Home Blog Page 110

ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಹೊಡೆದರೆ ಏನು ಅರ್ಥ ಗೊತ್ತಾ.? ಪ್ರತಿಯೊಬ್ಬ ಗೃಹಿಣಿಗೂ ಈ ವಿಚಾರ ಗೊತ್ತಿರಬೇಕು.!

 

ಪ್ರತಿಯೊಂದು ಮನೆಯಲ್ಲೂ ಕೂಡ ಕಳಶವನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಅವರ ಮನೆಗಳಲ್ಲಿ ರೂಢಿಯಿಂದ ನಡೆದುಕೊಂಡು ಬಂದಿರುವ ವಾರದ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮತ್ತು ಮನೆ ಶುಭ.ಸಮಾರಂಭಗಳ ಆರಂಭದಲ್ಲಿ ಕಳಶ ಪ್ರತಿಷ್ಠಾಪನೆ ಮಾಡಲಾಗುತ್ತದೆ ಕಳಶ ಇದ್ದರೆ ಮನೆಯಲ್ಲಿ ಒಬ್ಬ ಹಿರಿಯ ಮುತ್ತೈದೆ ಇದ್ದಷ್ಟು ನೆಮ್ಮದಿ ಸಿಗುತ್ತದೆ.

ತಾಯಿ ಮಹಾಲಕ್ಷ್ಮಿಯ ಸಂಕೇತವಾಗಿ, ತಾಯಿ ಮಹಾಗೌರಿಯ ಸಂಕೇತವಾಗಿ ದೇವರ ಕೋಣೆಯಲ್ಲಿ ಕಳಶ ಇಟ್ಟು ಪೂಜಿಸಲಾಗುತ್ತದೆ. ಈ ರೀತಿ ಕಳಶ ಇಡುವಾಗ ಅದಕ್ಕೆ ತನ್ನದೇ ಆದ ವಿಧಿ ವಿಧಾನಗಳು ಇವೆ. ಇವುಗಳಲ್ಲಿ ಅಡಚಣೆಗಳಾದಾಗ ಶಕುನ ಎಂದು ಹೇಳಲಾಗುತ್ತದೆ ಆದಷ್ಟು ಜಾಗರೂಕತೆಯಿಂದ ಭಯ ಭಕ್ತಿಯಿಂದ ಇದನ್ನು ನೋಡಿಕೊಳ್ಳಬೇಕಾಗುತ್ತದೆ.

ಕಳಶ ಇಡಲು ಬಳಸುವ ನೀರಿನಿಂದ ಹಿಡಿದು ಹೂವು, ವೀಳ್ಯದೆಲೆ ಹೀಗೆ ಎಲ್ಲಾ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇರಬೇಕು. ಕಳಶಕ್ಕೆ ಇಡುವ ಹೂವು ಕೊಡ ಬಾಡಿರಬಾರದು, ಎಲೆ ಒಡೆದಿರಬಾರದು, ಎಲ್ಲವೂ ಮಡಿಯಾಗಿರಬೇಕು. ಈ ರೀತಿಯಾಗಿ ನಿಯಮಬದ್ದವಾಗಿ ಕಳಶವನ್ನು ಇಟ್ಟು ಪೂಜಿಸಿದಾಗ ಮಾತ್ರ ಅದರ ಫಲ ದೊರೆಯುತ್ತದೆ ಮತ್ತು ಒಮ್ಮೆ ಈ ರೀತಿ ಪೂಜಿಸಿ ನೋಡಿದಾಗ ಅದರ ಫಲಿತಾಂಶ ಏನು ಎಂದು ಗೊತ್ತಾಗುತ್ತದೆ.

ಮನೆಯ ತುಂಬಾ ಸಕಾರಾತ್ಮಕ ವಾತಾವರಣ ಪಸರಿಸುತ್ತದೆ. ನಾವು ಹೇಳಿದ್ದನ್ನು ಕೇಳುವುದಕ್ಕೆ ಯಾರೋ ಇದ್ದಾರೆ ಎನ್ನುವ ಧೈರ್ಯ ಇತ್ಯಾದಿಗಳು ಕೂಡ ಗೃಹಿಣಿಯರ ಮನಸ್ಸನ್ನಲ್ಲಿ ಶಕ್ತಿ ತುಂಬುತ್ತವೆ. ಅದೇ ಕಾರಣಕ್ಕೆ ಹೆಣ್ಣು ಮಕ್ಕಳು ಅದೆಷ್ಟೇ ಹೊತ್ತಾದರೂ ಉಪವಾಸ ಇದ್ದು ಇದನ್ನು ಮಾಡಿದ ಬಳಿಕವಷ್ಟೇ ತಮ್ಮ ದೈನಂದಿನ ಕೆಲಸ ಕಾರ್ಯ ಶುರು ಮಾಡುತ್ತಾರೆ.

ಇಷ್ಟು ಪ್ರಭಾಶಾಲಿಯಾದ ಈ ಆಚರಣೆಯಲ್ಲಿ ಈ ಮೊದಲೇ ಹೇಳಿದಂತೆ ಇಷ್ಟೊಂದು ನಿಯಮಗಳು ಇರುವುದರಿಂದ ಅಡಚಣೆಗಳಾದಾಗ ಭಯವಾಗುವುದು ಸಹಜ. ಇದನ್ನು ಶಕುನ ಎಂದು ಕೂಡ ಹೇಳುವುದರಿಂದ ಕಿಂಚಿತ್ತು ಅಚಾನಕ್ಕಾಗಿ ಹೆಚ್ಚು ಕಮ್ಮಿ ಆದರೂ ಮನೆ ಮಂದಿಯ ಮನಸ್ಸು ಕೆ’ಟ್ಟು ಹೋಗುತ್ತದೆ. ಮುಂದೆನಾದರೂ ಆ’ಪ’ತ್ತಾ’ದ’ರೆ ಎನ್ನುವ ಯೋಚನೆಯಲ್ಲಿ ಅವರು ಮುಳುಗಿರುತ್ತಾರೆ.

ಆದರೆ ಕೆಲವೊಮ್ಮೆ ಕಳಶದಲ್ಲಿ ಹಾಕುವ ಬದಲಾವಣೆಗಳು ಒಳ್ಳೆಯ ಸೂಚನೆಯನ್ನು ಕೂಡ ಕೊಡುತ್ತವೆ. ಉದಾಹರಣೆಗೆ ಕಳಶದಲ್ಲಿ ಇಟ್ಟಿರುವ ಕಾಯಿ ಒಮ್ಮೊಮ್ಮೆ ಬಿ’ರು’ಕು ಬಿಡುತ್ತದೆ, ಒಮ್ಮೊಮ್ಮೆ ಆ ಕಾಯಿಯಲ್ಲಿ ಮೊ’ಳ’ಕೆ ಕೂಡ ಮೂಡಿರುತ್ತದೆ. ವಾರಕ್ಕೊಮ್ಮೆ ಅಥವಾ ಅವರ ಅನುಕೂಲಕ್ಕೆ ತಕ್ಕ ಹಾಗೆ ಕಳಶವನ್ನು ಬದಲಾಯಿಸಿದಾಗ.

ಇದನ್ನು ಗಮನಿಸಿ ಅವರು ಇದು ಯಾವ ರೀತಿಯ ಶಕುನ ಇರಬಹುದು ಎಂದು ಸ್ಪಷ್ಟವಾಗಿ ತಿಳಿಯದೆ ಗೊಂದಲಕ್ಕೀಡಾಗುತ್ತಾರೆ ಅದಕ್ಕೆ ಸ್ಪಷ್ಟತೆಯನ್ನು ಈ ಅಂಕಣದಲ್ಲಿ ಕೊಡಲಿಚ್ಛಿಸುತ್ತಿದ್ದೇವೆ. ಹಿರಿಯರು, ಖ್ಯಾತ ಶಾಸ್ತ್ರಜ್ಞರು, ಜ್ಯೋತಿಷ್ಯಿಗಳು ಎಲ್ಲರೂ ಹೇಳಿರುವ ಪ್ರಕಾರ ಕಳಶದಲ್ಲಿ ಕಾಯಿ ಮೊಳಕೆ ಬಂದಿದ್ದರೆ ಅದು ತುಂಬಾ ಶುಭ ಸೂಚಕ. ಈ ರೀತಿ ಮೊಳಕೆ ಹೊಡೆದರೆ ಅದು ಬೆಳವಣಿಗೆ ಸಂಕೇತ.

ಆ ಮನೆಯ ಐಶ್ವರ್ಯ ಸಮೃದ್ಧಿ ಸಂತೋಷ ಏಳಿಗೆ ಆಗುತ್ತದೆ, ಮನೆಯಲ್ಲಿ ಸಂಪತ್ತು ತುಂಬುತ್ತದೆ, ಆ ಮನೆಗೆ ಒಳ್ಳೆಯದೇ ಆಗುತ್ತದೆ. ಒಂದು ವೇಳೆ ಬಿ’ರು’ಕು ಆದಾಗ ಅದು ಕೆ’ಟ್ಟ’ದ್ದು ಎಂದು ಭಯ ಪಡುವ ಅಗತ್ಯ ಇಲ್ಲ. ಯಾಕೆಂದರೆ ವಾತಾವರಣದ ವೈಪರಿತ್ಯಗಳಿಂದಲೂ ಈ ರೀತಿ ತೆಂಗಿನಕಾಯಿಯಲ್ಲಿ ಬಿ’ರು’ಕು ಬಂದಿರಬಹುದು.

ಕಳಶ ಬದಲಾಯಿಸುವ ದಿನದಂದು ಆ ತೆಂಗಿನಕಾಯಿಯನ್ನು ತೆಗೆದು ಅದರಿಂದ ಸಿಹಿ ಪದಾರ್ಥಗಳನ್ನು ಮಾಡಿ ಮಕ್ಕಳಿಗೆ, ವೃದ್ಧರಿಗೆ, ಅಸಹಾಯಕರಿಗೆ ಹೀಗೆ ಸಾಧ್ಯವಾದಷ್ಟು ಜನರಿಗೆ ಅದನ್ನು ಹಂಚಿ ಅಥವಾ ಮನೆ ಮಂದಿ ಸೇವಿಸಿ ಯಾವುದೇ ತೊಂದರೆಯಾಗುವುದಿಲ್ಲ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಇದ್ದಾಗ ಖಂಡಿತ ಫಲಿತಾಂಶ ಕೆ’ಟ್ಟದಾಗುವುದಿಲ್ಲ.

ಕೂಲಿ ಕೆಲಸ ಮಾಡುವವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್, ಸ್ವಂತ ಜಮೀನು ಇಲ್ಲದ ಕೃಷಿ ಕಾರ್ಮಿಕರಿಗೆ ಉಚಿತ ಜಮೀನು.!

 

ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರಾಜ್ಯದ ಭೂಮಿರಹಿತ ಕೃಷಿ ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಸರ್ಕಾರದಿಂದ ಅಕ್ರಮವಾಗಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಳೆದ 15 ವರ್ಷದಿಂದ ಉಳುಮೆ ಮಾಡುತ್ತಾ ಬಂದಿರುವ ರೈತನಿಗೆ ಅನುಕೂಲವಾಗುವಂತಹ ಆದೇಶವನ್ನು ಮಾನ್ಯ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡರವರು ಹೊರಡಿಸಿದ್ದಾರೆ.

ರೈತರ ಬಹಳ ವರ್ಷಗಳಿಂದ ನಿರೀಕ್ಷೆ ವಿಚಾರವಾಗಿದ್ದ ಬಗರ್ ಹುಕುಂ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ಮುಂದಾಗಿರುವ ಮಾಹಿತಿಯನ್ನು ಸ್ವತಃ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರೇ ಕಳೆದ ವಾರ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಬಹಳ ವಿಶೇಷವಾದ ವಿಷಯವಿದ್ದು ಈ ಬಾರಿ ಭೌತಿಕ ಹಕ್ಕುಪತ್ರ ವಿತರಣೆ ಬದಲು ಭೌತಿಕ ಹಕ್ಕುಪತ್ರಗಳ ದುರ್ಬಳಕೆಯನ್ನು ತಡೆಗಟ್ಟಿ ಸಂರಕ್ಷಿತವಾಗಿ ಇಡಲು ಬಗರ್ ಹುಕುಂ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಹಕ್ಕು ಪತ್ರ ವಿತರಿಸಲು ಇಲಾಖೆ ನಿರ್ಧರಿಸುವ ಬಗ್ಗೆ ಕೂಡ ವಿಷಯ ಹಂಚಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆ ಮೇಲೆ ಅವಲಂಬಿತವಾಗಿ ಗ್ರಾಮೀಣ ಪ್ರದೇಶದ ಶೇಕಡವಾರು ಕುಟುಂಬಗಳು ಬದುಕುತ್ತಿವೆ. ಆದರೆ ಅನಾದಿಕಾಲದಿಂದಲೂ ಕೂಡ ಆಸ್ತಿ ಹಂಚಿಕೆ ವಿಚಾರದಲ್ಲಿ ವ್ಯತ್ಯಾಸಗಳು ಇರುವುದು ಮಾಮೂಲಿಯಾಗಿದೆ. ಕೆಲವರ ಬಳಿ ಅಪಾರ ಸಂಪತ್ತಿದ್ದರೆ ಇನ್ನು ಕೆಲವರು ಜಮೀನಿಲ್ಲದಿದ್ದರೂ ಕೃಷಿ ಚಟುವಟಿಕೆಯನ್ನು ಅವಲಂಬಿಸಿ ಕೃಷಿ ಕಾರ್ಮಿಕರಾಗಿರುತ್ತಾರೆ.

1980 ರಲ್ಲಿ ಆಗಿನ ಸರಕಾರ ಒಂದು ಮಹತ್ವದ ಹೆಜ್ಜೆ ಇಟ್ಟು ಜಮೀನು ಇಲ್ಲದ ಸಣ್ಣ ರೈತನಿಗೆ ಎರಡು ಎಕರೆ ಜಮೀನನ್ನು ಮಂಜೂರು ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಿತ್ತು. ಆದರೆ ಈ ಒಂದು ಯೋಜನೆಯನ್ನು ಎಲ್ಲಾ ಭೂ ರಹಿತ ಎಲ್ಲಾ ರೈತರಿಗೆ ಯಶಸ್ವಿಯಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಆಗ ಬೇರೆ ಮಾರ್ಗ ಇಲ್ಲದೆ ಕೆಲವು ಭೂಮಿ ಸಿಗದ ಭೂ ರಹಿತ ಕೃಷಿಕರು ತಮಗೆ ಸಿಕ್ಕ ಜಾಗವನ್ನೇ ಆಕ್ರಮಿಸಿಕೊಂಡು ಉಳುಮೆ ಮಾಡಲು ಪ್ರಾರಂಭಿಸಿದರು.

ಉಳುಮೆ ಮಾಡಿ ಸಂಪಾದನೆ ಮಾಡಿದರೂ ಸರಕಾರದ ಸವಲತ್ತುಗಳು ಅಥವಾ ಇನ್ನಿತರೆ ಯೋಜನೆಗಳ ಪ್ರಯೋಜನ ಪಡೆಯಲು, ರೈತರ ಹೆಸರಿನಲ್ಲಿ ಜಮೀನಿನ ದಾಖಲೆಗಳು ಇರಬೇಕು. ಆದರೆ ಈ ರೀತಿ ಅಕ್ರಮವಾಗಿ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡ ರೈತರಿಗೆ ಜಮೀನು ತಮ್ಮದೊಂದು ಹೇಳಿಕೊಳ್ಳಲು ದಾಖಲೆಗಳು ಇರದ ಕಾರಣ ಸರ್ಕಾರವು ಆ ಸಮಯದಲ್ಲಾದ ಅವ್ಯವಸ್ಥೆಯನ್ನು ಸರಿಪಡಿಸಲು ಈಗಲೂ ಪ್ರಯತ್ನಿಸುತ್ತಿದೆ.

ಈ ಹಿಂದೆಯೂ ಇಂತಹ ರೈತರಿಗೆ ಅವರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಅಥವಾ ಹಕ್ಕು ಪತ್ರವನ್ನು ನೀಡುವುದಕ್ಕಾಗಿ 1991ರಲ್ಲಿ ರಾಜ್ಯ ಸರಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1991ರಲ್ಲಿ ನಮೂನೆ 50 ಹಾಗೆ 1999ರಲ್ಲಿ ನಮೂನೆ 53 ಮತ್ತು 2018 ರಲ್ಲಿ ನಮೂನೆ 57 ರ ಈ ಮೂರು ಕಾಯಿದೆಗಳ ಅಡಿಯಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.

ಇನ್ನು ಸಹ ಇಂತಹ ಭೂಮಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲಾಗದ ರೈತರಿಗೆ ಈಗ ಅರ್ಜಿಗಳನ್ನು ಸಲ್ಲಿಸಿ ಹಕ್ಕು ಪತ್ರ ಪಡೆಯಲು ಸರ್ಕಾರ ಮತ್ತೊಂದು ಅವಕಾಶ ನೀಡುತ್ತಿದೆ. ಕಳೆದ 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂ ರಹಿತ ರೈತನಿಗಷ್ಟೇ ಈ ಅವಕಾಶವಿದ್ದು ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ಅದನ್ನು ವಿಲೇವಾರಿ ಮಾಡುವ ಕೆಲಸ ಕಂದಾಯ ಇಲಾಖೆ ಮಾಡುತ್ತದೆ.

ಈ ವಿಚಾರದಲ್ಲಿ ಕೂಡ ಸರ್ಕಾರಕ್ಕೆ ಮೋ’ಸವಾಗುತ್ತಿರುವುದನ್ನು ತಪ್ಪಿಸಲು ಈ ಬಾರಿ ಈ ಪ್ರಕ್ರಿಯೆಗೆ ಸಂಪೂರ್ಣ ತಂತ್ರಜ್ಞಾನ ಬಳಕೆ ಮಾಡಿ ಸಾಗುವಳಿ ಚೀಟಿ ನೀಡಲು ಸರ್ಕಾರ ಮುಂದಾಗಿದೆ. ತಾಲೂಕು ಮಟ್ಟದಲ್ಲಿ ಸಮಿತಿಗಳು ರಚನೆಯಾಗುತ್ತಿದ್ದು ಇನ್ನು ಆರು ತಿಂಗಳಲ್ಲಿ ಎಲ್ಲಾ ಅರ್ಜಿದಾರರಿಗೂ ಆಸ್ತಿಪತ್ರ ವಿತರಣೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

 

ಗೃಹಲಕ್ಷ್ಮಿ ಯೋಜನೆ ಹಣ ಬರದಿದ್ದವರಿಗೆ ಸಿಹಿ ಸುದ್ದಿ.!

 

ಕರ್ನಾಟಕ ರಾಜ್ಯದ ಜನತೆಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರವು (Karnataka Government) ಕರ್ನಾಟಕ ವಿಧಾನಸಭಾ ಚುನಾವಣೆ-2023ರ ವೇಳೆ (Assembly Election-2023) ಚುನಾವಣೆ ಪ್ರಣಾಳಿಕೆಯಲ್ಲಿ (Manifesto) ಬಳಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದೆ.

ಈಗಾಗಲೇ ರಾಜ್ಯದ ಜನತೆಯು ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿ (Shakti and Gruhalakshmi Scheme) ಮಾಡಿರುವ ಯೋಜನೆಗಳಾಗಿವೆ ಎನ್ನಬಹುದು.

ಶಕ್ತಿ ಯೋಜನೆಯಿಂದ ಕರ್ನಾಟಕದ ಗಡಿಯೊಳಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಶೂನ್ಯ ದರ ಟಿಕೆಟ್ ಪಡೆದ ಪ್ರಯಾಣಿಸುತ್ತಿದ್ದರೆ, ಗೃಹಲಕ್ಷ್ಮಿ ಯೋಜನೆಯ ವತಿಯಿಂದ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರು ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2,000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನ ಹಣವು ಫಲಾನುಭವಿಗಳ ಖಾತೆಗೆ ತಲುಪಿದೆ. ಆರಂಭದಲ್ಲಿ ಆದ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಲಕ್ಷಾಂತರ ಮಹಿಳೆಯರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 19 ರಿಂದ ಅನುಮತಿ ನೀಡಲಾಗಿತ್ತು.

ಅಂದಿನಿಂದ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸಂಖ್ಯೆ 1.06 ಕೋಟಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (KWCWD) ಅಂಕಿ ಅಂಶಗಳು ಹೇಳುತ್ತಿವೆ. ಇದರಲ್ಲಿ 7 ರಿಂದ 8 ಲಕ್ಷ ಮಹಿಳೆಯರ ಖಾತೆಗಳಿಗೆ ಆಧಾರ್ ಲಿಂಕ್ ಆಗಿರದೇ ಇರುವುದು, ಖಾತೆಗಳು ಆಕ್ಟಿವ್ ಆಗಿರದ ಕಾರಣದಿಂದ ಇನ್ನಷ್ಟು ಮಹಿಳೆಯರ ನೀಡಿರುವ ದಾಖಲೆಗಳ ಮಾಹಿತಿಗಳು ಹೊಂದಾಣಿಕೆ ಆಗದ ಕಾರಣದಿಂದಾಗಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಾದಾಗ 80%ರಷ್ಟು ಮಹಿಳೆಯರ ಮಾತ್ರ ಹಣವನ್ನು ಪಡೆದಿದ್ದರು•

ಎರಡನೇ ಕಂತಿನ ಹಣವನ್ನು ಸ್ವಲ್ಪ ತಡವಾಗಿ ಬಿಡುಗಡೆ ಮಾಡಿ ಮೊದಲನೇ ಕಂತಿನ ಹಣ ಪಡೆಯಲಾಗದಿದ್ದವರಿಗೆ ಅವರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆ ಪೈಕಿ ಸರ್ಕಾರ ಸೂಚನೆಯಂತೆ ಸಮಸ್ಯೆ ಸರಿಪಡಿಸಿಕೊಂಡವರಿಗೆ ಎರಡನೇ ಕಂತಿನ ಹಣ ಬಿಡುಗಡೆಯಾದ ಸಮಯದಲ್ಲಿ ಮೊದಲನೇ ಕಂತಿನ ಹಣ ಸೇರಿ ಒಟ್ಟು 4,000 ಹಣವು ಕೈ ಸೇರಿದೆ.

ಆದರೆ ಇನ್ನೂ ಕೂಡ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪಿಲ್ಲ. ಇತ್ತೀಚಿಗೆ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಯಲ್ಲೂ ಕೂಡ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಇದೇ ಕಿವಿಮಾತು ಹೇಳಿದ್ದರು.

ಮೂರನೇ ಕಂತಿನ ಹಣ ಬಿಡುಗಡೆಯಾಗುವ ವೇಳೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರ ಖಾತೆಗೂ ಹಣ ತಲುಪಬೇಕು ಹಾಗಾಗಿ ಆಯ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯ ಸಹಾಯದೊಂದಿಗೆ ಅಧಿಕಾರಿಗಳೇ ಮನೆ ಮನೆಗೆ ಭೇಟಿ ಕೊಟ್ಟು ಸರ್ವೆ ನಡೆಸಿ ಸಮಸ್ಯೆ ಬಗೆಹರಿಸಿ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗುವಲ್ಲಿ ಕೈಜೋಡಿಸಬೇಕು ಎಂದು ಸೂಚನೆ ಕೊಟ್ಟಿದ್ದರು.

ಈಗ ಇದೇ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್ ರವರು ರಾಮನಗರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ‌ ಯೋಜನೆ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ  ಈ ಬಾರಿ ಕಳೆದೆರಡು ಕಂತಿಗಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ತಲುಪುವ ನಿರೀಕ್ಷೆ ಇದೆ.

ಶೀಘ್ರದಲ್ಲೇ ಜಿಲ್ಲೆಯಲ್ಲಿ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಗೃಹಲಕ್ಷಿ ಯೋಜನೆಯಡಿ ಕಳೆದ 2ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಒಟ್ಟಿಗೆ 6,000 ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ ಇದೀಗ ಆ ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದ್ದಾರೆ.

 

ಮುಖದಲ್ಲಿನ ಭಂಗು ವಾಸಿಯಾಗಲು ಔಷಧಿ ಇದ್ದೇ ಇದೆ, ನಿಮ್ಮ ಮನೆಯಲ್ಲಿರುವ ವಸ್ತುವನ್ನೇ ಬಳಸಿ 21 ದಿನಗಳಲ್ಲಿ ಸಮಸ್ಯೆಯಿಂದ ಹೊರಬನ್ನಿ.!

 

ಮನುಷ್ಯನಿಗೆ ನಾನಾ ರೀತಿಯ ಸಮಸ್ಯೆಗಳು ಬರುತ್ತವೆ. ದೇಹಕ್ಕೆ ಬರುವ ಸಮಸ್ಯೆಗಳು ಅದರಲ್ಲೂ ಚರ್ಮ ಸಂಬಂಧಿತ ಸಮಸ್ಯೆಗಳು ಮನುಷ್ಯನನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಕುಗ್ಗಿ ಹೋಗುವಂತೆ ಮಾಡಿಬಿಡುತ್ತವೆ. ಇವುಗಳಲ್ಲಿ ಒಂದು ಮುಖದಲ್ಲಿ ಆಗುವ ಭಂಗು ಇದು ಎಷ್ಟು ಗಂಭೀರ ಎಂದರೆ ಅನೇಕರಿಗೆ ಇದೇ ಕಾರಣದಿಂದ ಮದುವೆ ಕೂಡ ಆಗುವುದಿಲ್ಲ.

ಜೊತೆಗೆ ಈ ಸಮಸ್ಯೆ ದೋಷದಿಂದ ಬರುವುದು ಇತ್ಯಾದಿ ಇತ್ಯಾದಿ ಮೂಢನಂಬಿಕೆಗಳ ಕಾರಣಗಳನ್ನು ಕೊಟ್ಟು ಅವರನ್ನು ಇನ್ನು ಸಹ ಭ’ಯ ಬೀಳಿಸಲಾಗುತ್ತದೆ ಮತ್ತು ಇದು ಗುಣವಾಗದ ಕಾಯಿಲೆ ಎಂದು ಅನೇಕರು ಹೆದರುತ್ತಾರೆ. ಆದರೆ ನಿಜವಾದ ಸತ್ಯ ಏನೆಂದರೆ ಆಯುರ್ವೇದ ಹಾಗೂ ಯೋಗದಿಂದ ಎಂತಹ ಕಾಯಿಲೆ ಬೇಕಾದರೂ ಗುಣಪಡಿಸಬಹುದು.

ಮುಖದಲ್ಲಿ ಆಗಿರುವ ಭಂಗು, ಕಪ್ಪು ಕಲೆಗಳು, ಬಿಳಿ ಮಚ್ಚೆ ಅಥವಾ ನೀಲಿ ಬಣ್ಣದ ಮಾರ್ಕ್ ಗಳು ಇವುಗಳಿಗೆಲ್ಲ ಈಗಾಗಲೇ ಅನೇಕ ಆಸ್ಪತ್ರೆಗಳನ್ನು ತಿರುಗಿ ಗಳನ್ನು ದುಬಾರಿ ಬೆಲೆಯ ಔಷಧಿಗಳನ್ನು ಹಚ್ಚಿದರು ಕೂಡ ಫಲಿತಾಂಶ ಸಿಕ್ಕಲಿಲ್ಲ ಎಂದರೆ ಹೋಪ್ ಕಳೆದುಕೊಳ್ಳಬೇಡಿ. ನೀವು ಇದ್ಯಾವುದು ಮಾಡದೆ ನಿಮ್ಮ ಮನೆಯಲ್ಲಿ ಸಿಗುವ ಮೂರೆ ಮೂರು ಪದಾರ್ಥಗಳಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.

ಅದು ಕೂಡ ಕೇವಲ 21 ದಿನಗಳಲ್ಲಿ ಅಂತಹ ಒಂದು ಅದ್ಭುತವಾದ ಆಯುರ್ವೇದ ಟಿಪ್ ನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಎಲ್ಲರ ಮನೆಯಲ್ಲೂ ಕೂಡ ಎಳ್ಳು ಇದ್ದೇ ಇರುತ್ತದೆ, ಈ ಎಳ್ಳನ್ನು ಸ್ವಲ್ಪ ತೆಗೆದುಕೊಳ್ಳಿ. ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು ಯಾವುದೇ ಎಳ್ಳನ್ನು ಬೇಕಾದರೂ ತೆಗೆದುಕೊಳ್ಳಬಹುದು, ಇದರ ಜೊತೆಗೆ ಬಿಳಿ ಸಾಸಿವೆಯನ್ನು ಕೂಡ ಅಷ್ಟೇ ಪ್ರಮಾಣದಲ್ಲಿ ತೆಗೆದುಕೊಳ್ಳಿ.

ಬಿಳಿ ಸಾಸಿವೆಯನ್ನು ಅಡುಗೆಗೆ ಬಳಸುವುದು ಬಹಳ ಕಡಿಮೆ ಇದನ್ನು ಆಯುರ್ವೇದ ಅಂಗಡಿಗಳಲ್ಲಿ ಅಥವಾ ಗ್ರಂಥಿಗೆ ಅಂಗಡಿಗಳಲ್ಲಿ ನೀವು ಖರೀದಿಸಬಹುದು. ಯುವ ಕ್ಷಾರ ಎಂದು ಹೇಳಲಾಗುವ ಒಂದು ವಸ್ತುವನ್ನು ಕೂಡ ನೀವು ಆಯುರ್ವೇದ ಅಂಗಡಿಯಲ್ಲಿ ಖರೀದಿಸಿ, ಯುವ ಕ್ಷಾರ ಎನ್ನುವುದು ಗೋಧಿಯಿಂದ ಮಾಡಿದ ಪದಾರ್ಥವಾಗಿರುತ್ತದೆ.

ಗೋಧಿಯನ್ನು ಚೆನ್ನಾಗಿ ತೊಳೆದು ಅದನ್ನು ಬೇಯಿಸಿ ಬಂದ ಆವಿಯನ್ನು ಒಣಗಿಸಿ ಪಡೆದ ಪುಡಿಯ ರೀತಿಯ ಪದಾರ್ಥ ಆಗಿರುತ್ತದೆ. ಇದನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕ’ಷ್ಟ ಹಾಗಾಗಿ ಆಯುರ್ವೇದ ಅಂಗಡಿಯಲ್ಲಿ ಖರೀದಿಸಿ. ಈ ಎಲ್ಲವನ್ನು ಕೂಡ ಚೆನ್ನಾಗಿ ಅರೆಯಿರಿ. ಅರೆದ ಆ ಮಿಶ್ರಣವನ್ನು ರಾತ್ರಿ ಹೊತ್ತು ಮಲಗುವ ಮುನ್ನ ಚೆನ್ನಾಗಿ ಮುಖ ತೊಳೆದು ಲೇಪನ ಮಾಡಿಕೊಳ್ಳಿ.

ಬೆಳಗ್ಗೆ ಎದ್ದ ಕೂಡಲೇ ಹಾಲಿನಿಂದ ಅಥವಾ ಎಳನೀರಿನಿಂದ ಅಥವಾ ತಣ್ಣಗಿರುವ ನೀರಿನಿಂದ ಕಡಲೆಹಿಟ್ಟು ಅಥವಾ ಮುಲ್ತಾನ್ ಮಟ್ಟಿ ಬಳಸಿ ನೀಟಾಗಿ ವಾಶ್ ಮಾಡಿ ಈ ರೀತಿ ತಪ್ಪದೇ 21 ದಿನಗಳು ಮಾಡಿದರೆ ಸಾಕು ನಿಮ್ಮ ಮುಖದ ಮೇಲಿರುವ ಎಲ್ಲಾ ಕಲೆಗಳು ಕೂಡ ಮಂಗಮಾಯವಾಗಿ ನಿಮ್ಮ ಮುಖ ಪಳಪಳನೆ ಹೊಳೆಯುತ್ತದೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳಲು ಮುಖ್ಯವಾದ ಕಾರಣ ಏನೆಂದರೆ ದೇಹದಲ್ಲಿರುವ ಟಾಕ್ಸಿಕ್ ಅಂಶಗಳು.

ಅಜೀರ್ಣ, ಮಲಬದ್ಧತೆ, ಇವುಗಳಿಂದ ಕೂಡ ಇಂತಹ ಸಮಸ್ಯೆಗಳು ಬರುತ್ತವೆ. ಹಾಗಾಗಿ ಆದಷ್ಟು ಆರೋಗ್ಯಕರ ಜೀವನಶೈಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳಿ. ತಡವಾಗಿ ಮಲಗುವ ಅಭ್ಯಾಸ ಬಿಟ್ಟುಬಿಡಿ. ಇದರಿಂದ ಒಂದು ವೇಳೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದರೆ ಆಯುರ್ವೇದದಲ್ಲಿ ತಿಳಿಸಲಾಗುವ ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಿ. 100 ಅಷ್ಟೇ ನೂರರಷ್ಟು ನಿಮಗೆ ಫಲಿತಾಂಶ ಖಚಿತ.

https://youtu.be/ZJdusZI40sk?si=pd9PQsmzI90Sigq7

40 ವರ್ಷ ಆಯಸ್ಸು ಹೆಚ್ಚಾಗುತ್ತದೆ, ಇದೊಂದು ಆಹಾರ ಬಿಟ್ಟು ಬಿಡಿ.!

0

 

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಾವು ಜೀವನಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವ ಆಹಾರದ ಬಗ್ಗೆ ಬಹಳ ನಿರ್ಲಕ್ಷ ವಹಿಸುತ್ತಿದ್ದೇನೆ. ನಾವು ಇರುವವರೆಗೂ ಕೂಡ ಈ ದೇಹವು ನಮ್ಮ ಜೊತೆ ಸಾಥ್ ಕೊಡಬೇಕು ಎಂದರೆ ಆ ದೇಹಕ್ಕೆ ಬೇಕಾದ ಶಕ್ತಿಯನ್ನು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಪಡೆದುಕೊಂಡು ದೇಹವನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು.

ಆದರೆ ಪಾಶ್ಚಾತ್ಯ ಜೀವನಶೈಲಿಗೆ ಬದಲಾಗುತ್ತಿರುವ ನಮ್ಮ ಜನತೆಯು ತಿನ್ನುವ ಆಹಾರದಿಂದ ಹಿಡಿದು ಸೇವಿಸುವ ಔಷಧಿಯವರೆಗೂ ಕೂಡ ಎಲ್ಲವೂ ಇಂಗ್ಲಿಷ್ ಮಯವಾಗುತ್ತಿದೆ. ಆಗಿನ ಕಾಲದಲ್ಲಿ ಜನರು 70ರ ಹರೆಯದಲ್ಲೂ ಕೂಡ ಆರಾಮಾಗಿ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದರು, ಮನೆಯ ಹೆಂಗಸರು ಕೂಡ ನೀರು ಸೇದುವುದು, ಸೌದೆ ಕಡೆಯುವುದು, ಬೀಸು ಕಲ್ಲು ಬೀಸುವುದು, ಬಟ್ಟೆ ಒಗೆಯುವುದು ಇತ್ಯಾದಿ ಕಠಿಣಿತಿ ಕಠಿಣ ಕೆಲಸಗಳನ್ನು ಸಲೀಸಾಗಿ ಮಾಡಿ ಮುಗಿಸಿ ಸುಸ್ತೇ ಇಲ್ಲದಂತೆ ಉಲ್ಲಾಸದಿಂದ ಇರುತ್ತಿದ್ದರು.

ಈಗಿನ ಕಾಲಕ್ಕೆ ಹೋಲಿಸಿಕೊಂಡರೆ ಆಗಿನ ಕಾಲದಲ್ಲಿ ಆಹಾರದ ಕೊರತೆ ಹಾಗೂ ಹಣಕಾಸಿನ ಕೊರತೆ ಹೆಚ್ಚಾಗಿತ್ತು. ಈಗ ನಾವು ಹೆಚ್ಚೆಚ್ಚು ದುಡಿಯುತ್ತಾ ಹೋದಂತೆ ತೋರಿಸಿಕೊಳ್ಳುವಿಕೆ ಹೆಚ್ಚಾಗುತ್ತಿದೆ ಹೊರತು ಮೌಲ್ಯಗಳನ್ನು ಅರಿಯುತ್ತಿಲ್ಲ. ಸ್ಪಷ್ಟ ಉದಾಹರಣೆಯೆಂದರೆ ಆಗಿನ ಕಾಲದಲ್ಲಿ ಸಾಲ ಮಾಡಿ ಆದರೂ ತುಪ್ಪ ತಿನ್ನು ಎನ್ನುವ ಗಾದೆ ಇತ್ತು, ಯಾಕೆಂದರೆ ತುಪ್ಪಕ್ಕೆ ಅಷ್ಟೊಂದು ಮಹತ್ವ ಇತ್ತು.

ಚಿಕ್ಕ ಮಕ್ಕಳಿಗೆ ಅತಿ ಹೆಚ್ಚು ತುಪ್ಪ ತಿನಿಸುವುದರಿಂದ ಮಗುವಿನ ಬೆಳವಣಿಗೆ ಚೆನ್ನಾಗಾಗುತ್ತದೆ, ಮಗುವಿನ ಸ್ನಾಯುಗಳು ಗಟ್ಟಿ ಮುಟ್ಟಾಗುವುದರಿಂದ ಹಿಡಿದು ದೇಹ ಕಾಂತಿಯುತವಾಗುವುದುವರೆಗೆ ತುಪ್ಪದಲ್ಲಿರುವ ಅಂಶಗಳು ಪೂರಕವಾಗಿರುತ್ತವೆ ಎನ್ನುವುದ ಕಾರಣದಿಂದಾಗಿ ತುಪ್ಪ ತಿನಿಸುತ್ತಿದ್ದರು ಮತ್ತು ಮನೆಯಲ್ಲಿರುವ ಎಲ್ಲರೂ ಕೂಡ ತುಪ್ಪ, ಹಾಲು, ಮೊಸರು ಮಜ್ಜಿಗೆ ಸೇವಿಸುವುದು ಪ್ರತಿ ಹೊತ್ತಿನ ಊಟದಲ್ಲೂ ಕಾಮನ್ ಆಗಿತ್ತು.

ಆದರೆ ಈಗ ಡಯಟ್ ಫ್ಯಾಟ್ ಹೆಚ್ಚು ಇತ್ಯಾದಿ ಇತ್ಯಾದಿ ಕಾರಣಗಳನ್ನು ಹೇಳಿಕೊಂಡು ತುಪ್ಪ ತಿನ್ನುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಆಗಿನ ಕಾಲದಲ್ಲಿ ಹರಿಯುತ್ತಿದ್ದ ಹೊಳೆನೀರು ಅಥವಾ ಯಾವುದೋ ನಿಂತ ಕೆರೆಯ ನೀರನ್ನು ಕುಡಿದು ಆರೋಗ್ಯವಾಗಿ ಇರುತ್ತಿದ್ದರು. ಈಗ ಮನೆಯಲ್ಲಿರುವ ಸಾಕು ಪ್ರಾಣಿಗೂ RV ವಾಟರ್ ಕುಡಿಸುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬದಲಾಗುತ್ತಿದೆ.

ಮಕ್ಕಳಿಗೆ ನೀರು ಕುಡಿಸುವುದಕ್ಕೆ ನಾವು ಬಹಳಷ್ಟು ಎದುರುತ್ತಿದ್ದೇವೆ ಎಂದೇ ಹೇಳಬಹುದು. ಈಗಿನ ಕಾಲದವರು ಆರೋಗ್ಯದ ಬಗ್ಗೆ ಎಷ್ಟು ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದರೆ ಪ್ರತಿದಿನವೂ ಕೂಡ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದರೆ ಸೇಬಿನ ಬೆಲೆ ಹೆಚ್ಚು ಎನ್ನುತ್ತಾರೆ ಆದರೆ ವಾರಕ್ಕೆ ಎರಡು ಮೂರು ಬಾರಿ ಪಾನಿಪುರಿ, ಕಬಾಬ್, ಪಿಜ್ಜಾ, ಬರ್ಗರ್ ತಿನ್ನುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.

ವಾಲ್ ನಟ್, ಬಾದಾಮಿ, ಗೋಡಂಬಿ ಆರೋಗ್ಯಕ್ಕೆ ಒಳ್ಳೆಯದು ಉತ್ತಮ ಆಹಾರ ಸೇವಿಸಿ ಎಂದರೆ ಬೆಲೆ ಹೆಚ್ಚು ಅನ್ನುತ್ತಾರೆ, ಅದರ ಹತ್ತರಷ್ಟು ಹಣ ಕೊಟ್ಟು ಧೂಮಪಾನ ಮಧ್ಯಪಾನ ದಂತಹ ದುಷ್ಟಗಳನ್ನು ಬೆಳೆಸಿಕೊಳ್ಳುತ್ತಾರೆ. ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುವುದರಿಂದ ಹಣ ಉಳಿಯುತ್ತದೆ ಆರೋಗ್ಯವಾಗಿರುತ್ತೇವೆ ಎನ್ನುವುದು ಗೊತ್ತು.

ಆದರೂ ಹೊರಗೆ ಹೋಗಿ ಊಟ ಮಾಡುವುದಕ್ಕಿಂತ ಫೋಟೋವನ್ನು ಸ್ಟೇಟಸ್ ಗೆ ಹಾಕಿಕೊಂಡು ಶೋಕಿ ಮಾಡುವುದರಲ್ಲಿ ಜನ ಹೆಚ್ಚು ಕುಳಿತು ಖುಷಿ ಕಾಣುತ್ತಿದ್ದಾರೆ. ಆದರೆ ನಾಲ್ಕು ನಿಮಿಷಗಳ ನಾಲಿಗೆಯ ರುಚಿ 40 ವರ್ಷಗಳ ಆಯಸ್ಸನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ಸರಿಯಾಗಿ ಮನದಟ್ಟಾಗಿಲ್ಲ.

ಆರೋಗ್ಯದ ಬಗ್ಗೆ ಮತ್ತು ದೇಹದ ಬಗ್ಗೆ ಗೌರವ ಇರುವವರು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು.
ಆದಷ್ಟು ಜಂಕ್ ಫುಡ್ ಗಳಿಂದ, ಆಲ್ಕೋಹಾಲಿಂದ, ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ದು’ಷ್ಚ’ಟಗಳಿಂದ, ಪಾಕೆಟ್ ಫುಡ್ ಗಳಿಂದ ದೂರ ಇದ್ದಷ್ಟು ಆಯಸ್ಸುವೃದ್ಧಿ ಆಗುತ್ತದೆ.

ಹಾಗೆ ಸಣ್ಣ ಪುಟ್ಟ ಖಾಯಿಲೆಗಳು ಕೂಡ ಮಾತ್ರೆ ಸೇವಿಸುವುದಕ್ಕೆ ಹೋಗುವುದು ಕೂಡ ತಪ್ಪು. ಸಾಧ್ಯವಾದಷ್ಟು ಆಯುರ್ವೇದಿಕ್ ಮನೆಮದ್ದುಗಳಿಂದ ಗುಣಪಡಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಿಧಾನವಾಗಿ ಸುಧಾರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಬಹಳ ಒಳ್ಳೆಯ ಆಪ್ಷನ್. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಬಟ್ಟೆಗಳು ಕೂಡ ನಿರ್ಧರಿಸಲಿವೆ ನಿಮ್ಮ ಭವಿಷ್ಯ, ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ನಿಮ್ಮ ಬದುಕು ಬರ್ಬಾದ್ ಆಗಿ ಬಿಡುತ್ತದೆ ಎಚ್ಚರ.!

 

ಪ್ರತಿಯೊಬ್ಬ ಮನುಷ್ಯನು ತನಗೆ ಇಷ್ಟಪಟ್ಟು ಮಾಡುವ ಶಾಪಿಂಗ್ ಗಳಲ್ಲಿ ಬಟ್ಟೆಗೆ ಹೆಚ್ಚು ಸಮಯ ತೆಗೆದುಕೊಂಡು ಆರಿಸುತ್ತಾನೆ ಮತ್ತು ಅತಿ ಹೆಚ್ಚು ಬಟ್ಟೆಗೆ ಹಣ ಸುರಿಯುತ್ತಾನೆ. ಬಟ್ಟೆ ಎನ್ನುವುದು ಫ್ಯಾಷನ್ ಟ್ರಡಿಷನ್ ಎಲ್ಲವೂ ಆಗಿ ಹೋಗಿದೆ ಬಟ್ಟೆಯಿಂದ ನಮ್ಮ ಲುಕ್ ಬದಲಾಗುತ್ತದೆ ಎನ್ನುವುದು ಅಷ್ಟೇ ಸತ್ಯ.

ಡ್ರೆಸ್ಸಿಂಗ್ ಸೆನ್ಸ್ ಎನ್ನುವುದು ಬಹಳ ಮುಖ್ಯವಾದ ಇಂಪ್ರೆಶನ್ ಇದರಲ್ಲಿ ಬಟ್ಟೆಯ ಪಾತ್ರವೇ ಮಹತ್ವದ್ದು. ಒಬ್ಬರು ಹಾಕಿರುವ ಬಟ್ಟೆಯಿಂದ ವ್ಯಕ್ತಿತ್ವ ಅಳೆಯಲಾಗದು ಎಂದು ಹೇಳಿದರು ಹೆಚ್ಚಿನವರು ಬಟ್ಟೆಯಿಂದಲೇ ಪೂರ್ವಾಪರ ಊಹಿಸುತ್ತಾರೆ.

ಬಟ್ಟೆಗಳಿಂದ ಇದಿಷ್ಟೇ ಅಲ್ಲ ಮನಸ್ಸಿನ ಭಾವನೆಗಳು ಕೂಡ ಬದಲಾಗುತ್ತವೆ. ಅದಕ್ಕಾಗಿ ಕೆಲವರು ಕೆಲವು ಬಣ್ಣದ ಬಟ್ಟೆಗಳನ್ನು ತಮಗೆ ಲಕ್ಕಿ ಕಲರ್ ಎಂದುಕೊಳ್ಳುತ್ತಾರೆ ಅಥವಾ ಕೆಲವರು ಅವರದ್ದೇ ಯಾವುದೋ ಬಟ್ಟೆಗಳನ್ನು ಅದೃಷ್ಟದ ಬಟ್ಟೆ ಎಂದು ನಿರ್ಧರಿಸಿ ತುಂಬಾ ವಿಶೇಷವಾದ ಸಂದರ್ಭಗಳಲ್ಲಿ ಅದನ್ನು ಧರಿಸುತ್ತಾರೆ.

ಕೆಲವರಂತೂ ಈ ಬಟ್ಟೆ ಹಾಕಿದಾಗಲೆಲ್ಲ ಹೀಗೆ ಎಂದು ಬಟ್ಟೆಗಳ ಮೇಲೆ ಕೋ’ಪ ತೋರುತ್ತಾರೆ. ಹೀಗೆ ಬಟ್ಟೆಗೂ ನಮಗೂ ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿಯೂ ಸಂಬಂಧವಿದೆ ಎಂದು ಹೇಳಬಹುದು. ಈ ಬಟ್ಟೆಯ ಕುರಿತು ಕೆಲ ಪ್ರಮುಖ ವಿಷಯಗಳಿವೆ, ಅವುಗಳನ್ನು ಪಾಲಿಸದೆ ಇದ್ದಲ್ಲಿ ನಾವು ಧರಿಸುವ ಬಟ್ಟೆ ನಮ್ಮನ್ನು ಬ’ರ್ಬಾ’ದ್ ಮಾಡಬಹುದು. ಹಾಗಾಗಿ ಕೆಲ ಉಪಯುಕ್ತ ಟಿಪ್ಗಳನ್ನು ಈ ಅಂಕಣದಲ್ಲಿ ನೀಡುತ್ತಿದ್ದೇವೆ.

* ಹರಿದ ಬಟ್ಟೆಗಳನ್ನು ಧರಿಸುವುದು ಅಥವಾ ಬಹಳ ಹಳೆಯದಾದ ಬಟ್ಟೆಗಳನ್ನು ಧರಿಸುವುದು ನಮ್ಮ ಅದೃಷ್ಟಕ್ಕೆ ಕು’ತ್ತು ತರುತ್ತದೆ. ಇದರಿಂದ ನಮ್ಮ ಲಕ್ ಫ್ಯಾಕ್ಟರ್ ಕಡಿಮೆ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗಾಗಿ ಅದೆಷ್ಟೇ ಇಷ್ಟದ ಬಟ್ಟೆ ಆಗಿದ್ದರೂ ಕೂಡ ಬಹಳ ಹಳೆಯದಾಗಿದ್ದರೆ ಅಥವಾ ಅದು ಹರಿದಿದ್ದರೆ ಸರಿ ಮಾಡಿಕೊಂಡು ಧರಿಸಲು ಹೋಗಬೇಡಿ.

* ಕೆಲವರು ಸ್ನಾನ ಮಾಡಿದ ತಕ್ಷಣ ಹೊಸ ಬಟ್ಟೆಯನ್ನು ಧರಿಸುತ್ತಾರೆ. ಇದು ತಪ್ಪು, ಯಾಕೆಂದರೆ ಕೆಲವು ಸಂಪ್ರದಾಯದ ಪ್ರಕಾರ ಯಾರಾದರೂ ತೀ’ರಿಕೊಂಡಾಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಹಾಗಾಗಿ ಇಂತಹ ತಪ್ಪು ಮಾಡಬೇಡಿ ಸ್ನಾನ ಮಾಡಿ ಸ್ವಲ್ಪ ಸಮಯ ಕಳೆದ ಬಳಿಕ ಹೊಸ ಬಟ್ಟೆಯನ್ನು ಧರಿಸಿ.

* ಯಾವಾಗಲೂ ಕಪ್ಪು ಬಟ್ಟೆಗಳನ್ನು ಧರಿಸುವುದು ಅಷ್ಟೊಂದು ಶ್ರೇಯಸ್ಕರವಲ್ಲವಲ್ಲ. ಯಾರಿಗಾದರೂ ಶನಿ ಪ್ರಭಾವ ಕಡಿಮೆ ಇದ್ದರೆ ಅಥವಾ ದೋಷಗಳು ಇದ್ದರೆ ಅದರ ಪರಿಹಾರಕ್ಕಾಗಿ ಅಥವಾ ಶನಿ ದೇವರ ಆಶೀರ್ವಾದಕ್ಕಾಗಿ ಶನಿವಾರದಂದು ಕಪ್ಪು ಬಟ್ಟೆಯನ್ನು ಧರಿಸಬಹುದ.

ಅದನ್ನು ಹೊರತುಪಡಿಸಿ ವಾರದ ಇನ್ನಿತರ ದಿನಗಳಲ್ಲಿ ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಅದು ನೆ’ಗೆ’ಟಿ’ವ್ ಎನರ್ಜಿಯನ್ನು ಅಟ್ರಾಕ್ಟ್ ಮಾಡುತ್ತದೆ ಮತ್ತು ಕಪ್ಪು ಬಟ್ಟೆ ಧರಿಸಿದಾಗ ವ್ಯಕ್ತಿಯ ಭಾವನೆಗಳು ನ’ಕಾ’ರಾ’ತ್ಮ’ಕವಾಗಿ ಹೆಚ್ಚು ಕೆಲಸ ಮಾಡುತ್ತವೆ ಎಂದು ಸಹ ಹೇಳಲಾಗುತ್ತದೆ ಹಾಗಾಗಿ ಕಪ್ಪು ಬಟ್ಟೆಯನ್ನು ಅವಾಯ್ಡ್ ಮಾಡಿದರೆ ಉತ್ತಮ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

* ಯಾವುದೇ ಕಾರಣಕ್ಕೂ ಇನ್ನೊಬ್ಬರ ಬಟ್ಟೆಯನ್ನು ಧರಿಸಬಾರದು. ಎಲ್ಲರ ಅದೃಷ್ಟವೂ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಮತ್ತೊಬ್ಬರ ಬಟ್ಟೆಯು ಎಷ್ಟೇ ಅಂದ ಚಂದದಿಂದ ಇದ್ದರೂ ಕೂಡ ಅದನ್ನು ಧರಿಸಬೇಡಿ, ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆಯದು.

* ಶುದ್ಧವಾದ ಬಟ್ಟೆಗಳು ಶುದ್ಧ ಆಲೋಚನೆಗಳನ್ನು ಉಂಟುಮಾಡುತ್ತವೆ ಹಾಗಾಗಿ ಸ್ವಚ್ಛವಾಗಿರುವ ಬಟ್ಟೆಗಳನ್ನು ಧರಿಸಿ. ಕೊಳಕು ಬಟ್ಟೆಗಳನ್ನು ಧರಿಸುವುದರಿಂದ ದ’ರಿ’ದ್ರ ಬರುತ್ತದೆ. ತಾಯಿ ಲಕ್ಷ್ಮಿ ಅವರ ಮೇಲೆ ಕೋ’ಪಿ’ಸಿಕೊಳ್ಳುತ್ತಾರೆ.

ಸಾಧ್ಯವಾದಷ್ಟು ಬಟ್ಟೆಗಳನ್ನು ದಾನ ಮಾಡಿ. ಒಂದು ವೇಳೆ ನೀವು ಉಪಯೋಗಿಸಿರುವ ಬಟ್ಟೆಗಳನ್ನು ದಾನ ಮಾಡುವುದಾದರೆ ಅದನ್ನು ವಾಶ್ ಮಾಡಿ ಐರನ್ ಮಾಡಿದ ಬಳಿಕವಷ್ಟೇ ದಾನ ಮಾಡಬೇಕು
* ಯಾವುದೇ ಕಾರಣಕ್ಕೂ ಸುಟ್ಟ ಬಟ್ಟೆಗಳನ್ನು ಧರಿಸಬೇಡಿ. ಅದು ನಿಮ್ಮ ಇಷ್ಟದ ಅಥವಾ ದುಬಾರಿಯ ಬಟ್ಟೆ ಆಗಿದ್ದರು ಅದಕ್ಕೆ ಪ್ಯಾಚ್ ಹಾಕಿ ಕವರ್ ಮಾಡಿ ಧರಿಸುವ ತಪ್ಪು ಮಾಡಬೇಡಿ.

* ಮುಂಗೋಪಿಗಳು ಸಾಧ್ಯವಾದಷ್ಟು ಗುಲಾಬಿ ಹಾಗೂ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಇದು ಉತ್ತಮ ಬದಲಾವಣೆ ತರುತ್ತದೆ
* ವಿದ್ಯಾರ್ಥಿಗಳು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ.

ಶ್ರೀ ಕೃಷ್ಣನಲ್ಲಿ ಶಪಿಸಿದ್ದ ಗಾಂಧಾರಿ ಅಂ’ತ್ಯವಾಗಿದ್ದು ಹೇಗೆ ಗೊತ್ತಾ.?

 

ರಾಮಾಯಣ ಹಾಗೂ ಮಹಾಭಾರತ ಈ ಭರತ ಭೂಮಿ ಕಂಡ ಅತ್ಯಂತ ಸರ್ವಶ್ರೇಷ್ಠ ಮಹಾಕಾವ್ಯಗಳು. ಅದರಲ್ಲೂ ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಒಂದಕ್ಕಿಂತ ಒಂದು ವಿಶೇಷ ವ್ಯಕ್ತಿತ್ವದ ಪರಿಚಯ. ಯುಗ ಯುಗಗಳೇ ಕಳೆದರೂ ಆದರ್ಶವಾಗುವಂತಹ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ಚೇತನಗಳು ಬದುಕಿದ ಕಾಲ ದ್ವಾಪರಯುಗ.

ಜೀವನದಲ್ಲಿ ವ್ಯಕ್ತಿಯೊಬ್ಬನಿಗೆ ಏನೆಲ್ಲಾ ಕಷ್ಟಗಳು ಬರಬಹುದು ಎನ್ನುವುದಕ್ಕೆ ಉದಾಹರಣೆಯನ್ನು ಮಹಾಭಾರತದಲ್ಲಿ ನಾವು ಕಾಣಬಹುದು. ಹಾಗೆ ಬದುಕಿನ ಯಾವುದೇ ದ್ವಂದ್ವಕ್ಕೆ ಉತ್ತರ ಬೇಕಿದ್ದರೆ ಭಗವದ್ಗೀತೆ ಓದಬಹುದು.

ಹೀಗೆ ಸಾರ್ವಕಾಲಿಕ ಶ್ರೇಷ್ಠವಾದ ಮಹಾಭಾರತದಲ್ಲಿ ಅರ್ಜುನ, ಶ್ರೀಕೃಷ್ಣ, ಧರ್ಮರಾಜ, ದುರ್ಯೋಧನ, ಭೀಷ್ಮ, ದೃತರಾಷ್ಟ್ರ, ಶಾಂತನ, ಶಕುನಿ, ಕರ್ಣ ಮುಂತಾದ ಮಹಾವೀರದಲ್ಲದೆ ಸತ್ಯವತೀ, ಅಂಬೆ, ಗಾಂಧಾರಿ ಕುಂತಿ ದ್ರೌಪದಿ ಭಾನುಮತಿ ಉತ್ತರೆಯಂತಹ ವೀರಯೋಧೆಯರು, ಮಹಾ ಪತಿವ್ರತೆಯರು ಮತ್ತು ಶ್ರೇಷ್ಠ ತಾಯಿಯರು ಇದ್ದರು.

ಮಹಾಭಾರತದಲ್ಲಿ ಒಳ್ಳೆಯತನದ ಉತ್ತುಂಗವು ಇದೆ ಹಾಗೆಯೇ ಕೆ’ಟ್ಟತನದ ಪರಮಾವಧಿ ಕೂಡ. ಶಕುನಿಗೆ ಸಹೋದರಿ ಗಾಂಧಾರಿ ಮೇಲಿದ್ದ ಅಪಾರವಾದ ಪ್ರೀತಿ ಕೊನೆಗೆ ಕುರುವಂಶಕ್ಕೆ ಸಂ’ಚ’ಕಾ’ರವಾಯಿತು. ದುರ್ಯೋಧನನ್ನಲ್ಲಿಯೂ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹದ ಔದಾರ್ಯತೆ ಹಾಗೂ ಅಧಿಕಾರಕ್ಕಾಗಿ ಸಹೋದರರಾದ ಪಾಂಡವರನ್ನು ಕೊ’ಲ್ಲು’ವ, ಕು’ತಂ’ತ್ರದಿಂದ ಕಾಡಿಗಟ್ಟುವ ನೀಚತನ ಎರಡನ್ನು ನೋಡಬಹುದು.

ಇಂತಹ ನೂರು ಗಂಡು ಮಕ್ಕಳನ್ನು ಪಡೆದಿದ್ದ ಕುರು ವಂಶದ ಮಹಾಮತೆ ಗಾಂಧಾರಿಯ ಬಗ್ಗೆ ಕೂಡ ಇದೇ ರೀತಿಯ ಭಾವನೆ ಬರುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆಯನ್ನು ಬೆಳಗಬೇಕು. ಆರ್ಯವರ್ತದಲ್ಲಿಯೇ ಹಿರಿಯ ವಂಶಕ್ಕೆ ತಾನು ಬೆಳಕಾಗಬೇಕು ಎಂದು ಬಾಲದಿಂದ ಕನಸು ಕಂಡವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣೆದುರಿಗೆ ನಡೆಯುತ್ತಿದ್ದ ದುಷ್ಟತೆಯನ್ನು ತಡೆಯಲಾರದೆ.

ಅಸಹಾಯಕಳಾಗಿ ಕೊನೆಗೆ ಯುಗಾಂತ್ಯಕ್ಕಾಗಿ ನಡೆದ ಮಹಾಪರ್ವಕ್ಕೆ ಕಾರಣಕರ್ತನಾದ ಸೂತ್ರಧಾರಿ ಶ್ರೀ ಕೃಷ್ಣನಿಗೆ ನಿನ್ನ ಕಣ್ಣೆದುರಿಗೆ ನಿನ್ನ ಯದುವಂಶ ಹಾಳಾಗಲಿ, ಮೃಗಗಳಂತೆ ಯದುವಂಶದ ಪುರುಷರು ಒಬ್ಬರು ಮತ್ತೊಬ್ಬರ ರಕ್ತ ಕುಡಿಯುತ್ತಾರೆ, ಆಗ ಕರುಗಳಂತೆ ಎಲ್ಲಾ ಯಾದವ ಕುಲದ ಮಕ್ಕಳು ರೋಧಿಸುವರು, ಅದನ್ನು ತಡೆಯಲು ಯಾರಿಗೂ ಸಾಧ್ಯವಾಗದಿರಲಿ.

ನೀನೇ ಕಟ್ಟಿದ ನಿನ್ನ ದ್ವಾರಕೆ ನಗರ ನಿನ್ನ ಕಣ್ಣಿಗೆ ನೀರು ಪಾಲಾಗುತ್ತದೆ, ನೀನು ಅಸಹಾಯಕನಾಗಿ ಅದನ್ನು ಕಾಪಾಡಲಾಗದೆ ಕಾಡು ಪಾಲಾಗು, ನಿನಗೆ ಒಬ್ಬ ಯೋಧನಿಗೆ ಯುದ್ಧ ಭೂಮಿಯಲ್ಲಿ ದೊರಕುವ ವೀ’ರ’ಮ’ರ’ಣ ಸಿಗದಂತಾಗಲಿ ಎಂಬಿತ್ಯಾದಿಯಾಗಿ ಶಪಿಸುವಂತಾಗುತ್ತದೆ.

ಈ ರೀತಿ ವೀರಯೋಧೆಯೊಬ್ಬಳು, ಶಿವನಿಂದ 100 ಗಂಡು ಮಕ್ಕಳ ವರ ಪಡೆದ ಮಹಾತಾಯಿಯ, ಪತಿಯು ಕುರುಡನೆಂದು ತಿಳಿದ ತಕ್ಷಣ ತಾನು ಈ ಪ್ರಪಂಚವನ್ನು ನೋಡಲಾರೆ ಎಂದು ಕಣ್ಣು ಕಟ್ಟಿಕೊಂಡು ಪತಿ ಧರ್ಮ ಪಾಲಿಸಿದಂತಹ ಆದರ್ಶ ಪತ್ನಿಯು ದು’ರಂ’ತ ಅಂ’ತ್ಯ ಕಂಡ ಕಥೆ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ಗಾಂಧಾರ ದೇಶದ ರಾಜನ ಮಗಳಾದ ಗಾಂಧಾರಿಗೆ ಹಲವು ಹೆಸರಿತ್ತು ಆದರೆ ಗಾಂಧಾರಿ ಎನ್ನುವುದೇ ಹೆಚ್ಚು ಪ್ರಚಲಿತದಲ್ಲಿದೆ. ಬಾಲ್ಯದಿಂದಲೂ ಅರಮನೆಯಲ್ಲಿ ಬೆಳೆದ ಕಣ್ಮಣಿ ವಿದ್ಯೆ, ಬುದ್ಧಿ, ಧೈರ್ಯ, ನೀತಿ, ಧರ್ಮ, ಚತುರತೆ, ಸೌಂದರ್ಯ, ಸದ್ಗುಣದಿಂದ ತುಂಬಿದ್ದಳು.

ಶಿವನಿಂದ ನೂರು ಗಂಡು ಮಕ್ಕಳ ವರವನ್ನು ಕೂಡ ಪಡೆದಿದ್ದ ಈಕೆಯ ವಿಚಾರ ತಿಳಿದ ಭೀಷ್ಮನು ಕುರು ವಂಶಕ್ಕೆ ತಕ್ಕ ಹೆಣ್ಣು ಎಂದು ಧೃತರಾಷ್ಟ್ರದೊಂದಿಗೆ ಮದುವೆ ಮಾಡಿಸಿದಳು ಪ್ರಸ್ತಾಪವಿಟ್ಟಾಗ ಅಂಬಿಕೆ, ಅಂಬಾಲಿಕೆ ಹಾಗೂ ಅಂಬಾಳ ಕಥೆ ಕೇಳಿದ್ದ ಗಾಂಧಾರಿ ತಂದೆ ಕಲ್ಯಾಣಕ್ಕೆ ಒಪ್ಪದಿದ್ದರೆ ತನ್ನನ್ನು ಯುದ್ಧ ಮಾಡಿ ಕರೆದೊಯ್ಯಬಹುದು, ತನ್ನಿಂದ ಕುಲಕ್ಕೆ ಕ’ಳಂ’ಕ ಬರಬಾರದು ಎಂದು ಹೆದರಿ ತಾನೇ ಮದುವೆಯಾಗಲು ಒಪ್ಪುತ್ತಾಳೆ.

ಹುಟ್ಟಿನಿಂದಲೂ ಕೂಡ ತಾನೊಬ್ಬ ಮಹಾರಾಜನ ಪತಿ ಆಗಬೇಕು ಎಂದುಕೊಂಡವರಿಗೆ ಧೈರ್ಯ ಶೌರ್ಯದಲ್ಲಿ ಯಾರಿಗೂ ಕಡಿಮೆ ಇಲ್ಲದ ಧೃತರಾಷ್ಟ್ರ ವರನಾಗಿದ್ದರೂ ಆತ ಹುಟ್ಟು ಕುರುಡನಾಗಿದ್ದು ಆಕೆಯ ಬಾಳನ್ನು ಅಂಧಕಾರಕ್ಕೆ ತಳ್ಳುತ್ತದೆ. ಸ್ವ ಇಚ್ಛೆಯಿಂದ ಕಣ್ಣು ಕಟ್ಟಿಕೊಂಡ ಈಕೆ ಮದುವೆಯ ನಂತರ ಆ ಪಟ್ಟಿಯನ್ನು ಬಿಚ್ಚಿದ್ದು ಒಂದೇ ಬಾರಿ ಅದು ಕುರುಕ್ಷೇತ್ರ ಯುದ್ಧದಲ್ಲಿ 99 ಮಕ್ಕಳು ಮ’ಡಿದು ದುರ್ಯೋಧನನೊಬ್ಬ ಬದುಕಿದ್ದಾಗ.

ಆತನನ್ನಾದರೂ ಉಳಿಸಿಕೊಳ್ಳುವ ಯೋಚನೆಯಿಂದ ಆತನ ದೇಹವನ್ನು ವಜ್ರಕಾಯ ಮಾಡುವ ಶಕ್ತಿ ಆಕೆಯ ಮುಚ್ಚಿದ ಇಕ್ಷುಗಳಿಗೆ ಇದೆ ಎಂದು ತಿಳಿದಾಗ ವಿವಸ್ತ್ರನಾಗಿ ಮಗನಿಗೆ ಕಣ್ಣೆದುರು ನಿಲ್ಲಲು ಹೇಳುತ್ತಾರೆ. ತಯಾರಾಗಿ ಹೋಗುತ್ತಿದ್ದ ದುರ್ಯೋಧನವನ್ನು ಕಂಡ ಶ್ರೀ ಕೃಷ್ಣ ನಕ್ಕು ದುರ್ಯೋಧನನ್ನು ನಾಚಿಕೆ ಪಡಿಸಿ ಆತ ಸೊಂಟದಿಂದ ತೊಡೆಯ ತನಕ ವಸ್ತ ಸುತ್ತಿಕೊಂಡು ಹೋಗುವ ಹಾಗೆ ಮಾಡಿದ್ದ ಮತ್ತು ಆ ಭಾಗದಿಂದ ಮಾತ್ರ.

ಆತನಿಗೆ ಸಾ’ವು ಬರುತ್ತದೆ ಎನ್ನುವುದನ್ನು ಅರಿತಿದ್ದ ಶ್ರೀ ಕೃಷ್ಣನು ಭೀಮ ಹಾಗೂ ದುರ್ಯೋಧನ ನಡುವೆ ಗದಾಯುದ್ಧ ನಡೆದಾಗ ಭೀಮನಿಗೆ ತೊಡೆತಟ್ಟಿ ತೋರಿಸಿ ದುರ್ಯೋಧನನನ್ನು ತೊಡೆ ಮುರಿದು ಸಂ’ಹ’ರಿಸುವಂತೆ ಸನ್ನೆ ಮಾಡಿದ್ದು ಗಾಂಧರಿಯ ಮನಸ್ಸಿನಲ್ಲಿ ಶ್ರೀಕೃಷ್ಣನೇ ತನ್ನ ಸಂತತಿಯ ಹಾಗೂ ನೂರು ಮಕ್ಕಳ ಸಾವಿಗೆ ಕಾರಣ ಎಂದು ನಾಟುತ್ತದೆ.

ಹೀಗಾಗಿ ಕುರುಕ್ಷೇತ್ರದ ಅಂತ್ಯದಲ್ಲಿ ನೂರು ಮಕ್ಕಳನ್ನು ಕಳೆದುಕೊಂಡ ನೋ’ವು ಇಟ್ಟುಕೊಂಡ ಆಕೆ ಆ ಕೋ’ಪ ಕಡಿಮೆಯಾಗಲು ನಿನ್ನನ್ನು ಕ್ಷಮಿಸದೆ ಬೇರೆ ದಾರಿ ಇಲ್ಲ ಎಂದು ಹೇಳಿ ಶ್ರೀ ಕೃಷ್ಣನಿಗೆ ಮನಸ್ಸೋ ಇಚ್ಛೆ ಶಾ’ಪ ಕೊಡುತ್ತಾರೆ. ಆನಂತರ ಕುಂತಿ ಹಾಗೂ ಪತಿ ಧೃತರಾಷ್ಟ್ರದೊಡನೆ ವಾನಪ್ರಸ್ತಾಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಅವರಿದ್ದ ಅರಣ್ಯಕ್ಕೆ ಕಾಡ್ಗಿಚ್ಚು ಹಬ್ಬಿದಾಗ ತಾನೇ ಅಗ್ನಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾರೆ. ಅಲ್ಲಿ‌ಗೆ ಒಬ್ಬ ಮಹಾತಾಯಿಯ ಯುಗ ಅಂತ್ಯವಾಗುತ್ತದೆ.

ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

 

ರೈತರಿಗೆ ಕೃಷಿ ಚಟುವಟಿಕೆಗೆ ನೀರು ಬಹಳ ಮುಖ್ಯ. ಮಳೆ ನೀರಿನ ಆಶ್ರಿತ ಕೃಷಿಗಿಂತ ನೀರಾವರಿ ಸೌಲಭ್ಯ ಹೊಂದಿರುವ ಕೃಷಿಗಳಲ್ಲಿ ಆಹಾರ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ರೈತನ ಆದಾಯವು ಹೆಚ್ಚಾಗಿ ಆತನ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಸಿಗುತ್ತದೆ ಮತ್ತು ಪರೋಕ್ಷವಾಗಿ ದೇಶದ ಅಭಿವೃದ್ಧಿಗೂ ಪೂರಕವಾಗುತ್ತದೆ ಎನ್ನುವ ಕಾರಣಕ್ಕಾಗಿ ಆರ್ಥಿಕವಾಗಿ ದುರ್ಬಲವಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರವು ಉಚಿತವಾಗಿ ಬೋರ್ವೆಲ್ ಕೊರೆಸಿಕೊಳ್ಳಲು ಅವಕಾಶ ನೀಡುತ್ತಿದೆ.

ಗಂಗಾ ಕಲ್ಯಾಣ ಎಂದು ಹೆಸರಿರುವ ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷವೂ ಅರ್ಜಿ ಆಹ್ವಾನಿಸಿ, ಅರ್ಹ ರೈತರಿಗೆ ಅವರ ಜಮೀನುಗಳಲ್ಲಿ ಉಚಿತವಾಗಿ ಬೋರ್ವೆಲ್ ಕೊರೆಸಿ ಪಂಪ್ಸೆಟ್ ಅಳವಡಿಸಿ ವಿದ್ಯದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಹೊಂದಲು ಅನುಕೂಲತೆ ಮಾಡಿಕೊಡಲಾಗುತ್ತಿದೆ.

ಸದ್ಯಕ್ಕೆ ಈಗ ಸಮಾಜ ಕಲ್ಯಾಣ ಇಲಾಖೆ ವಿವಿಧ ನಿಗಮಗಳ ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ ಬೋರ್ವೆಲ್ ಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ರೈತನಿಗೆ ಏನೆಲ್ಲ ಮಾನದಂಡಗಳಿವೆ? ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಕೊನೆ ದಿನಾಂಕ ಯಾವುದು? ಎನ್ನುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ರಾಜ್ಯದ ರೈತರಿಗೆಲ್ಲ ಅನುಕೂಲವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಈ ಮಾಹಿತಿಯು ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.

ಅರ್ಹತೆಗಳು:-

* ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
* ರೈತರು ಕನಿಷ್ಠ 1.20 ಎಕರೆಯಿಂದ ಗರಿಷ್ಠ 5 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿರಬೇಕು.
* ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ 1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ ಮೀರಿರಬಾರದು

* ಅರ್ಜಿ ಸಲ್ಲಿಸುವ ರೈತನ ವಯಸ್ಸು 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
* ಈಗಾಗಲೇ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
* ಸಮಾಜ ಕಲ್ಯಾಣ ಇಲಾಖೆಗೆ ಸೇರುವ ವಿವಿಧ ನಿಗಮಗಳಿಗೆ ವ್ಯಾಪ್ತಿಗೆ ಬರುವ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಮತ್ತು ರೈತನ ಕುಟುಂಬವು ಈಗಾಗಲೇ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಪ್ರಯೋಜನ ಪಡೆದಿರಬಾರದು.

ಸಿಗುವ ಪ್ರಯೋಜನ:-

* ರೈತರ ಜಮೀನಿನಲ್ಲಿ ಅವರಿಗೆ ಬೇಕಾದ ಮತ್ತು ಅಗತ್ಯ ಇರುವ ಬೋರ್ವೆಲ್ ಕೊರೆಸಿ ಪಂಪ್ ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಉಚಿತ ಸೌಲಭ್ಯವನ್ನು ಕೊಡಲಿದೆ. ಹಾಗೆಯೇ ಇದರಿಂದ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು ಮತ್ತು ಆಹಾರ ಕೊರತೆ ನೀಗಲಿದೆ. ರೈತನ ಮತ್ತು ದೇಶದ ಆದಾಯವು ಹೆಚ್ಚಾಗಲಿದೆ.
* ಈ ಯೋಜನೆಯಡಿಯಲ್ಲಿ 1.5 ಲಕ್ಷ ರೂಪಾಯಿ ಗಳಿಂದ 3.50 ಲಕ್ಷ ರೂಪಾಯಿಗಳ ವರೆಗೆ ರೈತರು ಸರ್ಕಾರದಿಂದ ಸಹಾಯಧನ ಪಡೆಯಬಹುದು.

ಬೇಕಾಗುವ ದಾಖಲೆಗಳು:-

* ಪರಿಶಿಷ್ಟಜಾತಿ/ಪಂಗಡಕ್ಕೆ ಸೇರಿದ ರೈತರು ಜಾತಿ ಪ್ರಮಾಣಪತ್ರ ಹೊಂದಿರಬೇಕು.* ಸಣ್ಣಹಿಳುವಳಿದಾರರ ಪ್ರಮಾಣಪತ್ರ
* ಇತ್ತೀಚಿನ ಪಹಣಿ
* ಆದಾಯ ಪ್ರಮಾಣ ಪತ್ರ
* ಕುಟುಂಬದ ಪಡಿತರ ಚೀಟಿ
* ಬ್ಯಾಂಕ್ ಪಾಸ್ ಬುಕ್
* ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ:-

ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29 ನವೆಂಬರ್, 2023.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
* ಕಲ್ಯಾಣ ಮಿತ್ರ 24×7 ಸಹಾಯವಾಣಿ – 9482300400
* X ಖಾತೆ @SWDGok

ಕತ್ತು ನೋವು, ಕೈ ಸೆಳೆತ, ಜೋಮು ತಕ್ಷಣ ಕಡಿಮೆಯಾಗಲು ಹತ್ತು ನಿಮಿಷದ ಈ ವ್ಯಾಯಾಮ ಮಾಡಿ ಸಾಕು.!

0

 

ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಅದರಲ್ಲೂ ಹೆಚ್ಚಾಗಿ ಈಗಿನ ಕಾಲದಲ್ಲಿ ಕಂಪ್ಯೂಟರ್ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುವವರಿಗೆ ಒಂದೇ ಕಡೆ ಒತ್ತಡ ಬಿದ್ದು ಕುತ್ತಿಗೆ ಭಾಗದ ಡಿಸ್ಕ್ ಹಾಳಾಗಿ ಅದು ನರದ ಮೇಲೆ ಒತ್ತಡವಾಗಿ ಆ ಭಾಗದಲ್ಲಿ ನೋವು, ಕೈ ಸೆಳೆತ, ಜೋಮು ಹಿಡಿಯುವುದು ಇದೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಆದರೆ ಇದನ್ನು ವಿಪರೀತ ನಿರ್ಲಕ್ಷ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ಬೆಳಗ್ಗೆ ಎದ್ದ ಕೂಡಲೇ ಈ ರೀತಿ ಕುತ್ತಿಗೆಯ ಭಾಗದಲ್ಲಿ ಒಂದು ಕಡೆ ನೋವು ಬರುತ್ತಿದೆ ಎಂದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದೆ ದೇಹದಲ್ಲಾಗುವ ದೊಡ್ಡ ಹಾನಿಯ ಮುನ್ಸೂಚನಯದು.

ಅದಲ್ಲದೆ ಈ ರೀತಿ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹಲವರು ಎದುರುತ್ತಾರೆ ಯಾಕೆಂದರೆ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಕೊಂಡವರಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಪಾಶ್ವ ವಾಯುವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಈ ರೀತಿ ದೇಹಕ್ಕೆ ತೊಂದರೆ ಆಗಬಾರದು ಎಂದರೆ ಅಥವಾ ಈಗಾಗಲೇ ನೋವು ಕಾಣಿಸಿಕೊಂಡಿದ್ದರೆ ತಕ್ಷಣ ಕಡಿಮೆ ಆಗಲು ಈಗ ನಾವು ಹೇಳುವ ಈ ಸಣ್ಣ ವ್ಯಾಯಾಮವನ್ನು ಮಾಡಿ.

* ಕುತ್ತಿಗೆಯನ್ನು ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ಆಗಿ ಹತ್ತತ್ತು ಬಾರಿ ತಿರುಗಿಸಬೇಕು ಇದನ್ನು ಮೂರು ಸುತ್ತು ಮಾಡಬೇಕು.
* ಹಾಗೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಉಸಿರಾಡುತ್ತ ಉಸಿರು ಬಿಡುತ್ತಾ 10 ಬಾರಿ ಮೂರು ಸುತ್ತು ಮಾಡಬೇಕು.

* ಎರಡು ಕೈಗಳನ್ನು ಜಾಯಿಂಟ್ ಮಾಡಿ ಅದನ್ನು ತಲೆ ಹಿಂಬದಿಗೆ ಇಟ್ಟುಕೊಂಡು ಜೋರಾಗಿ ಉಸಿರು ತೆಗೆದುಕೊಳ್ಳುತ್ತಾ ಕೈಯಿಂದ ತಲೆ ಭಾಗವನ್ನು ಒತ್ತಬೇಕು. ಹಾಗೆಯೇ ಉಸಿರು ಬಿಡುತ್ತಾ ಕೈಯನ್ನು ಬಿಡಬೇಕು ಈ ರೀತಿ ಮಾಡುವುದು ಕೂಡ ಬಹಳ ಉತ್ತಮ ಪರಿಹಾರವನ್ನು ನೀಡುತ್ತದೆ.

* ಯಾವ ಕಡೆ ನೋವು ಬರುತ್ತಿದೆ ಆ ಭಾಗದಲ್ಲಿ ತಲೆಯನ್ನು ಕೈಯಿಂದ ಹಿಡಿದುಕೊಂಡು ಜೋರಾಗಿ ಉಸಿರು ತೆಗೆದುಕೊಳ್ಳುತ್ತಾ ಬಿಡಬೇಕು ಹೀಗೆ ಕೂಡ ಹತ್ತು ಬಾರಿ ಮಾಡಬೇಕು ಇದನ್ನು ವಿರುದ್ಧ ಕೈಗಳಿಂದ ಕೂಡ 10 ಬಾರಿ ಮಾಡಬೇಕು.

* ಹೆಬ್ಬೆರಳಿನ ಹಿಂಭಾಗದಲ್ಲಿ ಕೊನೆ ಭಾಗವನ್ನು ಯಾವುದಾದರೂ ಕಡ್ಡಿಯ ಸಹಾಯದಿಂದ ನಿಧಾನವಾಗಿ ಚೆನ್ನಾಗಿ ಕನಿಷ್ಠ 10 ನಿಮಿಷಗಳವರೆಗೆ ಉಜ್ಜಬೇಕು ಇದಕ್ಕೂ ಹಾಗೂ ಕುತ್ತಿಗೆಯ ನರಗಳಿಗೂ ಸಂಪರ್ಕ ಇರುವುದರಿಂದ ಅಲ್ಲಿ ಉಂಟಾಗಿರುವ ರಕ್ತದ ಬ್ಲಾಕೇಜ್ ಸರಿ ಹೋಗಲು ಇದು ಸಹಾಯಕವಾಗುತ್ತದೆ.

* ಇದೇ ಮಾದರಿಯಲ್ಲಿ ಪಾದದ ಹೆಬ್ಬೆರಳಿನ ಹಿಂಬದಿಯ ಕೊನೆಯಲ್ಲಿ ಕೂಡ ಹೀಗೆ ಉಜ್ಜಬೇಕು. ಈ ವಿಧಾನದಲ್ಲಿ ಕೂಡ ಉತ್ತಮ ಪರಿಣಾಮವನ್ನು ಕಾಣಬಹುದು.
* ಮೇರು ದಂಡ ಮುದ್ರೆಯನ್ನು ಮಾಡಬೇಕು. ಈ ಮುದ್ರೆ ಮಾಡುವುದು ಹೇಗೆಂದರೆ ಸುಖಾಸನದಲ್ಲಿ ಕುಳಿತುಕೊಂಡು ಎರಡು ಕೈಗಳನ್ನು ತಮ್ಸಪ್ ಹೇಳುವ ರೀತಿಯಲ್ಲಿ ಹಿಡಿದುಕೊಂಡು ಮಂಡಿಗಳ ಮೇಲೆ ಇಟ್ಟು ಧೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ಉಸಿರು ಬಿಡಬೇಕು.

* ನೋವಿನ ಶಮನಕ್ಕೆ ಮನೆ ಮದ್ದು ಎಂದರೆ ಎಕ್ಕದ ಎಲೆ, ಹುಣಸೆ ಎಲೆ, ಹರಳೆಲೆ, ನುಗ್ಗೆ ಎಲೆ, ಬೇವಿನ ಎಲೆ, ಹೊಂಗೆ ಎಲೆ ಇವೆಲ್ಲವನ್ನೂ ಒಂದು ಹಿಡಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ ಮತ್ತು 100 ಗ್ರಾಂ ನಷ್ಟು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಹರಳೆಣ್ಣೆ ಹಾಕಿ ಈ ಎರಡು ಪೇಸ್ಟ್ ಗಳನ್ನು ಹಾಕಿ ಫ್ರೈ ಮಾಡಿ ಇದರಿಂದ ನೋವಿರುವ ಭಾಗಕ್ಕೆ ಪಟ್ಟು ಹಾಕಿ ಮರುದಿನ ಬಿಸಿನೀರಿನಿಂದ ಸ್ನಾನ ಮಾಡಬೇಕು. ಕನಿಷ್ಠ 21 ದಿನಗಳು ಇದನ್ನು ಮಾಡಿದರೆ ಆ ಸಮಸ್ಯೆ ಮೊದಲು ಹಾಗೂ ಎರಡನೇ ಸ್ಟೇಜಿನಲ್ಲಿ ಇದ್ದರೆ ಗುಣವಾಗುತ್ತದೆ.

* ಇದೆಲ್ಲಾ ಆದರೂ ನೋವು ಕಡಿಮೆಯಾಗಲಿಲ್ಲ ಎಂದರೆ ಆಯುರ್ವೇದದಲ್ಲಿ ಪಂಚ ಕರ್ಮ ಚಿಕಿತ್ಸೆಗೆ ಒಳಗಾಗುವುದು ಒಳ್ಳೆಯದು. ಯೋಗಬಸ್ತಿ, ಕಾಲಬಸ್ತಿ, ಕರ್ಮಬಸ್ತಿ ಇನ್ನು ಮುಂತಾದ ಚಿಕಿತ್ಸೆಗಳಿವೆ. ಇವುಗಳನ್ನು ತೆಗೆದುಕೊಳ್ಳುವುದರಿಂದ ಕೂಡ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

https://youtu.be/hCkhpUpHIM4?si=QgWLax26T7R4pHqW

ಕೈ ಜೋಮು ಹಿಡಿಯುವುದು ನರಗಳ ಸೆಳೆತಕ್ಕೆ ಸುಲಭ ಪರಿಹಾರ.!

0

 

ಕೆಲವರಿಗೆ ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ಕೈಗಳು ಸತ್ವ ಕಳೆದುಕೊಂಡಿರುತ್ತದೆ, ಸ್ವಲ್ಪ ಶೇಕ್ ಮಾಡಿ ನಂತರ ಆಕ್ಟೀವ್ ಮಾಡಬೇಕಾಗ ಪರಿಸ್ಥಿತಿ ಇರುತ್ತದೆ, ಇನ್ನು ಕೆಲವರಿಗೆ ರಾತ್ರಿ ಮಲಗಿರುವಾಗ ಕೈ ಜೋಮು ಹಿಡಿಯುತ್ತದೆ. ಕೈಯಲ್ಲಿ ಉರಿ ಚುಚ್ಚಿದ ಅನುಭವ, ಸ್ವಲ್ಪ ಕೆಲಸ ಮಾಡಿದರು ಕೈ ಜೋತು ಹೋಗುವುದು, ಒಮ್ಮೊಮ್ಮೆ ವಿಪರೀತವಾದ ನೋವು, ಕೈಗಳು ಊದಿಕೊಂಡಿರುವ ರೀತಿ ಅನಿಸುತ್ತಿರುತ್ತದೆ.

ಈ ರೀತಿ ಲಕ್ಷಣಗಳು ಹಗಲಿನಲ್ಲಿ ಕಾಣಿಸಿಕೊಂಡರು ಆಗುತ್ತಿರುತ್ತದೆ ರಾತ್ರಿ ಸಮಯ ಹೆಚ್ಚಿಗೆ ಆಗುತ್ತಿರುತ್ತದೆ. ಈ ರೀತಿ ಅನುಭವಗಳಾಗುತ್ತಿದ್ದರೆ ದಯವಿಟ್ಟು ನಿರ್ಲಕ್ಷಿಸಬೇಡಿ ಯಾಕೆಂದರೆ ಇದನ್ನು ಮೆಡಿಕಲ್ ಭಾಷೆಯಲ್ಲಿ Carpal tunnel sydrome ಎನ್ನುತ್ತಾರೆ ದೇಹದ ಕುತ್ತಿಗೆ ಭಾಗದಿಂದ ಪ್ರಧಾನವಾದ ನರವೊಂದು ಹಸ್ತಗಳವರೆಗೂ ಬಂದಿರುತ್ತದೆ.

ಅದು ಕಂಕಣದ ಜಾಗದಲ್ಲಿ ಕಾರ್ಪಲ್ ಟ್ಯೂನಲ್ ಒಳಗಡೆ ಇನ್ನು ಅನೇಕ ಸಣ್ಣ ಸಣ್ಣ ನರಗಳು ಮಾಂಸಖಂಡ ಸೇರಿ ಕೈ ಪೂರ್ತಿ ಸ್ಪ್ರೆಡ್ ಆಗಿರುತ್ತದೆ. ಇದರ ಒಳಗಡೆ ಊತವಾದಾಗ, ಈ ರೀತಿ ಕೈಗಳು ಊದಿಕೊಂಡ ರೀತಿ ಆಗುತ್ತದೆ. ಕಂಕಣದ ಭಾಗಕ್ಕೆ ಅತಿ ಹೆಚ್ಚಾದ ಒತ್ತಡ ಬೀಳುವುದರಿಂದ ಕೂಡ ಈ ಸಮಸ್ಯೆಗಳು ಆಗುತ್ತದೆ.

ಇದರೊಂದಿಗೆ ಅತಿ ಹೆಚ್ಚಾಗಿ ಕೆಲಸ ಮಾಡಿ ಆ ಭಾಗದಲ್ಲಿ ನರಗಳು ಅಥವಾ ಮಾಂಸಖಂಡ ಸವೆದಿರುವುದು, ಯಾವಾಗಲೋ ಈ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಅದು ಗೊತ್ತಾಗದೆ ಇರುವುದು, ಸಾಫ್ಟ್ವೇರ್ ಗಳಲ್ಲಿ ಕೆಲಸ ಮಾಡುವವರು ಮೌಸ್ ಬಳಸಲು ಕೈಗಳನ್ನು ಹೆಚ್ಚು ಬಳಸುವುದರಿಂದ ಅವರಲ್ಲೂ ಈ ಸಮಸ್ಯೆ ಇರುತ್ತದೆ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಪುರುಷರಿಗಿಂತ ಮಹಿಳೆಯರು ಅತಿ ಹೆಚ್ಚಾಗಿ ಈ ಸಮಸ್ಯೆ ಅನುಭವಿಸುತ್ತಾರೆ.

ಗರ್ಭಿಣಿ ಹಾಗೂ ಬಾಣಂತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ಕೂಡ ಈ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಗುರುತಿಸದೆ ನಿರ್ಲಕ್ಷಿಸಿದರೆ ನಿಧಾನವಾಗಿ ಇದು ಹಗಲಿನಲ್ಲಿ ಬಹಳ ನೋವು ಕೊಡಲು ಶುರುಮಾಡುತ್ತದೆ. ಹಾಗಾಗಿ ಆರಂಭದಲ್ಲಿ ಇದರ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ಪಡೆದುಕೊಂಡರೆ ದೊಡ್ಡ ಅ’ನಾ’ಹು’ತ ತಪ್ಪಿಸಬಹುದು.

ಹೈಪೋಥೆರಡಿಸಂ ಸಮಸ್ಯೆ ಇರುವವರು, ಸಕ್ಕರೆ ಕಾಯಿಲೆ ಇರುವವರು. ದೇಹದ ತೂಕ ಹೆಚ್ಚಾಗಿ ಒಬೆಸಿಟಿ ಸಮಸ್ಯೆ ಎದುರಿಸುತ್ತಿರುವವರ ನರಗಳು ಮೊದಲೇ ದುರ್ಬಲವಾಗಿರುವುದರಿಂದ ಕೂಡ ಸುಲಭವಾಗಿ ಈ ಸಮಸ್ಯೆಗೆ ತುತ್ತಾಗುತ್ತಾರೆ.

ಇವರೆಲ್ಲರೂ ಈ ಲಕ್ಷಣ ಬಗ್ಗೆ ಗಮನ ಕೊಟ್ಟು ಸಮಸ್ಯೆ ಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಬೇಕು ಮೊದಲಿಗೆ ಇದು ಕಾರ್ಪೆಲ್ ಟೂನರ್ಸ್ ಸಿಂಡ್ರಮ್ ಎನ್ನುವುದನ್ನು ಹಲವು ಪರೀಕ್ಷೆಗಳ ಮೂಲಕ ವೈದ್ಯರು ಕಂಡುಹಿಡಿಯುತ್ತಾರೆ. ನರ್ವ್ ಕಂಡಕ್ಷನ್ ಸ್ಟಡಿ, ಅಲ್ಟ್ರಾ ಸೌಂಡಾಗ್ರಾಫಿ, MRI, ಎಲೆಕ್ಟ್ರೋ ಮಯೋಗ್ರಫಿ, ಈ ಎಲ್ಲಾ ಟೆಸ್ಟ್ ಗಳ ಮೂಲಕವೂ ಕೂಡ ನಮಗಾಗಿರುವ ಸಮಸ್ಯೆ carpet tunnel compression ನಿಂದ ಆಗಿದೆಯೇ ಎಂದು ದೃಢವಾಗಿ ತಿಳಿದುಕೊಳ್ಳಬಹುದು.

ಸಮಸ್ಯೆ ಗೊತ್ತಾದ ಮೇಲೆ ಅದರಿಂದ ಹೊರಬರುವ ದಾರಿಯು ಇರುತ್ತದೆ. ಹಾಗಾಗಿ ಆರಂಭದಲ್ಲಿ ಪತ್ತೆ ಹಚ್ಚಿದರೆ ಗಾಬರಿಯಾಗುವ ಅವಶ್ಯಕತೆ ಇಲ್ಲ ಮನೆಯಲ್ಲಿ ಮಾಡುವ ಸಣ್ಣಪುಟ್ಟ ಎಕ್ಸಸೈಜ್ ಗಳ ಮೂಲಕ ಇದನ್ನು ಗುಣಪಡಿಸಿಕೊಳ್ಳಬಹುದು. ಹೆಚ್ಚಾದ ನೋವಿದ್ದಾಗ ಐಸ್ ಕ್ಯೂಬ್ ಇಟ್ಟು ನೋವು ಗುಣಪಡಿಸಿಕೊಳ್ಳಬಹುದು.

ಮೂರು ಬಾರಿ ಬಿಸಿಯಾದ ನೀರಿನಿಂದ ಅಥವಾ ವಸ್ತುವಿನಿಂದ ಮಸಾಜ್ ಕೊಟ್ಟು ಒಂದು ಬಾರಿ ಐಸ್ ಇಂದ ಪ್ರೆಸ್ ಮಾಡಿ ನೋವು ಕಡಿಮೆ ಮಾಡಿಕೊಳ್ಳಬಹುದು. ಈ ಸಮಸ್ಯೆ ಇದೆ ಎಂದು ಗೊತ್ತಾದ ಮೇಲೆ ಮೊದಲಿನಂತೆ ಹೆಚ್ಚು ಪ್ರೆಶರ್ ಹಾಕಿ ಕೆಲಸ ಮಾಡುವುದನ್ನು ನಿಲ್ಲಿಸಿ.

ಒಂದು ವೇಳೆ ಇವುಗಳಿಂದ ಗುಣವಾಗದಿದ್ದರೆ ಆಯುರ್ವೇದದ ಮೂಲಕ ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮೆಡಿಸನ್, ನ್ಯಾಚುರೋಪಥಿ, ಅಲ್ಟ್ರಾ ಸೌಂಡ್ ಥೆರಪಿ ಇವುಗಳ ಸರಳ ಚಿಕಿತ್ಸೆಯಿಂದ ಕೂಡ ಇದನ್ನು ಸರಿಪಡಿಸಲು ಚಿಕಿತ್ಸೆಗಳು ಇವೆ. ಹಾಗಾಗಿ ತಪ್ಪದೆ ಒಳ್ಳೆಯ ಫಿಜಿಯೋಥೆರಪಿಸ್ಟ್ ಭೇಟಿಯಾಗಿ.