆ ಸಂಬಂಧಪಟ್ಟ ಮಾಲೀಕ್ಯೂಲ್ ಗಳು ಕ್ರಿಯಾಶೀಲಗೊಳ್ಳಬೇಕು. ಆಗಿದ್ದಾಗ ಮಾತ್ರ ಆ ಫಲಿತಾಂಶ ಬಹಳ ದಿನಗಳವರೆಗೆ ಉಳಿದುಕೊಳ್ಳುತ್ತದೆ. ಕೆಲವೊಮ್ಮೆ ಆರ್ಟಿಫಿಶಿಯಲ್ ಕಲರ್ ಗಳಿಗೆ ಅತಿ ಹೆಚ್ಚಿನ ರಾಸಾಯನಿಕಗಳನ್ನೇ ಬಳಸುವುದರಿಂದ ಅದು ಕಣ್ಣುಗಳ ಆರೋಗ್ಯದ ಮೇಲೆ, ಚರ್ಮದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ‌.

ಹಾಗಾಗಿ ಇಷ್ಟೆಲ್ಲ ರಿಸ್ಕ್ ತೆಗೆದುಕೊಳ್ಳುವುದರ ಬದಲು ನ್ಯಾಚುರಲ್ ಆಗಿ ಶಾಶ್ವತವಾಗಿ ನಿಮ್ಮ ತಲೆ ಕೂದಲನ್ನು ಕಪ್ಪಾಗಿ ಮಾಡಿಕೊಳ್ಳಲು ಹೀಗೆ ಮಾಡಿ ಸಾಕು. 100 ಗ್ರಾಂ ನಷ್ಟು ಪೇರಲೆ ಎಲೆ ಪೇಸ್ಟ್ ತೆಗೆದುಕೊಳ್ಳಿ, ಇದಕ್ಕೆ 50 ಗ್ರಾಂ ನಷ್ಟು ಮೆಹಂದಿ ಎಲೆಯ ಪುಡಿ ಅಥವಾ ಪೇಸ್ಟ್ ಅನ್ನು ಹಾಕಿ ಮಿಕ್ಸ್ ಮಾಡಿ ಮತ್ತು 40 ml ನಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಈ ಮೂರನ್ನು ಒಂದು ಕಬ್ಬಿಣದ ಪಾತ್ರೆಗೆ ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿದ ಮೇಲೆ ಇದರಲ್ಲಿ ಗಾಳಿ ಹೋಗದ ಹಾಕಿ ಹಾಗೆ ಮೇಲಿನಿಂದ ಕವರ್ ಮಾಡಿ ಒಂದು ಕಡೆ ಇಡಬೇಕು.

ಮರುದಿನ ಕೂಡ ಆ ಕವರ್ ಓಪನ್ ಮಾಡಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿರುವ ಎಲ್ಲಾ ಅಂಶಗಳು ಚೆನ್ನಾಗಿ ಬೆರೆಯಲು ಬಿಡಬೇಕು. ಈ ರೀತಿ ಸತತ ಒಂಬತ್ತು ದಿನಗಳವರೆಗೆ ಪ್ರತಿದಿನವೂ ತೆಗೆದು ಚೆನ್ನಾಗಿ ಅವುಗಳನ್ನು ಮಿಕ್ಸ್ ಮಾಡಿ ಮತ್ತೆ ಗಾಳಿಯಾಗದಂತೆ ಸರಿಯಾಗಿ ಟೈಟಾಗಿ ಕವರ್ ಮಾಡಿ ಇಡಬೇಕು.

10ನೇ ದಿನಕ್ಕೆ ಒಂದು ನ್ಯಾಚುರಲ್ ಆದ ಔಷಧಿ ನಿಮಗೆ ತಯಾರಾಗಿರುತ್ತದೆ ಇದನ್ನು ತಲೆಕೂದಲಿಕೆ ಹಚ್ಚಿ ಸ್ವಲ್ಪ ಹೊತ್ತು ಇದ್ದು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಶಾಂಪೂ ಬಳಸ ಕೂಡದು. ಅಂಟವಾಳದ ಕಾಯಿ ಅಥವಾ ಮುಲ್ತಾನ್ ಮಟ್ಟಿ ಬಳಸಿ ಹೇರ್ ವಾಷ್ ಮಾಡಬೇಕು. ಮರುದಿನ ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು.

ಒಂದು ಬಾರಿ ಮಾಡಿದಾಗಲೇ ಇದರ ಅದ್ಭುತ ರಿಸಲ್ಟ್ ನಿಮಗೆ ಗೊತ್ತಾಗುತ್ತದೆ. ಈ ರೀತಿ ವಾರದಲ್ಲಿ ಎರಡು ಬಾರಿ ನಿಮಗೆ ಸಾಧ್ಯವಾದಷ್ಟು ವಾರಗಳವರೆಗೆ ಮಾಡಿ ನೋಡಿ ಎಷ್ಟು ಬೇಗ ನಿಮ್ಮ ಹೇರ್ ನ್ಯಾಚುರಲ್ ಆಗಿ ಕಪ್ಪಾಗುತ್ತದೆ ಎಂದು. ಒಂದು ವೇಳೆ ಈ ಟಿಪ್ ವರ್ಕ್ ಆಗದೆ ಇದ್ದವರು ಇನ್ನೊಂದು ಮನೆಮದ್ದು ಇದೆ ಇದನ್ನು ಮಾಡಿ, ಇದು ಕೂಡ ಖಂಡಿತ ವರ್ಕ್ ಆಗುತ್ತಿದೆ.

ಪ್ರತಿದಿನ ಕೊಬ್ಬರಿ ಎಣ್ಣೆಯನ್ನು ಹಾಗೂ ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ತಲೆ ಕೂದಲಕ್ಕೆ ಹಚ್ಚಿ ಎಳೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇರಿ ನಂತರ ಬೆಚ್ಚಗಿನ ನೀರಿನಲ್ಲಿ ಯಾವುದೇ ಶಾಂಪು ಬಳಸದೆ ಅಂಟವಾಳದ ಕಾಯಿ ಬಳಸಿ ತಲೆ ಸ್ನಾನ ಮಾಡಿ 6 ತಿಂಗಳ ಕಾಲ ಮಾಡಿಕೊಂಡು ಬನ್ನಿ. ನಿಮ್ಮ ಕೂದಲು ನ್ಯಾಚುರಲ್ ಆಗಿ ಕಪ್ಪಾಗುತ್ತದೆ.

https://youtu.be/eN0qKcLcYM0?si=xyLokAiz-QtWbIQr

ಗ್ಯಾಸ್ಟ್ರಿಕ್ ಶಾಶ್ವತವಾಗಿ ವಾಸಿಯಾಗಲು ಸರಳ ಉಪಾಯ.!

0

 

ಈಗ ಅತಿ ಚಿಕ್ಕ ವಯಸ್ಸಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರನ್ನು ನೋಡುತ್ತಿದ್ದೇವೆ. ಯುವಜನತೆ ಹೀಗೆ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿರುವುದಕ್ಕೆ ಮುಖ್ಯವಾದ ಕಾರಣ ಅವರ ಜೀವನಶೈಲಿ ತಪ್ಪಾಗಿರುವುದು. ಲೇಟಾಗಿ ಮಲಗುವುದು, ರಾತ್ರಿ ಲೇಟಾಗಿ ಊಟ ಮಾಡಿ ಸರಿಯಾಗಿ ನಿದ್ರೆ ಆಗದೆ ಇರುವುದರಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.

ಯಾಕೆಂದರೆ ನಿದ್ರೆ ಸಮಯ ಕಡಿಮೆ ಆದಷ್ಟು ದೇಹದಲ್ಲಿ ಜೀರ್ಣಕ್ರಿಯೆಗೆ ಬೇಕಾದ ಎಂಜೈಮ್ಸ್ ಗಳ ಬಿಡುಗಡೆ ಸರಿಯಾಗಿ ಆಗುವುದಿಲ್ಲ. ನಾವು ನಿದ್ರೆ ಮಾಡುವಾಗ ನಮ್ಮ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ. ಈ ಪ್ರಕ್ರಿಯೆ ನಡೆಯದೇ ಇದ್ದಾಗ ಹಾರ್ಮೋನ್ ವೇರಿಯೇಷನ್ ಇಂದ ದೇಹದ ಆರೋಗ್ಯದಲ್ಲೂ ಸಾಕಷ್ಟು ವ್ಯತ್ಯಾಸಗಳು ಆಗುತ್ತದೆ.

ಇದರಲ್ಲಿ ಗ್ಯಾಸ್ಟ್ರಿಕ್ ಕೂಡ ಎಂದು ಹೇಳಬಹುದು, ಹಾಗಾಗಿ ಇದನ್ನು ಕಾಯಿಲೆ ಎನ್ನದೆ ಡಿಸ್ ಆರ್ಡರ್ ಎನ್ನಬಹುದು ಇದನ್ನು ಹೊರತುಪಡಿಸಿ ನಾವು ತಿನ್ನುವ ಆಹಾರ ಕ್ರಮದ ಮೇಲು ಕೂಡ ಇದು ನಿರ್ಧಾರ ಆಗುತ್ತದೆ. ಬಾಯಲ್ಲಿಯೂ ಕೂಡ ಸಾಕಷ್ಟು ರೀತಿಯ ಜೀರ್ಣಕ್ರಿಯೆಗೆ ಬೇಕಾದ ಸಲೈವಗಳು ಬಿಡುಗಡೆ ಆಗುತ್ತವೆ.

ಅವುಗಳ ಮೂಲಕ ಅದು ಜಠರಕ್ಕೆ ಸೇರಬೇಕು ಹೀಗೆ ಬಾಯಿಯಲ್ಲಿ ಅಗಿಯುವಿಕೆ, ನುಂಗುವಿಕೆ, ಕರುಳಿನಲ್ಲಿ ಜೀರ್ಣ ಆಗುವುದು ಮತ್ತು ನಾವು ತಿಂದ ಆಹಾರದಲ್ಲಿ ಬೇಕಾದ ಪದಾರ್ಥಗಳು ಬೇಡದ ಪದಾರ್ಥಗಳು ವಿಭಾಗ ಹಾಕುವುದು ನಂತರ ಅದು ಹೊರ ಹೋಗುವುದು ಇಷ್ಟು ಕ್ರಮಗಳು ಸರಿಯಾದ ರೀತಿಯಲ್ಲಿ ನಡೆದರೆ ಈ ಡಿಸ್ ಆರ್ಡರ್ ಆಗುವುದಿಲ್ಲ.

ಇದರಲ್ಲಿ ಯಾವುದೇ ಒಂದು ಪ್ರಕ್ರಿಯೆಗೆ ಕ’ಷ್ಟ ಆದಾಗ ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಗ್ಯಾಸ್ಟ್ರಿಕ್ ಆಗುತ್ತದೆ ಅಥವಾ ಅತಿ ಹೆಚ್ಚಿನ ಹಸಿವು ಆಗಿ ಅದರ ಮೂಲಕ ಗ್ಯಾಸ್ಟ್ರಿಕ್ ಆಗುತ್ತದೆ. ನಾವು ತಿನ್ನುವ ಆಹಾರವನ್ನು ಬಾಯಲ್ಲಿ 32 ಬಾರಿ ಜಗಿದು ತಿನ್ನಬೇಕು ಎನ್ನುವ ನಿಯಮ ಇದೆ, ಆದರೆ ಈಗಿನ ಕಾಲದಲ್ಲಿ ಈ ರೀತಿಯ ಮೈಂಡ್ ಫುಲ್ ಈಟಿಂಗ್ ಕಾನ್ಸೆಪ್ಟ್ ಹೋಗಿಬಿಟ್ಟಿದೆ.

ಊಟದ ಮೇಲೆ ಗಮನ ಇಲ್ಲದೆ ಊಟಕ್ಕೆ ಗೌರವ ಕೊಡದೆ ಮೊಬೈಲ್ ನೋಡಿಕೊಂಡು ಟಿವಿ ನೋಡಿಕೊಂಡು ಓಡಾಡುತ್ತಾ ಕೆಲಸ ಮಾಡುತ್ತಾ ಊಟ ಮಾಡುತ್ತಾರೆ. ಊಟದ ಮೇಲೆ ಗಮನ ಇಡದೆ ಇದ್ದರೆ, ಟೆನ್ಶನ್ ನಲ್ಲಿ ಊಟ ಮಾಡಿದರೆ ಸರಿಯಾಗಿ ಜೀರ್ಣ ಆಗುವುದಿಲ್ಲ ಹಿಂದೆ 5 ಬೆರಳನ್ನು ಉಪಯೋಗಿಸಿ ಕೈಯಲ್ಲಿ ಊಟ ಮಾಡುತ್ತಿದ್ದರು.

ಇದರಿಂದ ಸಮಾನ ಮುದ್ರೆ ಆಗುತ್ತಿತ್ತು ಅದು ಜೀರ್ಣಕ್ರಿಯೆಗೆ ಸಹಾಯವಾಗುತ್ತಿತ್ತು ಮತ್ತು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು ಇದು ಕೂಡ ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತಿತ್ತು. ಆದರೆ ಈಗ ಟೇಬಲ್ ಮೇಲೆ ತಿನ್ನುವುದು ಸ್ಪೂನ್ನಲ್ಲಿ ತಿನ್ನುವುದು ಈ ರೀತಿ ಅಭ್ಯಾಸಗಳು ಕೂಡ ಗ್ಯಾಸ್ಟ್ರಿಕ್ ತರುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಇದಕ್ಕೆ ಪರಿಹಾರ ಏನೆಂದರೆ ಈ ಮೇಲೆ ತಿಳಿಸಿದ ಎಲ್ಲಾ ವಿಷಯಗಳಲ್ಲಿ ಸರಿಯಾದ ಕ್ರಮ ಅಳವಡಿಸಿಕೊಳ್ಳುವುದು ಇದರ ಜೊತೆ ಯೋಗ ಹಾಗೂ ಪ್ರಾಣಯಾಮದ ಮೂಲಕ ಈ ಡಿಸ್ಆರ್ಡರ್ ಸರಿಪಡಿಸಿಕೊಳ್ಳಬಹುದು ಹೇಗೆಂದರೆ ಸಮಾನ ಮುದ್ರೆ, ಸೂರ್ಯಮುದ್ರೆ ಮತ್ತು ಅಪಾನ ಮುದ್ರೆ ಮೂಲಕ.

ಈ ಮೂರು ಮುದ್ದೆಗಳಲ್ಲಿ ಐದೈದು ನಿಮಿಷ ಬಸ್ತಿಕ ಪ್ರಾಣಾಯಾಮವನ್ನು, ಐದರಿಂದ ಹತ್ತು ನಿಮಿಷ ನಾಡಿಶೋಧನಾ ಪ್ರಾಣಯಾಮ, ಐದೈದು ನಿಮಿಷ ಕಪಾಲ ಬಾತಿ, ಭ್ರಮರಿ ಪ್ರಾಣಯಾಮವನ್ನು ಮತ್ತು ಉಜ್ಜೈನ್ ಪ್ರಾಣಾಯಾಮವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವುದರಿಂದ ಹೊಟ್ಟೆ ಭಾಗ ಕ್ರೀಯಶೀಲವಾಗಿ ಮನಸ್ಸು ಕೂಡ ಪ್ರಸನ್ನವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಜೀವಮಾನದಲ್ಲಿ ಬರುವುದಿಲ್ಲ.

https://youtu.be/UH3v33QdsLQ?si=yXRLtqgR2BXb9RJo

ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!

0

 

ಬಿಗ್ ಬಾಸ್ ಸೀಸನ್ 10ರ (Bigboss S10) ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಏಳನೇ ವಾರಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಗೆ ಗಿಟ್ಟಿಸಿಕೊಂಡು ಕರ್ನಾಟಕದ ಜನತೆಯ ಮನ ಗೆದ್ದಿದ್ದ ನೀತು ಅವರು ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕ್ವೀನ್ ರಿಯಾಲಿಟಿ ಶೋನಲ್ಲಿ (Queens Reality Show) ಕೂಡ ಕಾಣಿಸಿಕೊಂಡು ಮಿಂಚಿದ್ದರು.

ಇಪ್ಪತ್ತರ ಹರೆಯದವರೆಗೂ ಹುಡುಗನಾಗಿದ್ದ ಇವರು ನಂತರ ತಮ್ಮ ಇಚ್ಛೆಯಂತೆ ದೇಹದಲ್ಲಾದ ಬದಲಾವಣೆ ಗುರುತಿಸಿ ಹೆಣ್ಣಾದರು. ಟ್ರಾನ್ಸ್ ಜೆಂಡರ್ ಗಳನ್ನು ಬಹಳ ಹಗುರವಾಗಿ ಕಾಣುವ ಈಗಿನ ಕಾಲದಲ್ಲಿ ತಮ್ಮ ಕಮ್ಯುನಿಟಿಯವರು ಎಲ್ಲಾ ಕ್ಷೇತ್ರದಲ್ಲೂ ಕೂಡ ಮಿಂಚಬೇಕು ಎನ್ನುವ ಆಸೆ ತನ್ನದು ಎಂದು ಹೇಳಿಕೊಳ್ಳುವ ಇವರು ತಮ್ಮ ಸಾಧನೆಯ ಮೂಲಕ ಅದಕ್ಕೆ ರೆಡ್ ಕಾರ್ಪೆಟ್ ಹಾಕಿಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲೂ ಕೂಡ ತಮ್ಮ ಸ್ಪಷ್ಟ ನಿಲುವು, ನೇರ ಮಾತು ಹಾಗೂ ಟಫ್ ಕಾಂಪಿಟೇಶನ್ ಮೂಲಕ ವಾರ ಪೂರ್ತಿ ಸುದ್ದಿಯಲ್ಲಿರುತ್ತಿದ್ದ ನೀತು ಇದೇ ಕಾರಣಕ್ಕೆ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಪ್ರತಿ ವಾರವೂ ನಾಮಿನೇಟ್ ಆಗುತ್ತಿದ್ದರು. ಆದರೆ ಏಳನೇ ವಾರಕ್ಕೆ ಅವರ ಅದೃಷ್ಟ ಕೈಕೊಟ್ಟಿದ್ದು ಅರ್ಧ ಪ್ರಯಾಣ ಮುಗಿಸಿ ಮನೆಯಿಂದ ಆಚೆ (eliminated 7th week) ಬಂದಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗುವಾಗಲೇ ತಾಯಿಯೇ ತನ್ನ ಶಕ್ತಿ ಹಾಗಾಗಿ ತನ್ನ ಹೆಸರಿನ ಜೊತೆ ಅವರ ಹೆಸರನ್ನು ಸೇರಿಸಿಕೊಂಡಿದ್ದೇನೆ ಎನ್ನುವುದನ್ನು ಹೇಳಿಕೊಂಡು ಎಲ್ಲಾ ಹೆಣ್ಣು ಮಕ್ಕಳಿಗೂ ಈ ರೀತಿ ತಾಯಿ ಸಿಗಬೇಕು, ಪ್ರತಿಯೊಂದು ಮನೆಗಳಲ್ಲೂ ಕೂಡ ನನ್ನ ತಾಯಿ ರೀತಿ ಯೋಚಿಸಿದರೆ ನನ್ನ ರೀತಿ ಸಮಸ್ಯೆ ಇದ್ದವರು ಬದಲಾಗಿ ಒಳ್ಳೆಯ ಜೀವನ ಕಟ್ಟಿಕೊಳ್ಳುತ್ತಾರೆ.

ಅವರಿಗೆ ಕುಟುಂಬದ ಸಪೋರ್ಟ್ ಮುಖ್ಯ ಎಲ್ಲಾ ಮಂಗಳಮುಖಿಯರಿಗೂ ಈ ರೀತಿ ಕುಟುಂಬದ ಸಪೋರ್ಟ್ ಸಿಗಲಿ ಆ ಮೂಲಕ ಅವರ ಬದುಕನ್ನು ಎಲ್ಲರೂ ಮೆಚ್ಚುವಂತೆ ಕಟ್ಟಿಕೊಳ್ಳುವಂತಾಗಲಿ ಎಂದು ತಾಯಿ ಗುಣಗಾನ ಮಾಡಿದ್ದ ಇವರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ತನ್ನ ಇಷ್ಟೊಂದು ಯಶಸ್ಸಿಗೆ ಕಾರಣಕರ್ತರಾದ ತನ್ನ ತಾಯಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ತನ್ನ ತಾಯಿ ಕೂಡ ಒಂದು ರೋಲ್ ಮಾಡೆಲ್ ಎಂದು ಹೇಳಿಕೊಳ್ಳುವ ನೀತು ವನಜಾಕ್ಷಿ ಬಿಗ್ ಬಾಸ್ ಮನೆಗೆ ಹೋಗಲು ಮುಖ್ಯ ಕಾರಣ ನನ್ನ ತಾಯಿ ಅದೇ ಕಾರಣಕ್ಕಾಗಿ ನನ್ನ ಗೆಲುವಿನ ಭಾಗ ಅವರು ಆಗಬೇಕು ಎಂದು ಯಶಸ್ವಿಯಾಗಿ ಐವತ್ತು ದಿನ ಮುಗಿಸಿ ಆಚೆ ಬಂದ ಸಂತಸದಲ್ಲಿ ತನ್ನ ತಾಯಿಗೆ ಮಾರುತಿ ಸುಜುಕಿ ದುಬಾರಿ ಬೆಲೆಯ ಬಿಳಿ ಬಣ್ಣದ ಕಾರ್ ನ್ನು ಉಡುಗೊರೆಯಾಗಿ (Neethu Surprice gift to Mother) ನೀಡಿದ್ದಾರೆ.

ಹಾಗಾಗಿ ನೆನ್ನೆಯಷ್ಟೇ ಮನೆಯಿಂದ ಎಲಿಮಿನೇಟ್ ಆಗಿ ಬಂದ ನೀತು ವನಜಾಕ್ಷಿ ಅವರು ಇಂದು ತನ್ನ ತಾಯಿಗೆ ಕಾರ್ ನೀಡಿ ಖುಷಿ ಪಡಿಸಿದ್ದಾರೆ. ನೀತು ತಾಯಿಯ ಜೊತೆ ನಿಂತು ಕಾರ್ ಖರೀದಿಸುತ್ತಿರುವುದು ಮತ್ತು ಅದೇ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡುತ್ತಾ ತಮ್ಮ ಮನೆಗೆ ಬಂದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು ನೆಟ್ಟಿಗರು ನೀತು ನಿಜವಾದ ಸಾಧಕಿ ಆಕೆಗೆ ಅವರ ತಾಯಿಯ ಶಕ್ತಿ ಎಂದು ಮೆಚ್ಚಿಕೊಂಡಾಡುತ್ತಿದ್ದಾರೆ.

ನೀತು ಅವರ ಬದುಕಿನ ಕಹಿ ಘಟನೆಗಳು ಮುಗಿದು ಇದೇ ರೀತಿ ಸಾಧನೆಯ ಶಿಖರ ಏರಲಿ ಎಂದು ನಾವು ಕೂಡ ಹಲಸೋಣ ಅದೇ ರೀತಿ ಪ್ರತಿಯೊಂದು ಹೆಣ್ಣಿಗೂ ಗಂಡಿಗೂ ಟ್ರಾನ್ಸ್ ಜೆಂಡರ್ ಗೂ ಅವರ ಕುಟುಂಬದಿಂದ ಇಷ್ಟೇ ಸಪೋರ್ಟ್ ಸಿಗುವಂತಾಗಲಿ ಎಂದು ಬಯಸೋಣ.

https://youtu.be/N5RzNrneZlE?si=4ZWAGyesgqgV59jr

BP ಕಂಟ್ರೋಲ್ ಮಾಡುವ 5 ಜ್ಯೂಸ್ ಗಳು, ಜೀವನಶೈಲಿ ಹೀಗಿದ್ದರೆ ಜೀವನಪರ್ಯಂತ BP ಬರುವುದಿಲ್ಲ.!

0

 

ಹಿಂದೆಲ್ಲ ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿದ್ದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಈಗ ಅತ್ಯಂತ ಕಿರಿಯ ವಯಸ್ಸಿನವರಲ್ಲಿಯೇ ಕಾಣುತ್ತಿದ್ದೇವೆ. ಈಗಿನ ಯುವ ಜನತೆಯು ಆಧುನಿಕ ಜೀವನಶೈಲಿಗೆ ಹೊಂದಿಕೊಂಡು ಆರೋಗ್ಯದ ಬಗ್ಗೆ ಬಹಳ ತಾತ್ಸಾರ ಮಾಡುತ್ತಿದ್ದಾರೆ.

ಅವರು ಅಳವಡಿಸಿಕೊಂಡಿರುವ ತಪ್ಪಾದ ಜೀವನ ಶೈಲಿ, ಕಳಪೆ ಆಹಾರ ಪದ್ಧತಿ, ಆಶಿಸ್ತಿನಿಂದ ಕೂಡಿರುವ ದೈನಂದಿಕ ಚಟುವಟಿಕೆಗಳು, ಸರಿಯಾದ ನಿದ್ರೆ ಕ್ರಮ ಇಲ್ಲದೆ ಇರುವುದು ಇತ್ಯಾದಿ ಕಾರಣಗಳಿಂದಾಗಿ ನೂರಾರು ಕಾಯಿಲೆಗಳಿಗೆ ದೇಹ ಗೂಡಾಗುತ್ತಿದೆ ಇದರಲ್ಲಿ ‌ BP ಕೂಡ ಒಂದು.

ಈ ಮೇಲೆ ತಿಳಿಸಿದ ತಪ್ಪುಗಳನ್ನು ಸರಿಪಡಿಸಿಕೊಂಡರೆ ದೇಹಕ್ಕೆ ಬರುವ ಹತ್ತಾರು ಕಾಯಿಲೆಗಳಿಂದ ದೇಹವನ್ನು ರಕ್ಷಿಸಬಹುದು ಮತ್ತು ಈಗಾಗಲೇ ನಿಮಗೆ BP ಬಂದಿದ್ದರೆ ಅದನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಯೋಗ ಹಾಗೂ ಆಯುರ್ವೇದಿಕ್ ಚಿಕಿತ್ಸೆಯ ಮೊರೆ ಹೋಗಬಹುದು. ಆಯುರ್ವೇದದಲ್ಲಿ ತಿಳಿಸಲಾಗಿರುವ ಐದು ಅಪರೂಪದ ಮನೆ ಮದ್ದುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.

ಇವುಗಳ ಸೇವನೆಯಿಂದಾಗಿ BP ಕಂಟ್ರೋಲ್ ಗೆ ಬರುತ್ತದೆ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾದಾಗ, ಸಣ್ಣ ಸಣ್ಣ ಬ್ಲಾಕೇಜ್ ಗಳು ಉಂಟಾದಾಗ ಒತ್ತಡ ಹೆಚ್ಚಾಗಿ BP ಬರುತ್ತದೆ. ವೇಗಸ್ ನಾಡಿಯು ದೇಹದ ಹಲವು ಪ್ರಕ್ರಿಯೆಗಳ ಮೇಲೆ ಸಂಪರ್ಕ ಹೊಂದಿರುತ್ತದೆ.

ಉಸಿರಾಟ, ಜೀರ್ಣಕ್ರಿಯೆ, ಹೃದಯ ಸಂಬಂಧಿತ ಕಾರ್ಯ ಚಟುವಟಿಕೆಗಳು ಸೇರಿದಂತೆ ದೇಹದ ಬಹುತೇಕ ಕ್ರಿಯೆಗಳ ಮೇಲೆ ಕಂಟ್ರೋಲ್ ಹೊಂದಿರುತ್ತದೆ. ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ವೇಗಸ್ ನಾಡಿ ಕೂಡ ಕ್ರಿಯಾಶೀಲವಾಗಿರಬೇಕು.

ಈಗ ನಾವು ಹೇಳುವ ಐದು ಜ್ಯೂಸ್ ಗಳನ್ನು ಸೇವಿಸುವುದರಿಂದ ವೇಗಸ್ ನಾಡಿ ಕ್ರಿಯಾಶೀಲವಾಗುತ್ತದೆ ಮತ್ತು ಲಿವರ್ ನಲ್ಲಿರುವ ಟಾಕ್ಸಿನ್ ಅಂಶಗಳು ಕೂಡ ದೇಹದಿಂದ ಹೊರ ಹೋಗಿ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶ ಕೂಡ BP ಬರುವುದಕ್ಕೆ ಕಾರಣ.

ಈ ಐದು ಮನೆ ಮದ್ದುಗಳನ್ನು ಸೇವಿಸುವುದರಿಂದ ದೇಹದಲ್ಲಿ ಟ್ರೈ ಕ್ಲಿಸರೈಡ್ ಲೋ ಡೆನ್ಸಿನ್ ಹಿಪೋ ಪ್ರೋಟೀನ್ ನಂತಹ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದು ಕುಂಠಿತವಾಗುತ್ತದೆ. BP ಕಂಟ್ರೋಲ್ ಆಗಲು ಮನೆ ಮದ್ದುಗಳ ಬದಲು ಔಷಧಿಗಳ ಮೊರೆ ಹೋಗುವುದರಿಂದ ಸೈಡ್ ಎಫೆಕ್ಟ್ ಗಳು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು.

ಯಾಕೆಂದರೆ ರಕ್ತದೊತ್ತಡ ನಿಯಂತ್ರಿಸುವುದರ ಬದಲು ರಕ್ತದ ನಾಳಗಳಲ್ಲಿ ಉಂಟಾಗಿರುವ ಬ್ಲಾಕೇಜ್ ಕ್ಲಿಯರ್ ಮಾಡುವ ಬದಲು ಇಂಗ್ಲಿಷ್ ಮೆಡಿಸನ್ ನಲ್ಲಿ ಹೃದಯದ ಬಡಿತ ಕಡಿಮೆ ಆಗುವ ಔಷಧಿ ನೀಡಿರುತ್ತಾರೆ. ಮುಂದೆ ಇದು ಇದಕ್ಕಿಂತಲೂ ದೊಡ್ಡದಾದ ಮಾ’ರ’ಣಾಂ’ತಿ’ಕ ಕಾಯಿಲೆಗಳಿಗೆ ನಮ್ಮನ್ನು ಗುರಿ ಮಾಡಬಹುದು.

ಆದ್ದರಿಂದ ನ್ಯಾಚುರಲ್ ಆಗಿ ಇದನ್ನು ಕಂಟ್ರೋಲ್ಗೆ ತರಲು ಪ್ರಯತ್ನಿಸಿ. ನ್ಯಾಚುರಲ್ ಆಗಿ BP ಕಂಟ್ರೋಲ್ ಗೆ ಬರಲು ಸತತ ಐದು ತಿಂಗಳುಗಳ ಕಾಲ ನೀವು ಈ ಮನೆಮದ್ದನ್ನು ಪ್ರತಿದಿನ ಸೇವಿಸಬೇಕು. ಮೊದಲನೇ ತಿಂಗಳಿನಲ್ಲಿ 200 ಗ್ರಾಂ ನಷ್ಟು ಬೂದುಗುಂಬಳದ ಕಾಯಿ ಜ್ಯೂಸ್ ನ್ನು ಪ್ರತಿನಿತ್ಯವೂ ಸೇವಿಸಬೇಕು.

ಎರಡನೇ ತಿಂಗಳಿನಲ್ಲಿ 200 ಗ್ರಾಂ ನಷ್ಟು ಸೋರೆಕಾಯಿ ತೆಗೆದುಕೊಂಡು ಅದರಲ್ಲೂ ಜ್ಯೂಸ್ ಮಾಡಿ ಪ್ರತಿನಿತ್ಯವು ಸೇವಿಸಬೇಕು ಮತ್ತು ಮೂರನೇ ತಿಂಗಳಲ್ಲಿ ಐದರಿಂದ ಆರು ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅದನ್ನು ಜ್ಯೂಸ್ ಮಾಡಿ ಪ್ರತಿನಿತ್ಯವು ಸೇವಿಸಬೇಕು.

ನಾಲ್ಕನೇ ತಿಂಗಳಿನಲ್ಲಿ ಎಂಟರಿಂದ ಹತ್ತು ಮೂರು ದಳ ಇರುವ ಬಿಲ್ಪತ್ರೆ ಎಲೆಗಳನ್ನು ತೆಗೆದುಕೊಂಡು ಅದರಿಂದ ಜ್ಯೂಸ್ ಮಾಡಿ ಪ್ರತಿನಿತ್ಯ ಸೇವಿಸಬೇಕು ಮತ್ತು ಕೊನೆಯ ತಿಂಗಳಿನಲ್ಲಿ ಒಂದು ಹಿಡಿ ನೆಲನೆಲ್ಲಿ ಸೊಪ್ಪು ತೆಗೆದುಕೊಂಡು ಅದನ್ನು ಜ್ಯೂಸ್ ಮಾಡಿ ಪ್ರತಿನಿತ್ಯವೂ ಸೇವಿಸಿ.

ದುರಭ್ಯಾಸಗಳಿಂದ ದೂರ ಇದ್ದು ಉತ್ತಮ ಆಹಾರ ಹಾಗೂ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಯೋಗ ಪ್ರಾಣಯಾಮದಲ್ಲಿ ತೊಡಗಿ, ಬೆಳಗ್ಗೆ ಬೇಗ ಹೇಳುವುದು ರಾತ್ರಿ ಬೇಗ ಮಲಗುವುದು ಇತ್ಯಾದಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ನಿಮ್ಮ BP ನ್ಯಾಚುರಲ್ ಆಗಿ ನಾರ್ಮಲ್ ಆಗುತ್ತದೆ.

https://youtu.be/2qI6svYGRqo?si=-ThfcbjQar1SNn3i

ಮನೆಯಲ್ಲಿ ಈ ವಸ್ತುಗಳು ಇದ್ದರೆ ನೀವು ಶ್ರೀಮಂತರಾಗುವುದು ಗ್ಯಾರಂಟಿ, ನಿಮ್ಮ ಬದುಕನ್ನೇ ಬದಲಾಯಿಸುವ ಶಕ್ತಿ ಇವುಗಳಿಗಿದೆ.!

 

ನಮ್ಮ ಮನೆಯಲ್ಲಿ ನಮಗಷ್ಟೇ ಅಲ್ಲದೆ ಅನೇಕ ವಸ್ತುಗಳಿಗೆ ಜಾಗ ಇದೆ. ಇದರಲ್ಲಿ ಕೆಲವು ನಮ್ಮ ಅನುಕೂಲಕ್ಕೆ ಬೇಕಾಗಿರುವ ವಸ್ತುಗಳು, ಇನ್ನು ಕೆಲವು ನಾವೇ ಇಷ್ಟ ಪಟ್ಟು ತಂದು ಇಡುವ ವಸ್ತುಗಳು. ಇವುಗಳು ಮಾತ್ರವಲ್ಲದೆ ಮನೆ ಎಂದ ಮೇಲೆ ಕೆಲವು ವಸ್ತುಗಳು ಇರಲೇಬೇಕು ಎಂದು ಹಿರಿಯರು ಹೇಳುತ್ತಾರೆ.

ಅದೇ ರೀತಿ ವಾಸ್ತು ಶಾಸ್ತ್ರದಲ್ಲೂ ಕೂಡ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತು ಈ ಮೂಲಕ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಇಂತಹ ಸ್ಥಳದಲ್ಲಿ ಆರ್ಥಿಕ ಅಭಿವೃದ್ಧಿಯಾಗಿ ಅಷ್ಟೈಶ್ವರ್ಯಗಳು ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ.

ಈ ರೀತಿ ಮನೆಗೆ ಹಣದ ಆಕರ್ಷಣೆ ಉಂಟುಮಾಡುವ ಮತ್ತು ಮನೆಯ ವಾತಾವರಣವನ್ನು ಉತ್ತಮವಾಗಿಸುವ ಆ ಮೂಲಕ ಮನೆಯಲ್ಲಿರುವ ಎಲ್ಲಾ ಸದಸ್ಯರ ಮನಸ್ಸಿನ ಮೇಲೆ ಉತ್ತಮ ಪರಿಣಾಮಗಳನ್ನು ಬೀರುವ ವಸ್ತುಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ಇಲ್ಲ ಎಂದರೆ ಇವತ್ತೇ ತಂದು ಇಡಿ. ನಿಮ್ಮ ಜೀವನ ಹೇಗೆ ಬದಲಾಗುತ್ತದೆ ಎಂದು ನೀವೇ ನೋಡಿ.

1. ಮನೆಯ ಮುಖ್ಯದ್ವಾರದಲ್ಲಿ ಗಣಪತಿಯ ವಿಗ್ರಹ ಇಡಬೇಕು ಎಂದು ವಾಸ್ತುಶಿಷ್ಟದಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸಾಧ್ಯವಾಗದೆ ಇದ್ದರೆ ಮನೆ ಮುಖ್ಯ ದ್ವಾರದ ಮೇಲೆ ಗಣಪತಿಯ ಫೋಟೋ ಆದರೂ ಹಾಕಿ ಯಾಕೆಂದರೆ ಮನೆಗೆ ಪ್ರವೇಶಿಸುವ ಯಾರೇ ಆದರೂ ಮೊದಲು ಈ ಕಣ್ಣುದೃಷ್ಟಿ ಗಣಪತಿಯನ್ನು ನೋಡುವುದರಿಂದ ಆ ರೀತಿ ಬಂದವರಲ್ಲಿ ನೆಗೆಟಿವ್ ಎನರ್ಜಿ ಇದ್ದರೆ.

ಅದನ್ನು ಗಣಪತಿಯು ತಡೆದು ಅದನ್ನು ಒಳ್ಳೆಯ ರೀತಿ ಬದಲಾಯಿಸುತ್ತಾರೆ ಎಂದು ನಂಬಿಕೆ ಮತ್ತು ಮನೆಯ ಸದಸ್ಯರ ಎಲ್ಲ ವಿಘ್ನಗಳನ್ನು ನಿವಾರಿಸುವ ಸಲುವಾಗಿ ಪ್ರಥಮ ಪೂಜೆಗೆ ಅಧಿಪತಿಯಾದ ಗಣೇಶನ ವಿಗ್ರಹ ಅಥವಾ ಫೋಟೋ ಮನೆಯ ಮುಖ್ಯದ್ವಾರದ ಬಳಿ ಇರಬೇಕು.

2. ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದ ಕೊಳಲು ಪ್ರತಿಯೊಂದು ಮನೆಯಲ್ಲಿ ಕೂಡ ಇರಬೇಕು. ಶ್ರೀಕೃಷ್ಣ ಎಂದರೆ ಕೊಳಲು ಹಾಗೂ ನವಿಲುಗರಿ. ಇವುಗಳು ಇಲ್ಲದೆ ಕೃಷ್ಣನು ಇಲ್ಲ ಮತ್ತು ಕೃಷ್ಣ ಶ್ರೀ ಮಹಾ ವಿಷ್ಣುವಿನ ಅವತಾರವಾಗಿರುವುದರಿಂದ ಮಹಾ ವಿಷ್ಣುವಿಲ್ಲದ ಕಡೆ, ಲಕ್ಷ್ಮಿಯು ಇರಲು ಇಚ್ಚಿಸಲಾರರು.

ಹೀಗಾಗಿ ಪ್ರತಿ ಮನೆಯಲ್ಲಿ ಸಾಮಾನ್ಯವಾಗಿ ನವಿಲುಗರಿ ಇದ್ದೇ ಇರುತ್ತದೆ. ಇದರ ಜೊತೆಗೆ ತಪ್ಪದೆ ಕೊಳಲನ್ನು ಕೂಡ ಇಡಿ ಅದರಲ್ಲೂ ಬೆಳ್ಳಿಯ ಕೊಳಲನ್ನು ಇಡುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ.

* ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಆಸಕ್ತಿ ಬರಬೇಕು ಎಂದರೆ ಚಿಕ್ಕ ಬಿಳಿ ಬಣ್ಣದ ಕೊಳಲನ್ನು ಇಟ್ಟುಕೊಳ್ಳಿ
* ಹಳದಿ ಬಣ್ಣದ ಕೊಳಲನ್ನು ಮನೆಯಲ್ಲಿ ಇಡುವುದರಿಂದ ಮನೆಯ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ
* ವ್ಯಾಪಾರ ವ್ಯವಹಾರದ ಕಚೇರಿ ಸ್ಥಳಗಳಲ್ಲಿ ಬೆಳ್ಳಿ ಕೊಳಲು ಇಡುವುದರಿಂದ ಹೆಚ್ಚು ಲಾಭವಾಗುತ್ತದೆ.
* ಮನೆಯ ಸದಸ್ಯರ ನಡುವೆ ಮನಸ್ತಾಪಗಳಿದ್ದರೆ ಜೋಡಿ ಕೊಳಲು ತಂದು ಲಿವಿಂಗ್ ಏರಿಯಾದಲ್ಲಿ ಇಡಬೇಕು.

3. ಪ್ರತಿಯೊಂದು ಮನೆಗೂ ದೇವರ ಕೋಣೆ ಇರುವಂತೆ ಪ್ರತಿಯೊಂದು ದೇವರ ಕೋಣೆಯಲ್ಲೂ ಕೂಡ ಶಂಖ ಇರಲೇಬೇಕು ಮತ್ತು ಮನೆಯಲ್ಲಿ ಆಗಾಗ ಶಂಖನಾದ ಮೊಳಗುತ್ತಲೇ ಇರಬೇಕು, ಇದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮ. ಮನೆಯ ನೆಗೆಟಿವಿಟಿ ಆಚೆ ಹೋಗುವುದರಿಂದ ದನಾಕರ್ಷಣೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಆದರೆ ಶಂಖ ತರುವುದಕ್ಕೆ ಹಾಗೂ ಇಡುವುದಕ್ಕೆ ನಿಯಮಗಳಿವೆ.

* ಯಾವಾಗಲೂ ಜೋಡಿ ಶಂಖ ತರಬೇಕು, ಒಂದು ಪೂಜೆ ಮಾಡುವುದಕ್ಕೆ ಬಳಸಬೇಕು ಮತ್ತೊಂದನ್ನು ಊದಲು ಬಳಸಬೇಕು.
* ಪೂಜೆ ಮಾಡುವ ಶಂಖವು ಊದುವ ಶಂಖಕ್ಕಿಂತ ಎತ್ತರದ ಸ್ಥಳದಲ್ಲಿರಬೇಕು. ಊದುವ ಶಂಖವನ್ನು ಬಳಸದೆ ಇದ್ದಾಗ ಗಂಗಾಜಲದಿಂದ ಶುದ್ಧ ಮಾಡಿ ಬಿಳಿ ವಸ್ತ್ರದಲ್ಲಿ ಸುತ್ತಿ ದೇವರ ಕೋಣೆಯಲ್ಲಿಡಬೇಕು.

* ಅಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೂ ಶಂಖವನ್ನು ಬಳಸಬಾರದು. ದೇವರ ಕೋಣೆ ಬಿಟ್ಟು ಯಾವ ಜಾಗದಲ್ಲೂ ಶಂಖ ಇಡಬಾರದು.
* ದೇವರ ಕೋಣೆಯಲ್ಲಿ ಶಿವಲಿಂಗ ಇದ್ದರೆ ಶಿವಲಿಂಗದಿಂದ ದೂರದಲ್ಲಿ ಶಂಖವನ್ನು ಇಡಬೇಕು. ಯಾವುದೇ ಕಾರಣಕ್ಕೂ ಶಂಖದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬಾರದು
* ಮನೆಯಲ್ಲಿ ಹೆಚ್ಚು ಶಂಖಗಳು ಇರಬಾರದು ಅದು ಮನೆಗೆ ಅಪಶಕುನ.

4. ಹಣದ ಒಡತಿಯಾದ ಮಹಾಲಕ್ಷ್ಮಿಯ ಜೊತೆ ಸಂಪತ್ತಿನ ಒಡೆಯನಾದ ಕುಬೇರನ ವಿಗ್ರಹ ಕೂಡ ಪ್ರತಿಯೊಂದು ಮನೆಯಲ್ಲಿರಬೇಕು ಅಥವಾ ಫೋಟೋ ಆದರೂ ಇರಬೇಕು. ಪ್ರತಿನಿತ್ಯ ಇದಕ್ಕೆ ಪೂಜೆಯಾಗುತ್ತಿದ್ದರೆ ನಿಮ್ಮ ಮನೆಗೆ ಹಣದ ಹೊಳೆ ಹರಿಯುವುದರಲ್ಲಿ ಅನುಮಾನವಿಲ್ಲ.

5. ಮನೆಯಲ್ಲಿ ಅಕ್ವೇರಿಯಂ ಇಟ್ಟು ಅದರಲ್ಲಿ ಮೀನುಗಳನ್ನು ಸಾಕುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತು ಮನೆಯಲ್ಲಿ ಹಣಕಾಸಿನ ಸಂಸ್ಥೆ ಬರುವುದಿಲ್ಲ ಎಂದು ಹೇಳಲಾಗುತ್ತದೆ ಅದರಲ್ಲೂ ಗೋಲ್ಡನ್ ಡ್ರ್ಯಾಗನ್ ಫಿಶ್ ಇಟ್ಟರೆ ಇನ್ನು ಉತ್ತಮ.

ಈರುಳ್ಳಿ ಇಂದ ಎಷ್ಟೆಲ್ಲಾ ಪ್ರಯೋಜನಗಳಿದೆ ಗೊತ್ತಾ.?, ಇದು ಗೊತ್ತಾದರೆ ಎಷ್ಟೇ ರೇಟ್ ಆದರೂ ಈರುಳ್ಳಿ ಖರೀದಿಸುತ್ತೀರಿ.!

 

ಈರುಳ್ಳಿ ಕಟ್ ಮಾಡುವಾಗ ಕ’ಣ್ಣೀ’ರು ಹಾಕಿಸಿದರು ಅಥವಾ ಕೆಲವೊಮ್ಮೆ ಬೆಲೆ ಕೇಳಿ ಬೇಸರವಾದರೂ ಈರುಳ್ಳಿಯಿಂದ ಎಷ್ಟೆಲ್ಲ ದೇಹಕ್ಕೆ ಅನುಕೂಲವಿದೆ ಎನ್ನುವುದನ್ನು ನೀವು ತಿಳಿದುಕೊಂಡರೆ ಇನ್ನು ಮುಂದೆ ಮೂರು ಹೊತ್ತು ಕೂಡ ತಪ್ಪದೇ ಅಡಿಗೆ ಮಾಡುವಾಗ ಈರುಳ್ಳಿ ಬಳಸುತ್ತೀರಿ ಮತ್ತು ಊಟದ ಜೊತೆಯಲ್ಲಿ ಹಸಿ ಈರುಳ್ಳಿ ತಿನ್ನುತ್ತೀರಿ.

ಈರುಳ್ಳಿ ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮತ್ತು ಮಾನಸಿಕ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಗೃಹಿಣಿಯರಿಗೆ ಚೆನ್ನಾಗಿ ಗೊತ್ತಿರುತ್ತದೆ ಈರುಳ್ಳಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುವುದರಿಂದ ಆಹಾರದ ರುಚಿ ಹೇಗೆ ಹೆಚ್ಚಿಸಬಹುದು ಎಂದು ಈ ರೀತಿ ರುಚಿ ಮತ್ತು ಆರೋಗ್ಯ ಎರಡನ್ನು ನೀಡುವ ಈ ಈರುಳ್ಳಿಯನ್ನು ಹೇಗೆ ಸೇವನೆ ಮಾಡುವುದರಿಂದ ಮತ್ತು ಯಾವ ರೀತಿ ಬಳಸುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎನ್ನುವುದರ ಪಟ್ಟಿ ಹೀಗಿದೆ ನೋಡಿ.

* ಪ್ರತಿದಿನವೂ ಕೂಡ ಆಹಾರದ ಜೊತೆ ಹಸಿ ಈರುಳ್ಳಿ ತಿನ್ನುವುದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಬರುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತದೆ, ಹಾಗೆಯೇ ಊಟ ಮಾಡಿದ ಆಹಾರವು ಚೆನ್ನಾಗಿ ಜೀರ್ಣ ಆಗುತ್ತದೆ.
* ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ಆ ಪೇಸ್ಟ್ ಅನ್ನು ಹಚ್ಚಿದಾಗ ಅದು ತಕ್ಷಣ ನಿಲ್ಲುತ್ತದೆ.
* ಸುಟ್ಟ ಈರುಳ್ಳಿಯನ್ನು ತಿಂದರೆ ಅಜೀರ್ಣ ನಿವಾರಣೆಯಾಗುತ್ತದೆ, ಮತ್ತು ಆಮಶಂಕೆ ಕೂಡ ಕಂಟ್ರೋಲ್ ಗೆ ಬರುತ್ತದೆ.

* ಚೇಳು ಅಥವಾ ಜೇನು ಕಚ್ಚಿದ ಸ್ಥಳಕ್ಕೆ ಈ ಹಸಿ ಈರುಳ್ಳಿಯ ಸಿಪ್ಪೆ ತೆಗೆದು ಜಜ್ಜಿ ತಿಕ್ಕುವುದರಿಂದ ಶೀಘ್ರವೇ ನೋವು ಉಪಶಮನವಾಗುತ್ತದೆ.
* ತುರಿಕೆ ಕಜ್ಜಿ ವಾಸಿಯಾಗಲು ಬಿಳಿ ಈರುಳ್ಳಿಯನ್ನು ಜಜ್ಜಿ ರಸ ಹಿಂಡಿಕೊಂಡು ಅದರಲ್ಲಿ ಅರಿಶಿಣ ಪುಡಿಯನ್ನು ಕಲಸಿ ಹಚ್ಚಬೇಕು. ಪ್ರತಿನಿತ್ಯ ಕೂಡ ಈ ಮನೆ ಮದ್ದು ಮಾಡುವುದರಿಂದ ಬಹಳ ಬೇಗನೆ ಸಂಪೂರ್ಣವಾಗಿ ಇದನ್ನು ಗುಣ ಮಾಡಿಕೊಳ್ಳಬಹುದು.

* ಜಜ್ಜಿದ ಈರುಳ್ಳಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ, ತಲೆನೋವು ಮುಂತಾದ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ.
* ಬೆಲ್ಲದ ಜೊತೆಯಲ್ಲಿ ಈರುಳ್ಳಿ ತಿನ್ನುವುದರಿಂದ ರಕ್ತ ವೃದ್ಧಿಯಾಗುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ. ಶರೀರ ತೂಕವು ಹೆಚ್ಚಾಗುತ್ತದೆ.
* ಈರುಳ್ಳಿ ಹೂವನ್ನು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅರಿಶಿಣ ಕಾಮಾಲೆ, ಮೂಲವ್ಯಾಧಿ ಮುಂತಾದ ರೋಗಗಳಿಗೆ ಅತ್ಯುತ್ತಮ ಔಷಧಿಯಾಗಿದೆ ಈರುಳ್ಳಿ ಹೂವು.

* ಊಟದ ಜೊತೆ ಈರುಳ್ಳಿ ನೆಂಚಿಕೊಂಡು ತಿನ್ನುವುದರಿಂದ ಕಣ್ಣು ನೋವು ಅರ್ಧ ತಲೆನೋವು ಗುಣವಾಗುತ್ತದೆ.
* ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ನಿದ್ರೆಗೆ ಸಂಬಂಧಿತ ಸಮಸ್ಯೆಗಳು ಗುಣವಾಗುತ್ತವೆ. ನಿದ್ರಾಹೀನತೆ ವಾಸಿಯಾಗುತ್ತದೆ ಮತ್ತು ಸ್ನಾಯುಮಂಡಲಕ್ಕೆ ಚೈತನ್ಯ ಒದಗುತ್ತದೆ.
* ಹಸಿ ಈರುಳ್ಳಿಯ ಸೇವನೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ.

* ಆಹಾರದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ಕೂಡ ಕಟ್ ಮಾಡಿ ಕೊಡುವುದರಿಂದ ಆಹಾರದ ರುಚಿ ಹೆಚ್ಚಾಗುತ್ತದೆ. ಮತ್ತು ಹಸಿವು ಚೆನ್ನಾಗಿ ಆಗುತ್ತದೆ.
* ತಲೆ ಹೊಟ್ಟು, ತಲೆ ಕೂದಲು ಕಟ್ ಆಗುವುದು ಕವಲು ಒಡೆಯುವುದು ಮುಂತಾದ ಸಮಸ್ಯೆಗೆ ಈರುಳ್ಳಿ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕಂಟ್ರೋಲ್ ಆಗುತ್ತದೆ.
* ತಲೆ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ ಒಣಗಿಸಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲಿಗೆ ಶೈನಿಂಗ್ ಬರುತ್ತದೆ ಕೂದಲು ಸೋಂಪಾಗಿ ಬೆಳೆಯುತ್ತದೆ ಮತ್ತು ಕೂದಲು ಗಟ್ಟಿಯಾಗುತ್ತದೆ.

ಕೇಂದ್ರ ಸರ್ಕಾರದ ಹೊಸ ಯೋಜನೆ, ರೈತನ ಪತ್ನಿಗೆ ಸಿಗಲಿದೆ ಪ್ರತಿ ತಿಂಗಳು 3000ರೂ ಪಿಂಚಣಿ.!

 

ಕೇಂದ್ರ ಸರ್ಕಾರ ರೈತನಿಗಾಗಿ (Government Schemes for Farmers ) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (PMKSY) ಮೂಲಕ ವಾರ್ಷಿಕವಾಗಿ 6,000 ಸಹಾಯಧನವನ್ನು 3 ಕಂತುಗಳಲ್ಲಿ ತಲಾ ನಾಲ್ಕು ತಿಂಗಳ ಅಂತರದಲ್ಲಿ ದೇಶದಾದ್ಯಂತ ಇರುವ ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರ ಪಡೆಯುತ್ತಿದ್ದಾರೆ.

ರೈತರನ್ನು ಆರ್ಥಿಕವಾಗಿ ಸದೃಢನಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ರೈತರ ವೃದ್ಯಾಪ್ಯದ ಬಗ್ಗೆ ಕೂಡ ಚಿಂತನೆ ನಡೆಸಿ ರೈತನು ಕೂಡ ಅಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕನಾಗಿರುವುದರಿಂದ ಆತನಿಗೆ ವಯಸ್ಸಾದ ಬಳಿಕ ಕೃಷಿ ಅಥವಾ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಶಕ್ತಿ ಇಲ್ಲದೆ ಇದ್ದಾಗ ಹಣಕಾಸಿಗಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು ಎನ್ನುವ ಕಾರಣಕ್ಕಾಗಿ ಕಿಸಾನ್ ಮನ್ ದನ್ ಯೋಜನೆಯನ್ನು (Kisan Mandan Scheme) ಕೂಡ ಕೇಂದ್ರ ಸರ್ಕಾರ ಘೋಷಿಸಿದೆ.

ಕಿಸಾನ್ ಮನ್ ದನ್ ಯೋಜನೆಯ ಮೂಲಕ ದೇಶದ ಸಣ್ಣ ಹಾಗೂ ಅತಿ ಸಣ್ಣ ರೈತರು ದುಡಿಯುವ ವಯಸ್ಸಿನಲ್ಲಿ ಒಂದು ಚಿಕ್ಕ ಮೊತ್ತದ ಹಣವನ್ನು ಉಳಿತಾಯ ಮಾಡಿ ವೃದ್ಯಾಪದಲ್ಲಿ ಪ್ರತಿ ತಿಂಗಳು ಪೆನ್ಷನ್ (Pension) ಬರುವ ರೀತಿ ಸೌಲಭ್ಯ ಪಡೆಯಬಹುದು. ಕಿಸಾನ್ ಮನ್ ದನ್ ಯೋಜನೆಯ ಮತ್ತೊಂದು ವಿಶೇಷತೆ ಏನೆಂದರೆ, ಕುಟುಂಬ ಪಿಂಚಣಿಯ ಅನುಕೂಲತೆ ಕೂಡ ಇದೆ.

ಒಂದು ವೇಳೆ ಹೂಡಿಕೆ ಮಾಡಿದ ಮೃ’ತಪಟ್ಟಲ್ಲಿ ಆತನ ಪತ್ನಿಗೆ ಅರ್ಧ ಪಿಂಚಣಿ ಹೋಗುತ್ತದೆ. ರೈತರಿಗಾಗಿ ಜಾರಿಗೆ ತಂದಿರುವ ಹಲವು ವಿಶೇಷ ಯೋಜನೆಗಳಲ್ಲಿ ಇದು ಕೂಡ ಪ್ರಮುಖವಾಗಿದ್ದು ಬಹಳ ಅನುಕೂಲಕರವಾಗಿರುವ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದರ ಅವಶ್ಯಕತೆ ಹಾಗೂ ಪ್ರಯೋಜನಗಳನ್ನು ತಿಳಿದು ಎಲ್ಲಾ ರೈತರು ಕೂಡ ಈ ಯೋಜನೆಯನ್ನು ಖರೀದಿಸಲು ಪ್ರೋತ್ಸಾಹಿಸಿ.

* ಕಿಸಾನ್ ಮಂದನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಹಾಗೂ ಖಚಿತವಾದ ಲಾಭವು ಕೂಡ ಇರುತ್ತದೆ.
* 18 ವರ್ಷ ಮೇಲ್ಪಟ್ಟ 40 ವರ್ಷದ ಒಳಗಿರುವ ರೈತನು ಈ ಯೋಜನೆಯನ್ನು ಖರೀದಿಸಬಹುದು ಮತ್ತು 60 ವರ್ಷ ವಯಸ್ಸಿನವರೆಗೂ ಕೂಡ ತನ್ನ ಸಾಮರ್ಥ್ಯಕ್ಕನುಸಾರವಾಗಿ ಕನಿಷ್ಠ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತ ಬರಬೇಕು

* ಗರಿಷ್ಠ 2 ಹೆಕ್ಟರ್ ವರಗೆ ಕೃಷಿ ಭೂಮಿ ಹೊಂದಿರುವ ರೈತರು ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
* ರೈತರು ಮಾಸಿಕವಾಗಿ 55 ರೂಪಾಯಿ ಇಂದ ಗರಿಷ್ಠ 200 ರೂಪಾಯಿವರೆಗೆ ಹೂಡಿಕೆ ಮಾಡಬಹುದು ಹಾಗೂ ಹೂಡಿಕೆಯ ಆಧಾರದ ಮೇಲೆ ಅವರಿಗೆ 60 ವರ್ಷ ಆದಮೇಲೆ ಪಿಂಚಣಿ ಬರುತ್ತದೆ.
* ಮಾಸಿತಕವಾಗಿ ಗರಿಷ್ಠ ರೂ.3000 ಅಥವಾ ವಾರ್ಷಿಕವಾಗಿ ಗರಿಷ್ಠ ರೂ.36,000 ಪಡೆಯಬಹುದು.

* ಒಂದು ವೇಳೆ ರೈತ 60 ವರ್ಷದ ಒಳಗೆ ಮೃ’ತಪಟ್ಟಲ್ಲಿ ಹೂಡಿಕೆ ಮೊತ್ತ ಮತ್ತು ಅದಕ್ಕೆ ಅನ್ವಯಿಸುವ ಬಡ್ಡಿಯ ಸಮೇತ ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ಪಿಂಚಣಿ ಪಡೆಯುವ ವೇಳೆ ಮೃ’ತ ಪಟ್ಟಲ್ಲಿ ವ್ಯಕ್ತಿ 3000ರೂ. ಪಿಂಚಣಿ ಪಡೆಯುತ್ತಿದ್ದರೆ ಆತನ ಪತ್ನಿಗೆ ಪ್ರತಿ ತಿಂಗಳು 1500ರೂ. ಪಿಂಚಣಿ ಹೋಗುತ್ತದೆ, ಅವರು ಮೃ’ತಪಟ್ಟ ಬಳಿಕ ನಾಮಿನಿಗೆ ಹೂಡಿಕೆ ಮೊತ್ತ ಹೋಗುತ್ತದೆ.
* ಗ್ರಾಮ ಒನ್ ಅಥವಾ CSC ಕೇಂದ್ರಗಳಲ್ಲಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ.

ಬೇಕಾಗುವ ದಾಖಲೆಗಳು:-

* ರೈತನ ಆಧಾರ್ ಕಾರ್ಡ್ ಮತ್ತು ಪತ್ನಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಜಮೀನಿನ ಪಹಣಿ ಪತ್ರ
* ನಾಮಿನಿ ಡೀಟೇಲ್ಸ್
* ಮೊಬೈಲ್ ಸಂಖ್ಯೆ