Home Blog Page 33

ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

 

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರು ನಂಬಿಕೆ ಇಟ್ಟು ಪಾಲಿಸುತ್ತಿರುವ ವಿಷಯಗಳು ಆಗಿದೆ. ಅದೇ ರೀತಿಯಾಗಿ ಈ ವಾಸ್ತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳನ್ನು ಪಾಲಿಸಿ ತಮ್ಮ ಪಾಲಿನ ಸಂಕಷ್ಟಗಳನ್ನು ಕಳೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವವರ ಉದಾಹರಣೆಗಳು ಕೂಡ ಇವೆ.

ವಾಸ್ತು ಎಂದರೆ ಕೇವಲ ದಿಕ್ಕುಗಳು ಮಾತ್ರವಲ್ಲದೇ ಇದು ಮನೆಯಲ್ಲಿ ಯಾವ ವಸ್ತು ಎಲ್ಲಿ ಇಡಬೇಕು ಎನ್ನುವುದರಿಂದ ಹಿಡಿದು ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರ ಅದೃಷ್ಟದ ದಿಕ್ಕಿನವರೆಗೆ ಕೂಡ ವಿಸ್ತರಿಸಿರುವ ವಿಷಯ ಆಗಿದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟದ ದಿಕ್ಕು ಎನ್ನುವುದು ಕೂಡ ಒಂದು ಪ್ರಮುಖ ಪಾತ್ರ ವಹಿಸಿದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಆ ಅದೃಷ್ಟದ ದಿಕ್ಕಿನ ಕಡೆ ಮುಖ ಮಾಡಿ ಓದುವುದು ಬರೆಯುವುದು ವ್ಯಾಪಾರಸ್ಥಳದಲ್ಲಿ ಕಚೇರಿಗಳಲ್ಲಿ ಆ ಮುಖವಾಗಿ ಚೇರ್ ಹಾಕಿ ಕುಳಿತುಕೊಳ್ಳುವುದು ಪ್ರಯಾಣ ಮಾಡುವುದು ಹೀಗೆ ಮಾಡುವುದು ಅದೃಷ್ಟ ತರುತ್ತದ ಎಂದು ನಂಬಲಾಗಿದೆ.

ಆದರೆ ಈಗಿನ ಕಾಲದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಅನೇಕರು ತಪ್ಪು ದಾರಿಗೆ ಎಳೆದಿರುವ ಉದಾಹರಣೆಗಳಿಗೆ ಕಡಿಮೆ ಇಲ್ಲ. ಏಕೆಂದರೆ ವಾಸ್ತು ಪ್ರಕಾರವಾಗಿ ಏನನ್ನೇ ಹೇಳಿದರು ದಿಕ್ಕುಗಳ ವಿಚಾರ ಬಂದಾಗ ಅದೃಷ್ಟದ ದಿಕ್ಕು ಎನ್ನುವುದು ಸರಿ ಆದರೆ ಮಲಗುವ ದಿಕ್ಕು, ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ದಿಕ್ಕು ಆದರೆ ಅದು ಸಮಸ್ಯೆಯೇ ತಾನೇ?

ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

ಉದಾಹರಣೆಗೆ ಪತಿ ಪತ್ನಿಗೆ ಅನ್ಯೋನ್ಯತೆ ಕೊರತೆ ಇದ್ದಾಗ ಬೇರೆ ಬೇರೆ ದಿಕ್ಕುಗಳು ಅವರ ಅದೃಷ್ಟದ ದಿಕ್ಕುಗಳಾಗಿದ್ದಾಗ ಅದೇ ದಿಕ್ಕುಗಳ ಕಡೆ ತಲೆ ಹಾಕಿ ಮಲಗುವುದು ಅವರ ಸಮಸ್ಯೆಗೆ ಪರಿಹಾರ ತರಲಾರದು ಎನ್ನುವುದನ್ನು ಪ್ರಾಕ್ಟಿಕಲ್ ಆಗಿ ಒಪ್ಪಲೇಬೇಕು. ಈ ರೀತಿ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಬಾರದು ಹೀಗೆ ಮಾಡುವುದರಿಂದ ಒಗ್ಗಟ್ಟು ನಶಿಸುತ್ತದೆ ಎಂದು ಬದುಕುವ ರೀತಿ ಹೇಳಿಕೊಟ್ಟಿದ್ದ ಹಿರಿಯರ ಮಾತು ನೆನಪಿಗೆ ಬರುತ್ತದೆ.

ನಿಮಗೂ ಈ ರೀತಿ ಕನ್ಫ್ಯೂಸ್ ಆಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಒಂದು ಕ್ಲಾರಿಫಿಕೇಶನ್ ಸಿಗಬಹುದು. ವಾಸ್ತುವಿನ ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಬೇಕು ಎನ್ನುವ ನಿಯಮ ಇದೆ ಇದು ಅವರವರ ಅದೃಷ್ಟ ರಾಶಿಗೆ ಹೊಂದಿಕೊಳ್ಳುವಂತಹ ದಿಕ್ಕು ಸಿಕ್ಕಿದರೆ ಉತ್ತಮ ಇಲ್ಲವಾದಲ್ಲಿ ಮಲಗುವ ದಿಕ್ಕನ್ನು ಅದೃಷ್ಟ ರಾಶಿಗೆ ಬದಲಾಯಿಸುವಂತಿಲ್ಲ.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಹಾಗಾದರೆ ಒಟ್ಟಾರೆಯಾಗಿ ಇದಕ್ಕೆ ಪರಿಹಾರವೇನು ಎಂದರೆ ವಾಸ್ತು ಶಾಸ್ತ್ರ ಹೇಳುವ ಪ್ರಕಾರವಾಗಿ ಮನೆಯಲ್ಲಿರುವ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರವರ ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ದಕ್ಷಿಣ ದಿಕ್ಕನ್ನು ಬಿಟ್ಟು ಬೇರೆ ಯಾವುದೇ ದಿಕ್ಕಿಗೆ ತಲೆ ಹಾಕಿ ಮಲಗುವುದು ಕೂಡ ಅವರಿಗೆ ಶ್ರೇಯಸ್ಕರವಲ್ಲ ಮತ್ತು ಮನಸ್ಸಿಗೂ ಹಾಗೂ ಮನೆಗೂ ಕೂಡ ಒಳ್ಳೆಯದಲ್ಲ.

ನೀವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮಲಗಿದ ತಕ್ಷಣ ನಿದ್ರೆ ಬರುತ್ತದೆ ಕೆಟ್ಟ ಕನಸು ಬೀಳುವುದಿಲ್ಲ ಮತ್ತು ನಿಧಾನವಾಗಿ ನೀವು ಬದುಕಿನಲ್ಲಿ ಮೇಲಿರುತ್ತಾ ಹೋಗುತ್ತಿರಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ ದೀರ್ಘಾಯುಷ್ಯ ಹೊಂದುತ್ತೀರಿ.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದರೆ ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವಾ ಬೇರೆ ಯಾರ ಮಾತನ್ನೋ ಕೇಳಿ ನಿಮ್ಮ ಅದೃಷ್ಟದ ದಿಕ್ಕು ಎಂದುಕೊಂಡು ಪಶ್ಚಿಮ ಉತ್ತರ ಈ ರೀತಿ ಇಷ್ಟ ಬಂದ ಕಡೆ ತಲೆ ಹಾಕಿ ಮಲಗಿದರೆ ಹುಚ್ಚರಾಗುವುದರಲ್ಲಿ ಅನುಮಾನವೇ ಇಲ್ಲ. ಭಾರತದ ವಾಸ್ತು ಪ್ರಕಾರ ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಕ್ಷಿಣದ ಕಡೆಗೆ ತಲೆ ಹಾಕಿ ಮಲಗಬೇಕು.

ವಿಜ್ಞಾನ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಹಲವಾರು ವಿಜ್ಞಾನಿಗಳು ಇದರ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದರೆ ಎಂದರೆ ಮಾತ್ರ ಪೂರ್ವದ ಕಡೆ ತಲೆ ಹಾಕಿ ಮಲಗಬಹುದು ಅಷ್ಟೇ. ನೀವು ಇದುವರೆಗೆ ತಪ್ಪಾದ ದಿಕ್ಕಿನಲ್ಲಿ ಮಲಗುತ್ತಿದ್ದರೆ ಇಂದೇ ಇದನ್ನು ಬದಲಾಯಿಸಿ ನಂತರ ಆಗುವ ಬದಲಾವಣೆ ನೀವೆ ನೋಡಿ.

ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಎಲ್ಲರ ಮನೆಯ ಬಾತ್ರೂಮ್ ನಲ್ಲೂ ಕೂಡ ಕಾಡುವ ಒಂದು ಸಮಸ್ಯೆ ಎಂದರೆ ನಲ್ಲಿಗಳ ಮೇಲೆ ಬಿಸಿನೀರಿನ ಉಪ್ಪುನೀರಿನ ಕಲೆಗಳು ಆಗಿರುತ್ತದೆ ಎನ್ನುವುದು. ಟೈಲ್ಸ್ ಗಳ ಮೇಲೆ ನೀರಿನ ಕಲೆ ಬರೆ ರೀತಿ ಕೊಳೆ ರೀತಿ ಕಾಣುತ್ತದೆ ಇದರಿಂದ ಟೈಲ್ಸ್ ಶೈನಿಂಗ್ ಹೋಗಿ ಬಹಳ ಹಳೆಯ ಮನೆ ರೀತಿ ಕಾಣಲು ಶುರು ಆಗುತ್ತದೆ.

ಮತ್ತು ಇದರಿಂದ ನಮಗೆ ಲುಕ್ ಹೋಯಿತಲ್ಲ ಎಂದು ಬೇಸರವಾಗಿರುತ್ತದೆ ನಿಮಗೂ ಕೂಡ ಈ ರೀತಿ ಕಂಪ್ಲೇಂಟ್ ಇದ್ದರೆ ನಿಮ್ಮ ಬಾತ್ರೂಮ್ ನ ಟೈಲ್ಸ್ ಕೇವಲ 10 ನಿಮಿಷಗಳಲ್ಲಿ ಪಳಪಳ ಹೊಳೆಯುವಂತೆ ಮಾಡಬಹುದು ಎಲ್ಲಾ ಕಲೆಗಳನ್ನು 10 ನಿಮಿಷದಲ್ಲಿ ತೆಗೆದು ಹಾಕಿ ಹೊಸ ಲುಕ್ ಕೊಡಬಹುದು ಅದಕ್ಕಾಗಿ ನಾವು ಹೇಳುವ ಈ ಸಿಂಪಲ್ ಟ್ರಿಕ್ ಅಪ್ಲೈ ಮಾಡಿ ಸಾಕು.

ಈ ಸುದ್ದಿ ಓದಿ:- ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?

ಇದಕ್ಕಾಗಿ ಯಾವುದೇ ದುಬಾರಿ ಬೆಲೆಯ ಕೆಮಿಕಲ್ ತರುವ ಅವಶ್ಯಕತೆ ಇಲ್ಲ ನಿಮ್ಮ ಮನೆಯಲ್ಲಿಯೇ ಕಲೆಗಳನ್ನು ತೆಗೆಯುವ ಗುಣ ಹೊಂದಿರುವ ವಿಶೇಷ ಪದಾರ್ಥಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ರೆಡಿ ಮಾಡಿಕೊಂಡರೆ ಸಾಕು.

15 ದಿನಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ನೀವು ಈ ರೀತಿ ಸೊಲ್ಯೂಷನ್ ಮಾಡಿಕೊಂಡು ನಾವು ಹೇಳಿರುವ ರೀತಿಯಲ್ಲಿ ಬಾತ್ರೂಮ್ ಕ್ಲೀನ್ ಮಾಡಿದರೆ ಎಷ್ಟೇ ವರ್ಷ ಆದರೂ ಹೊಸ ಮನೆ ರೀತಿ ಲುಕ್ ಹೊಂದಿರುತ್ತದೆ. ನಿಮ್ಮ ಮನೆ ಅಳತೆಗೆ ಬೇಕಾಗುವಷ್ಟು ನೀರನ್ನು ತೆಗೆದುಕೊಳ್ಳಿ. ನಾನು ಉದಾಹರಣೆಗೆ ಅರ್ಧ ಲೀಟರ್ ತೆಗೆದುಕೊಳ್ಳುತ್ತೇನೆ ಅರ್ಧ ಲೀಟರ್ ನೀರನ್ನು ಗ್ಯಾಸ್ ಮೇಲೆ ಕಾಯಲು ಇಡಿ.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

ಆ ನೀರಿಗೆ ಎರಡು ಚಮಚ ಡಿಟರ್ಜೆಂಟ್ ಪೌಡರ್ ಹಾಕಿ ಮತ್ತು ಎರಡು ಚಮಚ ಅಡುಗೆ ಸೋಡಾ ಹಾಕಿ ಒಂದೆರಡು ಕುದಿ ಬಂದು ಇವೆರಡು ಚೆನ್ನಾಗಿ ಮಿಕ್ಸ್ ಆದಮೇಲೆ ಸ್ಟವ್ ಆಫ್ ಮಾಡಿ. ಈಗ ಇದಕ್ಕೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಕ್ಲೀನ್ ಮಾಡಲು ಬಳಸುವ ವಿಮ್ ಜೆಲ್ ಎರಡು ಚಮಚ ಹಾಕಿ ಮತ್ತು ಎರಡು ಚಮಚ ವಿನೆಗರ್ ಹಾಕಿ ಒಂದು ನಿಂಬೆ ಹಣ್ಣನ್ನು ಕತ್ತರಿಸಿ.

ಈಗ ನೀರು ಸ್ವಲ್ಪ ಬಿಸಿ ಕಡಿಮೆ ಆಗಿದೆ ವಾಟರ್ ಬಾಟಲ್ ಗೆ ಹಾಕಬಹುದು ಎನ್ನುವಷ್ಟು ಇದ್ದಾಗ ಅದನ್ನು ನಿಮ್ಮ ಮನೆಯಲ್ಲಿರುವ ಖಿಲಿ ವಾಟರ್ ಬಾಟಲ್ ಗೆ ಹಾಕಿಕೊಳ್ಳಿ ಮತ್ತು ಚೆನ್ನಾಗಿ ಶೇಕ್ ಮಾಡಿ ನೀವು ಬಿಸಿ ಇರುವುದನ್ನು ಹಾಕಿದರೆ ಬಾಟಲ್ ಮೆಲ್ಟ್ ಆಗಿ ಬಿಡಬಹುದು ಹಾಗಾಗಿ ಹದ ನೋಡಿಕೊಂಡು ಈ ರೀತಿ ಬಾಟಲಿಗೆ ಹಾಕಿ ಈಗ ಮುಚ್ಚಳವನ್ನು ನಾಲ್ಕೈದು ಹೋಲ್ ಮಾಡಿ ಅಥವಾ ನಿಮ್ಮಲ್ಲಿ ಸ್ಪ್ರೇ ಬಾಟಲ್ ಇದ್ದರೆ ಅದನ್ನೂ ಕೂಡ ಹಾಕಬಹುದು.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಈಗ ಇದನ್ನು ಬಾತ್ರೂಮ್ ಟೈಲ್ಸ್ ಗಳ ಮೇಲೆ ಸ್ಪ್ರೇ ಮಾಡಿ ಪಾತ್ರೆ ತೊಳೆಯುವ ಸ್ಕ್ರಬ್ ತೆಗೆದುಕೊಂಡು ಚೆನ್ನಾಗಿ ಉಜ್ಜಿ. ನಲ್ಲಿ, ಬಾತ್ರೂಮ್ ಡೋರ್, ಟೈಲ್ಸ್ ಎಲ್ಲದರ ಮೇಲು ಕೂಡ ಸ್ಪ್ರೇ ಮಾಡಿ ಬ್ರಷ್ ಮಾಡಿ ನೀರಿನಿಂದ ತೊಳೆಯಿರಿ. ಒಮ್ಮೆಲೇ ಎಲ್ಲಾ ಕ್ಲೀನ್ ಆದಮೇಲೆ ಇದನ್ನು ಮಾಡುವ ಮೊದಲು ಹೇಗಿತ್ತು ಈಗ ಹೇಗಿದೆ ಎನ್ನುವ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ನಂತರ ಇದು ಬಹಳ ಉಪಯುಕ್ತ ಎಂದು ನಿಮಗೆ ಅನಿಸಿದರೆ ಈ ಟ್ರಿಕ್ ನ್ನು ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ತಿಳಿಸಿ ಅವರಿಗೂ ಅನುಕೂಲವಾಗಲಿ.

ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?

 

ನಾವು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಯಾವುದಾದರೂ ಕಾರಣಕ್ಕಾಗಿ ಹೋಗುತ್ತಲೇ ಇರುತ್ತೇವೆ. ಕೆಲವರ ಮನೆ ನೋಡಿದ ವಾವ್ ಎಂದು ಮನಸ್ಸು ಅರಳುತ್ತದೆ ಮತ್ತು ತಕ್ಷಣ ನಾವು ಇದೇ ರೀತಿ ಅಚ್ಚುಕಟ್ಟಾಗಿ ಮನೆಯನ್ನು ಇಟ್ಟುಕೊಳ್ಳಬೇಕು ಎಂದು ಮೆಚ್ಚಿಕೊಂಡಿರುತ್ತೇವೆ.

ಇನ್ನು ಕೆಲವರ ಮನೆ ನೋಡಿ ಮನೆಗೆ ಬಂದ ಮೇಲೆ ಮನೆಯವರ ಜೊತೆ ನಾವೇ ಅವರ ಮನೆಯನ್ನು ಆಡಿಕೊಂಡು ಹೇಳುತ್ತಿರುತ್ತೇವೆ. ವಾಸ್ತು ಪ್ರಕಾರವಾಗಿ ಕೂಡ ಮನೆಯನ್ನು ಈ ರೀತಿ ಚೆಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು ಮನೆಗೆ ದೋಷ ಉಂಟು ಮಾಡುತ್ತದೆ ಈ ರೀತಿ ಮನೆಯಲ್ಲಿ ವಸ್ತುಗಳು ಎದ್ವಾತದ್ವವಾಗಿ ಅಸ್ತವ್ಯಸ್ತವಾಗಿ ಇದ್ದರೆ ಆ ಮನೆಗೆ ನಕರಾತ್ಮಕ ಪ್ರಭಾವ ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ಅದೇ ರೀತಿಯಾಗಿ ಅಚ್ಚುಕಟ್ಟುತನ ಮತ್ತು ಸ್ವಚ್ಛತೆ ಇದ್ದ ಕಡೆ ಮಾತ್ರ ತಾಯಿ ಮಹಾಲಕ್ಷ್ಮಿ ನೆಲೆ ನಿಲ್ಲುವುದು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಿಷ್ಟೇ ಅಲ್ಲದೆ ಮನೆಯ ವಾತಾವರಣ ಕೂಡ ನಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀಳುತ್ತದೆ ಎನ್ನುವುದು ಕೂಡ ಒಪ್ಪಲೇ ಬೇಕಾದ ವಿಷಯ.

ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋದಾಗ ವೈದ್ಯರು ಫುಡ್ ಇನ್ಫೆಕ್ಷನ್ ಅಥವಾ ಸ್ಕಿನ್ ಅಲರ್ಜಿಗೆ ಕಾರಣಗಳನ್ನು ಹೇಳುವಾಗ ಮನೆ ಬಗ್ಗೆ ಪ್ರಶ್ನೆ ಮಾಡಿದ್ದನ್ನು ಈಗ ನೀವು ನೆನೆಸಿಕೊಳ್ಳಬಹುದು ಇದೆಲ್ಲದರ ಜೊತೆಗೆ ಇನ್ನು ಇನ್ನೂ ಒಂದು ಮುಖ್ಯವಾದ ಸಂಗತಿ ಏನೆಂದರೆ, ಮನೆ ವಾತಾವರಣ ಮನೋರೋಗಕ್ಕೂ ಕೂಡ ಮದ್ದಾಗುತ್ತದೆ ಎನ್ನುವುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

ಮನಸ್ಸು ಮನೆಯ ಪ್ರತಿಬಿಂಬವಾಗಿರುತ್ತದೆ. ಹೇಗೆಂದರೆ ಮನೆಯ ವಾತಾವರಣ ಸಕಾರಾತ್ಮಕವಾಗಿ ಇದ್ದರೆ ಮತ್ತು ಮನೆಯು ನೋಡುವುದಕ್ಕೆ ಅಚ್ಚುಕಟ್ಟಾಗಿ ಶುದ್ಧವಾಗಿ ವ್ಯವಸ್ಥಿತವಾಗಿ ಇದ್ದರೆ ನಮಗೆ ಎಷ್ಟೇ ಟೆನ್ಶನ್ ಇದ್ದರೂ ಒಂದು ಮಟ್ಟಿಗೆ ತಾಳ್ಮೆ ಇರುತ್ತದೆ ಆದರೆ ಒಮ್ಮೊಮ್ಮೆ ನಾವು ಯಾವುದೋ ಕಾರಣಕ್ಕೆ ನಮಗೆ ಬೇ’ಸ’ರ ಆಗಿರುವುದನ್ನು ನೋ’ವಾಗಿರುವುದನ್ನು ಬಹಳ ಮನಸ್ಸಿಗೆ ತೆಗೆದುಕೊಂಡು ಆ ಡಿಪ್ರೆಶನ್ ನಲ್ಲಿ ಮನೆ ಬಗ್ಗೆ ಕೂಡ ಕಾಳಜಿ ಮಾಡುವುದಿಲ್ಲ.

ಇದು ನಮ್ಮನ್ನು ನೋವಿನಿಂದ ಪಾರು ಮಾಡುವ ಬದಲು ನಮ್ಮ ಬೇಸರಗಳನ್ನು ಇನ್ನಷ್ಟು ಹೆಚ್ಚಾಗುವ ರೀತಿ ಮಾಡುತ್ತದೆ. ಅದರ ಬದಲು ನಿಮಗೆ ಯಾವುದಾದರೂ ಕ’ಷ್ಟದ ಸಂಗತಿ ಅಥವಾ ನೋ’ವಿನ ಸಂಗತಿ, ಬೇ’ಸ’ರದ ಸಂಗತಿ ಇದ್ದಾಗ ಅದನ್ನು ಮರೆಯಲು ನೀವು ಇನ್ನು ಮುಂದೆ ಮನೆ ಸ್ವಚ್ಛ ಮಾಡುವ ಕಾರ್ಯದಲ್ಲಿ ಪಾಲ್ಕೊಳ್ಳಿ ನಿಧಾನವಾಗಿ ಅದು ನಿಮ್ಮ ಮನಸ್ಸಿನ ಕೊಳೆಯನ್ನು ಕೂಡ ತೆಗೆದು ಹಾಕುತ್ತದೆ.

ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

ಇದು ನಿಮ್ಮ ಸಮಯ ಹಣ ಆರೋಗ್ಯ ಎಲ್ಲವನ್ನು ಕೂಡ ಉಳಿತಾಯ ಮಾಡುತ್ತದೆ. ನೀವು ಬೇಕಾದರೆ ಒಮ್ಮೆ ಇದನ್ನು ಪ್ರಯೋಗ ಮಾಡಿ ನೋಡಿ ನಂತರ ಆಗುವ ನಿಮ್ಮ ಬದಲಾವಣೆ ಮೇಲೆ ನಿಮಗೆ ನಂಬಿಕೆ ಹುಟ್ಟಿ ಸಂತೋಷವಾಗಿ ನೀವೇ ಹತ್ತು ಜನಕ್ಕೆ ಹೇಳುತ್ತೀರಾ ಆ ರೀತಿಯಾಗಿ ನೀವು ಬದಲಾಗುತ್ತೀರಾ ಹಾಗಾಗಿ ಎಂದಿಗೂ ಕೂಡ ಮನೆಗೆ ಆದಷ್ಟು ಶಾಂತವಾಗಿ ಇರಬೇಕು ಮತ್ತು ಮನೆಯಲ್ಲಿ ಲವಲವಿಕೆಯನ್ನು ಹೆಚ್ಚಿಸುವ ಮನಸ್ಸಿಗೆ ಮುದ ಕೊಡುವ ವಸ್ತುಗಳಿಗೆ ಜಾಗ ಇರಬೇಕು.

ಸಾಧ್ಯವಾದಷ್ಟು ಮನೆಯಲ್ಲಿ ವಸ್ತುಗಳು ಕಡಿಮೆ ಇರಬೇಕು, ಹಳೆಯ ವಸ್ತುಗಳನ್ನು ಮತ್ತು ಬೇಡದ ವಸ್ತುಗಳನ್ನು ಮನೆಯಲ್ಲಿ ರಾಶಿ ಹಾಕಿಕೊಳ್ಳಬಾರದು. ಮನೆಯಲ್ಲಿ ಯಾವ ವಸ್ತು ಎಲ್ಲಿ ಇದೆ ಎನ್ನುವುದು ನಿಮಗೆ ಸರಿಯಾಗಿ ಗೊತ್ತಿರುವ ರೀತಿ ನೀವು ಮನೆ ನಿಭಾಯಿಸಬೇಕು, ಈ ರೀತಿಯಾಗಿ ದಿನದಿಂದ ದಿನಕ್ಕೆ ಸಿದ್ಧತೆ ಆಗುತ್ತಾ ಬನ್ನಿ ಮನಸ್ಸಿನ ಆರೋಗ್ಯದ ಜೊತೆಗೆ ನಿಮ್ಮ ಬದುಕು ಕೂಡ ಉತ್ತಮ ದಿಕ್ಕಿನಲ್ಲಿ ಬದಲಾಗುತ್ತ ಹೋಗುತ್ತದೆ ಇದೆಲ್ಲವೂ ಜೀವನದ ಅಡಿಪಾಯ, ಅದಕ್ಕಾಗಿ ಮನೆಯನ್ನು ಮೊದಲ ಪಾಠಶಾಲೆ ಎನ್ನುವುದು.

ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

 

ಇದೇ ಏಪ್ರಿಲ್ 09, 2024ರಂದು ಯುಗಾದಿ ಹಬ್ಬ ಇದೆ. ಅಂದಿನಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಅಂದಿನಿಂದ ಹೊಸ ವರ್ಷ ಆರಂಭ ಆಗುತ್ತದೆ. ನಾವು ಆಚರಿಸುವ ಈ ಹೊಸ ವರ್ಷಕ್ಕೆ ಇಡೀ ಪ್ರಕೃತಿಯು ಕೂಡ ಸಾತ್ ಕೊಡುತ್ತಿದೆ ಹಾಗಾಗಿ ಗಿಡ ಮರ ಬಳ್ಳಿ ಎಲ್ಲವೂ ಕೂಡ ಸೊಗಸಾಗಿ ಚಿಗುರಿ ಹೊಸತನಕ್ಕೆ ಕಾದು ನಿಂತಿರುತ್ತದೆ.

ಸಾಮಾನ್ಯವಾಗಿ ಹೊಸ ವರ್ಷ ಆರಂಭಿಸುವ ದಿನ ಹೇಗೆ ಕಳೆಯುತ್ತಿವೆಯೋ ಹಾಗೆಯೇ ವರ್ಷಪೂರ್ತಿ ಇರುತ್ತದೆ ಎನ್ನುವ ರೂಢಿ ಮಾತು ಎಲ್ಲ ಕಡೆ ಚಿರಪರಿಚಿತ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಯಾವ ರೀತಿ ಆಚರಣೆ ಮಾಡಬೇಕು ಮತ್ತು ವರ್ಷ ಪೂರ್ತಿ ಇದೇ ರೀತಿ ಶುಭ ಫಲಗಳು ಸಿಗಬೇಕು ಎಂದರೆ ವರ್ಷ ಪೂರ್ತಿ ಯುಗಾದಿಯಂತೆ ಸಮೃದ್ಧಿ ಇರಬೇಕು ಎಂದರೆ ಏನು ಮಾಡಬೇಕು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ಯುಗಾದಿ ಹಬ್ಬವನ್ನು ಹಲವು ವರ್ಷಗಳಿಂದ ಆಚರಿಸುತ್ತಿದ್ದೇವೆ ಯುಗ ಯುಗ ಕಳೆದರೂ ಯುಗಾದಿ ಮತ್ತೆ ಬರುತ್ತಿದೆ ಆದರೂ ಯುಗಾದಿ ದಿನ ಯಾವ ದೇವರನ್ನು ಪೂಜೆ ಮಾಡಬೇಕು ಎನ್ನುವುದೇ ಹಲವರ ಗೊಂದಲ. ಯಾವುದೇ ಪೂಜೆ ಮಾಡುವ ಮುನ್ನ ಮೊದಲು ಪ್ರಥಮ ಪೂಜೆ ವಂದಿತನಾದ ವಿಘ್ನೇಶ್ವರನಿಗೆ ಪೂಜೆ ಮಾಡಬೇಕು ಇದಾದ ಬಳಿಕ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ಕಾಲಪುರುಷನನ್ನು ಕೂಡ ಸ್ಮರಿಸಬೇಕು.

ಕಾಲ ಪುರುಷನ ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೆ ಬದಲಾವಣೆ ತರುತ್ತದೆ ಮತ್ತು ಆತನ ಪ್ರಯಾಣದ ಅನುಸಾರವಾಗಿ ಮಳೆ ಬೆಳೆ ಎಲ್ಲವೂ ನಿರ್ಧಾರ ಆಗುತ್ತದೆ. ಅದಕ್ಕಾಗಿ ಇಂದು ಹಿಂದುಗಳು, ಹೊಸ ಪಂಚಾಂಗ ತೆರೆದು ತಮ್ಮ ತಮ್ಮ ರಾಶಿ ಬಲ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

ಕಾಲಪುರುಷನ ಕೃಪಾಕಟಾಕ್ಷ ಇದ್ದರೆ ಬದುಕು ಖಂಡಿತವಾಗಿಯೂ ಬಂಗಾರವಾಗುತ್ತದೆ. ಆತನ ಆಶೀರ್ವಾದಕ್ಕಾಗಿ ಪುರುಷ ಸೂಕ್ತ, ವಿಷ್ಣು ಸಹಸ್ರನಾಮ ಇತ್ಯಾದಿಗಳನ್ನು ಪ್ರತಿನಿತ್ಯವೂ ಕೂಡ ಪಠಿಸಬೇಕು ಸಾಧ್ಯವಾಗದಿದ್ದರೆ ಅವುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನವಾದರೂ ಮಾಡಬೇಕು.

ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ವಿಷ್ಣು ರಾಮ ಕೃಷ್ಣ ಈ ರೀತಿ ವಿಷ್ಣುವಿನ ಅವತಾರದ ಯಾವುದೇ ದೇವರನ್ನು ಪೂಜೆ ಮಾಡಿದರು ಕೂಡ ಅದು ಸಹ ಸಲ್ಲುತ್ತದೆ. ಯಾಕೆಂದರೆ ಸೃಷ್ಟಿಕರ್ತ ಬ್ರಹ್ಮನಾದರೆ ಈಗ ಬದುಕು ನಡೆಸುತ್ತಿರುವವರು ವಿಷ್ಣು ಆಗಿದ್ದಾರೆ ಹಾಗೂ ನಮ್ಮನ್ನು ಅಂತ್ಯ ಮಾಡುವುದು ಶಿವ. ಹಾಗಾಗಿ ಲಯಕರ್ತನಾದ ನಾರಾಯಣನನ್ನು ಸ್ಮರಿಸಿದರೆ ಜೀವನ ಸರಳವಾಗುತ್ತದೆ.

ಈ ದಿನ ತಪ್ಪದೇ ನಾವು ಹೇಳಿದ ರೀತಿಯಲ್ಲಿ ಕಾಲಪುರುಷನನ್ನು ತ್ರಿಮೂರ್ತಿಗಳನ್ನು ಮತ್ತು ಎಲ್ಲಕ್ಕಿಂತ ಮೊದಲು ಗಣಪತಿಗೆ ಯನ್ನು ನೆನೆಯಿರಿ, ಹೊಸ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ನೆರೆಹೊರೆಯವರ ಜೊತೆಗೂ ಸ್ನೇಹಿತರ ಜೊತೆಗೂ ಸಂಭ್ರಮ ಹಂಚಿಕೊಳ್ಳಿ, ಯಾರಿಗೂ ಕೂಡ ಕೆಟ್ಟ ಮಾತನ್ನು ಆಡಬೇಡಿ, ಯಾರ ಬಗ್ಗೆ ಕೆಟ್ಟದ್ದನ್ನು ಯೋಚನೆ ಮಾಡಬೇಡಿ.

ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಮತ್ತು ನಿಮ್ಮ ಜೀವನದಲ್ಲಿ ಹಿಂದಿನ ವರ್ಷ ಯಾವುದೇ ರೀತಿಯ ಕ’ಷ್ಟ, ನೋ’ವು, ದುಃ’ಖ, ಅ’ವ’ಮಾ’ನ, ಅ’ಹಂ’ಕಾ’ರ, ಕೋ’ಪ, ದ್ವೇ’ಷ ಏನೇ ಇದ್ದರೂ ಕೂಡ ಹಳೆ ಮರದ ಹಣ್ಣೆಲೆಗಳು ಉದುರಿ ಹೊಸ ಹಸಿರು ಚಿಗುರುವಂತೆ ಈ ಹೊಸ ವರ್ಷ ನಿಮ್ಮ ಬದುಕಿನಲ್ಲಿಯೂ ಒಳ್ಳೆಯದನ್ನು ಮಾಡಲಿ ಸಕಾರಾತ್ಮಕವಾಗಿರಲಿ ಮತ್ತು ಹಿಂದಿನ ವರ್ಷಕ್ಕಿಂತ ಅದ್ಭುತವಾಗಿ ನಡೆದುಕೊಂಡು ಹೋಗಲಿ ಎಂದು ಆ ದೇವರಲ್ಲಿ ಸ್ಮರಿಸುತ್ತಾ ಯುಗಾದಿ ದಿನ ಆರಂಭಿಸಿ ಎಲ್ಲವೂ ಶುಭವಾಗುತ್ತದೆ.

ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

 

ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವ ವಿಚಾರದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ ಆದರೆ ಇದು ಟ್ರೆಂಡಿಂಗ್ ವಿಷಯ ಅಲ್ಲ ಇದು ಬಹಳ ಪುರಾತನವಾದ ವಿಷಯವಾಗಿದೆ. ಹಿರಿಯರು ವಾಸ್ತು ಹೆಸರಿನಲ್ಲಿ ನಮಗೆ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅನುಕೂಲಕರವಾಗುವಂತಹ ಸಾಕಷ್ಟು ನಿಯಮಗಳನ್ನು ರೂಪಿಸಿದ್ದಾರೆ.

ಇವುಗಳನ್ನು ಪಾಲಿಸುವುದರಿಂದ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಪರಿಸ್ಥಿತಿಯು ಕೂಡ ಬಹಳ ಉತ್ತಮವಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವನ್ನು ಕಾಣಬಹುದು ವಾಸ್ತು ಎನ್ನುವುದು ಬಹಳ ಸರಳ ವಿಚಾರವಾಗಿದೆ.

ಆದರೆ ಇದನ್ನು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರು ಹೆಚ್ಚು ಲಾಭ ಮಾಡಿಕೊಡುವಂತಹ ವಿಷಯ. ಹಾಗಾಗಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಕೂಡ ತಿಳಿಯಲೇಬೇಕಾದ ಕೆಲವು ವಾಸ್ತು ನಿಯಮಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಧಾರ್ಮಿಕ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಮಂಚದ ಮೇಲೆ ಕುಳಿತು ಊಟ ತಿನ್ನುವುದು ಒಳ್ಳೆಯದಲ್ಲ, ಅದು ದರಿದ್ರ ತರುತ್ತದೆ, ವಾಸ್ತು ಕೂಡ ಇದನ್ನು ದೋಷ ಎಂದು ಹೇಳುತ್ತದೆ. ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತುಕೊಂಡು ಊಟ ಮಾಡುವ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ ಆತನ ಅಂಗಾಂಗಗಳ ರಕ್ತ ಸಂಚಾರದ ಮೇಲೆ ಇದು ಬಹಳ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಇದು ಕೂಡ ಒಂದು ರೀತಿಯ ವಾಸ್ತುವಿಗೆ ಸಂಬಂಧಿಸಿದ ವಿಷಯವೇ ಆಗಿದೆ.

*ಊಟ ಮಾಡುವ ಒಟ್ಟಿಗೆ ಮೂರು ರೊಟ್ಟಿ ಮೂರು ಚಪಾತಿ ಈ ರೀತಿ ಮೂರರ ಸಂಖ್ಯೆಯನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಅದು ಶುಭವಲ್ಲ ಎಂದು ತಿಳಿಸಲಾಗಿದೆ.
* ಆಹಾರವನ್ನು ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ತೆಗೆದುಕೊಳ್ಳಬೇಕು ಇವೆರಡು ದೇವರ ನಿದರ್ಶನ ಮಾಡಿದ ದಿಕ್ಕುಗಳು ಎಂದು ತಿಳಿಸಲಾಗಿದೆ, ಪಶ್ಚಿಮಾಭಿಮುಖವಾಗಿ ಕುಳಿತು ಆಹಾರ ಸೇವನೆ ಮಾಡಿದರೆ ಆತನ ಋಣಭಾರ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

* ವಾಸ್ತು ಪ್ರಕಾರವಾಗಿ ಮನೆ ನೈರುತ್ಯ ದಿಕ್ಕಿನಲ್ಲಿ ಚಪ್ಪಲಿ ಹಾಗೂ ಬೂಟುಗಳನ್ನು ಇಡಬೇಕು. ಈ ದಿಕ್ಕು ಭೂಮಿಯ ಅಂಶಕ್ಕೆ ಸಂಬಂಧಿಸಿದೆ ಹಾಗಾಗಿ ಇಲ್ಲಿ ಇಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ರೀತಿ ಚಪ್ಪಲಿ ಹಾಗೂ ಶೂಗಳನ್ನು ಬಿಡಬಾರದು. ಈ ದಿಕ್ಕಿನಲ್ಲಿ ಪೂಜಾ ಗೃಹ, ಧ್ಯಾನ ಮಂದಿರ ಇತ್ಯಾದಿಗಳನ್ನು ಮಾತ್ರ ಕಟ್ಟಬೇಕು. ಹಾಗೆ ಈ ಚಪ್ಪಲಿ ಬಿಡುವ ಅಥವಾ ಶೂ ಇಡುವ ರ್ಯಾಕ್ ಗಳನ್ನು ಪೂಜಾ ಮನೆ / ಅಡುಗೆಮನೆ ಪಕ್ಕ ಇಡಲೇಬಾರದು ಇದರಿಂದ ಕೂಡ ವಾಸ್ತುದೋಷ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

* ತುಳಸಿ ಗಿಡಕ್ಕೆ ಆಯುರ್ವೇದ, ಧಾರ್ಮಿಕ ಶಾಸ್ತ್ರ, ವಾಸ್ತು ಶಾಸ್ತ್ರ ‌ ಎಲ್ಲದರಲ್ಲೂ ಕೂಡ ಬಹಳ ಪವಿತ್ರವಾದ ಸ್ಥಾನ ನೀಡಲಾಗಿದೆ. ಈ ತುಳಸಿ ಗಿಡವನ್ನು ಮನೆ ಮುಂದೆ ನಿಟ್ಟು ಪೋಷಿಸುವುದರಿಂದ ಎಲ್ಲಾ ರೀತಿಯ ಗೃಹ ದೋಷಗಳನ್ನು ನಿವಾರಣೆ ಆಗಲಿದೆ.

* ಯಾವುದೇ ಕಾರಣಕ್ಕೂ ಅರಳಿ ಗಿಡವನ್ನು ಮನೆ ಅಕ್ಕ ಪಕ್ಕ ನೆಡಬಾರದು. ಅದರ ನೆರಳು ಕೂಡ ಮನೆ ಮೇಲೆ ಬೀಳಬಾರದು ಒಂದು ವೇಳೆ ಗೋಡೆಯಲ್ಲಿ ಅರಳಿ ಗಿಡ ಬರುತ್ತಿದ್ದರೆ ಅದನ್ನು ವಿಧಿ ವಿಧಾನದ ಮೂಲಕ ತೆರವುಗೊಳಿಸಿ ಬೇರೆ ಕಡೆ ನೆಡಬೇಕು. ಇದು ಮನೆಯಲ್ಲಿ ಮ’ನ’ಸ್ತಾ’ಪ, ಕಿ’ರಿ’ಕಿ’ರಿ ಹೆಚ್ಚಾಗುವಂತೆ ಮಾಡಿ ವಾಸ್ತುದೋಷವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ವಿಚಾರದ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

 

ಯುಗಾದಿ ಎಂದರೆ ಯುಗದ ಆದಿ. ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದೇ ಈ ದಿನದಿಂದ. ಪ್ರಕೃತಿಗೂ ಕೂಡ ಈ ಸಮಯವೇ ಹೊಸ ವರ್ಷ ಸರಿ. ಚಳಿಗಾಲದ ಕೊರೆ ಕಳೆದು ಬೇಸಿಗೆಯ ಬಿಸಿಲಿನ ಜೊತೆ ಸುತ್ತಲೂ ಹಚ್ಚಹಸಿರಿನ ಚಿಗುರು ಬೆಳೆಯುವ ವಸಂತ ಮಾಸದ ಈ ಸಂಭ್ರಮವು ಏಪ್ರಿಲ್ 9, 2024ರಂದು ಅಧಿಕೃತವಾಗಿ ಆರಂಭವಾಗುತ್ತಿದೆ.

ನೂತನ ಕ್ರೋಧಿ ಸಂವತ್ಸರದ ಯುಗಾದಿ ಹಬ್ಬವನ್ನು ಅಂದಿನಿಂದ ಆಚರಿಸುತ್ತೇವೆ ಈ ದಿನ ಹೇಗೆ ಆರಂಭವಾಗುತ್ತದೆಯೋ ಅದೇ ರೀತಿ ಫಲವು ವರ್ಷ ಪೂರ್ತಿ ಇರುತ್ತದೆ ಮತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ದಿನ ಮಾಡಿದ ಒಂದು ತಪ್ಪಿಗಾಗಿ ವರ್ಷಪೂರ್ತಿ ಕ’ಷ್ಟ ಪಡಬೇಕಾಗುತ್ತದೆ ಎನ್ನುವ ಮಾತುಗಳು ಇವೆ. ಹಾಗಾಗಿ ಇಂದು ಈ ಅಂಕಣದಲ್ಲಿ ಯುಗಾದಿ ಹಬ್ಬದ ಆಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

* ಈ ದಿನ ಆದಷ್ಟು ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು, ಬೇವಿನಕಡ್ಡಿಯಲ್ಲಿ ಹಲ್ಲು ತಿಕ್ಕಬೇಕು ಹಾಗೆಯೇ ಹರಳೆಣ್ಣೆ, ಕಡಲೆ ಹಿಟ್ಟು, ಜೇನುತುಪ್ಪ ಮತ್ತು ಅರಿಶಿನ ಮಿಕ್ಸ್ ಮಾಡಿ ಮೈ ಕೈಗೆ ಹಚ್ಚಿಕೊಂಡು ಸೀಗೆಪುಡಿ ಹಚ್ಚಿ ಸ್ನಾನ ಮಾಡಬೇಕು ಮತ್ತು ಆ ಸ್ನಾನದ ನೀರಿಗೆ ಬೇವಿನ ಎಲೆ ಹಾಕುವುದನ್ನು ಮರೆಯಬಾರದು.

* ಯುಗಾದಿ ಹಬ್ಬದ ಸಮಯದಲ್ಲಿ ಮಾತ್ರವಲ್ಲದೇ ಯಾವುದೇ ಹಬ್ಬವನ್ನು ಆಚರಣೆ ಮಾಡಿದರು ಕೂಡ ಆದಷ್ಟು ಅಚ್ಚುಕಟ್ಟಾಗಿ ಮಡಿಯಿಂದ ಆಚರಣೆ ಮಾಡಬೇಕು. ಈ ರೀತಿ ಆಚರಣೆ ಮಾಡಿದರೆ ಇನ್ನೂ ಹೆಚ್ಚಿನ ಫಲಗಳು ಸಿಗುತ್ತವೆ. ಅದರಲ್ಲೂ ಯುಗಾದಿ ಹಬ್ಬದಂದು ಈ ರೀತಿ ಮನೆಯನ್ನು ಪೂರ್ತಿ ಸ್ವಚ್ಛಗೊಳಿಸಿ ಆರಂಭಿಸಿದರೆ ಹಳೆ ಕೊಳೆ, ಹಳೆ ಕಹಿ, ಕೆ’ಟ್ಟ ನೆನಪು ಮರೆತು ಹೊಸ ಬದುಕಿಗೆ ಕಾಲಿಟ್ಟ ಅನುಭವ ಬರುತ್ತದೆ.

ಈ ಸುದ್ದಿ ಓದಿ:-ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

* ಯುಗಾದಿ ಹಬ್ಬವನ್ನು ಹೊಸ ಬಟ್ಟೆಗಳನ್ನು ಹಾಕಿಕೊಂಡು ಆಚರಿಸಬೇಕು ಯುಗಾದಿ ಹಬ್ಬದ ದಿನದಂದು ಶುಚಿಯಾದ ತಕ್ಷಣ ದೇವರ ಕೋಣೆಗೆ ಹೋಗಿ ವಿಘ್ನ ವಿನಾಶಕ ವಿಘ್ನೇಶ್ವರನನ್ನು ಮತ್ತು ಕಾಲಪುರುಷನನ್ನು ಸ್ಮರಿಸಬೇಕು. ನಿಮ್ಮ ಇಷ್ಟ ದೇವರು, ಕುಲ ದೇವರನ್ನು ನೆನೆದು ಆಶೀರ್ವಾದಕ್ಕಾಗಿ ಪ್ರಾರ್ಥಿಸಿ, ವರ್ಷಪೂರ್ತಿ ಸುಖಕರವಾಗಿರುವಂತೆ ಕಾಪಾಡಿ ಎಂದು ಕೇಳಿಕೊಳ್ಳಬೇಕು.

ಹಾಗೆಯೇ ಮೊದಲಿಗೆ ಬೇವು-ಬೆಲ್ಲವನ್ನು ಸೇವಿಸಿ ನಂತರ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಮನೆಯ ಹೊಸ್ತಿಲಿಗೆ ಕೂಡ ತಪ್ಪದೆ ಪ್ರತಿಯೊಬ್ಬರು ಮಾವಿನ ತೋರಣವನ್ನು ಕಟ್ಟಬೇಕು ಮನೆ ಮುಂದೆ ರಂಗೋಲಿಯಂತೂ ಇರಲೇಬೇಕು ಹೊಸತನ ಸ್ವಾಗತಿಸುತ್ತಿರುವುದು ಮನೆ ಮನಕ್ಕೆ ಸಂಭ್ರಮ ತುಂಬಬೇಕು.

ಈ ಸುದ್ದಿ ಓದಿ:-ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

* ಈ ದಿನ ಪಂಚಾಂಗ ಶ್ರವಣ ಮಾಡಿ ವರ್ಷ ಭವಿಷ್ಯ ಕೇಳುವ ಅಭ್ಯಾಸ ಹಲವರಲ್ಲಿ ಇದೆ. ಈ ರೀತಿ ಮಾಡುವವರು ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕೇಳಬಾರದು, ಪಂಚಾಂಗ ಶ್ರವಣ ಮಾಡುವವರು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಆ ವರ್ಷದ ಅವರ ಆಯ-ವ್ಯಯ, ಲಾಭ-ನಷ್ಟ ಏನಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.

ಹೊಸ ವರ್ಷದ ಈ ದಿನ ಮನೆಯಲ್ಲಿ ಸಿಹಿ ತಿನಿಸು ಮಾಡಬೇಕು ಮತ್ತು ಕೈಲಾದಷ್ಟು ಅಸಹಾಯಕರಿಗೆ ಸಿಹಿ ಹಾಗೂ ಹೊಸ ಬಟ್ಟೆಗಳನ್ನು ದಾನ ಮಾಡಬೇಕು. ಯಾವುದೇ ಕಾರಣಕ್ಕೂ ಈ ದಿನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಗಲಿ ಚಿಕ್ಕ ಮಕ್ಕಳಿಗೆ ಆಗಲಿ ಬೈದು ಕ’ಣ್ಣೀ’ರಿಡುವಂತೆ ಮಾಡಬಾರದು.

ಈ ಸುದ್ದಿ ಓದಿ:-ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

* ಯುಗಾದಿ ಹಬ್ಬವೇ ಆಗಲಿ ಅಥವಾ ಇನ್ನಿತರ ಯಾವುದೇ ಹಬ್ಬ ಆಗಲಿ, ಯಾವುದೇ ಕಾರಣಕ್ಕೂ ಹಬ್ಬದ ದಿನಗಳಂದು ಮಧ್ಯಪಾನ ಧೂಮಪಾನ ಮತ್ತು ಮಾಂಸ ಆಹಾರ ಸೇವನೆಗಳನ್ನು ಮಾಡಬಾರದು. ಈ ರೀತಿ ಮಾಡಿದ್ದೇ ಆದರೆ ನೀವು ವರ್ಷಪೂರ್ತಿ ದಟ್ಟ ದರಿದ್ರವನ್ನು ಕ’ಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಈ ರೀತಿ ಕೆಟ್ಟ ಅಭ್ಯಾಸ ಬಿಟ್ಟು ಒಳ್ಳೆಯ ರೀತಿಯಲ್ಲಿ ಹೊಸ ವರ್ಷ ಆರಂಭಿಸಿ ಶುಭವಾಗಲಿ.

ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

0

 

ವಯಸ್ಸಾದವರು ಅಲ್ಲಲ್ಲಿ ಕುಸಿದು ಬೀಳುತ್ತಾರೆ. ಇದು ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೊಡ್ಡ ಟೆನ್ಶನ್ ಆಗಿರುತ್ತದೆ. ಇದು ವಯೋಸಹಜ ಸಮಸ್ಯೆ ಕೂಡ ಎನಿಸಿ ಕೊಂಡಿದೆ. WHO ಸಂಶೋಧನೆಯ ಪ್ರಕಾರವಾಗಿ 65 ವಯಸ್ಸಾದವರಲ್ಲಿ 35% ಜನ ವರ್ಷಕ್ಕೆ ಒಮ್ಮೆಯಾದರೂ ಬೀಳುತ್ತಾರೆ.

ವಯಸ್ಸಾಗುತ್ತಾ ಹೋದಂತೆ ದೇಹದ ಸಮತೋಲನ ತಪ್ಪುತ್ತದೆ, ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ, ಮೂಳೆಗಳು ದುರ್ಬಲವಾಗುತ್ತದೆ, ದೃಷ್ಟಿ ಮಂದವಾಗುವುದು ಅಥವಾ ಇನ್ಯಾವುದೋ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳ ಮಂಪರಿನ ಕಾರಣವೂ ಈ ರೀತಿ ಕುಸಿಯುವುದಕ್ಕೆ ಕಾರಣವಾಗಿದೆ.

ಈ ರೀತಿ ವಯಸ್ಸಾದವರು ಬಿದ್ದು ಅವರ ಬೆನ್ನು ಮೂಳೆ ಏಟಾಗಿ ಮಣಿಕಟ್ಟು ಏಟಾಗ, ಮಂಡಿ ಮುರಿದು ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಾಕಷ್ಟು ನೋಡಿದ್ದೇವೆ. ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂಡ ದೇಹಕ್ಕೆ ಶಕ್ತಿ ಬರುತ್ತದೆ.

ಈ ಸುದ್ದಿ ಓದಿ;- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ಕೆಲ ವ್ಯಾಯಾಮಗಳನ್ನು ಮಾಡುವ ಮೂಲಕ ಸ್ಟ್ರೆಂಥ್ ಬ್ಯಾಲೆನ್ಸ್ ಹಾಗೂ ಫೆಕ್ಸಿಬಿಲಿಟಿ ಮೈನ್ಟೈನ್ ಮಾಡಬಹುದು, ಆಗ ಈ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ವಯಸ್ಸಾದ ಮೇಲೆ ಮಾಡಲೇಬೇಕಾದ ಕೆಲ ವ್ಯಾಯಾಮದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಎಲ್ಲಾ ವಯಸ್ಸಾದವರಿಗೆ ಹಾಗೂ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

1. ವಾರ್ಮ್ ಅಪ್ (Warm up):- ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡಲೇಬೇಕು ಮತ್ತು ವ್ಯಾಯಾಮ ಮಾಡುವಾಗ ಮೊದಲು ವಾರ್ಮ್ ಅಪ್ ಮಾಡಿ ಆರಂಭಿಸಬೇಕು.

ಕುತ್ತಿಗೆಯನ್ನು ಪ್ರದಕ್ಷಿಣೀಯವಾಗಿ ಮತ್ತು ಅಪ್ರದಕ್ಷಣೀಯವಾಗಿ 5-6 ಬಾರಿ ತಿರುಗಿಸುವುದು, ಶೋಲ್ಡರ್ ಅಪ್ ಮಾಡುವುದು, ಆಂಕಲ್ ಸರ್ಕಲ್ ಮಾಡುವುದು, ಜಂಪಿಂಗ್ ಜಾಕ್ಸ್ ಅಥವಾ ನಿಧಾನವಾಗಿ ನಿಂತಲ್ಲಿಗೆ ಮಾರ್ಚ್ ಫಸ್ಟ್ ಮಾಡುವುದು ಇಂತಹ ವಾರ್ಮ್ ಅಪ್ ಮಾಡಲೇಬೇಕು.

ಈ ಸುದ್ದಿ ಓದಿ;-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

2. ಬ್ಯಾಲೆನ್ಸ್ ಎಕ್ಸರ್ಸೈಜ್ (Balance Exercise):- ಇದನ್ನು ಒಂಟಿ ಕಾಲಿನಲ್ಲಿ ನಿಲ್ಲುವ ವ್ಯಾಯಾಮ (Single leg stance) ಎಂದು ಸರಳ ಭಾಷೆಯಲ್ಲಿ ಹೇಳಬಹುದು. ಕಂಬಿ ಹಿಡಿದುಕೊಂಡು ಅಥವಾ ಒಂದು ಚೇರ್ ಸಹಾಯ ತೆಗೆದುಕೊಂಡು 20-30 ಸೆಕೆಂಡ್ ಕಾಲ ಒಂದೇ ಕಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡುವುದು.

ಈ ರೀತಿ ಮಾಡುವುದರಿಂದ ಕೋರ್ ಮಝಲ್, ಬೆನ್ನು ಹೊಟ್ಟೆ ಭಾಗ ಮತ್ತು ಎದೆ ಭಾಗದ ಅಕ್ಕ ಪಕ್ಕ ಇರುವ ಮಾಂಸ ಖಂಡಗಳು ಮತ್ತು ತೊಡೆಯ ಭಾಗದ ಮಾಂಸ ಖಂಡಗಳು ಗಟ್ಟಿ ಆಗುತ್ತವೆ. ಎರಡು ಕಾಲುಗಳನ್ನು ಹೀಗೆ ಒಂದಾದ ಮೇಲೆ ಒಂದರಂತೆ ಬದಲಾಯಿಸುತ್ತಾ ಐದಾರು ಬಾರಿ ದಿನವು ಈ ಎಕ್ಸರ್ಸೈಜ್ ಮಾಡಬೇಕು ಆಗ ಬೀಳುವ ಸಾಧ್ಯತೆ ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ;-ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!

3. ಟ್ಯಾಂಡೆಮ್ ವೋಕಿಂಗ್ (Tandem Walking / heal to toe walk):- ಹೆಚ್ಚಿಗೆ ಹೆಜ್ಜೆಯನ್ನು ತಾಗುತ್ತಾ ಒಂದೇ ಸಲಿನಲ್ಲಿ ನಡೆಯುತ್ತಾ ಹೋಗುವುದು ಇದು ಕೂಡ ಒಂದು ವ್ಯಾಯಾಮ, ಇದನ್ನು ಕೂಡ ವಯಸ್ಸಾದವರು ಮಾಡಲೇಬೇಕು ಇದರಿಂದ ಕೂಡ ಬ್ಯಾಲೆನ್ಸ್ ಕಂಟ್ರೋಲ್ ಗೆ ಬರುತ್ತದೆ. ಕಾನ್ಫಿಡೆಂಟ್ ಬರುತ್ತದೆ ಮತ್ತು ಸಮತೋಲನ ಇಲ್ಲದ ಜಗತ್ತಿನ ಆರಾಮಾಗಿ ನಡೆಯಲು ಅಭ್ಯಾಸ ಆಗುತ್ತದೆ

4. ಸ್ಟ್ರೆಂಥ್ ಟ್ರೈನಿಂಗ್(Strength training):- ಮಾಂಸ ಖಂಡಗಳಿಗೆ ಶಕ್ತಿ ತುಂಬುವಂತಹ ವ್ಯಾಯಮ ಮಾಡಬೇಕು ಅವು ಯಾವುವೆಂದರೆ ಭಸ್ಕಿ ಹೊಡೆಯುವುದು (Squats), ಕಿಟಕಿ ಸಹಾಯದಿಂದ ಅಥವಾ ಬಹಳ ಕಷ್ಟ ಆಗುತ್ತಿದೆ ಎಂದರೆ ಒಂದು ಚೇರ್ ಸಹಾಯದಿಂದ ಆದರೂ ನಿಧಾನವಾಗಿ ಚೇರ್ ಮೇಲೆ ಕುಳಿತು ನಂತರ ಕೆಳಗೆ ಕೂರುವುದು, ನಿಧಾನವಾಗಿ ಮೇಲೆ ಏಳುವುದು ಈ ರೀತಿ ಎಕ್ಸರ್ಸೈಜ್ ಮಾಡಲೇಬೇಕು.

ಈ ಸುದ್ದಿ ಓದಿ;-ಬಲಗಣ್ಣು ಅಥವಾ ಎಡಗಣ್ಣು ಯಾವ ಕಣ್ಣು ಅದುರಿದರೆ ಏನು ಫಲ? ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ಗೊತ್ತಾ.?

5. ವಾಲ್ ಪುಷ್ ಅಪ್ (Wall Push up):- ಯುವಕರು ಪುಷ್ ಅಪ್ ಮಾಡುವುದನ್ನು ನೋಡಿರುತ್ತೇವೆ ಆದರೆ ವಯಸ್ಸಾದವರಿಗೆ ಅದು ಅಸಾಧ್ಯ. ಆದರೆ ಅವರು ವಾಲ್ ಪುಷ್ ಅಪ್ ಮಾಡಬಹುದು. ಆರು ಅಡಿ ಗೋಡೆಯಿಂದ ದೂರ ನಿಂತುಕೊಂಡು ಗೋಡೆಗೆ ಪುಷ್ ಅಪ್ ಮಾಡಬಹುದು, ಈ ರೀತಿ ವ್ಯಾಯಾಮ ಮಾಡುವುದರಿಂದ ಕೂಡ ಮಾಂಸ ಖಂಡಗಳು ಗಟ್ಟಿ ಆಗುತ್ತವೆ, ದೇಹಕ್ಕೆ ಶಕ್ತಿ ಬರುತ್ತದೆ.

ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

ಅಂಜೂರದ ಹಣ್ಣು ಎಂದ ತಕ್ಷಣ ಖಂಡಿತ ಬಾಯಲ್ಲಿ ನೀರು ಬರುತ್ತದೆ. ಯಾಕೆಂದರೆ ಇದು ಅಷ್ಟು ರುಚಿಕರವಾಗಿದೆ ಹಾಗೂ ಅಷ್ಟೇ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಈಗಲೂ ಕೂಡ ಬಹಳ ದುಬಾರಿಯಾದ ಡ್ರೈ ಫ್ರೂಟ್ ಗಳಲ್ಲಿ ಅಂಜೂರ ಕೂಡ ಒಂದು. ಇದನ್ನು ಹೇಗೆ ತಯಾರಿಸುತ್ತಾರೆ, ಈ ಹಣ್ಣಿನಿಂದ ಡ್ರೈ ಫ್ರೂಟ್ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.

ಮನೆಯಲ್ಲಿ ಇದನ್ನು ಮಾಡಬಹುದೇ ಎನ್ನುವ ಪ್ರಶ್ನೆಗಳೂ ಇರುತ್ತವೆ ಮನೆಯಲ್ಲಿಯೂ ಅಂಜೂರ ಮಾಡಬಹುದು ಆದರೆ ಬಹಳ ರಿಸ್ಕ್ ಆದರೆ ಫ್ಯಾಕ್ಟರಿಗಳಲ್ಲಿ ಇದನ್ನು ತಯಾರಿಸಿ ಪ್ಯಾಕ್ ಮಾಡಿ ಸೇಲ್ ಮಾಡುತ್ತಾರೆ. ಈ ಪ್ರೋಸೆಸ್ ಹೇಗೆ ನಡೆಯುತ್ತದೆ ಇದಕ್ಕಿರುವ ಪ್ರಾಮುಖ್ಯತೆಗಳೇನು? ಎನ್ನುವ ಅಂಶದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಇದು ಮಲ್ಬರಿಗೆ ಸೇರಿದ ಜಾತಿಯ ಫಲವಾಗಿದೆ. ಅಮೆರಿಕ, ಇಂಡಿಯಾ ಮತ್ತು ಆಫ್ರಿಕಾದ ಕೆಲವು ದೇಶಗಳಲ್ಲಿ ಮಾತ್ರ ಅಂಜೂರವನ್ನು ಬೆಳೆಯಲಾಗುತ್ತದೆ. ನಮ್ಮ ದೇಶದಲ್ಲಿ ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ.

ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

ಅಂಜೂರದ ಸಸಿಯನ್ನು ನಾಟಿ ಮಾಡಿದ ಎರಡೇ ವರ್ಷಗಳಲ್ಲಿ ಅದು ಫಲ ಕೊಡಲು ಆರಂಭಿಸುತ್ತದೆ, ಕಪ್ಪು ಹಾಗೂ ಕೆಂಪು ನೆಲದಲ್ಲಿ (PH 6-7) ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಿತ್ತನೆ ಮಾಡುವಾಗ ಸುಣ್ಣದ ಕಲ್ಲಿನ ಜೊತೆಗೆ ಮಣ್ಣು ಮಿಶ್ರಣ ಮಾಡಿ ಹಾಕಲಾಗುತ್ತದೆ, ಹೆಚ್ಚಾಗಿ ನೀರಿನ ಸೌಲಭ್ಯ ಕೂಡ ಕೊಡಬೇಕಾಗುತ್ತದೆ.

ಈ ಮರ 4-5 ವರ್ಷಗಳಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ ಆ ಸಮಯಕ್ಕೆ 15-20KG ಇಳುವರಿಯನ್ನು ಕೂಡ ಕೊಡುತ್ತದೆ ಮತ್ತು 50ರಿಂದ 60 ವರ್ಷಗಳವರೆಗೆ ಇದೇ ರೀತಿಯಾಗಿ ಫಲ ಕೊಡುತ್ತದೆ. ಅಂಜೂರ ಹಣ್ಣಾದಾಗ ಹಣ್ಣಿನ ಮೇಲಿರುವ ಬಣ್ಣ ಬದಲಾಗುತ್ತದೆ ಪರ್ಪಲ್ ಬಣ್ಣಕ್ಕೆ ತಿರುಗಿದಾಗ ಕಟಾವು ಮಾಡಲಾಗುತ್ತದೆ.

ಈ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶವಿದೆ ದೇಹಕ್ಕೆ ಬೇಕಾದ ನ್ಯಾಚುರಲ್ ಶುಗರ್, ಮೆಗ್ನೀಷಿಯಂ, ಐರನ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಜೂರದಿಂದ ಸಿಗುತ್ತದ. ಫಿಟ್ನೆಸ್ ಮೆಂಟೇನ್ ಮಾಡುವವರು ತಮ್ಮ ಡಯಟ್ ನಲ್ಲಿ ಅಂಜೂರದ ಹಣ್ಣನ್ನು ಬಳಸುತ್ತಾರೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಮಕ್ಕಳ ಆರೋಗ್ಯಕ್ಕೂ ಮತ್ತು ಬುದ್ಧಿಶಕ್ತಿಗೂ ಬಹಳ ಒಳ್ಳೆಯದು ಅಸ್ತಮ ಕಾಯಿಲೆಗೆ ಒಳ್ಳೆಯ ಔಷಧಿ, ರಕ್ತ ಶುದ್ಧಿ ಆಗುತ್ತದೆ, ಶೀತ ನೆಗಡಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕ್ಯಾನ್ಸಲ್ ಸೆಲ್ ಗಳ ನಿಯಂತ್ರಣ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ಹಾಗಾಗಿ ಗುಣಮಟ್ಟಕ್ಕೆ ಅನುಗುಣವಾಗಿ Kg ಗೆ ರೂ.1000 ದವರೆಗೂ ಕೂಡ ಇದು ಮಾರಾಟ ಆಗುತ್ತದೆ.

ಇದನ್ನು ಫ್ಯಾಕ್ಟರಿಗಳಲ್ಲಿ ಹೇಗೆ ತಯಾರಿಸುತ್ತಾರೆ ಎಂದರೆ ಖರೀದಿಸಿದ ಹಣ್ಣುಗಳನ್ನು ನೀರಿನಿಂದ ಮೊದಲ ಸ್ವಚ್ಛ ಮಾಡಿ ನಂತರ ಏಳು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ಬಿಸಿ ನೀರಿನಲ್ಲಿ ಬಾಯ್ಲ್ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತೆ ಒಣಗಿಸುತ್ತಾರೆ ಆಮೇಲೆ ಟ್ರೇಗಳಲ್ಲಿ ತುಂಬಿಸಿ ಫ್ಯಾಕ್ಟರಿಗೆ ತರುತ್ತಾರೆ.

ಫ್ಯಾಕ್ಟರಿ ಗಳಲ್ಲಿ ಹಲವಾರು ವಿಧಾನದ ಮಿಷನ್ ಗಳು ಇದ್ದು ಇದರಲ್ಲಿ ಮತ್ತೊಮ್ಮೆ ಕ್ಲೀನ್ ಆಗುವುದು ಡ್ರೈ ಆಗುವುದು ಈ ರೀತಿ ಕ್ರಿಯೆಗಳಿಗೆ ಒಳಪಟ್ಟು ಅಂತಿಮವಾಗಿ ಪ್ಯಾಕ್ ಕೂಡ ಆಗಿ ಪರೀಕ್ಷೆಗೆ ಒಳಪಟ್ಟು ಸೇಲ್ ಆಗುತ್ತದೆ. ಈ ಅಂಜೂರದ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

 

ಹೇರ್ ಕಟ್ ಮಾಡಿಸುವುದು ಎಂದರೆ ಅದು ಸಿಂಪಲ್ ವಿಚಾರ ಅಲ್ಲ. ಹೇರ್ ಕಟ್ ಮಾಡಿಸುವುದು ಎಂದರೆ ನಮ್ಮ ದೇಹದಿಂದ ನೆಗೆಟಿವ್ ಎನರ್ಜಿಯನ್ನು ಹೊರಹಾಕುವುದು ಮತ್ತು ನಾವು ಶುದ್ಧವಾಗುವುದು, ದರಿದ್ರತನವನ್ನು ದೂರ ಮಾಡುವುದು ಹೀಗೆ ಆರೋಗ್ಯ ಹಾಗೂ ಜ್ಯೋತಿಷ್ಯ ಮತ್ತು ಹಣಕಾಸಿಗೂ ಸಂಬಂಧ ಪಟ್ಟ ವಿಷಯ ಆಗಿದೆ.

ನೀವು ತಪ್ಪಾದ ದಿನ ಹೇರ್ ಕಟ್ ಮಾಡಿಸುವುದರಿಂದ ದಟ್ಟದರಿದ್ರಕ್ಕೆ ತುತ್ತಾಗಬೇಕಾಗುತ್ತದೆ ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಅನುಷ್ಠಾನವನ್ನು ಭಕ್ತಿಯಿಂದ ಮಾಡುವುದರಿಂದ 72 ಗಂಟೆಗಳಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ ಈ ಎರಡು ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಹೇರ್ ಕಟ್ ಮಾಡಿಸುವುದಕ್ಕೆ ನಿಷಿದ್ಧವಾದ ದಿನಗಳು:-

* ಯಾವುದೇ ಕಾರಣಕ್ಕೂ ಪುರುಷನಾಗಲಿ ಮಹಿಳೆಯಾಗಲಿ ಹುಟ್ಟಿದ ದಿನದಂದು ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯದಲ್ಲಿ ಹೇರ್ ಕಟ್ ಮಾಡಿಸುವಂತಿಲ್ಲ
* ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಏಕಾದಶಿ ಸಂಕಷ್ಟ ಹರ ಚತುರ್ಥಿ ದಿನ ಇಂತಹ ದಿನಗಳಂದು ಕೂಡ ಹೇರ್ ಕಟ್ ಮಾಡಿಸುವುದು ನಿಶಿದ್ಧ

* ಹುಣ್ಣಿಮೆ ಆದ ನಂತರ ಅಮಾವಾಸ್ಯೆ ಬರುವವರೆಗೂ ಚಂದ್ರನು ದಿನೇ ದಿನೇ ಕ್ಷೀಣಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ನೀವೇನಾದರೂ ಹೇರ್ ಕಟ್ ಮಾಡಿಸಿದರೆ ಆ ದಿನಗಳಲ್ಲಿ ಹೇರ್ ಕಟ್ ಮಾಡಿಸಿದವರ ಕೂದಲು ಕೂಡ ಇದೇ ರೀತಿ ಉದುರುತ್ತ ಹೋಗುತ್ತದೆ, ಹಾಗೆಯೇ ಅದೃಷ್ಟವೂ ಕರಗುತ್ತದೆ ಎಂದು ಹೇಳಲಾಗುತ್ತದೆ

* ಭಾನುವಾರ ಹೇರ್ ಕಟ್ ಮಾಡಿಸಿದರೆ ಆರ್ಥಿಕ ನಷ್ಟ ಸೋಮವಾರ ಹೇರ್ ಕಟ್ ಮಾಡಿಸಿದರೆ ಮಾನಸಿಕ ಜಟಿಲತೆಗಳು, ಮಂಗಳವಾರ ಹೇರ್ ಕಟ್ ಮಾಡಿಸುವುದರಿಂದ ಆಯಸ್ಸು ಕ್ಷೀಣ, ಗುರುವಾರ ಹೇರ್ ಕಟ್ ಮಾಡಿಸುವುದರಿಂದ ಗುರುಬಲ ಕಡಿಮೆ ಆಗುವುದು, ಶನಿವಾರ ಹೇರ್ ಕಟ್ ಮಾಡಿಸುವುದರಿಂದ ಅ’ಪ’ಘಾ’ತಗಳಾಗುವ ಸಾಧ್ಯತೆ ಹೆಚ್ಚು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

* ಮತ್ತೆ ಯಾವುದೇ ಕಾರಣಕ್ಕೂ ಮೊದಲು ಹೇರ್ ಕಟ್ ಮಾಡಿಸಬಾರದು ಮತ್ತು ಹೇರ್ ಕಟ್ ಒಂದನ್ನೇ ಮಾಡಿಸಬಾರದು, ಶೇವಿಂಗ್ ಮಾಡಿ ಅಥವಾ ಮನೆಯಲ್ಲೇ ಶೇವಿಂಗ್ ಮಾಡಿಕೊಂಡು ಹೋಗಿ ನಂತರ ಹೇರ್ ಕಟ್ ಮಾಡಿಸಬೇಕು ಎಂಬ ನಿಯಮ ಇದೆ

ಪರಿಹಾರ:-

* ಬುಧವಾರ ಹೇರ್ ಕಟ್ ಮಾಡಿಸುವುದರಿಂದ ನೀವು ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ವಿದ್ಯಾರ್ಥಿಗಳಾಗಿದ್ದರು ಪ್ರತಿಯೊಬ್ಬರಿಗೂ ಕೂಡ ಅವರವರ ಕ್ಷೇತ್ರದಲ್ಲಿ ಜಯ ಲಭಿಸುತ್ತದೆ, ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಅವರಿಗೆ ಕೀರ್ತಿ ಹೆಚ್ಚಾಗುತ್ತದೆ ಹಾಗಾಗಿ ಈ ದಿನ ಸೂಕ್ತ ಎಂದು ತಿಳಿಸಿದ್ದಾರೆ.

* ಶುಕ್ರವಾರದ ದಿನವು ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ದಿನ ತಾಯಿ ಮಹಾಲಕ್ಷ್ಮಿಯು ಶುದ್ಧತೆ ಸ್ವಚ್ಛತೆ ಇರುವ ಕಡೆ ಮಾತ್ರ ಇರುತ್ತಾರೆ ಹಾಗಾಗಿ ಆ ದಿನ ಹೇರ್ ಕಟ್ ಮಾಡಿಸಿಕೊಂಡು ಶುದ್ಧವಾಗುವುದು ಕೂಡ ಲಕ್ಷ್ಮಿ ನಾರಾಯಣದ ಆಶೀರ್ವಾದವನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

* ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಚಿಕ್ಕ ಅನುಷ್ಠಾನ ಇದೆ ಮನೆಗೆ ಬಂದು ಸ್ನಾನ ಮಾಡಿದ ನಂತರ ದೇವರ ಕೋಣೆಗೆ ಹೋಗಿ ಲಕ್ಷ್ಮಿ ನಾರಾಯಣರ ಫೋಟೋ ಮುಂದೆ ಕುಳಿತು ದೀಪ ಹಚ್ಚಿ ನಿಮ್ಮ ಕ’ಷ್ಟಗಳನ್ನೆಲ್ಲ ದೇವರ ಬಳಿ ಹೇಳಿಕೊಂಡು ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ಈ ರೀತಿ ನೀವು ಮಾಡಿದ್ದೆ ಆದಲ್ಲಿ 72 ಗಂಟೆಗಳಲ್ಲಿ ನಿಮ್ಮ ಕ’ಷ್ಟ ಪರಿಹಾರ ಆಗುತ್ತದೆ ಮತ್ತು ಪ್ರತಿ ದಿನ ಈ ಮಂತ್ರ ಹೇಳುವ ಅವಶ್ಯಕತೆ ಇಲ್ಲ ನೀವು ಮುಂದೆ ಒಂದೆರಡು ತಿಂಗಳು ಬಿಟ್ಟು ಹೇರ್ ಕಟ್ ಮಾಡಿಸಿದ ದಿನದಂದು ಮಾತ್ರ ಮತ್ತೆ ಈ ಮಂತ್ರವನ್ನು ಹೇಳಬೇಕು
ಮಂತ್ರ:- ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಕುಬೇರಾಯ ಅಷ್ಟಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ

https://www.youtube.com/live/kVTafrET8VU?si=0XeKtTV_Uy5yH_bd

ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!

 

ಕಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಆದರೆ ನಿಮಗೆ ಬಹಳ ಧೈರ್ಯ ಇದೆ ಆದದ್ದು ಆಗಲಿ ಬಂದದ್ದು ಬರಲಿ ಎನ್ನುವ ರೀತಿ ಬಹಳ ಮೊಂಡುತನದಿಂದ ಸಿಡಿದೆದ್ದು ಬದುಕುತ್ತೀರಿ. ಸದ್ಯಕ್ಕೆ ತೃತೀಯ ಭಾವದಲ್ಲಿ ಕೇತು ಇದ್ದಾರೆ ಇದನ್ನು ವಿಕ್ರಮ ಸ್ಥಾನ ಎಂದು ಕೂಡ ಕರೆಯುತ್ತಾರೆ. ಇವರು ನಿಮ್ಮನ್ನು ಹೆಚ್ಚು ಅಲೆದಾಡುವಂತೆ ಹೋರಾಡುವಂತೆ ಕ’ಷ್ಟ ಪಡುವಂತೆ ಮಾಡಿ ನಿಮ್ಮನ್ನು ಚುರುಕುಗೊಳಿಸುತ್ತಾರೆ ಎಂದು ನೇರವಾಗಿ ಹೇಳಬಹುದು.

ಹಾಗೆಯೇ ಸಪ್ತಮದಲ್ಲಿ ಕುಜ ಗ್ರಹ ಇದೆ ಇದು ಕೂಡ ಅಷ್ಟೇನೂ ಉತ್ತಮವಾದ ಪರಿಣಾಮ ಬೀರುತ್ತಿಲ್ಲ. ಕೆಲಸದ ಸ್ಥಳದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು, ಗೊಂದಲಗಳು ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ಈ ಏಪ್ರಿಲ್ ತಿಂಗಳು ಪೂರ್ತಿ ಇಂತಹ ಹಲವು ಸಂದರ್ಭಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿಮಗೆ ಬರುತ್ತದೆ.

ಏಪ್ರಿಲ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ಇರಲಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಹಾಗೆ ಹಾಗೂ ಹೊಟ್ಟೆ ಭಾಗಕ್ಕೆ ಸಂಬಂಧಿಸಿದ ಹಾಗೆ ಹಲವಾರು ಬಗ್ಗೆ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ದೈಹಿಕ ಆರೋಗ್ಯ ಮಾತ್ರ ಅಲ್ಲದೆ ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಎಚ್ಚರದಿಂದ ಇರಲೇ ಬೇಕು.

ಈ ಸುದ್ದಿ ಓದಿ:- ಯುಗಾದಿ 2024 ರಾಶಿ ಭವಿಷ್ಯ, ಮೇಷ ರಾಶಿ 2024 ಈ ತಿಂಗಳಲ್ಲಿ ಊಹಿಸಿರಲಾರದಷ್ಟು ಹಣ ಬರುತ್ತದೆ, ಆದರೆ 2024ರಲ್ಲಿ ಈ ದು’ರ್ಘ’ಟ’ನೆ ನಡೆಯಬಹುದು ಎಚ್ಚರ.!

ಅಷ್ಟಮದಲ್ಲಿ ಈ ತಿಂಗಳಿನಲ್ಲಿ ಶನಿ ಜೊತೆ ರವಿಯು ಕೂಡ ಕೂಡುವುದರಿಂದ ನಿಮ್ಮ ಬದುಕಿನ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದೇ ಹೇಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯಾವುದೇ ಮಾತು ಕೊಡುವ ಮುನ್ನ ಸರಿ ತಪ್ಪು ಅರಿತು ಎರಡೆರಡು ಬಾರಿ ಯೋಚಿಸಿ ನಿಮ್ಮ ಹತ್ತಿರದವರ ಆತ್ಮೀಯರ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರಿಯುವುದು ಉತ್ತಮ.

ಈ ತಿಂಗಳಿನಲ್ಲಿ ಒಟ್ಟಾರೆಯಾಗಿ ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುವುದು ಒಳ್ಳೆಯದು ಎನ್ನುವ ಸಲಹೆಯನ್ನು ಕೊಡಬಹುದು. ಅಷ್ಟಮ ಸ್ಥಾನಕ್ಕೆ ರವಿ ಶನಿ ಜೊತೆ ಮುಂದೆ ಬುಧ ಶುಕ್ರ ಕೂಡ ಕೂಡಿಕೊಳ್ಳುತ್ತಾರೆ ಇದು ಕೂಡ ಕಳತ್ರ ಸ್ಥಾನದಲ್ಲಿ ಭಾರ ಹೆಚ್ಚಾಗುವಂತೆ ಮಾಡಿ ವೈಪರೀತ್ಯ ಉಂಟು ಮಾಡುತ್ತದೆ, ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಕೆಲ ದಿನಗಳು ಕಳೆದು ಕುಜ ಕೂಡ ಇದರ ಜೊತೆ ಸೇರಿ ಇಷ್ಟೆಲ್ಲಾ ಗ್ರಹಗಳು ಒಂದೇ ಭಾವದಲ್ಲಿ ಒಟ್ಟಿಗೆ ಆಗುವುದರಿಂದ ಅದರಲ್ಲೂ ಪಾಪ ಗ್ರಹಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಧನ ಸ್ಥಾನ ಆಗದೆ ಇರುವುದರಿಂದ ಇದು ಯಾವ ರೀತಿ ಫಲ ನೀಡುತ್ತದೆ ಎನ್ನುವುದನ್ನು ಬಹುಶಃ ಈಗಾಗಲೇ ನೀವು ಅರ್ಥ ಮಾಡಿಕೊಂಡಿರುತ್ತೀರಿ.

ಇವುಗಳ ನೀಡುವ ಸಮಸ್ಯೆಗಳು ಕಾರಣವೋ ನಿಮ್ಮ ಉದ್ಯೋಗ ಅಥವಾ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ ಅದರ ಮೂಲಕ ಆರ್ಥಿಕ ನಷ್ಟ ಕೂಡ ಅನುಭವಿಸಬೇಕಾಗುತ್ತದೆ ಒಂದು ವೇಳೆ ನೀವು ಇದನ್ನೆಲ್ಲ ಮೆಟ್ಟಿ ಧೈರ್ಯವಾಗಿ ನಿಂತು ಈ ಸಮಯವನ್ನು ಎದುರಿಸಿದ್ದೆ ಆದಲ್ಲಿ ಹಣಕಾಸಿನಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸ ಬರಲಾರದು.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದಷ್ಟು ಪೂರ್ತಿ ಈ ತಿಂಗಳು ಕೆಟ್ಟ ಸಮಯ ಎಂದುಕೊಂಡು ತಾಳ್ಮೆಯಿಂದ ಜಾಣ್ಮೆಯಿಂದ ಏಪ್ರಿಲ್ ತಿಂಗಳನ್ನು ಕಳೆಯಿರಿ. ಮುಂದಿನ ತಿಂಗಳಿನಿಂದ ನಿಮ್ಮ ಅದೃಷ್ಟ ಬೇರೆ ರೀತಿಯಾಗಿ ಬದಲಾಗಿ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗಗಳು ಭಗವಂತನ ಕೃಪೆಯಿಂದ ದೊರೆಯುತ್ತದೆ.

ಅಲ್ಲಿಯವರೆಗೂ ಶಾಂತ ಚಿತ್ತರಾಗಿ ಆರೋಗ್ಯದ ಬಗ್ಗೆ ಗಮನಕೊಟ್ಟುಕೊಂಡು ಆದಷ್ಟು ಸಂಬಂಧಗಳ ಬಗ್ಗೆ ಜಾಗ್ರತೆಯಿಂದ ಇರಿ. ಕೆಲವೇ ದಿನಗಳಲ್ಲಿ ಎಲ್ಲವೂ ಶುಭವಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕಟಕ ರಾಶಿಯವರು ಪ್ರತಿ ಶನಿವಾರ ಕೂಡ ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ ಮತ್ತು ನವಗ್ರಹಗಳ ಆರಾಧನೆ ಮಾಡಿ ನವಗ್ರಹ ಮಂತ್ರಗಳನ್ನು, ಶನಿ ಸ್ತೋತ್ರ ಹಾಗೂ ಅಷ್ಟೋತ್ತರಗಳನ್ನು ಪಠಿಸಿ.

https://youtu.be/uaAkH1s2UKU?si=dHk2oHCza9udCTYe