Home Blog Page 263

ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?

ಫ್ಯಾನ್ಸ್ ಗೆ ವಿಶೇಷ ಮನವಿ ಮಾಡಿದ ಡಿ ಬಾಸ್

ಹೊಸಪೇಟೆಯ ಘಟನೆಯ ನಂತರ ದರ್ಶನ್ ಅವರು ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕೆಲವು ಗುಂಪುಗಳು ಮಾತನಾಡುತ್ತಿದ್ದವು. ಆದರೆ ಇದೀಗ ಆ ಎಲ್ಲಾ ಸುದ್ದಿಗಳನ್ನು ಸುಳ್ಳು ಮಾಡಲು ದರ್ಶನ್ ಅವರು ಲೈವ್ ಬಂದು ವಿಡಿಯೋ ಒಂದನ್ನು ಮಾಡಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಮೂರನೇ ಹಾಡು ಪುಷ್ಪವತಿ ಎಂಬ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲು ಇದೀಗ ಚಿತ್ರ ತಂಡ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ವಿಚಾರವನ್ನು ಮೊನೆಯಷ್ಟೇ ದರ್ಶನ್ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವ್ಯಕ್ತಪಡಿಸಿದ್ದರು.

ಇದಾದ ನಂತರ ಇಂದು ಸಂಜೆ ಲೈವ್ ಬಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಕ್ರಾಂತಿ ಸಿನಿಮಾದ ಮೊದಲ ಹಾಡು ಮೈಸೂರಿನ ಕೆ.ಆರ್ ಪೇಟೆಯಲ್ಲಿ ಬಿಡುಗಡೆ ಮಾಡಿದರು. ಇದಾದ ನಂತರ ಎರಡನೇ ಹಾಡು ಹೊಸಪೇಟೆಯಲ್ಲಿ ಬಿಡುಗಡೆ ಮಾಡಿದ್ದರು ಆದರೆ ಈ ಸಮಯದಲ್ಲಿ ದರ್ಶನ್ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆದರು. ಇದು ನಿಜಕ್ಕೂ ಕೂಡ ತುಂಬಾನೇ ನೋವಿನ ಸಂಗತಿ ಆದರೂ ಕೂಡ ದರ್ಶನ್ ಅವರು ದೊಡ್ಡವರಾಗಿ “ಪರವಾಗಿಲ್ಲ ಬಿಡು ಚಿನ್ನ” ಎಂಬ ಮಾತನ್ನು ಹೇಳುವ ಮೂಲಕ ಈ ಒಂದು ಘಟನೆಗೆ ಮುಕ್ತಾಯವನ್ನು ಹಾಡಿದರು. ಇದಾದ ನಂತರ ಸಾಕಷ್ಟು ಚರ್ಚೆ ವಿವಾದಗಳು ಎಲ್ಲವೂ ಕೂಡ ಏರ್ಪಟ್ಟವು ಆದರೆ ಇದು ಯಾವುದಕ್ಕೂ ದರ್ಶನ್ ತಲೆ ಕೆಡಿಸಿಕೊಳ್ಳಲಿಲ್ಲ.

“ಈ ಘಟನೆಯಿಂದ ನನಗಿಂತಲೂ ನನ್ನ ಸೆಲೆಬ್ರಿಟಿ ಗಳಿಗೆ ಹೆಚ್ಚು ನೋವಾಗಿದೆ, ನನ್ನ ಬೆನ್ನೆಲುಬಾಗಿ ನಿಂತ ಎಲ್ಲಾ ನನ್ನ ಸೆಲೆಬ್ರಿಟಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು ಅಂತ ಹೇಳಿದರು”. ವಿಶೇಷ ಏನೆಂದರೆ ಕಳೆದ ಐದು ವರ್ಷಗಳಿಂದಲೂ ಸುದೀಪ್ ಅವರ ಜೊತೆ ದರ್ಶನ್ ಅವರ ಟಚ್ ನಲ್ಲಿ ಇರಲಿಲ್ಲ, ಆದರೆ ಈ ಒಂದು ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಸಾಲುಗಳನ್ನು ಬರೆದುಕೊಂಡಿದ್ದರು. ದರ್ಶನ್ ಅವರು ಇದನ್ನು ನೋಡಿ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಕಿಚ್ಚ ಸುದೀಪ್ ಅವರಿಗೆ ಮೆಸೇಜ್ ಕೂಡ ಮಾಡಿದರು ಇವೆಲ್ಲವನ್ನು ನೋಡುತ್ತಿದ್ದರೆ ಒಂದು ರೀತಿಯಲ್ಲಿ ಇಂಡಸ್ಟ್ರಿಯಲ್ಲಿ ಇಬ್ಬರು ಮತ್ತೆ ಒಂದಾಗುವ ಸಾಧ್ಯತೆ ಇದೆ ಅಂತ ಹೇಳಬಹುದು.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಮೂರನೇ ಹಾಡು ಆದಂತಹ ಪುಷ್ಪವತಿ ಎಂಬ ಹಾಡನ್ನು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ‌. ಹಾಗಾಗಿ ದರ್ಶನ್ ಲೈವ್ ಬಂದು ತಮ್ಮ ಅಭಿಮಾನಿಗಳಲ್ಲಿ ಕ್ರಾಂತಿ ಸಿನಿಮಾದ ಮೂರನೇ ಹಾಡನ್ನು ಹುಬ್ಬಳ್ಳಿಯಲ್ಲಿ ನಾಳೆ ಸಂಜೆ 7 ಗಂಟೆಗೆ ಬಿಡುಗಡೆ ಮಾಡುತ್ತೇವೆ. ಅಭಿಮಾನಿಗಳ ಸಮ್ಮುಖದಲ್ಲಿ ಅಭಿಮಾನಿಯೊಬ್ಬರು ಈ ಹಾಡನ್ನು ಬಿಡುಗಡೆ ಮಾಡುತ್ತಾರೆ. ನಾನೊಬ್ಬ ನಟನಾಗಿ ಅಲ್ಲ ನಿರೂಪಕನಾಗಿ ನಿಮ್ಮ ಜೊತೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎಂದು ಹೇಳಿದ್ದಾರೆ ಹಾಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

ಆದರೆ ಅಭಿಮಾನಿಗಳದಂತೂ ಒಂದೇ ಮನವಿ ಹೊಸಪೇಟೆಯಲ್ಲಿ ಆದಂತಹ ಘಟನೆ ಯಾವುದೇ ಕಾರಣಕ್ಕೂ ಹುಬ್ಬಳ್ಳಿಯಲ್ಲಿ ನಡೆದೆ ಇದ್ದರೆ ಸಾಕು ಎಂದು ಕೇಳಿ ಕೊಳ್ಳುತ್ತಿದ್ದಾರೆ. ಒಂದು ವೇಳೆ ಹುಬ್ಬಳ್ಳಿಯಲು ಇಂತಹದ್ದೇ ಘಟನೆ ನಡೆದರೆ ನಿಜಕ್ಕೂ ಕೂಡ ದರ್ಶನ್ ವಿರುದ್ಧ ಯಾರೋ ಷಡ್ಯಂತರ ರೂಪಿಸುತ್ತಿದ್ದಾರೆ ಎಂಬುದು ಸಾಬೀತು ಆಗುತ್ತದೆ. ಅದೇನೇ ಆಗಲಿ ಎಲ್ಲಾ ಅವಮಾನ ಅಪಮಾನಗಳನ್ನು ಮೆಟ್ಟಿ ನಿಂತ ಈ ನಟನಿಗೆ ಅವರ ಅಭಿಮಾನಿಗಳು ಎಂದಿಗೂ ಕೈ ಬಿಡುವುದಿಲ್ಲ ಎಂಬುದಂತೂ ಸತ್ಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

ಮದುವೆ ಆದ್ಮೇಲೆ ಸಿನಿಮಾದಿಂದ ಕಣ್ಮರೆಯಾಗುತ್ತಾರೆ ಅಂತಾರೆ ನಿಜಾನಾ ಅಂದಿದ್ದಕ್ಕೆ ನಟಿ ಅದಿತಿ ಪ್ರಭುದೇವ್ ಹೇಳಿದ್ದೇನು ಗೊತ್ತಾ.?

60 ವರ್ಷ ಆದ್ರೂ ಮದುವೆ ಆಗಿಲ್ಲ ಅಂದ್ರೆ ಹೀರೋಯಿನ್ ರೋಲ್‌ ನೇ ಕೊಡ್ತೀರಾ.? ಸಂದರ್ಶನದಲ್ಲಿ ನಟಿ ಅದಿತಿ ಪ್ರಭುದೇವ ಕೇಳಿದ ಪ್ರಶ್ನೆಗೆ ದಂಗಾದ ರಿಪೋರ್ಟರ್.

ಸದ್ಯಕ್ಕೆ ಕನ್ನಡ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಬಿಜಿ ಇರುವ ನಟಿಯರ ಪೈಕಿ ಅದಿತಿ ಪ್ರಭುದೇವ ಅವರು ಕೂಡ ಒಬ್ಬರು ಅಂತಾನೇ ಹೇಳಬಹುದು. ಏಕೆಂದರೆ ಈ ವರ್ಷ ನಟಿ ಪ್ರಭುದೇವ್ ಅವರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇದಾದ ನಂತರ ನಟಿ ಅದಿತಿ ಪ್ರಭುದೇವ ಡಾಲಿ ಧನಂಜಯ್ ಅಭಿನಯದ ಜಾಮಾಲಿ ಗುಡ್ಡ ಎಂಬ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ ಈ ಸಿನಿಮಾ ಮುಂದಿನ ವಾರ ತೆರೆ ಕಾಣಲಿದೆ.

ಮದುವೆಯಾದ ಎರಡೇ ವಾರಕ್ಕೆ ನಟಿ ಅದಿತಿ ಪ್ರಭುದೇವ ಅವರು ಇದೀಗ ಜಾಮಾಲ್ಲಿ ಗುಡ್ಡ ಪ್ರಮೋಷನ್ ಕಾರ್ಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎಲ್ಲಾ ಕಡೆಯಲ್ಲೂ ಕೂಡ ಧನಂಜಯ್ ಅವರ ಜೊತೆ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ ಇದೇ ವೇಳೆಯಲ್ಲಿ ಸಂದರ್ಶನಗಾರರು ನಟಿ ಪ್ರಭುದೇವ ಅವರನ್ನು ಸಾಕಷ್ಟು ಪ್ರಶ್ನೆಗಳು ಕೇಳುತ್ತಾರೆ. ಆ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಮಾತ್ರ ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ, ಹೌದು ನಟಿ ಅದಿತಿ ಪ್ರಭುದೇವ ಅವರ ವೈಯಕ್ತಿಕ ಜೀವನ ಮತ್ತು ಸಿನೆಜೀವನ ಎರಡಕ್ಕೂ ಕೂಡ ಸಂಬಂಧ ಪಟ್ಟಂತಹ ಪ್ರಶ್ನೆ ಒಂದನ್ನು ಸಂದರ್ಶನಗಾರರು ಕೇಳಿದ್ದಾರೆ.

ಸಾಮಾನ್ಯವಾಗಿ ಮದುವೆಯಾದ ನಂತರ ಸಾಕಷ್ಟು ನಟಿಯರು ಸಿನಿಮಾದಿಂದ ದೂರ ಉಳಿಯುತ್ತಾರೆ ಅಥವಾ ತಮ್ಮ ಕುಟುಂಬ ಜೀವನ ಅಂತ ಸಾಕಷ್ಟು ಬ್ರೇಕ್ ಪಡೆಯುತ್ತಾರೆ ನೀವು ಹಾಗೆ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ನೇರವಾಗಿ ಅದಿತಿ ಪ್ರಭುದೇವ ಅವರು ಉತ್ತರ ಕೊಟ್ಟಿದ್ದಾರೆ ಮದುವೆಯಾದ ನಂತರ ನಟಿಸಬಾರದು ಎಂಬ ಪ್ರಮೇಯವೇನಿಲ್ಲ, ಅಷ್ಟೇ ಅಲ್ಲದೆ ಈಗ ಕಾಲ ಬದಲಾಗಿದೆ ವೈಯಕ್ತಿಕ ಜೀವನವೇ ಬೇರೆ ವೃತ್ತಿ ಜೀವನವೇ ಬೇರೆ ನಾನು ಮದುವೆಯಾಗಿರುವ ಹುಡುಗ ನನ್ನ ವೃತ್ತಿ ಜೀವನಕ್ಕೆ ಸಪೋರ್ಟ ಆಗಿ ನಿಲ್ಲುತ್ತಾರೆ.

ಹಾಗಾಗಿ ಮದುವೆಯಾದ ನಂತರ ನಾನು ಸಿನಿಮಾ ರಂಗದಿಂದ ದೂರ ಉಳಿಯುತ್ತೇನೆ ಎಂಬುದು ತಪ್ಪು ಕಲ್ಪನೆ ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿದ್ದೇನೆ. ನನ್ನ ಎಲ್ಲಾ ಕನಸುಗಳಿಗೂ ನನ್ನ ಪತಿ ಬೆಂಬಲವಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ ಇನ್ನು ಮದುವೆಯಾದ ನಂತರ ಹೀರೋಯಿನ್ ಗಳಿಗೆ ಇರುವಂತಹ ಬೇಡಿಕೆ ಕಡಿಮೆಯಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ನಟಿ ಅದಿತಿ ಪ್ರಭುದೇವ್ ಅವರು 60 ವರ್ಷವಾದರೂ ಮದುವೆಯಾಗದೆ ಇದ್ದರೆ ನೀವು ಹೀರೋಯಿನ್ ರೋಲ್ ನೇ ಕೊಡುತ್ತೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ನಟಿ ಅದಿತಿ ಪ್ರಭುದೇವ ಕೇಳಿದಂತಹ ಈ ಪ್ರಶ್ನೆ ಇದೀಗ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಇದರ ಜೊತೆಗೆ ಸಿನಿಮಾ ಬಗ್ಗೆ ಮಾತನಾಡಿರುವ ಅದಿತಿ ಪ್ರಭುದೇವ ನನಗೆ ಒಳ್ಳೆಯ ಹೀರೋಯಿನ್ ಪಟ್ಟ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆ ಮತ್ತು ಗುಂಗು ಇಲ್ಲ .ಅದರ ಬದಲು ಒಳ್ಳೊಳ್ಳೆ ಪಾತ್ರದಲ್ಲಿ ನಟಿಸಬೇಕು ಎಂಬ ಗುಂಗಂತೂ ಇದೆ ಎಂದು ತಮ್ಮ ಮನಸ್ಸಿನಲ್ಲಿ ಇರುವಂತಹ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಜಮಾಲಿ ಗುಡ್ಡದ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ ನಟಿ ಅತಿ ಪ್ರಭುದೇವ ಅವರು ಮಾತನಾಡಿರುವ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!

ಡಿ ಬಾಸ್ ಅಭಿಮಾನಿಗಳ ಪ್ರಶ್ನೆ

ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಆದಂತಹ ಘಟನೆ ಚಿತ್ರರಂಗದಲ್ಲಿ ಇರುವಂತಹ ಎಲ್ಲರೂ ಕೂಡ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಒಬ್ಬ ಕಲಾವಿದನ ಮೇಲೆ ನಟನ ಮೇಲೆ ಈ ರೀತಿ ಚಪ್ಪಲು ಎಸೆದಿದ್ದು ನಿಜಕ್ಕೂ ಕೂಡ ದುರ್ಘಟನೆ. ನಟ ದರ್ಶನ್ ಅವರ ಮೇಲೆ ಈ ರೀತಿ ಕೃತ್ಯವನ್ನು ಮಾಡಿದವರ ವಿರುದ್ಧ ಚಿತ್ರರಂಗದ ಪ್ರತಿಯೊಬ್ಬ ನಟ ನಟಿಯರು ಕೂಡ ಮಾತನಾಡಿದ್ದಾರೆ. ಹೌದು ಶ್ರೀಮುರುಳಿ, ವಿಜಯ ರಾಘವೇಂದ್ರ, ರಚಿತಾ ರಾಮ್, ಸುಮಲತಾ ಅಭಿಷೇಕ್, ದುನಿಯಾ ವಿಜಯ್, ರಕ್ಷಿತಾ, ಶಿವಣ್ಣ ಹೀಗೆ ಕನ್ನಡದ ಹಲವಾರು ನಟ ನಟಿಯರು ಎಲ್ಲರೂ ಕೂಡ ಮಾತನಾಡಿದ್ದಾರೆ.

ನಿಜ ಹೇಳಬೇಕೆಂದರೆ ಚಿತ್ರರಂಗದ ಭಾಗಶಹ 90 ಭಾಗದಷ್ಟು ಜನ ದರ್ಶನ್ ಅವರ ವಿರುದ್ಧ ಈ ರೀತಿ ಕೃತ್ಯ ಆಗಿರುವುದು ನಿಜಕ್ಕೂ ಶೋಚನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೂಡ ಈ ಘಟನೆಗೆ ಸಂತಾಪವನ್ನು ಸೂಚಿಸಿ ಇನ್ನು ಮುಂದೆ ಇಂತಹ ಅಹಿತಕರ ಘಟನೆ ಯಾವ ನಟನ ಮೇಲೆಯೂ ನಡೆಯದಿರಲಿ. ಅಭಿಮಾನಿಗಳು ಎಂದಿಗೂ ಕೂಡ ಇಂತಹ ಕೃತ್ಯವನ್ನು ಮಾಡಬೇಡಿ ಎಲ್ಲಾ ನಟರನ್ನು ಗೌರವಿಸಿ ಎಲ್ಲರಿಗೂ ಅವರದ್ದೇ ಆದಂತಹ ಸ್ಥಾನಮಾನ ಇರುತ್ತದೆ ಆ ಸ್ಥಾನಮಾನಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದರು.

ಕಳೆದ ಐದು ದಿನದಿಂದ ಯಾವುದೇ ಮೀಡಿಯಾ ನೋಡಿದರೂ ಕೂಡ ಅಲ್ಲಿ ದರ್ಶನ್ ಅವರ ಮೇಲೆ ಮಾಡಿದಂತಹ ಕೃತ್ಯದ ಬಗೆಗಿನ ವಿವಾದಗಳೇ ಹೆಚ್ಚಾಗಿ ಕೇಳಿ ಬರುತ್ತದೆ. ಈ ಒಂದು ವಿಮಾನದ ಬಗ್ಗೆ ಎಲ್ಲಾ ನಟ ನಟಿಯರು ಮಾತನಾಡಿದರು ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಮಾತ್ರ ಇದುವರೆಗೂ ಎಲ್ಲಿಯೂ ಕೂಡ ವಿಚಾರದ ಬಗ್ಗೆ ಒಂದೇ ಒಂದು ಚಿಕ್ಕ ಹೇಳಿಕೆಯನ್ನು ಕೊಟ್ಟಿಲ್ಲ. ಇದು ಹಲವಾರು ಅನುಮಾನಗಳಿಗೆ ಹೆಡೆ ಮಾಡಿಕೊಟ್ಟಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಇದೀಗ ಕರ್ನಾಟಕದ ಮಾತ್ರ ಸೀಮಿತವಲ್ಲ ನ್ಯಾಷನಲ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

ಕೆಜಿಎಫ್ ಸಿನಿಮಾ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಸಂಪೂರ್ಣ ಜೀವನ ಶೈಲಿಯೇ ಬದಲಾಗಿದೆ ಇದು ಒಳ್ಳೆಯ ವಿಚಾರವೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಹೆಸರು ಕೀರ್ತಿಯನ್ನು ತಂದು ಕೊಟ್ಟಿದ್ದಾರೆ‌. ಈ ನಟ ಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ ಆದರೆ ಇದೀಗ ಅದೇ ಕನ್ನಡ ಇಂಡಸ್ಟ್ರಿಗೆ ಧಕ್ಕೆ ಬರುವಂತಹ ಕೆಲಸ ನಡೆದಿದ್ದರೂ ಕೂಡ ಇನ್ನು ಯಶ್ ಅವರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಿಯಾಕ್ಟ್ ಮಾಡಿಲ್ಲ ಎಂಬುದೇ ಇದೀಗ ದರ್ಶನ್ ಅಭಿಮಾನಿಗಳ ಪ್ರಶ್ನೆಯಾಗಿದೆ. ಕೇವಲ ಯಶ್ ಮಾತ್ರವಲ್ಲದೆ ಕಾಂತರಾ ಸಿನಿಮಾದ ಹೀರೋ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ, ಇವರು ಕೂಡ ಈ ಒಂದು ಪ್ರಕರಣದ ಬಗ್ಗೆ ಮಾತನಾಡಿಲ್ಲ.

ನಿಜ ಹೇಳಬೇಕೆಂದರೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಂತಹ ಕಾಂತರಾ ಸಿನಿಮಾ ಕೆಜಿಎಫ್ ಸಿನಿಮಾದ ನಾಯಕ ನಟರು ಮಾತನಾಡದೆ ಇರುವುದು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಒಂದು ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ದರ್ಶನ್ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಪೋಸ್ಟರ್ ಒಂದು ಸಕ್ಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ದರ್ಶನ್ ಅಭಿಮಾನಿಗಳ ವಾದವೇನು ಎಂಬುದನ್ನು ನೋಡುವುದಾದರೆ.

ಡಿಸೆಂಬರ್ 17ರ ರಾತ್ರಿಯಿಂದ ನಡೆಯುತ್ತಿರುವುದು ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ ಅದರಲ್ಲೂ ನಮ್ಮ ಎಲ್ಲ ಕನ್ನಡ ಚಿತ್ರರಂಗದ ಕಲಾವಿದರಿಗು ತಿಳಿದೇ ಇರುತ್ತದೆ. ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಕನ್ನಡದ ಮೇರು ನಟರು ಅವರಿಂದನೆ ಇವತ್ತು ಕನ್ನಡ ಚಿತ್ರರಂಗ ವಿಶ್ವದಾದ್ಯಂತ ಹೆಸರು ಬಂದಿರುವುದು ಅನ್ನೋ ನಟರು ಯಶ್, ರಕ್ಷಿತ್ ಶೆಟ್ಟಿ, ರೀಶಬ್ ಶೆಟ್ಟಿ ಇನ್ನೂ ಮುಂತಾದವರು ಯಾರೆಲ್ಲಾ ಹೊಂಬಾಳೆ ಫಿಲ್ಟ್ ಅಡಿಯಲ್ಲಿ ಚಿತ್ರ ಮಾಡಿದ್ದರೂ ಅವು ಇಲ್ಲಿವರೆಗೂ ತುಟಿ ಬಿಚ್ಚಿಲ್ಲ. ಯಾಕೆ ಅವರಿಗೆ ಸಮಯವಿಲ್ವ ? ಇಲ್ಲ ಆದ್ರೆ ಬೇರೆ ಕಾರಣ ಇದಿಯಾ? ಕೆಲವು ತುಟಿ ಬಿಚ್ಚಿದರು ದರ್ಶನ್ ಸರ್ ಅವರ ವಿರುದ್ಧ ದಿಕ್ಕಿನಲ್ಲಿಯೆ ಇದೆ. ಎಂದು ಕ್ಲಿಯರ್ ಆಗಿ ನೋಡಬಹುದು ಇದಕ್ಕೆಲ್ಲ ಕಾರಣ ದೊಡ್ಡ ತಲೆಗಳ ? ದೊಡ್ಡ ಬಂಡವಾಳ ಶಾಹಿಗಳ ? ದರ್ಶನ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಆದರೆ ಇದು ನಿಜವೋ ಸುಳ್ಳೋ ಎಂಬುದು ದೇವನೊಬ್ಬ ಮಾತ್ರ ಬಲ್ಲ ಯಶ್ ರವರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಂದೇ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರೆ ಸಾಕಿತ್ತು. ಇಷ್ಟೆಲ್ಲ ರಾದಂತ ಪ್ರಾರಂಭವಾಗುತ್ತಲೇ ಇರಲಿಲ್ಲ ಎಂಬುದು ಕೆಲವು ಅಭಿಮಾನಿಗಳ ವಾದವಾಗಿದೆ. ಈಗಲಾದರೂ ಯಶ್ ಅವರು ಈ ವಿಚಾರದ ಬಗ್ಗೆ ಒಂದೆರಡು ಮಾತನ್ನು ಮಾತನಾಡಿದರೆ ದರ್ಶನ್ ಅಭಿಮಾನಿಗಳು ಒಂದು ರೀತಿ ಸಮಾಧಾನ ಸಿಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.

ದುನಿಯಾ ವಿಜಯ್ V/s ದರ್ಶನ್ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಕರಣ ಕಳೆದ ಒಂದು ವಾರದಿಂದಲೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹೌದು ಹೊಸ ಪೇಟೆಯಲ್ಲಿ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ. ಈ ಒಂದು ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ನಟ ನಟಿಯರು ದರ್ಶನ್ ಬೆಂಬಲವಾಗಿ ನಿಲ್ಲುತ್ತಾರೆ ದುನಿಯಾ ವಿಜಯ ಅವರು ಕೂಡ ಮೊದ ಮೊದಲು ದರ್ಶನ್ ಅವರಿಗೆ ಈ ರೀತಿ ಅವಮಾನ ಆಗಿದ್ದು ತಪ್ಪು ಯಾರೇ ಆಗಿದ್ದರೂ ಕೂಡ ಒಬ್ಬ ಕಲಾವಿದನಿಗೆ ಸಾರ್ವಜನಿಕ ವಲಯದಲ್ಲಿ ಈ ರೀತಿ ಚಪ್ಪಲಿ ಎಸೆಯ ಬಾರದಿತ್ತು ಇದು ನಿಜಕ್ಕೂ ಕೂಡ ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ ಅಂತ ಹೇಳಿದ್ದರು.

ಆದರೆ ಇದೀಗ ನಟ ದುನಿಯಾ ವಿಜಯ ಅವರು ದರ್ಶನ್ ಅವರಿಗೆ ಮತ್ತೊಂದು ಮನವಿಯನ್ನು ಮಾಡಿಕೊಂಡಿದ್ದಾರೆ ಹೌದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ ಚಪ್ಪಲಿ ಎಸೆತಕ್ಕೂ ಅಪ್ಪು ಅಭಿಮಾನಿಗಳಿಗೂ ಸಂಬಂಧವಿದೆ ಎಂದು ಕೆಲವು ಮೂಲಗಳು ಹೇಳುತ್ತಿದೆ. ಅಪ್ಪು ಅಭಿಮಾನಿಗಳು ಕಳೆದ ಒಂದು ವರ್ಷದಿಂದ ನಟ ದರ್ಶನ್ ಅವರನ್ನು ದ್ವೇಷ ಮಾಡುತ್ತಿದ್ದಾರೆ ಇದಕ್ಕೆ ಕಾರಣ ದರ್ಶನ್ ಅವರು ಕೊಟ್ಟಂತಹ ಸ್ಟೇಟ್ಮೆಂಟ್. ಈ ಸ್ಟೇಟ್ಮೆಂಟ್ ಇಂದ ಮನನೊಂದತಹ ಅಭಿಮಾನಿ ಒಬ್ಬರು ಈ ರೀತಿ ಮಾಡಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ ಯಾರೋ ಒಬ್ಬ ಮಾಡಿದ ತಪ್ಪಿನಿಂದಾಗಿ ಇದೀಗ ಅಪ್ಪು ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪ್ಪು ಹಾಗೂ ಅಪ್ಪು ಅವರ ಬಗ್ಗೆ ತಪ್ಪು ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ದರ್ಶನ್ ಅವರ ಮೇಲೆ ಚಪ್ಪಲಿ ಎಸೆದದ್ದು ನೋಡಿದಂತಹ ದರ್ಶನ್ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸ್ಟೇಟ್ಮೆಂಟ್ ಮತ್ತು ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ. ಇನ್ನು ಮುಂದೆ ರಾಜ ವಂಶದವರು ಅದೇಗೆ ಸಭೆ ಸಮಾರಂಭಗಳನ್ನು ಮಾಡುತ್ತಾರೋ ನಾವು ನೋಡುತ್ತೇವೆ. ನೀವು ಒಂದು ಚಪ್ಪಲಿಯನ್ನು ಎಸೆದಿದ್ದೀರಿ ನಾವು ನಿಮಗೆ ಎಣಿಸಲು ಸಾಧ್ಯವಾಗದಷ್ಟು ಚಪ್ಪಲಿಯನ್ನು ಎಚ್ಚಬೇಕಾಗುತ್ತದೆ ಎಂಬ ಪೋಸ್ಟರ್ ಗಳನ್ನು ಹಾಕುತ್ತಿದ್ದಾರೆ.

ಕೆಲವು ದರ್ಶನ ಅಭಿಮಾನಿಗಳಂತೂ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ ಇವನ್ನೆಲ್ಲವನ್ನು ಗಮನಿಸಿದಂತಹ ದುನಿಯಾ ವಿಜಯ ಅವರು ದರ್ಶನ್ ಅವರಿಗೆ ಮನವಿ ಮಾಡಿದ್ದಾರೆ. ದಯವಿಟ್ಟು ಈ ಫ್ಯಾನ್ ವಾರನ್ನು ಇಲ್ಲಿಗೆ ನಿಲ್ಲಿಸಿ ಇದು ನಿಮ್ಮಿಂದ ಸಾಧ್ಯ ಅಂತ ಹೇಳುತ್ತಿದ್ದಾರೆ ಅಷ್ಟಕ್ಕೂ ದುನಿಯಾ ವಿಜಯ್ ದರ್ಶನ್ ಅವರಿಗೆ ಹೇಳಿದ್ದವರು ಏನು ಎಂಬುದನ್ನು ನೋಡುವುದಾದರೆ.

“ಇವತ್ತು ಕನ್ನಡವಾಗಲಿ ಕನ್ನಡ ಚಿತ್ರರಂಗವಾಗಲಿ ಉತ್ತುಂಗ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಹಲವಾರು ಮಹಾನುಭಾವರು. ಅಂತಹವರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವವರು ಅಂದ್ರೆ ನಮ್ಮ ಅಣ್ಣಾವ್ರು ಮತ್ತೆ ಅಣ್ಣಾವ್ರ ಕುಟುಂಬದವರು. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿಧ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ. ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ.

“ಒಂದಂತು ಸತ್ಯ ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಾಗಿ ನಾವು ನಿಲ್ಲದೇ ಇದ್ದರೆ ಇದು ನಿಲ್ಲದೇ ಇನ್ನೊಂದು ಮಜಲನ್ನು ತಲುಪುವ ಅಪಾಯವಿದೆ ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು ಅಂತಹ ಪರಿಸ್ಥಿತಿಯಲ್ಲೂ “ಪರ್ವಾಗಿಲ್ಲ ಬಿಡು ಚಿನ್ನ” ಎಂಬ ಸಹನೆಯ ಮಾತಾಡಿ ಹೃದಯವನ್ನೇ ಗೆದ್ದಿದ್ದೀರಿ ಇನ್ನೊಂದು ಮಾತು ನಿಮ್ಮನ್ನು ಇಷ್ಟಪಡುವ ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿ ಹೋಗುತ್ತದೆ. ದುನಿಯಾ ವಿಜಯ್ ಅವರು ದರ್ಶನ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಇನ್ನು ದರ್ಶನ್ ಅವರಿಗೆ ಮನವಿ ಮಾಡಿಕೊಂಡ ವ್ಯಕ್ತಿ ಇವರೇ ಮೊದಲೇ ನಲ್ಲ ಮೊನ್ನೆಯಷ್ಟೇ ನಟಿ ರಮ್ಯಾ ಅವರು ಕೂಡ ನಂಬರ್ ಒನ್ ಸ್ಟಾರ್ ನಟ ಎಂಬ ಅಹಂಕಾರವನ್ನು ಬಿಟ್ಟು ದಯವಿಟ್ಟು ನಿಮ್ಮ ಫ್ಯಾನ್ಸ್ ಗಳಿಗೆ ಬುದ್ಧಿವಾದವನ್ನು ಹೇಳಿ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕುವುದನ್ನು ತಡೆಯಿರಿ ಎಂದು ನಟಿ ರಮ್ಯಾ ಅವರು ಕೂಡ ಹೇಳಿಕೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವಂತಹ ಈ ಸ್ಟಾರ್ ವಾರ್ ಅನ್ನು ತಡೆಗಟ್ಟುವುದಕ್ಕೆ ದರ್ಶನ್ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ನೀವೇ ನಿಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಎಂದು ಎಲ್ಲಾ ನಟ ನಟಿಯರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರದ ಬಗ್ಗೆ ದರ್ಶನ್ ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.

ಅಂಜನಿಪುತ್ರ

ರಶ್ಮಿಕಾ ಮಂದಣ್ಣ ಸದಾ ಕಾಲವೂ ಕೂಡ ಯಾವುದಾದರೂ ಒಂದು ಕಾಂಟ್ರವರ್ಸಿಗೆ ಒಳಗಾಗುತ್ತಿದ್ದ ನಟಿ ಪ್ರತಿಬಾರಿಯೂ ಕೂಡ ಕನ್ನಡಿಗರನ್ನು ಕೆಣಕುವ ಮೂಲಕ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದರು. ಆದರೆ ಇದೀಗ ರಶ್ಮಿಕ ಅವರಿಗೆ ಭಯ ಶುರುವಾಗಿದೆ ಹೌದು ಕಳೆದ ಒಂದು ತಿಂಗಳಿನಿಂದ ರಶ್ಮಿಕ ಅವರನ್ನು ಸಂಪೂರ್ಣವಾಗಿ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಅಭಿನಯ ಪ್ರಾರಂಭವಾಗಿತ್ತು. ಈ ಒಂದು ಪ್ರಕರಣ ಯಾವ ಮಟ್ಟಕ್ಕೆ ತಲುಪಿತು ಅಂದರೆ ಫಿಲಂ ಚೇಂಬರ್ ನಲ್ಲಿಯೂ ಕೂಡ ಇದರ ಬಗ್ಗೆ ಪ್ರಸ್ತಾಪನೆ ಏರ್ಪಟ್ಟಿತ್ತು.

ದಿನದಿಂದ ದಿನಕ್ಕೆ ಈ ಪ್ರಕರಣ ಹೆಚ್ಚಾಗುತ್ತಿದ್ದ ಹಾಗೆ ರಶ್ಮಿಕಾ ಅವರ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಭಯ ಪ್ರಾರಂಭವಾಗಿದ್ದು ಹಾಗಾಗಿ ಇದೀಗ ಅವರ ವರ್ತನೆಯನ್ನು ಬದಲಾಯಿಸಿಕೊಂಡಿದ್ದರೆ. ಮೊದಲೆಲ್ಲ ಕನ್ನಡ ನಟರಿಗೆ ಹಾಗೂ ಕನ್ನಡಿಗರಿಗೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆ ನೀಡದೆ ಇದ್ದಂತಹ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಅಪ್ಪು ಅವರನ್ನು ಸ್ಮರಿಸಿಕೊಂಡಿದ್ದಾರೆ. ಹೌದು ಅಪ್ಪು ಅವರು ವಿ.ಧಿ.ವ.ಶ.ರಾಗಿ ಒಂದು ವರ್ಷವಾದರೂ ಕೂಡ ಅವರ ಬಗೆಗೆ ಯಾವುದೇ ರೀತಿಯಾದಂತಹ ಪೋಸ್ಟರ್ ಹಾಕಿಕೊಂಡಿರಲಿಲ್ಲ.

ಗಂಧದಗುಡಿ ಸಿನಿಮಾ ಬಗ್ಗೆ ಆಗಲಿ, ಅಥವಾ ಅಪ್ಪು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಬಗ್ಗೆ ಆಗಲಿ, ಅಥವಾ ಅವರು ವಿ.ಧಿ.ವ.ಶ.ರಾಗಿದ್ದರ ಬಗ್ಗೆ ಆಗಲಿ ಎಲ್ಲಿಯೂ ಕೂಡ ಸಣ್ಣದೊಂದು ಪೋಸ್ಟ್ ಹಾಕಿಕೊಂಡಿರಲಿಲ್ಲ. ಆದರೆ ಇದೀಗ ಅಪ್ಪು ಅವರ ಜೊತೆ ಅಭಿನಯಿಸಿದಂತಹ ಅಂಜನಿಪುತ್ರ ಸಿನಿಮಾಗೆ ಐದು ವರ್ಷವಾಗಿದೆ ಎಂಬ ಪೋಸ್ಟರ್ ಮಾತ್ರ ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಇನ್ನೂ ಕೆಲವು ಅಭಿಮಾನಿಗಳು ಮಾತ್ರ ಇಷ್ಟು ದಿನ ಇಲ್ಲದ ಪ್ರೀತಿ ಇವತ್ತು ಅದೇಗೆ ಹರಿದು ಬಂತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಇದೆಲ್ಲವೂ ಗಿಮಿಕ್ ಬ್ಯಾನ್ ಆಗುತ್ತೇನೆ ಎಂಬ ಭಯಕೆ ಈಗ ಕನ್ನಡ ಸಿನಿಮಾದ ಬಗ್ಗೆ ಒಲವನ್ನು ತೋರುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರಿಗೆ ಬ್ಯಾನ್ ಬಗ್ಗೆ ಭಯ ಇಲ್ಲದೆ ಹೋಗಿದ್ದರೆ ಇಂದು ಅಪ್ಪು ಅವರನ್ನು ಸ್ಮರಿಸಿಕೊಳ್ಳುತ್ತಿರಲಿಲ್ಲ ಇವೆಲ್ಲವೂ ಕೂಡ ಮುಂದಿನ ಸಿನಿಮಾದ ಪ್ರಾಜೆಕ್ಟ್ ಗಾಗಿ ರಶ್ಮಿಕ ಮಾಡುತ್ತಿರುವ ನಾಟಕ ಅನ್ನುತ್ತಿದ್ದಾರೆ.

ಅದೇನೆ ಆಗಲಿ ಸದ್ಯಕ್ಕಾದರೂ ರಶ್ಮಿಕಾ ಅವರಿಗೆ ಬುದ್ಧಿ ಬಂತಲ್ಲ ಇನ್ನು ಮುಂದೆಯಾದರೂ ನಮ್ಮ ಕನ್ನಡಿಗರಿಗೆ ಮತ್ತು ಕನ್ನಡ ಸಿನಿಮಾದವರಿಗೆ ಗೌರವ ಕೊಟ್ಟು ತಾವು ನಡೆದು ಬಂದ ಹಾದಿಯನ್ನು ಮರೆಯದೆ ಇದ್ದರೆ ಸಾಕು ಅನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಬಗ್ಗೆ ಏನು ಬರೆದುಕೊಂಡಿದ್ದಾರೆ ಎಂಬುದನ್ನು ನೋಡುವುದಾದರೆ.

ಇಂದಿಗೆ ಅಂಜನಿಪುತ್ರ ಸಿನಿಮಾ ರಿಲೀಸ್ ಆಗಿ ಐದು ವರ್ಷವಾಗಿದೆ ಈ 5 ವರ್ಷ ನಾನು ಸಾಕಷ್ಟು ಕಲಿತಿದ್ದೇನೆ ಪುನೀತ್ ಸರ್ ಅವರ ಜೊತೆ ಕಳೆದ ಕ್ಷಣಗಳನ್ನು ನಾನು ಎಂದಿಗೂ ಕೂಡ ಸ್ಮರಿಸುತ್ತೇನೆ. ಅಪ್ಪು ಸರ್ ಹೃದಯವಂತರು ಅವರು ಸದಾ ಕಾಲ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ರಶ್ಮಿಕ ಮಂದಣ್ಣ ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಅಂಜನಿಪುತ್ರ ಸಿನಿಮಾವನ್ನು ನಿರ್ಮಾಣ ಮಾಡಿದ ಹರ್ಷ ಮಾಸ್ಟರ್ ಗು ಕೂಡ ನಾನು ಧನ್ಯವಾದವನ್ನು ತಿಳಿಸುತ್ತೇನೆ ಎಂದು ರಶ್ಮಿಕ ಮದ್ದಣ್ಣ ಟ್ವೀಟ್ ಮಾಡಿದರೆ. ಸದ್ಯಕ್ಕೆ ರಶ್ಮಿಕ ಮಾಡಿರುವ ಈ ಕೆಲಸಕ್ಕೆ ಸಿಕ್ಕಾಪಟ್ಟೆ ಮೆಚ್ಚಿಗೆ ಲಭಿಸಿದೆ ಇನ್ನು ಮುಂದೆಯಾದರೂ ಕನ್ನಡಿಗರ ಕೋಪಕ್ಕೆ ಗುರಿಯಾಗದೆ ಇರಲಿ ಎಂಬುವುದೇ ನಮ್ಮ ಆಶಯ.

ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.

ಅಪ್ಪು ಅಭಿಮಾನಿಗಳ ಪರ ನಿಂತ ಯುವರಾಜ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದ ದೃಶ್ಯ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಇದನ್ನು ಖಂಡಿಸಿದರು. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗಕ್ಕೆ ಸೇರಿದ ಪ್ರತಿಯೊಬ್ಬರು ಕೂಡ ಈ ಒಂದು ಸಂಬಂಧಿಸಿದಂತೆ ಮಾತನಾಡಿದರು. ಅದರಲ್ಲಿಯೂ ಕೂಡ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಸುಮಲತಾ ಅಂಬರೀಶ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಟಿ ರಚಿತಾ ರಾಮ್, ದುನಿಯಾ ವಿಜಯ್, ಚಿತ್ರರಂಗದ ಸಾಕಷ್ಟು ನಟ ನಟಿಯರು ಎಲ್ಲರೂ ಕೂಡ ದರ್ಶನ್ ಅವರ ಬೆನ್ನೆಲುಬಾಗಿ ನಿಂತರು.

ದರ್ಶನ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದು ತಪ್ಪು ಎಂದು ಹೇಳಿದರು ಆದರೆ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಈ ರೀತಿ ಘಟನೆ ಆಗುವುದಕ್ಕೆ ಅಪ್ಪು ಅಭಿಮಾನಿಗಳೇ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಹೊಸಪೇಟೆಗೂ ಬರುವ ಮುನ್ನವೇ ಕೆಲವು ಪ್ರಚೋದನಾತ್ಮಕ ಪೋಸ್ಟರ್ಗಳು ಹರಿದಾಡುತ್ತಿದ್ದವು. ಹೊಸಪೇಟೆ ಅಪ್ಪು ಅಡ್ಡ ಇಲ್ಲಿಗೆ ಬಂದು ನೀವು ಹಾಡನ್ನು ಹೇಗೆ ಬಿಡುಗಡೆ ಮಾಡುತ್ತಿರ ನಾವು ನೋಡೇ ಬಿಡುತ್ತೇವೆ ಎಂದು ಪೋಸ್ಟರ್ ಗಳು ಹಾಕಿದ್ದರು.

ಅಷ್ಟೇ ಅಲ್ಲದೆ ಕ್ರಾಂತಿ ಸಿನಿಮಾದ ಬ್ಯಾನರ್ ಗಳನ್ನು ಹರಿದು ಹಾಕಿ ರಾತ್ರೋರಾತ್ರಿ ಅಲ್ಲಿ ಅಪ್ಪು ಅವರ ಬ್ಯಾನರ್ ಗಳನ್ನು ಕೂಡ ಅಳವಡಿಸಿದ್ದರು. ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರಿಗೆ ಚಪ್ಪಲಿ ಎಸೆದ ವ್ಯಕ್ತಿಯು ಕೂಡ ಅಪ್ಪು ಅಭಿಮಾನಿ ಆಗಿರಬಹುದು ಎಂದು ಊಹಿಸಿದರು. ಏಕೆಂದರೆ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಎಂಬ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ಗುಂಪುಗಳು ಅಪ್ಪು ಅಪ್ಪು ಎಂದು ಕೂಗುತ್ತಿದ್ದರು ಅಷ್ಟೇ ಅಲ್ಲದೆ ಅಪ್ಪು ಅವರ ಭಾವಚಿತ್ರವನ್ನು ಹಿಡಿದು ಹಾರಾಡಿಸುತ್ತಿದ್ದರು.

ಇದಾದ ಕೆಲವೇ ಗಂಟೆಯಲ್ಲಿ ದರ್ಶನ್ ಅವರಿಗೆ ವ್ಯಕ್ತಿಯೋರ್ವ ಚಪ್ಪಲಿಯಿಂದ ಹೊಡೆಯುತ್ತಾನೆ ಇದೆಲ್ಲವನ್ನು ಗಮನಿಸಿದಂತಹ ಕೆಲವು ಸಿನಿ ಪ್ರೇಕ್ಷಕರು ಈ ಕೆಲಸ ಅಪ್ಪು ಅಭಿಮಾನಿಗಳದ್ದೇ ಇರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಅಪ್ಪು ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ ನಾವು ಎಂದಿಗೂ ಕೂಡ ಇಂತಹ ಕೃತ್ಯಕ್ಕೆ ಕೈ ಹಾಕುವುದಿಲ್ಲ ನಾವು ನಮ್ಮ ನೆಚ್ಚಿನ ದೇವರನ್ನು ಆರಾಧಿಸುತ್ತೇವೆ, ಅವರ ದಾರಿಯನ್ನು ಅನುಸರಿಸುತ್ತೇವೆ, ಅವರ ಸನ್ಮಾರ್ಗದಲ್ಲಿ ನಡೆಯುತ್ತೇವೆ ಅಂತಹ ಒಳ್ಳೆಯ ವ್ಯಕ್ತಿಗೆ ಕೆಟ್ಟ ಹೆಸರು ನಾವು ತರುವುದಿಲ್ಲ ಅಂತ ಹೇಳಿದ್ದಾರೆ.

ಇಷ್ಟೆಲ್ಲ ಘಟನೆಗಳಾದರೂ ಕೂಡ ದೊಡ್ಮನೆ ಅವರು ಮಾತ್ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಕೂಡ ಮಾತನಾಡಿರಲಿಲ್ಲ ಇದೆಲ್ಲವನ್ನು ನೋಡಿದಂತಹ ಕೆಲವು ಸಿನಿ ರಸಿಕರು ಈ ಕೆಲಸ ಅಪ್ಪು ಅಭಿಮಾನಿಯೇ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಇದೀಗ ಅದರ ವಿರುದ್ಧ ಯುವರಾಜ್ ಕುಮಾರ್ ಅವರು ಮಾತನಾಡಿದ್ದರೆ ಹೌದು ಸುದೀರ್ಘ ಪತ್ರ ಬರೆಯುವುದರ ಮೂಲಕ ಅಪ್ಪು ಅಭಿಮಾನಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ ಹಾಗೂ ತಪ್ಪಾಗಿ ಅರ್ಥ ಮಾಡಿಕೊಂಡಿರುವವರಿಗೂ ಕೂಡ ಸ್ಪಷ್ಟನೆ ನೀಡಿದ್ದಾರೆ ಯುವರಾಜ್ ಕುಮಾರ್ ಹೇಳಿದ್ದಾದರೂ ಏನು ಎಂಬುದು ನೋಡುವುದಾದರೆ.

“ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ನಾನು ತುಂಬ ಚಿಕ್ಕವನು. ಆದ್ರೆ, ತುಂಬ ಹೆಮ್ಮೆಯಿಂದ ಒಂದು ವಿಷಯ ಹೇಳೇಕಂದ್ರೆ.. ನಮ್ಮ ಕುಟುಂಬದ ಅಭಿಮಾನಿಗಳು ನಮ್ಮ ತಾತನವರ ಕಾಲದಿಂದ, ಇವತ್ತಿನವರಿಗೂ ಕನ್ನಡ ಚಿತ್ರರಂಗದ ಪ್ರತಿ ಕಲಾವಿದರಿಗೂ ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸಭ್ಯತೆ ಮತ್ತು ಘನತೆಯಿಂದಲೇ ನಡೆದುಕೊಂಡಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ, ಪ್ರೀತಿ ವಿಶ್ವಾಸವನ್ನು ಹಂಚುವ ಸಂಸ್ಕೃತಿಯುಳ್ಳ ಅಭಿಮಾನಿಗಳೇ ದೇವರು.

ಆದರೆ, ಗೌರವ ಯಾವಾಗಲೂ ಪರಸ್ಪರ ಅಲ್ವಾ? ಅಪ್ಪು ಚಿಕ್ಕಪ್ಪನ ನಡವಳಿಕೆ, ಸಾಮಾಜಿಕ ಪ್ರಜ್ಞೆ, ಮಹಿಳೆಯರನ್ನು ಗೌರವಿಸುವುದು, ಎಲ್ಲರನ್ನೂ ಪ್ರೀತಿಸುವ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ಚೆನ್ನಾಗಿಯೇ ತಿಳಿದಿದೆ, ಅವರ ವ್ಯಕ್ತಿತ್ವ ಎಂದೆಂದಿಗೂ ಎಲ್ಲರಿಗೂ ಮಾದರಿಯಾಗಿ ಇರುತ್ತದೆ . ಅವರ ಬಗ್ಗೆ ಅಗೌರವದಿಂದ ಅವಹೇಳನಕಾರಿಯಾಗಿ ಮಾತನಾಡಿ ಅವರ ಅಭಿಮಾನಿಗಳನ್ನು ಕೆಣಕಿದರೆ, ಅವರ ಭಾವನೆಗಳನ್ನು ನೋಯಿಸಿದರೆ, ಅಭಿಮಾನಿಗಳು ನಿರ್ದಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸುವುದು ‘ಬಹಿರಂಗವಾಗಿಯೇ’ ವಿನಃ ನಡೆಯುವ ಪ್ರತಿಯೊಂದು ಘಟನೆಗೂ ಅವರೇ ಕಾರಣಕರ್ತರು ಆಗೋದಿಲ್ಲ.

ನಡೆದಿರುವ ಕೃತ್ಯ ಖಂಡನೀಯ. ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ “ಸುಳ್ಳು ಸತ್ಯವಾಗುವುದಿಲ್ಲ”. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕಾಣದ ಕೈಗಳು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕಾಣುವ ಬುದ್ಧಿ ನಮ್ಮದಾಗಿರಲಿ. ನನ್ನ ಚಿಕ್ಕಪ್ಪನ ಧ್ವನಿ ಎಂದಿಗೂ ಸತ್ಯದ ಪರವೇ, ಅವರ ಧ್ವನಿ ನಮ್ಮೆಲ್ಲರ ಶಕ್ತಿ. ಗುರುರಾಯರ ಆಶೀರ್ವಾದ ಎಲ್ಲರ ಮೇಲೆ ಸದಾ ಸಂಪೂರ್ಣವಾಗಿ ಇರಲಿ ಜೈ ಹಿಂದ್ ಜೈ ಕರ್ನಾಟಕ ಮಾತೆ – ಯುವ ರಾಜ್‌ಕುಮಾರ್ ಬರೆದುಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?

ಐದು ವರ್ಷದ ಬಳಿಕ ಒಂದಾದ ಜೋಡಿ ಸ್ವತಃ ದರ್ಶನ್ ಅವರೆ ಕಿಚ್ಚ ಸುದೀಪ್ ಗೆ ಇಂದು ಮೆಸೇಜ್ ಮಾಡಿದ್ದಾರೆ ಏನೆಂದು ಗೊತ್ತಾ.?

ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳೇ ವೈರಲ್ ಆಗುತ್ತಿದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಆದಂತಹ ಅಪಮಾನವನ್ನು ಯಾರಿಂದಲೂ ಕೂಡ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸಂತೋಷದ ಸುದ್ದಿಯೊಙದು ಹೊರ ಬಿದ್ದಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಿನಿಮಾರಂಗದಲ್ಲಿ ವಿಷ್ಣುವರ್ಧನ್ ಅಂಬರೀಶ್ ಅವರನ್ನು ಬಿಟ್ಟರೆ ಆ ಸ್ಥಾನವನ್ನು ತುಂಬಾ ಬಲ್ಲ ನಟರು ಅಂದರೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಅಂತ ಹೇಳುತ್ತಿದ್ದರು.

ಇವರಿಬ್ಬರೂ ಕೂಡ ಅಂಬಿ ಮತ್ತು ವಿಷ್ಣುವಿನ ಮಾದರಿಯಲ್ಲೇ ಆಪ್ತ ಸ್ನೇಹಿತರಾಗಿದ್ದರು ಆದರೆ ಅದು ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಕೆಲವು ಕಾರಣಾಂತರಗಳಿಂದ ಇವರಿಬ್ಬರ ನಡುವೆ ವೈ ಮನಸು ಮೂಡುತ್ತದೆ. ತದನಂತರ ಇಬ್ಬರೂ ಕೂಡ ದೂರ ಆಗುತ್ತಾರೆ ಐದು ವರ್ಷದಿಂದ ಇವರು ಒಬ್ಬರನ್ನೊಬ್ಬರು ಭೇಟಿಯಾಗಿರಲಿಲ್ಲ, ಮಾತನಾಡಿಸಿರಲಿಲ್ಲ ಆದರೆ ಇದೀಗ ಇವರಿಬ್ಬರೂ ಮತ್ತೆ ಒಂದಾಗುವ ಎಲ್ಲಾ ಸೂಚನೆಗಳು ಸಿಕ್ಕಿದೆ. ಹೌದು, ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿಯನ್ನು ಎಸೆದ ಪ್ರಕರಣ ದಿನದಿಂದ ದಿನಕ್ಕೆ ಒಂದು ತಿರುವ ಪಡೆದುಕೊಳ್ಳುತ್ತಿದೆ.

ಅದರಲ್ಲಿಯೂ ಕೂಡ ಕಿಚ್ಚ ಸುದೀಪ್ ದರ್ಶನ ಅವರ ಬೆನ್ನೆಲುಬಿಗೆ ನಿಂತಿದ್ದು ಇದೀಗ ಎಲ್ಲರಲ್ಲಿಯೂ ಕೂಡ ಅಚ್ಚರಿಯನ್ನು ಮೂಡಿಸಿದೆ. ದರ್ಶನ್ ಅವರ ಮೇಲೆ ಇಂತಹ ಕೃತ್ಯ ಮಾಡಿದ್ದು ತಪ್ಪು ಎಂದು ಕಿಚ್ಚ ಸುದೀಪ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದೀರ್ಘವಾದ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದಂತಹ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಚಿತ್ರರಂಗದವರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ಏಕೆಂದರೆ ಒಬ್ಬ ವ್ಯಕ್ತಿ ದೂರಾಗಿದ್ದಾರೆ ಅಂದಮೇಲೆ ನಾವು ಅವರ ಬಗ್ಗೆ ಚಿಂತೆ ಮಾಡುವುದಿಲ್ಲ ಅವರ ವಿಚಾರಗಳಿಗೆ ತಲೆ ಹಾಕುವುದಿಲ್ಲ.

ಆದರೆ ಕಿಚ್ಚ ಸುದೀಪ್ ಅವರು ಮಾತ್ರ ತಮ್ಮಲ್ಲಿರುವ ನೋವೆಲ್ಲ ಬಚ್ಚಿಟ್ಟು ಅವರಿಗೆ ಎಷ್ಟೇ ನೋವಾಗಿದ್ದರೂ ಅವಮಾನವಾಗಿದ್ದರೂ ಅಪಮಾನ ವಾಗಿದ್ದರು ಅವನ್ನೆಲ್ಲ ಬದಿಗಿಟ್ಟು ದರ್ಶನ್ ಅವರ ಬೆನ್ನಿಗೆ ನಿಂತಿದ್ದರು. ಎಲ್ಲ ನಟರನ್ನು ಗೌರವಿಸಿ ನಾನು ಮತ್ತು ದರ್ಶನ್ ಒಟ್ಟಾಗಿ ಇಲ್ಲದೆ ಇರಬಹುದು ನಮ್ಮಿಬ್ಬರ ನಡುವೆ ವೈ ಮನಸು ಇರಬಹುದು ಆದರೆ ಇಂತಹ ಸಮಯದಲ್ಲಿ ನಾನು ಅವರ ಬಗ್ಗೆ ಮಾತನಾಡದೆ ಇರುವುದಕ್ಕೆ ಸಾಧ್ಯವಿಲ್ಲ ದಯವಿಟ್ಟು ನಟರನ್ನು ಗೌರವಿಸಿ. ಅವರಿಗೆ ಆದ ಅವಮಾನ ಚಿತ್ರರಂಗಕ್ಕೆ ಆದ ಅವಮಾನ ಆ ವಿಡಿಯೋ ನೋಡಿದ ತಕ್ಷಣ ನನ್ನ ಮನಸ್ಸಿಗೆ ಘಾಸಿ ಉಂಟಾಯಿತು.

ಜೀವದ ಗೆಳೆಯನಿಗೆ ಈ ರೀತಿ ಆಗಿರುವುದು ನಿಜಕ್ಕೂ ಕೂಡ ಬೇಸರ ಉಂಟು ಮಾಡಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದಂತಹ ದಾಸಾ ದರ್ಶನ್ ಅವರು ಮೊದಲ ಬಾರಿಗೆ ಐದು ವರ್ಷದ ಬಳಿಕೆಯ ಕಿಚ್ಚ ಸುದೀಪ್ ಅವರಿಗೆ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. “ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ನಗುವ ಸಿಂಬಲ್ ಅನ್ನು ಕಳಿಸಿದ್ದಾರೆ” ನಿಜಕ್ಕೂ ಇದು ಆಶ್ಚರ್ಯ ಅಂತಾನೆ ಹೇಳಬಹುದು. ಏಕೆಂದರೆ ಸುದೀಪ್ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸಂದರ್ಶನದಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡುತ್ತಿದ್ದರು.

ಆದರೆ ದರ್ಶನ್ ಅವರು ಮಾತ್ರ ಇದುವರೆಗೂ ಸುದೀಪ್ ಬಗ್ಗೆ ಎಲ್ಲಿಯೂ ಕೂಡ ಯಾವುದೇ ರೀತಿಯಾದಂತಹ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಕಿಚ್ಚ ಸುದೀಪ್ ಮೆಸೇಜ್ ಮಾಡಿರುವುದು ನಿಜಕ್ಕೂ ಸಂತೋಷದ ವಿಚಾರವೇ ಇನ್ನು ಮುಂದೆಯಾದರೂ ಇವರಿಬ್ಬರು ತಮ್ಮ ಮನಸ್ಸಿನಲ್ಲಿ ಇರುವಂತಹ ವೈಮನಸ್ಸನ್ನು ಬಿಟ್ಟು ಮೊದಲಿನಂತೆ ಒಂದಾಗಲಿ. ಜೀವದ ಗೆಳೆಯರು ಒಟ್ಟಾಗಿ ಇರುವುದನ್ನು ನೋಡುವುದಕ್ಕೆ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ ಎಂಬ ವಿಚಾರವನ್ನು ಅರಿತುಕೊಳ್ಳಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

 

ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?

ದರ್ಶನ್ ಗೆ ಸಹಾಸ ಮಾಡಲು ಹೋಗಲು ತನ್ನ ಅಭಿಮಾನಿಗಳನ್ನು ಕಳೆದುಕೊಳ್ತಿದ್ದರ ನಟ ಸುದೀಪ್.?

ಕಳೆದ ನಾಲ್ಕು ದಿನದ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಹೊಸ ಪೇಟೆಯಲ್ಲಿ ಚಪ್ಪಲಿ ಎಸೆತವನ್ನು ಎಸೆಯಲಾಗುತ್ತದೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಸಾಕಷ್ಟು ನಟ ನಟಿಯರು ನಿಂತರು. ಇಂತಹದೊಂದು ಕೃತ್ಯವನ್ನು ಯಾರು ಮಾಡಬಾರದು ಈ ರೀತಿ ಯಾರೇ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದರು. ಇದೆಲ್ಲವೂ ನಮಗೆ ಸಾಮಾನ್ಯವಾಗಿ ಕಂಡರೂ ಅಸಮಾನ್ಯವಾಗಿ ಒಂದು ವಿಚಾರ ಹೊರ ಬರುತ್ತದೆ.

ಹೌದು ಅದೇನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದು ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಹಾಗೂ ಕಿಚ್ಚ ಸುದೀಪ್ ದೂರಾಗಿ ಕಳೆದು ನಾಲ್ಕೈದು ವರ್ಷಗಳೇ ಕಳೆದು ಹೋಗಿದೆ. ಒಬ್ಬರು ಮತ್ತೊಬ್ಬರ ವಿಚಾರಕ್ಕೆ ಬರುವುದಿಲ್ಲ ಆಗಿದ್ದರು ಕೂಡ ಈ ಬಾರಿ ಕಿಚ್ಚ ಸುದೀಪ್ ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈ ಮನಸು ಎಲ್ಲವನ್ನು ಮರೆತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆದಂತಹ ಅಪಮಾನ ಕುರಿತು ಮಾತನಾಡಿದ್ದಾರೆ.

ಎಲ್ಲ ನಟರನ್ನು ಗೌರವಿಸಿ ಯಾರನ್ನು ದ್ವೇಷಿಸಬೇಡಿ ಅವರಿಗೆ ಅವರದ್ದೇ ಆದಂತಹ ಬೆಲೆ ಇರುತ್ತದೆ ಈ ರೀತಿಯ ಕೃತ್ಯ ಮಾಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ಈ ವಿಡಿಯೋ ನೋಡಿ ನನ್ನ ಮನಸ್ಸು ತಲ್ಲಣಗೊಂಡಿತು ಕಲಾಸೇವೆ ಮಾಡುವಂತಹ ಕಲಾವಿದನಿಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು. ಇದು ಒಂದು ಕಡೆಯಾದರೆ ಮೊನ್ನೆಯಷ್ಟೇ ಮತ್ತೊಂದು ವಿಡಿಯೋ ಮಾಡುವುದರ ಮೂಲಕ ಸ್ಪಷ್ಟನೆ ನೀಡಿದರು.

“ಚಪ್ಪಲಿ ಎಸೆದದ್ದು ಯಾರೇ ಆಗಿರಲಿ ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ಸಿಕ್ಕಿ ಹಾಕಿಕೊಳ್ಳಬೇಡಿ ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಆ ನಟನ ಅಭಿಮಾನಿಗಳು ಎಷ್ಟು ಜನ ಇದ್ದಾರೋ ಅಷ್ಟು ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಒಡೆದು ಹಾಕಿ ಬಿಡುತ್ತಾರೆ ಎಂದು ಎಚ್ಚರಿಸಿದ್ದರು. ಇದೆಲ್ಲವನ್ನು ನೋಡುತ್ತಿದ್ದಂತಹ ಅಭಿಮಾನಿಗಳಿಗೆ ಆಶ್ಚರ್ಯವಾಗುತ್ತದೆ ಏಕೆಂದರೆ ದರ್ಶನ್ ಜೊತೆ ಮಾತನಾಡುತ್ತಿಲ್ಲ ಅವರಿಂದ ದೂರ ಇದ್ದಾರೆ ಇಷ್ಟೆಲ್ಲ ಆಗಿದ್ದರೂ ಕೂಡ ಕಿಚ್ಚ ಸುದೀಪ್ ಈ ಪರಿಯಾಗಿ ದರ್ಶನ್ ಗೆ ಸಪೋರ್ಟ್ ಮಾಡುತ್ತಿರುವುದಾದರೂ ಯಾಕೆ ಎಂದು ಯೋಚಿಸಿದರು.

ಇನ್ನು ಕೆಲವು ದರ್ಶನ್ ಅಭಿಮಾನಿಗಳು ಕಿಚ್ಚ ಸುದೀಪ್ ಮಾಡುತ್ತಿರುವಂತಹ ಸಪೋರ್ಟ್ ಅನ್ನು ಬೆಂಬಲವಾಗಿ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ಪ್ರಚೋದನಾತ್ಮಕ ಸ್ಟೇಟ್ಮೆಂಟ್ ಗಳನ್ನು ಹಾಕುವುದು ಪೋಸ್ಟರ್ಗಳನ್ನು ಹಾಕುವುದು ಮಾಡುತ್ತಿದ್ದರು. ಇವೆಲ್ಲವನ್ನೂ ನೋಡಿದಂತಹ ಕಿಚ್ಚ ಸುದೀಪ್ ಅಭಿಮಾನಿ ಒಬ್ಬರು ನೇರವಾಗಿ ಕಿಚ್ಚ ಸುದೀಪ್ ಅವರಿಗೆ ಟ್ವಿಟ್ ಮಾಡಿದ್ದಾರೆ. “ನಾಯಿ ಬಾಲ ಯಾವತ್ತಿದ್ದರೂ ಡೊಂಕು, ನೀವು ದರ್ಶನ್ ಗೆ ಸಹಾಯ ಮಾಡುವುದಕ್ಕೆ ಹೋಗಿ ನಿಮ್ಮ ಅಭಿಮಾನಿಗಳಿಗೆ ನೋವುಂಟು ಮಾಡಬೇಡಿ, ನಿಮ್ಮ ಪರವಾಗಿ ಯಾವಾಗಲೂ ನಿಲ್ಲುವುದು ನಿಮ್ಮ ಅಭಿಮಾನಿಗಳು ಮಾತ್ರ” ಎಂದು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಇನ್ನು ಅಭಿಮಾನಿ ಮಾಡಿದಂತಹ ಟ್ವೀಟ್ ಅನ್ನು ನೋಡಿದಂತಹ ಕಿಚ್ಚ ಸುದೀಪ್ ಅವರು ಕೂಡ ಇದೀಗ ಈ ಸ್ಟೇಟ್ಮೆಂಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನನ್ನ ಅಭಿಮಾನಿಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಾನು ಅವರಿಂದ ದೂರ ಉಳಿದಿಲ್ಲ. ನಾನು ಅವರ ಜೊತೆಯಲ್ಲೇ ಬದುಕುತ್ತಿದ್ದೇನೆ, ಅವರಿಗಾಗಿಯೇ ಬದುಕುತ್ತಿದ್ದೇನೆ. ಅವರು ನನ್ನನ್ನು ಜೀವಂತವಾಗಿ ಉಳಿಸಿದ್ದಾರೆ” ಎಂದು ರೀ ಟ್ವಿಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಕಿಚ್ಚ ಸುದೀಪ್ ಅವರು ದರ್ಶನ್ ಅವರಿಗೆ ಬೆಂಬಲ ನೀಡುತ್ತಿರುವುದು ಎಲ್ಲೋ ಒಂದು ಕಡೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ನೋವನ್ನು ಉಂಟು ಮಾಡಿದೆ ಅಂತ ಹೇಳಬಹುದು.

ಏಕೆಂದರೆ ಕಿಚ್ಚ ಸುದೀಪ್ ಅವರು ಎಲ್ಲಾ ಸಂದರ್ಶನ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪರವಾಗಿ ಇಲ್ಲಿವರೆಗೂ ಮಾತನಾಡುತ್ತಾ ಬಂದಿದ್ದಾರೆ. ಆದರೆ ದರ್ಶನ್ ಅವರು ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಹಾಗಾಗಿ ಇದರಿಂದ ಮನನಂದಂತಹ ಅಭಿಮಾನಿ ಒಬ್ಬರು ಸುದೀಪ್ ಅವರಿಗೆ ಈ ಪರಿಯಾಗಿ ಮನವಿ ಮಾಡಿದ್ದಾರೆ. ಈ ಪ್ರಕರಣ ಮುಂದೆನಾಗುತ್ತದೆ ಕಾದು ನೋಡೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

ಕಷ್ಟದ ಕಾಲದಲ್ಲಿ ಸ್ನೇಹಿತನನ್ನು ಬಿಟ್ಟು ಕೋಡದ ಕಿಚ್ಚ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೊ ಮುನ್ನವೇ ಸಾಕಷ್ಟು ವಿವಾದವನ್ನು ತನ್ನ ಮೈ ಮೇಲೆ ಇಳಿದುಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಭಾನುವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಹಾಡನ್ನು ರಿಲೀಸ್ ಮಾಡುವಂತಹ ಸಮಯದಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದರೆ. ಇದು ನಿಜಕ್ಕೂ ಕೂಡ ಒಂದು ದೊಡ್ಡ ಆ.ಘಾ.ತ.ಕಾ.ರಿ ವಿಚಾರ ಅಂತಾನೆ ಹೇಳಬಹುದು.

ದರ್ಶನ್ ಮೇಲೆ ಇಂಥದೊಂದು ಕೃತ್ಯ ಎಸಗಿದ್ದಾರೆ ಎಂಬ ವಿಚಾರ ವೈರಲ್ ಆಗುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಸಂಬಂಧ ಪಟ್ಟಂತಹ ನಟ ನಟಿಯರು ಎಲ್ಲರೂ ಕೂಡ ದರ್ಶನ್ ಪರವಾಗಿ ನಿಂತಿದ್ದಾರೆ. ಇನ್ನು ದರ್ಶನ ಹಾಗೂ ಸುದೀಪ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕೆಲವು ಕಾರಣಾಂತರಗಳಿಂದ ಕಳೆದ ನಾಲ್ಕೈದು ವರ್ಷಗಳಿಂದ ಅವರಿಬ್ಬರೂ ದೂರಾಗಿದ್ದಾರೆ. ದೂರಾಗಿದ್ದರು ಕೂಡ ಅವರಿಬ್ಬರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವಿಲ್ಲ ಒಬ್ಬರ ಮೇಲೆ ಮತ್ತೊಬ್ಬರಿಗೆ ಅಪಾರ ಗೌರವವಿದೆ.

ಇಬ್ಬರೂ ಕೂಡ ಒಟ್ಟಾಗಿ ಇಲ್ಲ, ಮಾತನಾಡುತ್ತಿಲ್ಲ ಎಂಬುದನ್ನು ಬಿಟ್ಟರೆ ಒಬ್ಬ ಸ್ನೇಹಿತನ ವಿಚಾರಕ್ಕೆ ಬಂದರೆ ಮತ್ತೊಬ್ಬ ಸ್ನೇಹಿತರ ಸುಮ್ಮನೆ ಇರುವುದಿಲ್ಲ ಎಂಬುದು ಇದೀಗ ಸಾಬೀತು ಆಗಿದೆ. ಹೌದು ನಟ ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಕಿಚ್ಚ ಸುದೀಪ್ ಮೊನ್ನೆ ಅಷ್ಟೇ ತಮ್ಮ ಟ್ವಿಟರ್ ಖಾತೆಯಲ್ಲಿ ದೀರ್ಘ ಸಾಲುಗಳನ್ನು ಬರೆದುಕೊಂಡಿದ್ದರು. “ಎಲ್ಲರನ್ನೂ ಗೌರವಿಸಿ ಯಾರಿಗೂ ಕೂಡ ಇಂಥ ಅಪಮಾನ ಮಾಡಬೇಡಿ ದರ್ಶನ್ ಮತ್ತು ನನ್ನ ನಡುವೆ ಸರಿ ಇಲ್ಲದೆ ಇದ್ದರೂ ಕೂಡ ಇಂತಹ ಕೆಲಸ ಮಾಡಿದಾಗ ಅದನ್ನು ಸಹಿಸಿಕೊಂಡು ಸುಮ್ಮನೆ ಇರುವುದಕ್ಕೆ ನನ್ನಿಂದ ಸಾಧ್ಯವಿಲ್ಲ ಇದರ ಬಗ್ಗೆ ನಾನು ಮಾತನಾಡಲೇಬೇಕು ಎಂದು ಹೇಳಿಕೊಂಡಿದ್ದರು”.

ಇದು ಒಂದು ಕಡೆಯಾದರೆ ಕಳೆದ ರಾತ್ರಿ ಮತ್ತೊಂದು ವಿಡಿಯೋ ಮಾಡುವುದರ ಮೂಲಕ ದರ್ಶನ್ ಗೆ ಚಪ್ಪಲಿಯಲ್ಲಿ ಹೊಡೆದ ವ್ಯಕ್ತಿಗೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹೌದು ಅದೇನೆಂದರೆ “ಚಪ್ಪಲಿಯಲ್ಲಿ ಹೊಡೆದದ್ದು ಯಾರಾದರೂ ಆಗಿರಲಿ ಯಾವ ನಟನ ಅಭಿಮಾನಿಯಾದರು ಆಗಿರಲಿ ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ಸಿಕ್ಕಿ ಹಾಕಿಕೊಳ್ಳಬೇಡಿ ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಆ ನಟನ ಅಭಿಮಾನಿಗಳು ಎಷ್ಟು ಜನ ಇದ್ದಾರೋ ಅಷ್ಟು ಜನರಿಂದ ನೀವು ಒದೆ ತಿನ್ನುತ್ತೀರಾ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ”.

ಕಿಚ್ಚ ಸುದೀಪ್ ಹೇಳಿಕೆ ಕೊಟ್ಟಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದರ್ಶನ್ ಅಭಿಮಾನಿಗಳು ಕೂಡ ಇದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸ್ನೇಹ ಎಂಬುವುದು ಬರಿ ಮಾತಿನಲ್ಲಿ ಮಾತ್ರ ಇರುವುದಿಲ್ಲ ಮನಸ್ಸಿನಲ್ಲಿಯೂ ಕೂಡ ಇರುತ್ತದೆ ಅದರಲ್ಲಿಯೂ ಕೂಡ ಕಷ್ಟದ ಸಮಯದಲ್ಲಿ ಜೀವನ ಗೆಳೆಯನನ್ನು ಎಂದಿಗೂ ಕೂಡ ಕಿಚ್ಚ ಸುದೀಪ್ ಕೈಬಿಡುವುದಿಲ್ಲ ಎಂಬುದಕ್ಕೆ ಇದೇ ನೈಜ ಉದಾಹರಣೆ.‌

ಕಿಚ್ಚ ಸುದೀಪ್ ಇದೇ ಮೊದಲೆನಲ್ಲ ದರ್ಶನ್ ಗೆ ಈ ರೀತಿಯ ಸಹಾಯ ಮಾಡಿರುವುದು 2010ರಲ್ಲಿ ಸಾರಥಿ ಸಿನಿಮಾ ಬಿಡುಗಡೆ ವೇಳೇ ಜೈ.ಲಿನಲ್ಲಿ ದರ್ಶನ್ ಇದ್ದಾಗ ಈ ಸಿನಿಮಾವನ್ನು ರಿಲೀಸ್ ಮಾಡಿ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಇಬ್ಬರು ನಡುವೆ ಏನೇ ಮನಸ್ತಾಪ ಕಲಹಗಳಿದ್ದರೂ ಕೂಡ ಕಷ್ಟದ ಸಮಯದಲ್ಲಿ ಒಂದಾಗಿದ್ದನ್ನು ನೋಡಿದಂತಹ ಕರುನಾಡ ಜನತೆ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದೇನೆ ಆಗಲಿ ದರ್ಶನ್ ಅವರಿಗೆ ಇಂತಹ ಅಪಮಾನ ಮಾಡಿದ್ದು ನಿಜಕ್ಕೂ ಕೂಡ ತಪ್ಪು ಈ ಘಟನೆಯಿಂದಾದರೂ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಮೊದಲಿನಂತೆ ಒಂದಾಗಲಿ ಎಂದು ಹಾರೈಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ

ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ

ನಟ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ಹಾಡನ್ನು ಚಿತ್ರದುರ್ಗದ ಹೊಸಪೇಟೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಅಂದುಕೊಂಡಿದ್ದರು. ಅದರಂತೆ ಭಾನುವಾರ ಸಂಜೆ 7:00ಗೆ ಈ ಒಂದು ಹಾಡನ್ನು ಅಭಿಮಾನಿಗಳ ಕೈನಿಂದಲೇ ರಿಲೀಸ್ ಮಾಡಬೇಕು ಅಂತ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದರೆ ಹಾಡು ಬಿಡುಗಡೆ ಮಾಡುವುದಕ್ಕಿಂತ ಮುನ್ನವೇ ಡಿ ಬಾಸ್ನ ಮೇಲೆ ಅಭಿಮಾನಿಯೊಬ್ಬರು ಚಪ್ಪಲಿಯನ್ನು ಎಸೆದಿದ್ದಾರೆ ನಿಜಕ್ಕೂ ಇದು ದುರ್ಘಟನೆ ಅಂತ ಹೇಳಬಹುದು.

ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಇದು ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಯಾಕೆಂದರೆ ಇಲ್ಲಿಯವರೆಗೂ ಯಾವ ನಟನ ಮೇಲೂ ಕೂಡ ಈ ರೀತಿಯ ಚಪ್ಪಲಿಯ ಎಸೆತ ಆಗಿರಲಿಲ್ಲ. ಆದರೆ ಸ್ಟಾರ್ ವಾರ್ ಎಂಬ ಕಾರಣದಿಂದಾಗಿ ನಟ ದರ್ಶನ್ ಮೇಲೆ ಈ ರೀತಿಯ ಕೃತ್ಯವನ್ನು ಎಸೆಗಿದ್ದಿದ್ದಾರೆ. ಇನ್ನು ನಟ ದರ್ಶನ್ ಮೇಲೆ ಈ ರೀತಿಯಾದಂತಹ ಹ.ಲ್ಲೆ ನಡೆದಿರುವಂತಹ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

ದರ್ಶನ್ ಅಭಿಮಾನಿಗಳು ಈ ಒಂದು ಕೃತ್ಯವನ್ನು ಖಂಡಿಸಿ ಉ.ಗ್ರ ಹೋರಾಟವನ್ನು ಮಾಡುತ್ತಿದ್ದಾರೆ ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಹೇಳುವ ಹಾಗೆ ಇಲ್ಲ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಚೋದನಾತ್ಮಕ ಪೋಸ್ಟರ್ ಗಳನ್ನು ಹಾಕುವುದರ ಮೂಲಕ ಈ ಒಂದು ಪ್ರಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಗಳ ಮನಸ್ಸಿನಲ್ಲಿಯೂ ಕೂಡ ಇದೊಂದು ರೀತಿಯಾದಂತಹ ದ್ವೇಷದ ಮನೋಭಾವನೆಯನ್ನು ಹುಟ್ಟು ಹಾಕುತ್ತಿದೆ.

ಕೆಲವು ಮೂಲಗಳ ಪ್ರಕಾರ ಇದನ್ನು ಅಪ್ಪು ಅಭಿಮಾನಿಗಳು ಮಾಡಿದ್ದಾರೆ ಅಂತ ಹೇಳಿದರೆ ಇನ್ನೂ ಕೆಲವು ಮೂಲಗಳು ಇದು ರಾಜಕೀಯ ಕಾರಣದಿಂದ ಆಗಿದೆ ಎಂದು ಹೇಳುತ್ತಿದ್ದಾರೆ. ಈ ಕೃತ್ಯವನ್ನು ಯಾವ ಅಭಿಮಾನಿ ಮಾಡಿದ್ದರೋ ಏನೋ ತಿಳಿದಿಲ್ಲ ಆದರೂ ಕೂಡ ಈ ರೀತಿ ಮಾಡಿದ್ದು ತಪ್ಪು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ ಅವರು ಎಲ್ಲ ನಟರಿಗೂ ಕೂಡ ಬುದ್ಧಿವಾದ ಹೇಳಿದ್ದಾರೆ.

ನಿಮ್ಮ ನಿಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಅವರಿಗೆ ತಿಳುವಳಿಕೆಯನ್ನು ಮಾಡಿ ಮನವರಿಕೆಯನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನೇ ನಂಬರ್ ಒನ್ ಸ್ಟಾರ್ ಎಂಬ ಅಹಂಕಾರ ಬಿಟ್ಟು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದು ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ. ಅಷ್ಟಕ್ಕೂ ರಮ್ಯ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ.

“ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್ ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು.

ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದುಕಷ್ಟವಾಗಿದ್ದರೆ ಹಲವರಿಗೆ ಮೈ ತುಂಬಾಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತ ಬಂದಿರಬಹುದು, ಹಲವರು ಇದ್ದುದ್ದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಿಟ್ಟು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ ಅಷ್ಟೇ ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲು ಅಸಾಧ್ಯ.

ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ ೧ ಮತ್ತು ಈ ಸ್ಥಾನ ನನಗೆ ಮಾತ್ರ ದಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ

ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು. ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗ್ತಿದೆ.

ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ ಇರುವ ಹೆಗ್ಗಳಿಕೆ. ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ

ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳವಳಿಕೆ ಹೇಳಿ ಅವರನ್ನು ಸುಸಂಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು. ಕನ್ನಡ ಚಿತ್ರರಂಗ ಇವತ್ತು ದೇಶ ವಿದೇಶಗಳಲ್ಲಿ ದೊಡ್ಡ ಖ್ಯಾತಿಪಡೆದಿದೆ. IMDB ಉನ್ನತ ೧೦ ಚಿತ್ರಗಳ ಪಟ್ಟಿಯಲ್ಲಿ ೩ ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ. ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಪೂರ್ತಿ ಬೇಕಿದೆಯೇ?

ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಆಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನೆ ಮಾಡೋಣ. ಎಲ್ಲರಿಗು ಒಳಿತಾಗಲಿ ಎಂದು ಟ್ವಿಟ್ ಮಾಡಿದ್ದಾರೆ.