Home Blog Page 226

ಸೀಟ್ ಕೆಳಗೆ ಸಿಕ್ಕ ಬ್ಯಾಗ್ ನಲ್ಲಿ ಇತ್ತು ಲಕ್ಷ ಲಕ್ಷ ದುಡ್ಡು, ಬ್ಯಾಗ್ ನೋಡಿದ ಕಂಡಕ್ಟರ್ ಮಾಡಿದ್ದೇನು ಗೊತ್ತಾ.?

 

ಇತ್ತೀಚೆಗೆ ನಾವು ಸರ್ಕಾರಿ ಅಧಿಕಾರಿಗಳಿಗೆ ಪ್ರಾಮಾಣಿಕತೆಗೆ ಇಲ್ಲ ಎಂದು ಘೋಷಿಸುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ ಹಾಗೂ ಕೇಳುತ್ತಿದ್ದೇವೆ. ಪ್ರತಿ ದಿನ ಕೂಡ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಲಂಚ ತಿನ್ನುವ ಹಗರಣಗಳು ಮತ್ತು ಕಳ್ಳ ವ್ಯವಹಾರಗಳನ್ನು ಕಂಡು ಸರ್ಕಾರಿ ಅಧಿಕಾರಿಗಳ ಮೇಲಿದ್ದ ನಂಬಿಕೆ ಹೊರಟುಹೋಗಿದೆ. ಜೊತೆಗೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡುವಂತಹ ಸರ್ಕಾರಿ ಹಾಗೂ ಸರ್ಕಾರದ ಅಂಗ ಸಂಸ್ಥೆಗಳ ಸಿಬ್ಬಂದಿಗಳು ಈ ಕಾಲದಲ್ಲಿ ಸಿಗುವುದೇ ಕಷ್ಟವಾಗಿದೆ.

ಬಡ ಜನರು, ದೀನರು ಎನ್ನುವ ಯಾವುದೇ ಕರುಣೆ ಇಲ್ಲದೆ ಜನರಿಂದ ರಕ್ತ ಹೀರಲು ತಯಾರಾಗಿರುವ ಐವತ್ತು ಹಾಗೂ ನೂರು ರೂಪಾಯಿಗೂ ಹಿಂಸೆ ಕೊಟ್ಟು ಕೈಚಾಚುವ ಇಂತವರ ಮಧ್ಯೆ ಇಲ್ಲೊಬ್ಬ ಸರ್ಕಾರಿ ಬಸ್ ಕಂಡಕ್ಟರ್ ಎಲ್ಲರಿಂದ ಶಭಾಷ್ ಎನಿಸಿಕೊಳ್ಳುತ್ತಿದ್ದಾರೆ ಮಾಹಿತಿಗಾಗಿ ಪೂರ್ತಿ ಓದಿ. ಸರ್ಕಾರಿ ಬಸ್ ಕಂಡಕ್ಟರ್ ಒಬ್ಬರಿಗೆ ಅವರ ಬಸ್ ಅಲ್ಲಿ ನಿಧಿ ರೀತಿ ಹಣ ಸಿಕ್ಕಿದೆ ಅದೇನೆಂದರೆ ಎಲ್ಲರೂ ಕೂಡ ಬಸ್ ಇಳಿದು ಹೋದ ಮೇಲೆ ಕಂಡಕ್ಟರ್ ಒಮ್ಮೆ ಬಸ್ ಚೆಕ್ ಮಾಡಿದ್ದಾರೆ.

ಆಗ ಬಸ್ ಅಲ್ಲಿ ಪ್ರಯಾಣಿಸಿದ್ದ ಒಬ್ಬ ವ್ಯಕ್ತಿ ತಾನು ಕೂತಿದ್ದ ಸೀಟ್ ಕೆಳಗೆ ತನ್ನ ದೊಡ್ಡ ಬ್ಯಾಗ್ ಬಿಟ್ಟು ಹೋಗಿರುವುದು ಕಾಣುತ್ತದೆ. ಮೊದಲಿಗೆ ಅದು ಬಟ್ಟೆ ಬ್ಯಾಗ್ ಅಥವಾ ಇನ್ನೇನೋ ಇರಬೇಕು ನೋಡೋಣ ಮಾಹಿತಿ ಇದ್ದರೆ ತಲುಪಿಸೋಣ ಎಂದುಕೊಂಡು ಬ್ಯಾಗ್ ಓಪನ್ ಮಾಡಿ ನೋಡಿದ ಕಂಡಕ್ಟರಿಗೆ ಅಲ್ಲಿ ಶಾ’ಕ್ ಕಾದಿತ್ತು. ಯಾಕೆಂದರೆ ಲಕ್ಷಕ್ಕೂ ಹೆಚ್ಚಿನ ದುಡ್ಡಿನ ಕಂತೆ ಹಾಗೂ ಹಲವಾರು ಕಾರ್ಡುಗಳು ಮತ್ತು ಕೆಲ ಮುಖ್ಯ ದಾಖಲೆಗಳು ಹಾಗೂ ಒಂದು ಡೈರಿ ಕೂಡ ಆ ಬ್ಯಾಗಲ್ಲಿ ಇತ್ತು.

ಆಗ ಆ ಕಂಡಕ್ಟರ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಆ ಕಂಡಕ್ಟರ್ ಮಾತ್ರ ತನ್ನ ವೃತ್ತಿಪರತೆ ಮೆರೆದು ಪ್ರಾಮಾಣಿಕತೆ ತೋರಿದ್ದಾರೆ. ಆ ಡೈರಿಯನ್ನು ತೆಗೆದು ನೋಡಿದಾಗ ಡೈರಿ ಬರೆದಿದ್ದವರ ಮೊಬೈಲ್ ನಂಬರ್ ಸಿಕ್ಕಿದೆ. ಆ ಮೊಬೈಲ್ ನಂಬರ್ ಗೆ ಕರೆ ಮಾಡುತ್ತಾರೆ. ಕರೆ ಸ್ವೀಕರಿಸಿದವರೇ ಆ ಬ್ಯಾಗನ್ನು ಅಲ್ಲಿ ಬಿಟ್ಟು ಹೋಗಿದ್ದವರು ಆಗಿರುತ್ತಾರೆ. ಅಲ್ಲೇ ಅವರು ಹತ್ತಿರದಲ್ಲಿದ್ದು ಬಸ್ ಅಲ್ಲಿ ಬ್ಯಾಗ್ ಅನ್ನು ಮರೆತು ಹೋಗಿದ್ದಾರೆ ಎನ್ನುವುದು ಆಗ ಅವರಿಗೆ ಅರಿವಾಗುತ್ತದೆ.

ತಕ್ಷಣವೇ ಓಡೋಡಿ ಬಂದು ಬಸ್ ಕಂಡಕ್ಟರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು ಅರ್ಪಿಸಿ. ತನ್ನ ಹಣ ಮತ್ತು ವಸ್ತುಗಳನ್ನೆಲ್ಲ ತೆಗೆದುಕೊಂಡು ಹೋಗುತ್ತಾರೆ ಜೊತೆಗೆ ಕಂಡಕ್ಟರ್ ಗೆ ಸ್ವಲ್ಪ ಹಣ ಕೂಡ ಕೊಡಲು ಮುಂದಾಗುತ್ತಾರೆ ಆದರೆ ಅದನ್ನು ಕಂಡಕ್ಟರ್ ಸ್ವೀಕರಿಸದೆ ತಮ್ಮ ನೈತಿಕತೆ ತೋರಿದ್ದಾರೆ. ಇದೀಗ ಈ ಸುದ್ದಿ ದೇಶದಾದ್ಯಂತ ಎಲ್ಲರ ಗಮನ ಸೆಳೆದಿದೆ ಮತ್ತು ಎಲ್ಲರೂ ಕಂಡಕ್ಟರ್ ಗೆ ಶಭಾಷ್ ಎನ್ನುತ್ತಿದ್ದಾರೆ.

ಅಷ್ಟು ದೊಡ್ಡ ಮೊತ್ತದ ಹಣ ಆ ವ್ಯಕ್ತಿಯ ಐದು ತಿಂಗಳ ಸಂಬಳ ಆಗಿತ್ತು ಅದನ್ನು ಊರಿನಲ್ಲಿ ಕೃಷಿ ಮಾಡುತ್ತಿದ್ದ ತನ್ನ ರೈತ ತಂದೆಗೆ ಕೊಟ್ಟು ತನ್ನ ಜಮೀನಿಗೆ ಸಂಬಂಧಪಟ್ಟ ಸಾಲವನ್ನು ತಿಳಿಸಲು ಅವರು ತೆಗೆದುಕೊಂಡು ಹೋಗುತ್ತಿದ್ದರು. ಯಾವುದೋ ಗಾಬರಿ ಅಥವಾ ಯೋಚನೆಯಲ್ಲಿ ಮುಳುಗಿ ಈ ರೀತಿ ಅದನ್ನೇ ಮರೆತು ಬಸ್ಸಿಂದ ಇಳಿದಿದ್ದರು ಈಗ ವಾಪಸ್ಸು ಕೊಟ್ಟ ಕಂಡಕ್ಟರ್ ಅವರಿಗೆ ದೈವ ಸ್ವರೂಪವಾಗಿ ಕಂಡಿದ್ದಾರೆ. ಈ ಕಂಡಕ್ಟರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ನಲ್ಲಿ ತಿಳಿಸಿ

ಮಕ್ಕಳು ಆಗಿಲ್ಲ ಅಂತ ಸಾಧು ಬಳಿ ಹೋದ ಮಹಿಳೆ ವರ್ಷದೊಳಗೆ ತಾಯಿಯಾಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ನಿಬ್ಬೆರಗಾಗ್ತೀರ.

 

 

ಶ್ವೇತ ಹಾಗೂ ಶಂಕರ ಎನ್ನುವ ದಂಪತಿಗಳಿದ್ದರೂ ಆದರೆ ಇವರಿಬ್ಬರಲ್ಲಿ ಅನ್ಯೂನತೆ ಇರಲಿಲ್ಲ. ಸದಾ ಒಬ್ಬರಿಗೊಬ್ಬರು ನನ್ನ ವಿಚಾರಗಳಿಗೆ ಜಗಳ ಆಡುತ್ತಾ ಸಂಸಾರದ ಜವಾಬ್ದಾರಿಯನ್ನು ಮರೆತಿದ್ದರು. ಇತ್ತ ದುಡಿಯಬೇಕಿದ್ದ ಶಂಕರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ, ಮನೆ ನಿರ್ವಹಣೆಗಾಗಿ ದುಡಿಯಲು ಹೊರಹೋಗುತ್ತಿದ್ದ ಶ್ವೇತ ಮತ್ತೆ ಮನೆಗೆ ಬಂದ ಮೇಲೆ ಮನೆ ಕೆಲಸದ ಕಡೆ, ಆಸಕ್ತಿ ಕೊಡದೆ ಸದಾ ಬೇಸರದಿಂದ ಇರುತ್ತಿದ್ದಳು.

ಇದರಿಂದ ಮನೆ ಯಾವಾಗಲೂ ಕೆಟ್ಟ ವಾಸನೆಯಿಂದ ಹಾಗೂ ಮುಚ್ಚಿದ ಕಿಟಕಿಗಳನ್ನು ತೆರೆಯದೆ ಬೆಳಕಿಲ್ಲದೆ ಗಾಳಿ ಇಲ್ಲದೆ ಭೂತಬಂಗಲೇ ರೀತಿ ಆಗಿತ್ತು. ಜೊತೆಗೆ ಇಬ್ಬರಿಗೂ ಮಕ್ಕಳಿಲ್ಲ ಎನ್ನುವ ಚಿಂತೆ ಅದರಿಂದ ಪದೇಪದೇ ಜಗಳ ಆಗುತ್ತಿತ್ತು . ಅದೇ ಸಮಯಕ್ಕೆ ಆ ಊರಿಗೆ ಒಬ್ಬರು ಸಾಧು ಬಂದರು. ಎಲ್ಲರೂ ಆತನ ಬಳಿ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದರು. ಶ್ವೇತ ಹಾಗೂ ಶಂಕರ ನಾವು ಕೂಡ ಹೋಗೋಣ ಮಕ್ಕಳ ಸಮಸ್ಯೆಗೆ ಪರಿಹಾರ ಕೇಳೋಣ ಎಂದುಕೊಂಡು ಸಾಧುಗಳ ಬಳಿ ಹೋದರು.

ಇವರಿಬ್ಬರ ಸಮಸ್ಯೆಯನ್ನು ಆಲಿಸಿದ ಸಾಧುಗಳು ನಾನು ನಿಮಗೆ ಒಂದು ಮಣ್ಣಿನ ಪಾಟ್ ಕೊಡುತ್ತೇನೆ ಅದನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ ಎಂದರು. ಪಾಟ್ ಸಾಮಾನ್ಯವಾಗಿದ್ದರು ಸಾಧುಗಳ ಮಾತಿನ ಮೇಲಿರುವ ನಂಬಿಕೆಯಿಂದ ಅದನ್ನು ವಿಶೇಷ ಎಂದುಕೊಂಡರು. ಮನೆಗೆ ತಂದು ಪಾಟ್ ಎಲ್ಲಿಡುವುದು ಸ್ವಚ್ಛವಾಗಿ ಇಡೋಣ ಎಂದು ಸ್ವಲ್ಪ ಜಾಗವನ್ನು ಕ್ಲೀನ್ ಮಾಡಿ ಅಲ್ಲಿ ಪಾಟ್ ಇಟ್ಟರು. ಶಂಕರ ಮಣ್ಣು ಹಾಗೂ ಒಂದು ಗುಲಾಬಿ ಗಿಡ ತಂದು ಪಾಟಿಗೆ ಹಾಕಿದ. ಗಿಡ ಚೆನ್ನಾಗಿ ಬೆಳೆಯಬೇಕು ಎಂದರೆ ಬಿಸಿಲಿರಬೇಕು ಎಂದು ಮುಚ್ಚಿದ ಕಿಟಕಿಗಳನ್ನು ಶ್ವೇತ ತೆರೆದು ಹುಳ ಹುಪ್ಪಟೆ ಗಿಡದಲ್ಲಿ ಕೂರದೆ ಇರಲಿ ಎಂದು ಮನೆ ಪೂರ್ತಿ ಕ್ಲೀನ್ ಮಾಡಿ ಇಟ್ಟುಕೊಂಡಳು.

ಶಂಕರ ಕೂಡ ಗಿಡ ಚೆನ್ನಾಗಿ ಬೆಳೆಯಲಿ ಎನ್ನುವ ಕಾರಣಕ್ಕೆ ಇದಕ್ಕೆ ಸಹಾಯ ಮಾಡುತ್ತಿದ್ದ ಇಬ್ಬರಲ್ಲೂ ಅನ್ಯೋನ್ಯತೆ ಬೆಳೆಯಿತು. ಹೂ ಇನ್ನೂ ಬಿಡಲಿಲ್ಲ ಎನ್ನುವ ಕಾರಣಕ್ಕೆ ಮನೆಯಿಂದ ಬಾಲ್ಕನಿ ಗೆ ತಂದು ಗಿಡ ಇಟ್ಟರು ಆ ಸ್ಥಳವೇ ಲಕ್ಷ್ಮಿ ಸ್ಥಳ ಎನ್ನುವಂತೆ ಶ್ವೇತಳಿಗೆ ಅನಿಸಿತು ಅದಕ್ಕಾಗಿ ಅದನ್ನೆಲ್ಲಾ ಸ್ವಚ್ಛ ಮಾಡಿ ನೀರಿಟ್ಟು ರಂಗೋಲಿ ಇಟ್ಟು ಗುಲಾಬಿ ಗಿಡವಿದ್ದ ಪಾಟ್ ಪೂಜೆ ಮಾಡಲು ಶುರು ಮಾಡಿದಳು. ಶಂಕರ ಇನ್ನೊಂದು ನಾಲ್ಕು ಪಾಟ್ ಇಡೋಣ ಚೆನ್ನಾಗಿ ಕಾಣುತ್ತದೆ ಎಂದು ಮತ್ತಷ್ಟು ಪಾಟ್ ಗಳಲ್ಲಿ ಗಿಡ ನೆಟ್ಟ.

ಕೊನೆಗೂ ಅವರ ಅದೃಷ್ಟದ ಹೂ ಬಿಟ್ಟೆ ಬಿಟ್ಟಿತು ಅದೇ ಸಮಯಕ್ಕೆ ಶ್ವೇತಾ ಸಿಹಿ ಸುದ್ದಿ ಕೊಟ್ಟಳು. ಈ ವಿಷಯ ತಿಳಿಯುತ್ತಿದ್ದಂತೆ ಶಂಕರ ತನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡ ಹೆಂಡತಿ ಮಕ್ಕಳಿಗಾಗಿ ಹೆಚ್ಚು ದುಡಿಯಲು ಆರಂಭಿಸಿದ. ಜೊತೆಗೆ ಅರಿವಿಲ್ಲದಂತೆ ಹೂ ಗಿಡಗಳನ್ನು ಬೆಳೆಸುವ ಅಭ್ಯಾಸ ಅವರಲ್ಲಿ ರೂಢಿಯಾಯಿತು. ಅಕ್ಕಪಕ್ಕ ಮನೆಯವರು ರಸ್ತೆಯಲ್ಲಿ ಹೋಗುವವರೆಲ್ಲ ಹೂ ಗಿಡ ಮಾರುತ್ತೀರ ಎಂದು ಕೇಳಲು ಆರಂಭಿಸಿದರು.

ತಕ್ಷಣವೇ ದಂಪತಿ ನಾವು ನರ್ಸರಿ ಆರಂಭಿಸೋಣ ಎಂದು ಯೋಚನೆ ಮಾಡಿ ಸಣ್ಣದಾಗಿ ಆರಂಭಿಸಿದರು, ಶ್ವೇತ ಹೆಣ್ಣು ಮಗುವಿಗೆ ಜನ್ಮ ಸಹ ನೀಡಿದಳು ಆ ಮಗುವಿಗೆ ಸಾಧನ ಎಂದು ಹೆಸರಿಟ್ಟರು. ಈಗ ನರ್ಸರಿ ನೋಡಿಕೊಂಡು ಸುಖ ಸಂಸಾರದಲ್ಲಿ ಮೂರು ಜನ ಸಂತೋಷವಾಗಿದ್ದಾರೆ. ಇಲ್ಲಿ ಮಣ್ಣಿನ ಮಡಕೆ ಚಮತ್ಕಾರ ಮಾಡಿಲ್ಲ, ಬದಲಾಗಿ ಮಡಿಕೆ , ಸಾಧುಗಳ ಮಾತಲಿಟ್ಟ ನಂಬಿಕೆ ಅವರ ಶ್ರಮದ ಪ್ರತಿಫಲವಾಗಿ ಇಂದು ಅವರ ಅದೃಷ್ಟ ಬದಲಾಯಿತು.

ಈ ಮಹಿಳೆ ದಿನದ 24 ಗಂಟೆಗಳಲ್ಲಿ 22 ಗಂಟೆಗಳನ್ನು ನಿದ್ದೆ ಮಾಡಿಯೇ ಕಳೆಯುತ್ತಾಳಂತೆ…! ಇಷ್ಟು ನಿದ್ದೆ ಮಾಡೋಕೆ ಕಾರಣ ಏನಂತೆ ಗೊತ್ತ.?

 

ಇಂಗ್ಲೆಂಡ್ ನ 38 ವರ್ಷದ ಮಹಿಳೆಯೊಬ್ಬಳು ದಿನದ 24 ಗಂಟೆಗಳಲ್ಲಿ 22 ಗಂಟೆಗಳನ್ನು ಮಲಗಿ ಕಳೆಯುತ್ತಾಳಂತೆ. ಇಷ್ಟೊಂದು ಸಮಯದ ನಿದ್ದೆಯಿಂದಾಗಿ ಆಕೆಯನ್ನು ‘ಸ್ಲೀಪಿಂಗ್ ಬ್ಯೂಟಿ’ ಎಂದೇ ಕರೆಯುತ್ತಾರಂತೆ. ನಿತ್ಯವೂ 22 ಗಂಟೆಗಳ ಕಾಲ ನಿದ್ದೆ ಮಾಡುವಂತಹ ಅಸಾಮಾನ್ಯ ಸಾಮರ್ಥ್ಯವನ್ನು ಮಹಿಳೆ ಹೊಂದಲು ಆಕೆ ಬಳಲುತ್ತಿರುವ ರೋಗವೇ ಕಾರಣವೆಂದು ವೈದ್ಯ ಲೋಕ ತಿಳಿಸಿದೆ.

ದಿನದ 24 ಗಂಟೆಗಳಲ್ಲಿ ಎಂಟು ತಾಸುಗಳ ಕಾಲ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಿತಕರ ಎಂಬುದಾಗಿ ವೈದ್ಯರು ಹೇಳುತ್ತಾರೆ. ಪ್ರತಿನಿತ್ಯವೂ ಸರಿಯಾದ ನಿದ್ದೆ ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸುಸ್ಥಿರತೆಗೆ ಕಾರಣವಾಗುತ್ತದೆ. ಆದರೆ ಈಗಿನ ಒತ್ತಡ ಪೂರ್ಣ ಜೀವನದಲ್ಲಿ ಮನೆ ಕೆಲಸ, ಉದ್ಯೋಗ, ಸಾಮಾಜಿಕ ಜಾಲತಾಣ ಎನ್ನುತ್ತಾ ಅನೇಕರು ಸರಿಯಾದ ಸಮಯದಲ್ಲಿ ನಿದ್ದೆ ಮಾಡುವುದನ್ನು ಬಿಟ್ಟಿರುತ್ತಾರೆ.

ಸಾಕಷ್ಟು ಪ್ರಮಾಣದ ನಿದ್ದೆಯನ್ನು ಕೂಡ ಮಾಡುವುದಿಲ್ಲ. ಇನ್ನೂ ಕೆಲವರು ಸೋಮಾರಿಗಳಂತೆ ದಿನದಲ್ಲಿ ಹಲವು ತಾಸುಗಳನ್ನು ಮಲಗಿಯೇ ಕಳೆಯುತ್ತಾರೆ. ಆದರೆ ಈ ಮಹಿಳೆಯ ಕಥೆಯೇ ಬೇರೆ. ಇಂಗ್ಲೆಂಡ್ ನ ವೆಸ್ಟ್ ಕ್ಯಾಸೆಲ್ ಪೋರ್ಡ್ ನಲ್ಲಿ ವಾಸಿಸುತ್ತಿರುವ ಜೋವನ್ನಾ ಕಾಕ್ಸ್ ಎಂಬ ಹೆಸರಿನ ಮಹಿಳೆಯು ನಿದ್ದೆ ಮಾಡುವ ಸಮಯದಿಂದಾಗಿ ಜನಪ್ರಿಯತೆಯನ್ನು ಹೊಂದಿದ್ದಾರೆ.

ಅಸಲಿಗೆ ಆಕೆ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹ ಕಾಯಿಲೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಆ ಕಾಯಿಲೆಯ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ. ಈ ಕಾಯಿಲೆಯನ್ನು ಹೊಂದಿದವರು ಹೆಚ್ಚೆಚ್ಚು ನಿದ್ದೆ ಮಾಡಲು ಬಯಸುತ್ತಾರೆ. ಹಗಲಿನಲ್ಲಿಯೂ ನಿದ್ದೆಯ ಗುಂಗಿನಲ್ಲಿಯೇ ಇರುತ್ತಾರೆ. ಒಮ್ಮೆ ನಿದ್ದೆ ಮಾಡಲು ಪ್ರಾರಂಭಿಸಿದರೆ ಎಚ್ಚರಗೊಳ್ಳುವುದು ಕಷ್ಟಕರವಾಗಿರುತ್ತದೆ.

ಇಂತಹ ವ್ಯಕ್ತಿಗಳು ಕೆಲವೊಮ್ಮೆ ಕಾಯಿಲೆಯೂ ಇರುವ ಬಗ್ಗೆ ಅರಿಯದೆ ತಮ್ಮ ಸುತ್ತಮುತ್ತಲ ಜನರಿಂದ ಅಪಹಾಸ್ಯಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಎದುರಿಸುತ್ತಾ ಇರುತ್ತಾರೆ. ಕೆಲವರು ನಿದ್ದೆ ಮಾಡಿದರೆ ಎಚ್ಚರವಾಗುವುದಿಲ್ಲ..ಪದೇಪದೇ ನಿದ್ದೆ ಬರುತ್ತಲೇ ಇರುತ್ತದೆ…ಮನೆ ಕೆಲಸವನ್ನು ಮಾಡುವಲ್ಲಿ, ಪ್ರಯಾಣದಲ್ಲಿ, ಉದ್ಯೋಗ ಸ್ಥಳಗಳಲ್ಲಿ ನಿದ್ದೆಯು ಅತಿಯಾಗಿ ಬರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ನೋವನ್ನು ಅನುಭವಿಸುತ್ತಾ ಇರುತ್ತಾರೆ.

ನಾಲ್ಕು ದಿನಗಳ ಕಾಲ ಸತತವಾಗಿ ನಿದ್ದೆ ಮಾಡುತ್ತಾ ಎದ್ದೇಳದೆ ಇದ್ದ ಮಹಿಳೆ : ಜೋವನ್ನಾ ಕಾಕ್ಸ್ ಮಹಿಳೆಗೆ 2021 ರಲ್ಲಿ ತನಗೆ ಈ ರೀತಿಯಾಗಿ ನಿದ್ದೆ ಮಾಡುವ ಕಾಯಿಲೆಯೊಂದು ಅಂಟಿದೆ ಎಂಬುದು ತಿಳಿದಿದೆ. ‘Sleeping beauty’ ಜೋವನ್ನಾ ತನಗೆ ಇರುವ ಕಾಯಿಲೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.

“ಒಮ್ಮೆ ಮಲಗಿದ ಮೇಲೆ ನನ್ನನ್ನು ಎಚ್ಚರಗೊಳಿಸಲು ಸಾಧ್ಯವೇ ಇಲ್ಲ. ನನಗೆ ನಾನು ಎಷ್ಟು ಸಮಯದಿಂದ ನಿದ್ದೆ ಹೋಗಿರುವೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಿದ್ದೆ ಮಾಡಿದಾಗ ಎಚ್ಚರವಾಗದೆ ಸತತವಾಗಿ ನಾಲ್ಕು ದಿನಗಳ ಕಾಲ ಎದ್ದೇಳದೆ ಇರುವುದು ಇದೆ. ಈ ರೀತಿಯ ಅತಿಯಾದ ನಿದ್ದೆಯಿಂದಾಗಿ ನನ್ನ ಜೀವನವೇ ಹಾಳಾಗುತ್ತಿದೆ. ಈ ರೋಗದಿಂದ ನಾನು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ” ಎಂದು ಜೋವನ್ನಾ ಹೇಳಿದ್ದಾರೆ.

ಹೆಚ್ಚಿನ ಸಮಯ ನಿದ್ದೆಯಿಂದಲೇ ಕಳೆಯುವ ಇಂಗ್ಲೆಂಡ್ ನ ಈ ಮಹಿಳೆಯು ತಮ್ಮ ಆಹಾರ ಪದ್ಧತಿಯಿಂದಲೇ ಬದುಕುಳಿದಿದ್ದಾರೆ. ಊಟವಿಲ್ಲದೆ, ದೈಹಿಕ ಚಲನೆ ಇಲ್ಲದೆ ದೇಹವು ಅಗತ್ಯ ಪೋಷಕಾಂಶಗಳ ಪೂರೈಕೆಯಾಗದೆ ಬಳಲಬಹುದು. ದೇಹಕ್ಕೆ ಅವಶ್ಯಕ ವಸ್ತುಗಳ ಕೊರತೆಯಾಗಬಹುದು. ಅದಕ್ಕಾಗಿ ಈ ಮಹಿಳೆ ಪ್ರೋಟೀನ್ ಶೇಕ್ ಮತ್ತು ಪೋಷಕಾಂಶ ಯುಕ್ತ ಆಹಾರಗಳನ್ನು ಸೇವಿಸುತ್ತಾಳಂತೆ.

ರೈತರಿಗೆ & ಸಾರ್ವಜನಿಕರಿಗೆ ಮೋದಿ ಕಡೆಯಿಂದ ಮತ್ತೊಂದು ಕೊಡುಗೆ. ಇನ್ನು ಮುಂದೆ ಸಾಲ ಪಡೆಯಲು ಬ್ಯಾಂಕ್ ಗೆ ಹೋಗಬೇಕಿಲ್ಲ ಪೋಸ್ಟ್ ಆಫೀಸ್ ನಲ್ಲೆ ಸಾಲ ಸಿಗುತ್ತೆ.

 

ರೈತರಿಗಾಗಿ ಒಂದು ಸಿಹಿ ಸುದ್ದಿ.! ಸಾಲ ಪಡೆಯಲು ಪಟ್ಟಣಕ್ಕೆ ಹೋಗುತ್ತಿದ್ದೀರಾ? ಅಂಚೆ ಕಚೇರಿಯಲ್ಲೂ ಕೂಡ ಸಾಲ ಪಡೆಯಬಹುದು ..ಹೇಗೆ ಗೊತ್ತಾ?? ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರು ಸಾಲವನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕಾದ ಕಾಲವೊಂದಿತ್ತು. ಆದರೆ ರೈತ ಬಾಂಧವರಿಗಾಗಿ ಸಿಹಿ ಸುದ್ದಿ ಒಂದಿದೆ. ಇನ್ನು ಮುಂದೆ ಅಂಚೆ ಕಚೇರಿಯ ಮೂಲಕ ಸಾಲವನ್ನು ಪಡೆಯಬಹುದು ಹಾಗೂ ಅಲ್ಲಿಯೇ ಸಾಲದ ಕಂತುಗಳನ್ನು ಅಥವಾ ಮರುಪಾವತಿಯನ್ನು ಕೂಡ ಮಾಡಬಹುದು. ಹೇಗೆ ಎಂಬುದನ್ನು ಸಂಪೂರ್ಣ ಬರಹವನ್ನು ಓದುವ ಮೂಲಕ ತಿಳಿದುಕೊಳ್ಳಿ.

ರೈತರು ಹಗಲು ರಾತ್ರಿ ಎನ್ನದೆ ವ್ಯವಸಾಯ ಭೂಮಿಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಮಳೆಯನ್ನು ನಂಬಿ ಮುಂದೆ ಸಾಗುತ್ತಾ ಇರುತ್ತಾರೆ. ಒಂದು ವರ್ಷ ಬೆಳೆ ಚೆನ್ನಾಗಿ ಬಂದರೆ ಇನ್ನೊಂದು ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಕೈ ಕೊಡಬಹುದು. ಅಂತಹ ಸಂದರ್ಭದಲ್ಲಿ ಜೀವನ ಸಾಗಿಸಲು ಅಥವಾ ಹೊಸ ಬೆಳೆಯನ್ನು ಬೆಳೆಯಲು, ಯಂತ್ರೋಪಕರಣಗಳನ್ನು ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ. ಸಾಲವನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಗ್ರಾಮೀಣ ಭಾಗದಲ್ಲಿ ವಾಹನಗಳ ಸೌಲಭ್ಯವು ಕೂಡ ಅಷ್ಟಾಗಿ ಇಲ್ಲ. ಇದಕ್ಕಾಗಿಯೇ ಪದೇ ಪದೇ ಪಟ್ಟಣಕ್ಕೆ ಬರುವುದು ರೈತರಿಗೆ ಕಷ್ಟಕರ.

ರೈತ ಬಾಂಧವರ ಸಮಸ್ಯೆಗಳನ್ನು ಅರಿತ ಅಂಚೆ ಇಲಾಖೆಯು ಹೊಸದೊಂದು ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾರತೀಯ ಅಂಚೆ ಇಲಾಖೆಯು ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ಗ್ರಾಮವನ್ನು ತಲುಪುವ ಒಂದು ಇಲಾಖೆ. ಹಲವು ವರ್ಷಗಳಿಂದ ತನ್ನ ಕಾರ್ಯವನ್ನು ಮಾಡುತ್ತಾ ಬಂದಿದ್ದು, ದೇಶದಾದ್ಯಂತ ಎಲ್ಲರಿಗೂ ಪರಿಚಿತ ಇಲಾಖೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ಉತ್ತಮ ಸಂಪರ್ಕವನ್ನು ಏರ್ಪಡಿಸಿರುವಂತಹ ಇಲಾಖೆ. ಇಂದಿಗೂ ಇದರ ಹೆಚ್ಚಿನ ಉಪಯೋಗ ಪಡೆಯುತ್ತಿರುವವರು ಗ್ರಾಮೀಣ ಭಾಗದವರೇ.

ರೈತರಿಗೆ ಸಹಾಯವಾಗುವಂತಹ ಕಾರ್ಯಕ್ರಮ ಒಂದನ್ನು ತಾವು ಜಾರಿಗೆ ತರಬೇಕು ಎಂದು ನಿರ್ಧರಿಸಿ, ಭಾರತೀಯ ಅಂಚೆ ಇಲಾಖೆಯು ವಿವಿಧ ರೀತಿಯ ಸಾಲಗಳನ್ನು ಅಂಚೆ ಕಚೇರಿಯಲ್ಲಿ ರೈತರಿಗೆ ನೀಡುವ ತೀರ್ಮಾನವನ್ನು ಮಾಡಿದೆ. ಅಷ್ಟೇ ಅಲ್ಲದೆ ಸಾಲದ ಇಎಮ್ಐ ಕಂತುಗಳನ್ನು ಅಥವಾ ಸಾಲದ ಮರು ಪಾವತಿಯನ್ನು ಸ್ಥಳಿಯ ಅಂಚೆ ಕಚೇರಿಯಲ್ಲಿ ಮಾಡಬಹುದಾಗಿದೆ. ಇದರಿಂದ ಪಟ್ಟಣಕ್ಕೆ ಓಡಾಡುವ ಖರ್ಚು ಉಳಿಯುವುದು ಅಷ್ಟೇ ಅಲ್ಲದೆ ಸಮಯವು ಉಳಿಯಲಿದೆ.

ಅಂಚೆ ಇಲಾಖೆಯು ಇಂತಹ ಒಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ತಾನೇ ಹಮ್ಮಿ ಕೊಂಡಿತೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು. ಆದರೆ ಅದಕ್ಕೆ ಉತ್ತರ ಎಂದರೆ, ಅಂಚೆ ಇಲಾಖೆಯು ಇಂತದ್ದೊಂದು ಉದ್ದೇಶವನ್ನು ಹೊತ್ತು ಜಾರಿಗೆ ತರಲು ಮುಂದಾಗಿದೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಇದರ ಸಹಾಯಕ್ಕಾಗಿ ಕೈಜೋಡಿಸಿದೆ.

ಹೌದು. ಇನ್ನು ಮುಂದೆ ಬ್ಯಾಂಕ್ ಸಾಲವನ್ನು ಪಡೆಯಲು ಅಥವಾ ಸಾಲವನ್ನು ಮರುಪಾವತಿಸಲು ಟೌನ್ ಏರಿಯಾಗಳಿಗೆ ಹೋಗಿ ಒದ್ದಾಡಬೇಕಾದ ಅವಶ್ಯಕತೆ ಇಲ್ಲ. ರೈತರು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಸಾಲದ ಸೌಲಭ್ಯವನ್ನು ತಮ್ಮ ಊರಿನ ಅಂಚೆ ಕಚೇರಿಯಲ್ಲಿಯೇ ಪಡೆಯಬಹುದಾಗಿದೆ. ಈ ಯೋಜನೆಯ ಇನ್ನೊಂದು ವಿಶೇಷವೆಂದರೆ ಮೊಟ್ಟ ಮೊದಲ ಬಾರಿಗೆ ಇದು ರೂಪಿತಗೊಂಡಿದ್ದು ಕರ್ನಾಟಕದಲ್ಲಿ.

ಈ ಹೊಸ ಪ್ರಯತ್ನವು ರೈತ ಬಾಂಧವರ ಜೊತೆಯಲ್ಲಿ ಯಶಸ್ವಿ ಆಗಲಿದೆ ಎಂಬ ಭರವಸೆ ಅಂಚೆ ಇಲಾಖೆಗೆ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಎರಡಕ್ಕೂ ಇದೆಯಂತೆ. ಶೀಘ್ರದಲ್ಲಿಯೇ ಈ ಯೋಜನೆಯ ರೂಪರೇಷೆಗಳು ಹೊರಬೀಳಲಿದ್ದು, ಅಂಚೆ ಕಚೇರಿಯಲ್ಲಿ ರೈತರಿಗೆ ಸಾಲವು ಲಭ್ಯವಾಗಲಿದೆ. ಇದಕ್ಕಾಗಿ ಹೊಂದಿರಬೇಕಾದ ದಾಖಲೆ ಪತ್ರಗಳು ಮತ್ತು ಇನ್ನಿತರ ಮಾಹಿತಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಪ್ಲೀಸ್ ನಮ್ಮನ್ನು ಬದುಕೋಕೆ ಬಿಡ್ರಪ್ಪ ಟಾರ್ಚರ್ ಕೊಡ್ಬೇಡಿ ಅಂತ ಪರಿಪರಿಯಾಗಿ ಬೇಡಿಕೊಂಡ ಕಿರಿಕ್ ಕೀರ್ತಿ ಅಷ್ಟಕ್ಕೂ ಆಗಿದ್ದೇನು ನೋಡಿ.

 

ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಇರೋಕೆ ಬಿಡಿ ಹತ್ತು ವರ್ಷ ಸಂಸಾರ ಮಾಡಿದವರಿಗೆ ಹೇಗೆ ನಿಭಾಯಿಸಬೇಕು ಅನ್ನೋದು ಗೊತ್ತಿದೆ, ಈ ರೀತಿ ಯಾಕೆ ಟಾರ್ಚರ್ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡುವವರ ವಿರುದ್ಧ ಕಿಡಿಕಾರಿದ ಕಿರಿಕ್ ಕೀರ್ತಿ. ಕಳೆದು ಒಂದು ವಾರದಿಂದ ಸೋಶಿಯಲ್ ಮೀಡಿಯಾದಲೆಲ್ಲಾ ಕಿರಿಕ್ ಕೀರ್ತಿ ಮತ್ತು ಅರ್ಪಿತಾಳ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎನ್ನುವ ಸುದ್ದಿ ಕುರಿತ ಸಾಕಷ್ಟು ಪೋಸ್ಟ್ಗಳು ಹಾಗೂ ವಿಡಿಯೋಗಳು ಹರಿದಾಡುತ್ತಿವೆ. ಮುಂದುವರಿದು ಅವರ ದಾಂಪತ್ಯ ಮುರಿದು ಬಿದ್ದಿದೆ ಎನ್ನುವ ಹಂತಕ್ಕೆ ಈ ವಿಚಾರಗಳು ಚರ್ಚೆ ಆಗುತ್ತಿದೆ.

ಈಗ ಇದೆಲ್ಲದಕ್ಕೂ ಕೂಡ ಕ್ಲಾರಿಟಿ ಕೊಡಲು ಲೈವ್ ಬಂದ ಕಿರಿಕ್ ಕೀರ್ತಿಯವರು ನೇರವಾಗಿ ತಮ್ಮ ವಿಷಯದ ಬಗ್ಗೆ ಪೋಸ್ಟ್ ಹಾಕುವವರು ಹಾಗೂ ಕಮೆಂಟ್ ಮಾಡುವವರ ಬಗ್ಗೆ ಮೊದಲು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ದಯವಿಟ್ಟು ನಮ್ಮನ್ನು ಬದುಕಲು ಬಿಡಿ ಯಾಕೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ವಿಷಯ ಚರ್ಚೆ ಮಾಡಿ ಟಾರ್ಚರ್ ಕೊಡುತ್ತಿದ್ದೀರಾ, ನಿಮಗೆ ನನ್ನ ಸೈದ್ದಾಂತಿಕ ನಿಲುವುಗಳನ್ನು ಎದುರಿಸಲಾರದವರು ಅಲ್ಲಿ ವಿರೋಧಿಸಲು ಸಾಧ್ಯವಾಗಲಿಲ್ಲ ಎಂದು ಈ ರೀತಿ ವೈಯಕ್ತಿಕ ವಿಚಾರವನ್ನು ಎಳೆದು ಕುಗ್ಗಿಸಲು ಪ್ರಯತ್ನಿಸುತ್ತಿದ್ದೀರಾ ಅಷ್ಟೇ.

ಹಾಗೆ ನನ್ನ ಲೈಫಲ್ಲಿ ಏನಾಗ್ತಿದೆ ನನಗೆ ಗೊತ್ತಿಲ್ಲ, ಇನ್ನು ನನ್ನ ಕುಟುಂಬವೇ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ನೀವು ನೀವೇ ಊಹಿಸಿಕೊಂಡು ಏನೇನೋ ಕಲ್ಪನೆ ಮಾಡಿಕೊಂಡು ಮನಸ್ಸಿಗೆ ಬಂದಂತೆ ಪೋಸ್ಟ್ಗಳನ್ನು ಹಾಕುತ್ತಿದ್ದೀರಾ, ಕಾಮೆಂಟ್ಸ್ಗಳನ್ನು ಮಾಡುತ್ತಿದ್ದೀರಲ್ಲಾ, ಆ ಕಮೆಂಟ್ ಹಾಕುವವರಲ್ಲಿ ಎಷ್ಟೋ ಜನಕ್ಕೆ ಅವರ ಪ್ರೊಫೈಲ್ ಫೋಟೋ ಹಾಕುವ ಯೋಗ್ಯತೆಯೂ ಇಲ್ಲ ಆ ರೀತಿ ಎಲ್ಲೋ ಇದ್ಕೊಂಡು ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಹಾಕಿ ಅವರ ಕುಟುಂಬದ ಹೊಟ್ಟೆ ಯಾಕೆ ಉರಿಸುತ್ತೀರಾ.

ಅವಳು ಹೀಗಂತೆ, ಅವನು ಹಾಗಂತೆ ಹೀಗೆಲ್ಲ ಬರೆಯುತ್ತೀರಲ್ಲ ನಿಮಗೆ ಯಾರಿಗೂ ಫ್ಯಾಮಿಲಿ ಇಲ್ವಾ, ನಿಮ್ಮ ಅಕ್ಕ ತಂಗಿ ಅಣ್ಣ ತಮ್ಮ ಅಂದುಕೊಂಡು ನಮ್ಮ ವಿಚಾರವನ್ನು ನಮಗೆ ಬಿಡಿ. ನಾವು ಹಾಕಿದ ಪೋಸ್ಟ್ ಗಳ ಆಧಾರದ ಮೇಲೆ ನಮ್ಮ ಬದುಕನ್ನು ಹೀಗೆ ಆಗಿದೆ ಎಂದು ಊಹೆ ಮಾಡುತ್ತೀರಲ್ಲ ಅದು ಹೇಗೆ ಸಾಧ್ಯ? ನೀವೇನಾದರೂ ಬಂದು ನಮ್ಮ ಮನೆಯಲ್ಲಿ ವಾಸ ಮಾಡಿದ್ದೀರಾ ಅಥವಾ ನಾವೇನಾದ್ರೂ ಬಂದು ನಿಮ್ಮ ಹತ್ತಿರ ಹೇಳಿಕೊಂಡಿದ್ದಿವಾ, ಒಂದು ವೇಳೆ ಎಲ್ಲವನ್ನು ನಿಮಗೆ ಹೇಳಬೇಕಾದ ಸಮಯ ಸಂದರ್ಭ ಬಂದಾಗ ನಾವೇ ಅದರ ಬಗ್ಗೆ ಬಂದು ಕ್ಲಾರಿಟಿ ಕೊಡುತ್ತೇವೆ.

ಅಲ್ಲಿಯವರೆಗೂ ನಿಮ್ಮ ಪಾಡಿಗೆ ನಿಮ್ಮ ಕೆಲಸ ನೋಡಿಕೊಂಡು ಇರಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುತ್ತದೆ ಅದನ್ನು ಬಿಟ್ಟು ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರುತ್ತೀರ, ಎಲ್ಲರ ಕುಟುಂಬದಲ್ಲಿ ಎಲ್ಲರ ಜೀವನದಲ್ಲಿ ಏರುಪೇರು ಆಗುವುದು ಸಹಜ. ಅದನ್ನು ನಾವು ಅನುಸರಿಸಿಕೊಳ್ಳುತ್ತೇವೆ ಅಥವಾ ಅನುಭವಿಸುತ್ತೇವೆ. ನನಗೆ ಏಳು ವರ್ಷದ ಮಗನಿದ್ದಾನೆ 62 ವರ್ಷದ ತಾಯಿ ಇದ್ದಾರೆ, ಎಲ್ಲರೂ ಇದನ್ನು ಗಮನಿಸುತ್ತಿರುತ್ತಾರೆ ಅವರ ಮನಸ್ಸಿನಲ್ಲಿ ಯಾವ ರೀತಿ ಪರಿಣಾಮ ಬೀರಬಹುದು.

ಇಲ್ಲಿ ಚಿಕಿತ್ಸೆ ತೆಗೆದುಕೊಳ್ಳುವವರು, ಡಿಪ್ರೇಶನ್ ಅಲ್ಲಿ ಇರುವವರು ಎಲ್ಲರೂ ಇರುತ್ತಾರೆ ಸ್ವಲ್ಪ ನಿಮ್ಮ ಕಮೆಂಟ್ಗಳ ಮೇಲೆ ಗಮನ ಇರಲಿ ನಿಮ್ಮ. ಬದುಕು ನೀವು ನೆಟ್ಟಗೆ ನೋಡಿಕೊಳ್ಳಿ. ನನ್ನ ಜೀವನದಲ್ಲಿ ಆಗಿರುವಷ್ಟು ಹೋರಾಟ ಅಥವಾ ಈಗ ನಾನು ಇರುವ ಪರಿಸ್ಥಿತಿಯಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನೀವೆಲ್ಲಾ ಏನಾಗುತ್ತಿದ್ದೀರೋ ಗೊತ್ತಿಲ್ಲ ನಾನಿದನ್ನೆಲ್ಲ ಬ್ಯಾಲೆನ್ಸ್ ಮಾಡುತ್ತಿದ್ದೇನೆ ಎಂದರೆ ನಾನು ಸರಿಯಾದ ದಾರಿಯಲ್ಲಿ ಇದ್ದೇನೆ ಎಂದು ಅರ್ಥ ಇತ್ಯಾದಿ ನಡೆಗಳನ್ನು ಬಹಳ ಗಂಭೀರವಾಗಿ ಕೋಪದಿಂದ ನುಡಿದಿದ್ದಾರೆ.

ಮಾತೃಶ್ರೀ ಯೋಜನೆಯ ಮಕ್ಕಳಿರುವ ಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ 6000 ಸಹಾಯಧನ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.

 

ಕರ್ನಾಟಕ ಮಾತೃಶ್ರೀ ಯೋಜನೆ ಮೂಲಕ ಮಹಿಳೆಯರು 6000ರೂ ಧನ ಸಹಾಯವನ್ನು ಸರ್ಕಾರದಿಂದ ಪಡೆಯಬಹುದು. ಈಗಾಗಲೇ ಕರ್ನಾಟಕ ಸರ್ಕಾರವು ನಾನಾ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರಿಗೆ ನೆರವಾಗುತ್ತಿದೆ. ಇಂತಹ ಯೋಜನೆಗಳಲ್ಲಿ ಒಂದಾದ ಮಾತೃಶ್ರೀ ಯೋಜನೆಯು ಕರ್ನಾಟಕ ರಾಜ್ಯದಲ್ಲಿರುವ ಗರ್ಭಿಣಿ ಮಹಿಳೆಯರಿಗಾಗಿ ಮಾಡಿರುವ ಹೊಸ ಯೋಜನೆ ಆಗಿದೆ. ಈ ಯೋಜನೆ ಮೂಲಕ ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಮಾಡಲಿದೆ.

ಮಾತೃಶ್ರೀ ಯೋಜನೆ ಗರ್ಭಿಣಿ ಮಹಿಳೆಯರಿಗೆ ಗರ್ಭಧಾರಣೆಯ ಸಹಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಫಲಾನುಭವಿಗಳಾಗಲು ಬೇಕಾಗಿರುವ ದಾಖಲೆಗಳು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ವಿಧಾನ ಇತ್ಯಾದಿ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ.

ಕರ್ನಾಟಕ ಮಾತೃಶ್ರೀ ಯೋಜನೆ 2023 ಕುರಿತ ಮಾಹಿತಿ ಇದಾಗಿದೆ. ಕರ್ನಾಟಕ ಮಾತೃಶ್ರೀ ಯೋಜನೆಯ ಗುರಿಯು ಗರ್ಭಿಣಿ ಸ್ತ್ರೀಯ ಆರೋಗ್ಯವನ್ನು ಉತ್ತೇಜಿಸುವುದಾಗಿದೆ. ಇದು ತಾಯಂದಿರು ಮತ್ತು ಅವರ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಕಾರ್ಯಕ್ರಮದ ಯೋಜನೆ ಅಡಿ ಪ್ರತಿ ಊಟದ ಬೆಲೆ ಸುಮಾರು 21 ರೂಪಾಯಿಗಳು, ಗರ್ಭಿಣಿಯರಿಗೆ ಒಟ್ಟು 15 ತಿಂಗಳವರೆಗೆ ಊಟ ಸರಬರಾಜು ಮಾಡಲಾಗುವುದು.

ಗರ್ಭಧಾರಣೆಯ ಪ್ರಾರಂಭದಲ್ಲಿ ಮತ್ತು ಮಗುವಿನ ಜನನದ ನಂತರ ಆರು ತಿಂಗಳವರೆಗೆ ಇದು ಮುಂದುವರೆಯುತ್ತದೆ. ಗರ್ಭಿಣಿ ಸ್ತ್ರೀಗೆ ಗರ್ಭಧಾರಣೆಯ 7ನೇ 8ನೇ ಮತ್ತು 9ನೇ ತಿಂಗಳಿನಲ್ಲಿ ಪ್ರತಿ ತಿಂಗಳಿಗೆ ಒಂದು ಸಾವಿರ ಮತ್ತು ಜನಿಸಿದ ನಂತರ ಪ್ರಥಮ ಮೂರು ತಿಂಗಳಲ್ಲಿ ಪ್ರತಿ ತಿಂಗಳಿಗೆ ತಲಾ ಒಂದೊಂದು ಸಾವಿರ ಗಳನ್ನು ಮಾತೃಶ್ರೀ ಯೋಜನೆಯ ಅಡಿ ಸಹಾಯಧನ ರೂಪದ ಹಣವಾಗಿ ಸರ್ಕಾರವು ನೀಡುತ್ತದೆ.

ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಪೂರ್ವದ ಮೂರು ತಿಂಗಳು ಮತ್ತು ಹಾಲುಣಿಸುವ ತಾಯಂದಿರಿಗೆ ಹೆರಿಗೆ ನಂತರದ ಮೂರು ತಿಂಗಳಲ್ಲಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಒಟ್ಟು 6,000 ರೂಗಳು ಸರ್ಕಾರದ ಕಡೆಯಿಂದ ವರ್ಗಾವಣೆ ಆಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ನಿರ್ಮಿಸಿರುವ ಈ ಮಾತೃಶ್ರೀ ಯೋಜನೆಯ ಫಲಾನುಭವಿಗಳಾಗಲು ಕೆಲ ದಾಖಲೆಗಳನ್ನು ನೀಡಬೇಕಾಗಿದೆ.

ಅರ್ಜಿದಾರರುಗಳು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. ಸರ್ಕಾರದಿಂದ ಪಡೆದಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಗರ್ಭಿಣಿ ಸ್ತ್ರೀಯರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗುವ ಅವಕಾಶ ಇರುತ್ತದೆ. ಈ ಮಾತೃಶ್ರೀ ಯೋಜನೆಯ ಈ ಉಪಕ್ರಮದಿಂದ ಹಣಕಾಸಿನ ನೆರವು ಕೇವಲ ಮೊದಲ ಎರಡು ಮಕ್ಕಳಿಗೆ ಮಾತ್ರ ಸಿಗಲಿದೆ.

ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಎಷ್ಟೋ ಹೆಣ್ಣು ಮಕ್ಕಳಿಗೆ ಪೌಷ್ಟಿಕಾಂಶ ಯುಕ್ತ ಆಹಾರ ಆ ಸಮಯದಲ್ಲಿ ಪಡೆದುಕೊಳ್ಳಲು ಈ ಯೋಜನೆ ಹಣ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿರುವವರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆ ಸಮಯದ ಅವರ ಅನುಕೂಲತೆಗೆ ಈ ಹಣ ಉಪಯೋಗಕ್ಕೆ ಬರುತ್ತದೆ.

ಅದೇ ಉದ್ದೇಶದಿಂದ ಕೂಡ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿದ ಗರ್ಭಿಣಿ ಸ್ತ್ರೀಯರಿಗೆ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ.ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಈ ಯೋಜನೆಯ ಅನುಕೂಲತೆಯ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಮಾಡಿ.

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಕೇವಲ 2 ನಿಮಿಷದಲ್ಲಿ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡುವ ವಿಧಾ‌ನ.!

 

ಸ್ನೇಹಿತರೆ ಇಂದು ನಮ್ಮ ರಾಜ್ಯ ಹಾಗೂ ದೇಶದ ಜನತೆಗೆ ಬಹಳ ಉಪಯೋಗವಾಗುವ ಮಾಹಿತಿಯೊಂದನ್ನು ನಿಮ್ಮ ಬಳಿ ತಂದಿದ್ದೇವೆ, ಹೌದು ಸ್ನೇಹಿತರೆ ಇಂದಿನ ಪುಟದಲ್ಲಿ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ತಿಳಿಸಲಿದ್ದೇವೆ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮಧ್ಯಮ ವರ್ಗದವರು ಹಾಗೂ ಕಡು ಬಡವರೇ ಇದ್ದಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹಳ್ಳಿ ಜನತೆ ಹೆಚ್ಚು, ಸದ್ಯ ನಮ್ಮ ಭಾರತ ದೇಶದ ಜನತೆಗೆ ಪಡಿತರ ಚೀಟಿ ಒಂದು ದೊಡ್ಡ ಹಕ್ಕಾಗಿದೆ ಎಂದರೆ ತಪ್ಪಾಗುವುದಿಲ್ಲ.

ನಮ್ಮ ದೇಶದಲ್ಲಿ ಅನಕ್ಷರಸ್ಥರು ಕೂಡ ಸ್ವಲ್ಪ ಹೆಚ್ಚಾಗಿ ಇರುವುದರಿಂದ ಪಡಿತರ ಚೀಟಿಯನ್ನು ಹೇಗೆ ಅಪ್ಡೇಟ್ ಮಾಡಬೇಕೆಂದು ತಿಳಿದಿಲ್ಲ ಅದರಲ್ಲೂ ಈ ಕೆಲಸಕ್ಕಾಗಿ ಹೆಚ್ಚು ದಿನಗಳು ತಾಲೂಕು ಪಂಚಾಯಿತಿಗಳು ಹಾಗೂ ಬೆಂಗಳೂರು ದಿನವೂ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಅಲ್ಲಿದಾಡುವವರೆ ಹೆಚ್ಚು. ಇಂತಹ ಜನರಿಗೆ ನಮ್ಮಿಂದ ಪುಟ್ಟ ಸಹಾಯ ಎಂದರೆ ತಪ್ಪಾಗದು ಸ್ನೇಹಿತರೆ ಬನ್ನಿ ಅಂತವರಿಗೆ ನಮ್ಮ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿಕೊಂಡು ಇದನ್ನು ಮರುಬಳಕೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದೇವೆ.

ಈ ಪುಟದಲ್ಲಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಇತ್ತೀಚಿಗೆ ನರೇಂದ್ರ ಮೋದಿಯವರು ಏಕ ದೇಶ ಏಕ ಪಡಿತರ ಚೀಟಿ ಎಂದು ಘೋಷಣೆ ನೀಡಿ ದೇಶದ ಎಲ್ಲಾ ಕಡೆ ಒಂದೇ ತರಹದ ಪಡಿತರ ಚೀಟಿಯನ್ನು ಚಲಾಯಿಸಿದ್ದಾರೆ ಹಾಗಾಗಿ ಅಳೆಯ ರೇಷನ್ ಕಾರ್ಡ್ ಗಳ ನಂಬರ್ ಬದಲಾಗಿ ಹೊಸದಾಗಿ ನಮೂದೆಯಾಗಿದೆ. ಇನ್ನೂ ಈ ಹೊಸದಾದ ಪಡಿತರ ಚೀಟಿಯನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು.

ಹಾಗೂ ಇದರಲ್ಲಿ ಬರುವಂತಹ ಪದಗಳನ್ನು ಅಳಿಸಿ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಲಿದ್ದೇವೆ. ಮೋದಲ್ನೆಯದಾಗಿ ahaara.kar.nic.in ಎಂಬ ವೆಬ್ಸೈಟ್ಗೆ ಬೇಟಿ ನೀಡಬೇಕು. ಅದರಲ್ಲಿ ಈ ಸೇವೆಗಳು ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು.ಅದರಲ್ಲಿ ಇ ಸ್ಥಿತಿ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.ನಂತರ ಹೊಸ ಅಥವಾ ಹಾಲಿ ಪಡಿತರ ಚೀಟಿಯ ಮೇಲೆ ಒತ್ತಿ ಅದರಲ್ಲಿ ನಿಮ್ಮ ಜಿಲ್ಲೆಯ ಮೇಲೆ ಒತ್ತಿ ನಂತರ ಒಂದು ಹೊಸ ಪೇಜ್ ಬರುತ್ತದೆ.

ಅದರಲ್ಲಿ ಪಡಿತರ ಚೀಟಿಯ ವಿವರ ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಇದಾದ ನಂತರ ಇನ್ನೊಂದು ಪಿಸ್ತರು ಅದರಲ್ಲಿ ವಿತೌಟ್ o t p ವಿತ್ OTP ಎಂಬ ಆಯ್ಕೆಗಳು ಕಾಣುತ್ತದೆ ಅದರಲ್ಲಿ ನಾವು ವಿತ್ o t p ಆಯ್ದುಕೊಂಡು ನಾವು ಲಿಂಕ್ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ o t p ಬರುತ್ತದೆ. ಆ ರೇಷನ್ ಕಾರ್ಡಿನ ಸಂಖ್ಯಾ ಮೇಲೆ ಒತ್ತಿದರೆ ನಿಮಗೆ ಹೊಸ ರೇಷನ್ ಕಾರ್ಡ್ ವಿವರವು ದೊರೆಯುತ್ತದೆ.

ಒಂದು ಕಡೆ ಆ ನಂಬರ್ ನನ್ನು ಬರೆದುಕೊಂಡು ಮತ್ತೆ ಹಳೆ ರೇಷನ್ ಕಾರ್ಡ್ ಹಾಕಿದ ಜಾಗದಲ್ಲಿ ಹೊಸ ಪಡಿತರ ಚೀಟಿಯ ನಂಬರ್ ಹಾಕಬೇಕು. ಆಗ ಅಲ್ಲಿ ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರು ಬರುತ್ತದೆ ಅಲ್ಲಿ ಯಾರದಾದರೂ ಹೆಸರಿನ ಮೇಲೆ ಒತ್ತಿದರೆ ಅವರ ಮೊಬೈಲ್ ಸಂಖ್ಯೆಗೆ o t p ಹೋಗುತ್ತದೆ. ಇನ್ನೂ o t p ಅನ್ನು ಹಾಕಿದರೆ ನಿಮ್ಮ ಪಡಿತರ ಚೀಟಿಯ ವಿವರವೂ ಬರುತ್ತದೆ. ಇದನ್ನು ಈಗ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.

 

ಬಹುಭಾಷ ನಟಿ ಪವಿತ್ರ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ಮತ್ತು ಹೆಸರಾಂತ ನಿರ್ದೇಶಕಿ ವಿಜಯ ನಿರ್ಮಲ ಅವರ ಹಿರಿಯ ಮಗ ನರೇಶ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದವು. ಕೆಲ ದಿನಗಳಿಗಂತೂ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಇದೇ ಹಾಟ್ ಟಾಪಿಕ್ ಆಗಿತ್ತು. ನಂತರ ಮೈಸೂರಿನಲ್ಲಿ ಹೋಟೆಲ್ ರೂಮ್ನಲ್ಲಿ ನರೇಶ್ ಮೂರನೇ ಪತ್ನಿ ರಮ್ಯ ಬಂದು ಮಾಡಿದ ಹೈಡ್ರಾಮ ಎಪಿಸೋಡ್ ಗಟ್ಟಲೇ ಪ್ರಸಾರವಾಗಿದ್ದವು.

ಇಷ್ಟಾದ ಬಳಿಕ ಎಲ್ಲೂ ಸದ್ದಿಲ್ಲದೆ ಇದ್ದ ಈ ಇಬ್ಬರ ಜೋಡಿ ಈ ವರ್ಷ 2023 ರನ್ನು ಹೊಸ ರೀತಿ ಆರಂಭಿಸಿ ತಾವಿಬ್ಬರೂ ಸದ್ಯದಲ್ಲೇ ಮದುವೆ ಮೂಲಕ ಒಂದಾಗಲಿದ್ದೇವೆ ಎನ್ನುವ ಸೂಚನೆಯನ್ನು ಕೂಡ ಕೊಟ್ಟು ಪ್ರೀ ವೆಡ್ ಶೂಟ್ ರೀತಿಯ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಇಂದು ಇದಕ್ಕಿದ್ದಂತೇ ಸೋಶಿಯಲ್ ಮೀಡಿಯಾದಲ್ಲೆಲ್ಲಾ ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಮದುವೆ ಆಗಿರುವ ಹೊಸ ವಿಡಿಯೋಗಳು ಸದ್ದು ಮಾಡುತ್ತಿವೆ.

ಇದು ಯಾವುದೋ ಸಿನಿಮಾದ ಶೂಟಿಂಗ್ ಇರಬಹುದಾ ಅಥವಾ ನಿಜವಾದ ಮದುವೆಯ ಎನ್ನುವಷ್ಟರ ಮಟ್ಟಿಗೆ ಮದುವೆಯ ಕ್ಷಣಗಳನ್ನು ಅದ್ಭುತವಾಗಿ ಸೆರಿ ಹಿಡಿಯಲಾಗಿದ್ದು, ಶಾಸ್ತ್ರೋಕ್ತವಾಗಿ ಹಸೆಮಣೆ ಮೇಲೆ ಇಬ್ಬರು ಕಂಕಣ ಕಟ್ಟಿಕೊಂಡು, ಕೈ ಕೈ ಹಿಡಿದು ಶಾಸ್ತ್ರ ಮಾಡುತ್ತಿರುವ ಮತ್ತು ಸಪ್ತಪದಿ ತುಳಿಯುತ್ತಿರುವ ಕ್ಷಣಗಳು ಸೇರಿದಂತೆ ಮದುವೆ ಝಲಕ್ ತೋರಿರುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಇಂದು ತೆಲುಗು ನಿರ್ಮಾಪಕ ಮತ್ತು ನಟ ನರೇಶ್ ಅವರೇ, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಸಂಚಲವನ್ನು ಸೃಷ್ಟಿ ಮಾಡಿದ್ದಾರೆ ಇಷ್ಟಾಗಿದೆ ತಡ ಇದೇ ಇಂದಿನ ಟ್ರೆಂಡಿಂಗ್ ಸುದ್ದಿ ಆಗಿ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ ಬದುಕಿನ ಅರ್ಧಕ್ಕಿಂತಲೂ ಹೆಚ್ಚಿನ ಜೀವನ ಸವೆಸಿರುವ ಈ ಜೋಡಿಗಳು ಈಗ ಮದುವೆ ಆಗಲು ಮಾಡಿರುವ ನಿರ್ಧಾರ ಎಲ್ಲರಿಗೂ ಆಶ್ಚರ್ಯ ತರದೇ ಇರಲಾರದು.

ಇದಕ್ಕಿಂತ ಆಶ್ಚರ್ಯ ಆಗುವ ವಿಷಯ ಏನೆಂದರೆ ಈಗ ಮದುವೆ ಆಗುತ್ತಿರುವ ಈ ಮಧುಮಗ ನರೇಶ್ ಅವರಿಗೆ ಇದು ನಾಲ್ಕನೇ ಮದುವೆ ಆಗಿದೆ, ಜೊತೆಗೆ ಕನ್ನಡ ಮೂಲದಿಂದ ತನ್ನ ಕೆರಿಯರ್ ಶುರು ಮಾಡಿ ಈಗ ಪರಭಾಷೆಗಳಲ್ಲಿ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ಕನ್ನಡದ ನಟಿ ಪವಿತ್ರ ಲೋಕೇಶ್ ಅವರಿಗೆ ಇದು ಎರಡನೇ ವಿವಾಹ ಆಗಿದೆ. ಇವರಿಬ್ಬರಿಗೂ ವಿವಾಹಕ್ಕೆ ಹೊರತಾಗಿ ಸ್ನೇಹಕ್ಕೂ ಮಿಗಿಲಾಗಿ ಸಂಬಂಧ ಇದೆ ಎಂದು ಕಳೆದ ವರ್ಷ ನರೇಶ್ ಮೂರನೇ ಪತ್ನಿ ರಮ್ಯ ಮೀಡಿಯಾಗಳ ಮುಂದೆ ಬಂದು ಬಹಿರಂಗವಾಗಿ ಎಲ್ಲವನ್ನು ವರದಿ ಒಪ್ಪಿಸಿದ್ದರು.

ಆ ಅಕ್ರಮ ಸಂಬಂಧದ ಬಗ್ಗೆ ತಮ್ಮ ಆ.ಕ್ರೋ.ಶ ಹೊರಹಾಕಿದ್ದರು. ಈಗ ಎಲ್ಲರ ಬಾಯಿ ಮುಚ್ಚಿಸಲೋ ಅಥವಾ ಸ್ವ ಇಚ್ಛೆಯಿಂದಲೋ ಸತಿಪತಿಗಳಾಗೆ ಬಾಳಲು ಹಸೆಮಣೆ ಹತ್ತಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋ ಅಲ್ಲಿ ಆಪ್ತರ ಸ್ನೇಹಿತರು ಮತ್ತು ಕುಟುಂಬಸ್ಥರಸ್ತೆಗಷ್ಟೇ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕನ್ನಡ ಮತ್ತು ತೆಲುಗು ಇಂಡಸ್ಟ್ರಿಯನ್ನೇ ಶೇಕ್ ಮಾಡಿದ್ದ ಈ ಜೋಡಿಯ ಸುದ್ದಿ ಈಗ ಮದುವೆ ಆಗುವ ಮೂಲಕ ಮತ್ತೊಂದು ರೀತಿಯ ಶಾಕ್ ಕೂಡ ನೀಡಿದೆ. ಇವರಿಬ್ಬರ ಮದುವೆ ಬಗ್ಗೆ ನೀವು ಸಹ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ.

ಯಾವುದೇ ಶ್ಯೂರಿಟಿ ಇಲ್ಲದೇ ಎಲ್ಲಾ ಸಾರ್ವಜನಿಕರಿಗೂ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯ ಕೇಂದ್ರ ಸರ್ಕಾರದಿಂದ ಹೋಸ ಯೋಜನೆ ಘೋಷಣೆ. ಈಗಲೇ ಅರ್ಜಿ ಸಲ್ಲಿಸಿ.

 

ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ.

ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಮುದ್ರಾ ಸಾಲ ಯೋಜನೆಯಡಿ ಸಣ್ಣ ವ್ಯಾಪಾರಿಗಳು ರೂ.10 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಯೋಜನೆಯಡಿ ಸಾಲಗಳನ್ನು ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, MFI ಗಳು ಮತ್ತು NBFC ಗಳ ಮೂಲಕ ಒದಗಿಸಲಾಗುತ್ತದೆ.

ಮುದ್ರಾ ಸಾಲ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಪ್ರಕ್ರಿಯೆ :
ಈ ಯೋಜನೆಯಡಿ ಸಾಲ‌ ಪಡೆಯಲಿಚ್ಚಿಸುವವರು ತಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಸಾಲ ಯೋಜನೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆ ನಮೂನೆಯೊಂದಿಗೆ ಸಾಲ ಪಡೆಯಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಹ ಸಲ್ಲಿಸಬೇಕು.
ಈ ಯೋಜನೆಯ ಮೂಲಕ ಸಾಲ ಪಡೆಯಲು ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದ್ದು ಕೆಳಗೆ ವಿವರಿಸಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು, ಮೊದಲು ಅಧಿಕೃತ ವೆಬ್ಸೈಟ್ udyamimitra.in ಗೆ ಭೇಟಿ ನೀಡಿ. ಅದರ ಮುಖಪುಟದಲ್ಲಿ ಮುದ್ರಾ ಲೋನ್ ಗೆ ಅನ್ವಯಿಸುವ ಲಿಂಕ್ ಅನ್ನು ಒತ್ತಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ. ನಂತರ ನಿಮ್ಮ ಫೋನ್ ಗೆ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್’ನ್ನ ಎಸ್ ಎಂ‌ಎಸ್ ಮೂಲಕ ಕಳುಹಿಸಲಾಗುತ್ತದೆ. ಇದರ ನಂತರ ಅರ್ಜಿ ನಮೂನೆಯನ್ನ ಸಂಪೂರ್ಣವಾಗಿ ಭರ್ತಿ ಮಾಡಿ. ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ ನಂತರ ಕ್ಯಾಪ್ಚಾ ನಮೂದಿಸಿ ಮತ್ತು ಸಲ್ಲಿಸಿ ನಿಮ್ಮ ಅರ್ಜಿ ನಮೂನೆಯನ್ನು ಸ್ವೀಕರಿಸಲಾಗುತ್ತದೆ.

ಸಾಲ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು.!

ಮೊದಲನೆಯಾಗಿ ಸಾಲ ಪಡೆಯಲು ಇಚ್ಚಿಸುವವರು ಸಂಪೂರ್ಣ ವ್ಯಾಪಾರ ಯೋಜನೆಯನ್ನು ಹೊಂದಿರಬೇಕು. ಇದರ ಜೊತೆಗೆ‌ ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಯಾವುದೇ ಇತರ ಅಗತ್ಯವಿರುವ ಯುಟಿಲಿಟಿ ಬಿಲ್‌, ನೀವು SC, ST ಅಥವಾ OBC ವರ್ಗಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕು. ಇದರೊಂದಿಗೆ ಈ ಸಾಲ ಪಡೆಯಲು 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ತಮ್ಮ ಆದಾಯ ಪ್ರಮಾಣಪತ್ರವನ್ನು ಸಹ ನೀಡಬೇಕು. ಅಲ್ಲದೆ ನಿಮ್ಮ ವ್ಯಾಪಾರ, ವಿಳಾಸ, ವ್ಯಾಪಾರದ ಯಾವುದೇ ಅಗತ್ಯ ಪುರಾವೆಗಳನ್ನು ನೀವು ಒದಗಿಸಬೇಕು.

ಮುದ್ರಾ ಸಾಲದ ಮೇಲಿನ ಬಡ್ಡಿ ದರಗಳ ವಿವರ-
ಈ ಯೋಜನೆಯಡಿ ಸಾಲ‌ ಪಡೆಯಲು ಯಾವುದೇ ಸ್ಥಿರ ಬಡ್ಡಿ ದರವಿಲ್ಲ. ಸಾಮಾನ್ಯವಾಗಿ ಕನಿಷ್ಠ ಬಡ್ಡಿ ದರವು 12% ಆಗಿದೆ. ಮುದ್ರಾ ಸಾಲ ಯೋಜನೆಯಡಿ ಸಣ್ಣ ವ್ಯಾಪಾರವನ್ಮು ಪ್ರಾರಂಭಿಸಲು ಗರಿಷ್ಠ 10 ಲಕ್ಷದವರೆಗೆ ಸುಲಭವಾಗಿ ಸಾಲವನ್ನ ಪಡೆಯಬಹುದಾಗಿದ್ದು ಎರವಲು ಪಡೆದ ಹಣವು ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕಾಗಿರುತ್ತದೆ.

ಸ್ವಂತ ಊರಿನಲ್ಲಿಯೇ ಸರ್ಕಾರಿ ಹುದ್ದೆ ಮಾಡುವ ಭಾಗ್ಯ, ಕೇವಲ 10ನೇ ತರಗತಿ ಪಾಸ್ ಆಗಿದ್ರೆ ಸಾಕು ಮಾಹಿತಿಗಾಗಿ ಇಲ್ಲಿ ನೋಡಿ.

 

ದೇಶದಾದ್ಯಂತ ಇರುವ ಎಲ್ಲ ವಿದ್ಯಾವಂತ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಏಕೆಂದರೆ ಈ ವರ್ಷ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಜಾರಿಗೆ ಹೊಸ ಬಜೆಟ್ ಹೊರಡಿಸಿದ ಸಮಯದಲ್ಲಿ ಈ ರೀತಿ ಹೇಳಿದ್ದರು. ನಮ್ಮ ದೇಶದಾದ್ಯಂತ ಇರುವ ಎಲ್ಲ ಯುವಕ ಯುವತಿಯರಿಗೂ ಕೂಡ ಉದ್ಯೋಗ ಒದಗಿಸಲಾಗುವುದು. ನಮ್ಮ ದೇಶದ ಸ್ವಾವಲಂಬಿ ಭವಿಷ್ಯವನ್ನು ಸೃಷ್ಟಿಸಲು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಪ್ರಾರಂಭಿಸಲಾಗುತ್ತಿದೆ.

ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ 4.0 ದಾಖಲಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು. ಇದು ಆರಂಭವಾದ ನಂತರ ನೀವೆಲ್ಲರೂ ಈ ಯೋಜನೆಯಲ್ಲಿ ನೋಂದಾಯಿಸಿ ಕೊಳ್ಳಬಹುದು. ಮತ್ತು ನಿಮ್ಮ ಕೌಶಲ್ಯದ ಆಧಾರದ ಮೇಲೆ ಯಾವುದೇ ಕ್ಷೇತ್ರದಲ್ಲಿ ಉಚಿತ ತರಬೇತಿಯನ್ನು ಪಡೆಯುವ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆಯ 4ನೇ ಹಂತದಲ್ಲಿ ಲಕ್ಷಾಂತರ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡಲಾಗುವುದು.

ಮತ್ತು ತರಬೇತಿಯ ಸಮಯದಲ್ಲಿ ಜೀವನ, ಆಹಾರ, ಇತರ ವೆಚ್ಚಗಳಿಗಾಗಿ 8000ವರೆಗೆ ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೀವೆಲ್ಲರೂ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆ 4.0 ಆನ್ಲೈನ್ ಮಾಧ್ಯಮದ ಮೂಲಕ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿ ನೋಂದಣಿ ಆಗಿ ತರಬೇತಿ ಪಡೆದ ಲಕ್ಷಾಂತರ ಯುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉಚಿತ ತರಬೇತಿ ನೀಡಲಾಗುವುದು.

ಹಾಗೂ ತರಬೇತಿ ಪಡೆದ ನಂತರ ಪ್ರತಿ ಅಭ್ಯರ್ಥಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರ ಆಧಾರದ ಮೇಲೆ ನೀವು ಯಾವುದೇ ಕಂಪನಿಯಲ್ಲಿ ಕೆಲಸ ಪಡೆಯಬಹುದು. ಯಾಕೆಂದರೆ ಕೋರ್ಸಿನ ಅನುಸಾರವಾಗಿ ನಿಮ್ಮ ತರಬೇತಿಯ ಪ್ರಮಾಣ ಪತ್ರವನ್ನು ನೀಡಲಾಗಿರುತ್ತದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆಯಲ್ಲಿ ನಿಯಮಗಳಿವೆ ಅದರ ಪ್ರಕಾರ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿ ನೋಂದಾಯಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು.

ಶಾಲಾ ಮತ್ತು ಕಾಲೇಜು ಕಲಿತ ಅಭ್ಯರ್ಥಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಭಾರತ ಸರ್ಕಾರದಿಂದ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯ ವಯೋಮಾನವನ್ನು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 45 ವರ್ಷ ಎಂದು ನಿಗದಿಪಡಿಸಲಾಗಿದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿಯಲ್ಲಿ ನೋಂದಾಯಿಸಲಾದ ಪ್ರತಿಯೊಬ್ಬ ಅಭ್ಯರ್ಥಿಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೊಂದಿರಬೇಕು.

ಈ ಯೋಜನೆಗೆ ಯಾವುದೇ ನಿರುದ್ಯೋಗ ಯುವಕ ಯುವತಿ ಅಥವಾ ಆದಾಯ ಮೂಲ ಹೊಂದಿರದ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೊತೆ ಲಿಂಕ್ ಆದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆ ಪಾಸ್ ಪುಸ್ತಕ ಮೊಬೈಲ್ ನಂಬರ್ ಇಮೇಲ್ ಐಡಿ ಅರ್ಹತಾ ಪ್ರಮಾಣ ಪತ್ರ ಮತ್ತು ವಿಳಾಸ ಪುರಾವೆ ಇವು ಅಗತ್ಯ ದಾಖಲೆಗಳಾಗಿವೆ.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆಯ ನಾಲ್ಕನೇ ಹಂತದಲ್ಲಿ ನೋಂದಾಯಿಸಲು ಮೊದಲು ನೀವು ಅಧಿಕೃತ ವೆಬ್ಸೈಟ್ ಆದ ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಗೌರ್ಮೆಂಟ್ ಡಾಟ್ ಇನ್ ವೆಬ್ಸೈಟ್ಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಳ್ಳಿ. ಈ ವಿಚಾರವನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ.