Home Blog Page 32

ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!

 

ಹೊಸ ಬಟ್ಟೆ ಧರಿಸುವುದು ಎನ್ನುವುದು ಖುಷಿ ಕೊಡುವ ಸಂಗತಿ ನಮ್ಮಲ್ಲಿ ಎಷ್ಟೇ ಬಟ್ಟೆಗಳಿದ್ದರೂ ಹೊಸ ಬಟ್ಟೆ ಖರೀದಿಸದಾಗ ಏನೋ ಒಂದು ರೀತಿ ಸಮಾಧಾನ ಹಾಗೂ ಸಂತೋಷ ಬರುತ್ತದೆ, ಅದರಲ್ಲೂ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ ಬಟ್ಟೆ ನಮಗೆ ಒದಗಿ ಬರುವುದು ಕೂಡ ಲಾಭವೇ.

ಆದರೆ ಈ ಲಾಭ ಇಮ್ಮಡಿ ಆಗಬೇಕು ಮತ್ತು ಇದು ಹಾಗೆಯೇ ಮುಂದುವರಿಯಬೇಕು ಎನ್ನುವುದಾದರೆ ಅದೇ ರೀತಿ ಸರಿಯಾದ ಪದ್ಧತಿಯಿಂದ ನಾವು ಬಟ್ಟೆ ಧರಿಸಬೇಕು ಬಟ್ಟೆ ಧರಿಸುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಹಿರಿಯರು ಇದನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿ ಇಂದು ಈ ಅಂಕಣದಲ್ಲಿ ಆ ಪ್ರಕಾರವಾಗಿ ಯಾವ ದಿನಗಳಂದು ಧರಿಸಿದರೆ ಏನು ಫಲ ಮತ್ತು ಯಾವ ಸಮಯಗಳಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

* ವಾರದಲ್ಲಿ ಏಳು ದಿನ ಇರುತ್ತದೆ ಮತ್ತು ಈ ಏಳು ದಿನಗಳಲ್ಲೂ ಒಂದೊಂದು ದಿನ ಒಂದೊಂದು ಗ್ರಹಗ್ರತಿಯ ಪ್ರಭಾವ ಅಧಿಕವಾಗಿರುತ್ತದೆ ಆ ಪ್ರಕಾರವಾಗಿ ಬಟ್ಟೆ ಧರಿಸಿದಾಗ ಅದರ ಪರವಾದ ಶುಭಾಶುಭ ಫಲಗಳು ದೊರೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ

* ಮತ್ತೊಂದು ಪ್ರಕಾರವಾಗಿ ಮತ್ತು ಅತಿಹೆಚ್ಚಿನ ಜನರು ಅನುಸರಿಸುವ ಪ್ರಕಾರವಾಗಿ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ಮೂರು ದಿನಗಳು ಮಾತ್ರ ಹೊಸ ಬಟ್ಟೆ ಧರಿಸುವುದಕ್ಕೆ ಅತ್ಯಂತ ಸೂಕ್ತವಾದ ದಿನವಾಗಿದೆ. ಹಾಗಾದರೆ ಯಾಕೆ ಮತ್ತು ಉಳಿದ ದಿನ ಧರಿಸಿದರೆ ಏನು ಫಲ ಎನ್ನುವುದರ ಬಗ್ಗೆ ಹೇಳುವುದಾದರೆ.

ಸೋಮವಾರದಂದು ಹೊಸ ಬಟ್ಟೆ ಧರಿಸಿದರೆ ಮತ್ತೆ ಆ ಬಟ್ಟೆ ಧರಿಸಿದಾಗಲಿಲ್ಲ ಸದಾ ಒದ್ದೆಯಾಗಿ ಇರುತ್ತಾರೆ, ಮಂಗಳವಾರ ಧರಿಸಿದರೆ ಆ ಬಟ್ಟೆ ಹಾಕಿದಾಗಲೆಲ್ಲಾ ಕೋಪ ಹೆಚ್ಚಾಗುತ್ತದೆ, ಬುಧವಾರ ಅತ್ಯಂತ ಶುಭದಿನ ಬಹಳ ಉತ್ತಮ ಪರಿಣಾಮಗಳನ್ನು ಪಡೆಯುತ್ತಾರೆ, ಪದೇ ಪದೇ ಈ ರೀತಿ ಹೊಸ ಬಟ್ಟೆ ಕಳುಹಿಸುವ ಯೋಗ ಬರುತ್ತದೆ.

ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ಗುರುವಾರ ಧರಿಸುವುದರಿಂದ ಗುರುಬಲ ಬರುತ್ತದೆ ಇದರ ಮೂಲಕ ಅಂದುಕೊಂಡ ಕಾರ್ಯಗಳು ನಡೆಯುತ್ತವೆ. ಶುಕ್ರವಾರ ಧರಿಸಿದರೆ ಅಪಾರವಾದ ಸಂಪತ್ತು ಧನ ದ್ರವ್ಯಲಾಭ ಸಿರಿವಂತಿಕೆ ಬರುತ್ತದೆ ಆ ಬಟ್ಟೆ ಧರಿಸಿದಾಗಲೆಲ್ಲಾ ಇಂತಹ ಯೋಗ ಹೆಚ್ಚಾಗುತ್ತದೆ. ಶನಿವಾರ ಧರಿಸಿದರೆ ಅ’ಪ’ಘಾ’ತಗಳಾಗುವ ಭ’ಯ ಹಾಗೂ ಭಾನುವಾರ ಧರಿಸಿದರೆ ಆ ಬಟ್ಟೆ ಹೆಚ್ಚು ಕೊಳಕಾಗುತ್ತದೆ ಎಂದು ತಿಳಿಸಲಾಗಿದೆ.

* ಬಹಳ ಕೊಳಕದ ಬಟ್ಟೆಗಳನ್ನು ಮತ್ತು ಹರಿದು ಹೋದ ಬಟ್ಟೆಗಳನ್ನು ತುಂಬಾ ಹಳೆಯದಾದ ಬಟ್ಟೆಗಳನ್ನು ಕೂಡ ದರಿಸುವುದು ದಾರಿದ್ರ್ಯ ತರುತ್ತದೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ.

* ಬೇರೆಯವರ ಬಟ್ಟೆಗಳನ್ನು ಧರಿಸುವುದು ಕೂಡ ನಮ್ಮ ಅದೃಷ್ಟವನ್ನು ಕ್ಷೀಣಿಸುತ್ತದೆ, ನಮ್ಮ ಬಟ್ಟೆಗಳನ್ನು ಬೇರೆಯವರಿಗೆ ಕೊಡುವುದರಿಂದ ಕೂಡ ನಮ್ಮ ಯೋಗ ಬೇರೆಯವರಿಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

* ಸ್ನಾನ ಮಾಡಿದ ಮೇಲೆ ಯಾವಾಗಲೂ ಮಡಿ ಬಟ್ಟೆಗಳನ್ನೇ ಧರಿಸಬೇಕು ಈಗಾಗಲೇ ಬಳಸಿರುವ ಬಟ್ಟೆಗಳನ್ನು ವಾಶ್ ಮಾಡದೆ ಸ್ನಾನ ಮಾಡಿದ ನಂತರ ಧರಿಸಬಾರದು ಇದರಿಂದ ಕ’ಷ್ಟಗಳು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

* ಹುಟ್ಟುಹಬ್ಬದ ದಿನಗಳಂದು ಹಬ್ಬ ಹರಿದಿನಗಳ ದಿನದಂದು ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಶುಭಕಾರ್ಯಗಳಿಗೆ ಹೋಗುವಾಗ ಈ ರೀತಿ ಸಂದರ್ಭಗಳಲ್ಲಿ ಯಾವುದೇ ವಾರ ಧರಿಸಿದರೂ ಕೂಡ ಅದರಿಂದ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.

* ಆದರೆ ಧರಿಸುವ ಮೊದಲು ಹೊಸ ಬಟ್ಟೆಗೆ ಸ್ವಲ್ಪ ಅರಿಶಿಣದ ಬೊಟ್ಟು ಇಟ್ಟು ಅದನ್ನು ಹಸುವಿನ ಮೇಲೆ ಹಾಕಿ ಅಥವಾ ದೇವರ ಫೋಟೋ ತಾಗಿಸಿ ಧನ್ಯವಾದ ಹೇಳಿ ದೇವರ ಆಶೀರ್ವಾದ ಪಡೆದು ಹಾಕುವ ಅಭ್ಯಾಸ ಹಲವರಲ್ಲಿ ಇದೆ ಇದು ಬಟ್ಟೆಗೆ ಸಕಾರಾತ್ಮಕತೆ ಮತ್ತು ದೈವತ್ವವನ್ನು ತುಂಬುವ ವಿಧಾನ ಎಂದು ನಂಬಬಹುದಾಗಿದೆ.

ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ದೇವರು ಎನ್ನುವವನು ಸರ್ವವ್ಯಾಪಿ. ಆತ ಎಲ್ಲಾ ಕಡೆ ಕೂಡ ಇರುತ್ತಾನೆ ಎನ್ನುವುದು ಯುನಿವರ್ಸಲ್ ಸತ್ಯ. ಆದರೆ ಈಗಾಗಲೇ ಜನ ಹೇಗಾಗಿದ್ದಾರೆ ಎಂದರೆ ತಮ್ಮ ಮನಸ್ಸಿಗೆ ತಕ್ಕ ಹಾಗೆ ದೇವರನ್ನು ಕಲ್ಪಿಸಿಕೊಂಡು ಮನುಷ್ಯರ ಲೆವೆಲ್ ಗೆ ದೇವರನ್ನು ತಂದಿದ್ದಾರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುವುದನ್ನು ಉದಾಹರಿಸಬಹುದು.

ಹಾಗಾದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಾ ಎಂದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ದೇವಸ್ಥಾನ ಮಾತ್ರವಲ್ಲದೆ ನಿಮ್ಮ ಮನಸ್ಸಿಗೆ ಶಾಂತಿ ಕೊಡುವ ನೆಮ್ಮದಿ ಕೊಡುವ ಯಾವುದೇ ಸ್ಥಳಕ್ಕೆ ಹೋದರೂ ಕೂಡ ಅದು ತಪ್ಪಲ್ಲ. ಆದರೆ ದೇವಸ್ಥಾನಕ್ಕೆ ಹೋಗಿ ನಿನಗೆ ಈ ಸೇವೆ ಮಾಡುತ್ತೇನೆ ಆ ಸೇವೆ ಮಾಡುತ್ತೇನೆ ಹಣ್ಣುಕಾಯಿ ಕೊಡುತ್ತೇನೆ ಈ ಕೆಲಸ ಮಾಡಿ ಕೊಡು ಎಂದು ಕೇಳುತ್ತಿವಲ್ಲ ಅದು ತಪ್ಪು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ಮನುಷ್ಯನ ಮಾತ್ರ ಈ ರೀತಿ ಪೇಮೆಂಟ್ ತೆಗೆದುಕೊಂಡು ಅಥವಾ ಕೆಲಸ ಆಗುವುದಕ್ಕೆ ಏನನ್ನಾದರೂ ಡಿಮ್ಯಾಂಡ್ ಮಾಡುವುದು. ದೇವರೆಂದೂ ಈ ರೀತಿ ಇರುವುದಿಲ್ಲ ಆತನಿಗೆ ನೀವು ಕೈ ಮುಗಿದರೂ ಮುಗಿಯದೇ ಇದ್ದರೂ ಹರಕೆ ಕಟ್ಟಿಕೊಂಡರೂ ಕಟ್ಟಿಕೊಳ್ಳದೇ ಇದ್ದರೂ ನಂಬಿಕೆ ಇಟ್ಟರೂ ಇಡದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ.

ನಿಮ್ಮ ನಿಮ್ಮ ಕರ್ಮ ಫಲಗಳನ್ನು ನೀವು ಅನುಭವಿಸಲೇಬೇಕು ಹಾಗಾದರೆ ಈ ಹಬ್ಬ ಹರಿದಿನ ಆಚರಣೆ ಯಾಕೆ ಎಂದರೆ ಮನುಷ್ಯನ ಮನಸ್ಸು ಚಂಚಲ ಆತನನ್ನು ದೇವರು ಎನ್ನುವ ಹೆಸರಿನಲ್ ಏಕಾಗ್ರತೆಗೆ ತರಲು ಮತ್ತು ಆತನ ಮನಸ್ಸಿನ ಕೊಳೆಯನ್ನು ತೊಳೆಯಲು ಈ ರೀತಿಯ ಯಾವುದಾದರೂ ಉದ್ದೇಶದಿಂದ ಇವುಗಳನ್ನು ಆರಂಭಿಸಲಾಗಿರುತ್ತದೆ.

ಯುಗಾದಿ ಹಬ್ಬ ಮಾಡದವರು ಪ್ರಪಂಚದಲ್ಲಿ ಇದ್ದಾರೆ, ಕ್ರಿಸ್ಮಸ್ ಹಬ್ಬ ಮಾಡದವರು ಇದ್ದಾರೆ, ರಂಜಾನ್ ಮಾಡದವರು ಇದ್ದಾರೆ ಆದರೆ ದೇವರು ತನ್ನ ಹಬ್ಬ ಮಾಡದೇ ಇದ್ದವರಿಗೆ ಯಾವುದೇ ಶಿಕ್ಷೆ ಕೊಟ್ಟು ಬಿಡುತ್ತಾನೆ ಎಂದುಕೊಳ್ಳುವುದೆಲ್ಲ ತಪ್ಪು. ದೈವತ್ವ ಎನ್ನುವುದು ಸರ್ವಶೇಷ್ಟವಾದ ಪದ ಮನುಷ್ಯನನ್ನೇ ದೇವತಾ ಮನುಷ್ಯ ಎಂದರೆ ಆತನಲ್ಲಿ ಎಷ್ಟು ಕಲ್ಯಾಣ ಗುಣಗಳು ಇರುತ್ತವೆ.

ಈ ಸುದ್ದಿ ಓದಿ:-ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಇನ್ನು ದೇವರು ಎಂದರೆ ಅವರು ಹೇಗಿರಬಹುದು ಅದು ನಮ್ಮ ಕಲ್ಪನೆಗೂ ನಿಲುಕದ್ದು ನಮ್ಮ ನೀಚತನದಿಂದ ದೇವರನ್ನು ನಮ್ಮ ಲೆವೆಲ್ ಗೆ ಇಳಿಸುವುದು ಬಹಳ ತಪ್ಪು. ದೇವರು ಬಹಳ ಬೇಗ ಅನುಭವಕ್ಕೂ ಬರುತ್ತಾರೆ ಆದರೆ ಒಳಗಿನ ಕಣ್ಣು ತೆರೆದು ಅದನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಬೇಕು ಅಷ್ಟೇ.

ಐದು ನಿಮಿಷಗಳಲ್ಲಿಯೇ ದೇವರ ಅನುಭವ ಮಾಡಿಸಬಹುದು ಬೇಕಾದರೆ ನೀವು ನಿಮ್ಮ ಪಕ್ಕದಲ್ಲಿರುವವರಿಗೆ ಅವರ ಮೂಗು ಹಾಗೂ ಬಾಯಿಯನ್ನು ಮುಚ್ಚಿ ಹಿಡಿದುಕೊಳ್ಳಿ ನಿಮಗೆ ಉಸಿರಾಡಲು ಗಾಳಿ ಬೇಕೋ ಊಟ ಬೇಕೋ ಎಂದು ಕೇಳಿದರೆ ಗಾಳಿ ಸಿಕ್ಕರೆ ಸಾಕು ಎಂಬ ರೀತಿ ಆಗಿರುತ್ತದೆ. ಇನ್ನೆರಡು ನಿಮಿಷಗಳು ಹಾಗೆ ಹಿಡಿದುಕೊಳ್ಳಿ ನಿನಗೆ ಕಾರ್ ಬೇಕೋ ಗಾಳಿ ಬೇಕೋ ಎಂದರೆ ಕೇಳಿದರೆ ಖಂಡಿತವಾಗಿಯೂ ಅವರು ಗಾಳಿಯನ್ನು ಆರಿಸಿಕೊಳ್ಳುತ್ತಾರೆ.

ಇನ್ನು ಸ್ವಲ್ಪ ಹೊತ್ತು ಹಿಡಿದು ನಿಮಗೆ ಅಪಾರವಾದ ಸಂಪತ್ತು ಬೇಕೋ ಉಸಿರಾಡಲು ಬಿಡಬೇಕೋ ಎಂದರೆ ಅವರು ಮೊದಲು ಉಸಿರಾಡಿದರೆ ಸಾಕು ಎಂದು ಮಿಸುಕಾಡುತ್ತಿರುತ್ತಾರೆ. ಆಗ ಬಿಟ್ಟು ನೋಡಿ ಅವರು ಎಷ್ಟು ಚೆನ್ನಾಗಿ ಉಸಿರು ಎಳೆದುಕೊಳ್ಳುತ್ತಾರೆ ಆ ಪ್ರಾಣ ವಾಯುವೇ ಭಗವಂತ ಮತ್ತು ಆತ ಮಾತ್ರ ಸತ್ಯ ಈ ಪ್ರಾಣವಾಯು ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಭಗವಂತನ ಹಾಗೆ ಕೆಟ್ಟವರು ಒಳ್ಳೆಯವರು ದೊಡ್ಡವರು ಚಿಕ್ಕವರಿಗೆಲ್ಲರಿಗೂ ಸಮಾನ ಮತ್ತು ಭಗವಂತನ ಸೃಷ್ಟಿಯು ಕೂಡ ಎಲ್ಲರಿಗೂ ಸಮಾನವಾಗಿಯೇ ಇದೆ. ಹಾಗಾಗಿ ಇರಲು ಎಲ್ಲರಿಗೂ ಒಂದೇ ಭೂಮಿ, ಎಲ್ಲರಿಗೂ ಒಬ್ಬನೇ ಸೂರ್ಯ, ಬೀಳುವ ಮಳೆ ಆ ಭಾಗದ ಎಲ್ಲರಿಗೂ ಒಂದೇ ರೀತಿ ಆದರೆ ಆತ ಮಾಡಿಕೊಳ್ಳುವ ಎಡವಟ್ಟಿನಿಂದ ಅಥವಾ ನಿರ್ಲಕ್ಷದಿಂದ ಅಥವಾ ದು’ರಾ’ಸೆಯಿಂದ ಕ’ಷ್ಟಗಳನ್ನು ಅನುಭವಿಸುತ್ತಾನೆ ಅಷ್ಟೇ.

08 ಏಪ್ರಿಲ್, 2024ರಂದು ಯುಗಾದಿ ಅಮವಾಸ್ಯೆ ಜೊತೆಗೆ ಸೂರ್ಯಗ್ರಹಣ ಕೂಡ ಬಂದಿದೆ, ಕೆಲವು ರಾಶಿಗಳಿಗೆ ಯೋಗ ತಂದಿದ್ದರೆ ಹಲವು ರಾಶಿಗಳಿಗೆ ಗಂಡಾಂ’ತರ.!

 

2024ನೇ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಕಳೆದ ತಿಂಗಳು ಸಂಭವಿಸಿದೆ. ಈ ತಿಂಗಳ ವರ್ಷದ ಮೊದಲನೇ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಅದು ಕೂಡ ಏಪ್ರಿಲ್ 08, 2024ರ ಯುಗಾದಿ ಹಬ್ಬದ ಸಂಭ್ರಮದ ಸಮಯದಲ್ಲಿ ಸೂರ್ಯಗ್ರಹಣ ಬರುತ್ತಿರುವುದು ಹಲವರಲ್ಲಿ ಆತಂಕ ಮೂಡಿಸಿದೆ

ಈ ಸೂರ್ಯ ಗ್ರಹಣ, ಚಂದ್ರಗ್ರಹಣ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಗ್ರಹಗಳ ಸಂಚಾರವೂ ಕೂಡ ದ್ವಾದಶ ರಾಶಿಗಳೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಗಳಿಗೆ ತೊಂದರೆ ಮಾಡಿದರೆ ಹಲವು ರಾಶಿಗಳಿಗೆ ಕಂಟಕಮಯವಾಗಿರುತ್ತದೆ. ಆ ಪ್ರಕಾರವಾಗಿ ಸೂರ್ಯಗ್ರಹಣದ ಪ್ರಭಾವದಿಂದಾಗಿ ರಾಶಿ ಚಕ್ರದ ಈ ಆರು ರಾಶಿಯವರ ಸಮಯ ಕೆಡಲಿದೆ.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ಯಾವ ರಾಶಿಯವರು ಪರಿಹಾರ ಏನು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ. 08 ಏಪ್ರಿಲ್, 2024ರಂದು ಮೇಷ ರಾಶಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುತ್ತಿದೆ. ಮಧ್ಯಾಹ್ನ 2:12 ನಿಮಿಷಕ್ಕೆ ಆರಂಭಗೊಳ್ಳುವ ಈ ಸೂರ್ಯ ಗ್ರಹಣವು ಹಲವು ಸಮಯದವರೆಗೆ ಇರಲಿದೆ.

ಈ ಗ್ರಹಣವು ಅನೇಕರ ಜೀವನದಲ್ಲಿ ಸಮಸ್ಯೆಗಳನ್ನು ತರಲಿದೆ, ಇದಿಷ್ಟು ಮಾತ್ರವಲ್ಲದೆ ಒಂದು ಗ್ರಹಣದಿಂದ ಮತ್ತೊಂದು ಗ್ರಹಣ ನಡೆಯುವವರೆಗಿನ ಸಮಯವನ್ನು ಕೂಡ ಗ್ರಹಣ ಕಾಲ ಎಂದು ಕರೆಯುತ್ತಾರೆ. ಇದು ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆ ಪ್ರಕಾರವಾಗಿ ಈಗ ಇರುವ ಸೂರ್ಯಗ್ರಹಣ ಯಾವ ರಾಶಿಗೆ ಏನು ಫಲ ನೀಡುತ್ತಿದೆ ಇಲ್ಲಿದೆ ನೋಡಿ ಮಾಹಿತಿ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಮೇಷ ರಾಶಿ:- ಮೇಷ ರಾಶಿಯವರಿಗೆ ಯಾವಾಗಲೂ ತಮ್ಮ ಮೇಲೆ ವಿಶ್ವಾಸ ಹೆಚ್ಚು ಎಂದು ಹೇಳಲಾಗುತ್ತಿತ್ತು. ಆದರೆ ಈ ಸಮಯದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ಎದುರಾಗುತ್ತವೆ, ಆಪ್ತ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುರಿದಿದ್ದ ಸಂಬಂಧಗಳು ಮರುಜೊಡನೆ ಆಗುತ್ತಿದ್ದರೆ ಅಥವಾ ಹೊಸ ಸಂಬಂಧಗಳನ್ನು ಆರಂಭಿಸುವ ಚಿಂತನೆಯಲ್ಲಿದ್ದರೆ ಬಹಳ ಜಾಗರಿಕರಾಗಿರುವುದು ಉತ್ತಮ ಇಲ್ಲವಾದಲ್ಲಿ ಇದರಿಂದ ನೀವೇ ನೋ’ವು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!

* ಕರ್ಕಾಟಕ ರಾಶಿ:- ಈ ಸೂರ್ಯ ಗ್ರಹಣವು ಕರ್ಕಾಟಕ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅಂದರೆ ಗ್ರಹಣ ಕಳೆದು ಸೂರ್ಯ ಮತ್ತೆ ಹೊಳೆಯುವಂತೆ ಇವರಿಗೂ ಕೂಡ ಸತ್ಯದ ಮೇಲೆ ಲೇಪನವಾಗಿದ್ದ ಸುಳ್ಳಿನ ತೆರೆಯು ಕಳಚಿ ಸತ್ಯದರ್ಶನವಾಗಲಿದೆ. ತಮ್ಮ ಬದುಕಿಗೆ ಸಂಬಂಧ ಪಟ್ಟ ಅನೇಕ ರಹಸ್ಯಗಳನ್ನು ಕಹಿ ಸತ್ಯವನ್ನು ಇವರು ತಿಳಿದುಕೊಳ್ಳುತ್ತಾರೆ. ಆದರೆ ಇದೆಲ್ಲವೂ ನೋ’ವು ನೀಡುವ ಸಂಗತಿಗಳೇ ಆಗಿವೆ, ಆದಷ್ಟು ಶಾಂತಿಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ.

* ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಗ್ರಹಣ ಕಾಲ ಬಹಳ ಕಷ್ಟಕರವಾಗಿದೆ. ನಿಮ್ಮ ನಿಜವಾದ ನಿರ್ಧಾರಗಳನ್ನು ಹೇಳಿಕೊಳ್ಳಲಾಗದ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಆದರೆ ಧೈರ್ಯವಾಗಿ ಇದನ್ನು ಗೆದ್ದಿದ್ದೇ ಆದಲ್ಲಿ ಬದುಕಿನಲ್ಲಿ ಮುಂದೆ ಬರುವ ಅನೇಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.

* ಕನ್ಯಾ ರಾಶಿ:- ಕನ್ಯಾ ರಾಶಿಯವರು ಕೂಡ ಅನೇಕ ಕೆಟ್ಟ ಫಲಗಳನ್ನು, ಪರೀಕ್ಷಾ ಸಮಯಗಳನ್ನು ಗ್ರಹಣ ಕಳೆದ ಕೆಲದಿನಗಳವರೆಗೆ ಅನುಭವಿಸಲಿದ್ದಾರೆ. ಸದ್ಯಕ್ಕೆ ತಾಳ್ಮೆ ಒಂದೇ ನಿಮ್ಮ ಅಸ್ತ್ರ ಆದಷ್ಟು ಇದನ್ನು ಪಾಲಿಸಿ ಮುಂದಿನ ಗ್ರಹಣವಾದ ನಂತರ ಬಹಳ ಅದ್ಭುತ ಫಲಗಳನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

* ಮಕರ ರಾಶಿ:- ಮಕರ ರಾಶಿಗಳು ಕೂಡ ಅಷ್ಟೇ ಶುಭಫಲಗಳನ್ನು ಈ ಗ್ರಹಣ ಕಾಲ ನೀಡುತ್ತಿಲ್ಲ. ತುಂಬಾ ಸಮಸ್ಯೆಗಳನ್ನು ಈ ಸಮಯದಲ್ಲಿ ನೀವು ಎದುರಿಸಬೇಕಾದ ಪರಿಸ್ಥಿತಿಗಳು ಬರುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಜಾಗೃತಿಯಿಂದ ಇರಿ, ಉದ್ಯೋಗ ಸ್ಥಳದಲ್ಲಿ ಮನಸ್ತಾಪಗಳಾಗುವ ಸಾಧ್ಯತೆಯೂ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ ಮುಂದುವರೆಯಿರಿ.

* ಕುಂಭ ರಾಶಿ:- ಕುಂಭ ರಾಶಿಯವರು ಈಗಾಗಲೇ ಬಹಳ ಕಷ್ಟದ ಸಮಯದಲ್ಲಿ ಇದ್ದಾರೆ. ಗ್ರಹಣ ಪರಿಣಾಮವಾಗಿ ಇದರಲ್ಲಾವ ಬದಲಾವಣೆಯೂ ಆಗುವುದಿಲ್ಲ. ಇನ್ನು ಕೆಲವು ತಿಂಗಳುಗಳವರೆಗೆ ಇವರು ಇದೇ ಪರಿಸ್ಥಿತಿಯಲ್ಲಿ ಮುಂದುವರೆಯಲಿದ್ದಾರೆ. ಆದರೆ ಧೈರ್ಯಂ ಸರ್ವಸ್ತ್ರ ಸಾಧನ ಎನ್ನುವಂತೆ ಧೈರ್ಯ ಒಂದಿದ್ದರೆ ಇಷ್ಟು ದಿನ ಪಟ್ಟ ಕಷ್ಟಗಳ ಮುಂದೆ ಇದ್ಯಾವುದೂ ಇಲ್ಲ ಎನಿಸುತ್ತದೆ, ಮುಂದೆ ಬಹಳ ಶುಭ ದಿನಗಳು ಕಾದಿದೆ ಧೈರ್ಯವಾಗಿರಿ.

ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

 

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ನಮ್ಮ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭ. ಈಗ ನಾವು ಏಪ್ರಿಲ್ 9, 2024ರಂದು ಕ್ರೋಧಿ ಸಂವತ್ಸರವನ್ನು ಆರಂಭಿಸುತ್ತಿದ್ದೇವೆ. ವಸಂತ ಋತು ಚೈತ್ರ ಮಾಸದ ಈ ದಿನ ಇಡೀ ಪ್ರಕೃತಿಯೇ ಹೊಸತನಕ್ಕೆ ತೆರೆದುಕೊಂಡಿರುತ್ತದೆ.

ಎಲ್ಲಾ ಕಡೆ ಹಚ್ಚ ಹಸಿರು ಸಮೃದ್ಧಿಯನ್ನು ಸೂಚಿಸುತ್ತಿರುತ್ತದೆ ಮತ್ತು ಶಿಶಿರ ಮಾಸ ಮುಗಿದು ವಸಂತ ಋತು ಆರಂಭ ಆಗಿರುವುದು ಜೀವನದಲ್ಲಿ ಹೊಸ ಚೈತನ್ಯ ಹೊಸ ಹುರಪು ಹಾಗೂ ಸ್ಪೂರ್ತಿಯನ್ನು ತುಂಬುತ್ತದೆ. ಈ ಶುಭ ಸಮಯದಲ್ಲಿ ನೀವು ಕೂಡ ನಿಮ್ಮ ಜೀವನದ ಕಷ್ಟಗಳನ್ನು ಕಳೆದು ಹೊಸ ರೀತಿ ಬದುಕು ಆರಂಭಿಸಬೇಕು ಹಿಂದಿನ ವರ್ಷಕ್ಕಿಂತ ಹೆಚ್ಚು ಹಣಕಾಸು ಸಂಪಾದಿಸಬೇಕು ಕೀರ್ತಿಗಳಿಸಬೇಕು ಯಶಸ್ವಿ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸರಳ ಉಪಾಯವನ್ನು ಮಾಡಿ.

ಇದಕ್ಕಾಗಿ ಯುಗಾದಿ ಹಬ್ಬದ ದಿನದಂದು ನೀವು ಒಂದು ವಿಶೇಷವಾದ ವಸ್ತುವನ್ನು ಮನೆಗೆ ತರಬೇಕು. ಯುಗಾದಿ ಹಬ್ಬದ ದಿನದಂದು ಪ್ರತಿ ಮನೆಯಲ್ಲೂ ಮಾವು ಬೇವಿನಿಂದ ತಳಿರು ತೋರಣಗಳನ್ನು ಕಟ್ಟಿ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತೇವೆ ಮತ್ತು ಬೇವುಬೆಲ್ಲ ಸೇವಿಸಲೇಬೇಕಾದ ಕಾರಣ ಪ್ರತಿ ಮನೆಯಲ್ಲೂ ಬೇವಿನ ಎಲೆ ಬೇವಿನ ಹೂವನ್ನು ತಂದಿರುತ್ತೇವೆ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಈ ಬೇವಿನ ಎಲೆಗೆ ಒಂದು ಸಂಸ್ಕಾರ ಕೊಡುವುದರಿಂದ ಅದು ನಿಮ್ಮ ಬದುಕಿನ ನಿಮ್ಮ ಮನೆಯ ನಿಮ್ಮ ವ್ಯಾಪಾರ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎನ್ನುವ ಒಂದು ಸೀಕ್ರೆಟ್ ಬಹುತೇಕರಿಗೆ ತಿಳಿದಿಲ್ಲ. ಬೇವಿನ ಸೊಪ್ಪಿಗೆ ಎಷ್ಟು ಶಕ್ತಿ ಇದೆ ಎಂದರೆ ಬೇವಿನ ಮರದ ಸುತ್ತ ಸಕಾರಾತ್ಮಕ ವಾತಾವರಣವಿದೆ ಮತ್ತು ಬೇವಿನ ಎಲೆಗೆ ಆಯುರ್ವೇದದಲ್ಲಿ ಕೂಡ ಪೂಜ್ಯನಿಗೆ ಸ್ಥಾನ ನೀಡಲಾಗಿದೆ.

ಇದು ವಾತಾವರಣದಲ್ಲಿ ಆಮ್ಲಜನಕವನ್ನು ಶುದ್ಧೀಕರಿಸುತ್ತದೆ, ಚರ್ಮ ರೋಗಗಳಿಗೆ ಮುಕ್ತಿ ನೀಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ನಕಾರಾತ್ಮಕ ದೋಷಗಳನ್ನು ಹೀರಿ ಹೊರ ಹಾಕುತ್ತದೆ. ರುಚಿಯಲ್ಲಿ ಕಹಿ ಆಗಿದ್ದರು ಜೀವನಕ್ಕೆ ಇದು ಕೊಡುವ ಸಿಹಿಯು ಬೆಲೆ ಕಟ್ಟಲಾಗದ್ದು.

ನೀವು ಏನು ಮಾಡಬೇಕು ಎಂದರೆ ಅಳಿಲು ಓಡಾಡಿರುವ ಮರದಿಂದ ಬೇವಿನ ಸೊಪ್ಪು ತರಬೇಕು ಯಾಕೆಂದರೆ ಅಳಿಲಿನ ಮೇಲೆ ಮೂರು ಗೆರೆಯನ್ನು ಶ್ರೀರಾಮರು ಹಾಕಿ ಆಶೀರ್ವದಿಸಿದ್ದಾರೆ, ಇಂತಹ ಅಳಿಲು ಕೂಡ ಸಾಕಷ್ಟು ಸಕಾರಾತ್ಮಕತೆಯನ್ನು ಮತ್ತು ದೈವಿಕತೆಯನ್ನು ಹೊಂದಿರುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಅದು ಓಡಾಡಿರುವ ಬೇವಿನ ಎಲೆಗಳಲ್ಲಿ ಇನ್ನು ಆ ಶಕ್ತಿ ಹೇರಳವಾಗಿರುತ್ತದೆ ಒಂದು ವೇಳೆ ಸಿಗದೇ ಇದ್ದರೆ ಮಾರ್ಕೆಟ್ ನಲ್ಲಿ ಸಿಗುವ ಈ ಬೇವಿನ ಎಲೆ ತಂದು ಎರಡು ಕಡ್ಡಿ ಹಿಡಿದುಕೊಂಡು 11 ಬಾರಿ ಜಯರಾಮ್ ಶ್ರೀರಾಮ್ ಜಯ ಜಯ ಜೈ ರಾಮ ಎಂದು ಹೇಳಿ ನಿಮ್ಮ ಬೆರಳುಗಳಿಂದ 11 ಬಾರಿ ಸವರಿ.

ನಂತರ ಇದನ್ನು ದೇವರ ಕೋಣೆಯಲ್ಲಿಟ್ಟು ತಾಯಿ ಮಹಾಲಕ್ಷ್ಮಿ ಮಹಾವಿಷ್ಣು ನಿಮ್ಮ ಮನೆದೇವರು ಹಾಗೂ ಇಷ್ಟ ದೇವರನ್ನು ಪ್ರಾರ್ಥಿಸಿ, ಮುಖ್ಯದ್ವಾರದ ಬಳಿ ತೆಗೆದುಕೊಂಡು ಹೋಗಿ ಹೊಸ್ತಿಲಿಗೆ ಮತ್ತು ತೋರಣ ಕಟ್ಟುವ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಮೂರು ಬಾರಿ ಕುಟ್ಟಿ ಒಂದು ಕಡ್ಡಿಯನ್ನು ನೀವು ಹಣಕಾಸು ಇಡುವ ಬಿರುವಿಗೆ ಹಾಕಿ ಭದ್ರವಾಗಿ ಇಡಿ.

ಇನ್ನೊಂದು ಕಡ್ಡಿಯನ್ನು ನಿಮ್ಮ ವ್ಯಾಪಾರಸ್ಥಳದಲ್ಲಿ ಅಥವಾ ಉದ್ಯೋಗ ಮಾಡುವ ಜಾಗದಲ್ಲಿ ಇಡಿ. ಯಾವುದೇ ಕೆಟ್ಟ ದೃಷ್ಟಿ ದೋಷ ನಿಮಗೆ ತಾಗಿದ್ದರು ನಿವಾರಣೆ ಆಗುತ್ತದೆ ನಿಮ್ಮ ಶತ್ರು ನಾ’ಶವಾಗುತ್ತದೆ ಮತ್ತು ಹಣದ ಆಕರ್ಷಣೆ ಹೆಚ್ಚಾಗಿ ಮುಂದಿನ ಹೊಸ ಸಂವತ್ಸರ ಆರಂಭವಾಗುವುದರ ಒಳಗೆ ನೀವು ಬದುಕಿನಲ್ಲಿ ಬಹಳ ಉತ್ತಮ ಸ್ಥಾನವನ್ನು ತಲುಪಿರುತ್ತೀರಿ. ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಇದನ್ನು ಪಾಲಿಸಿ ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.

ಸೋಮವಾರದ ದಿನ ಈ ಎಲೆಯನ್ನು ದೇವರ ಪಾದದ ಬಳಿಯಲ್ಲಿ ಇಟ್ಟು ಅರ್ಪಣಾ ಮನೋಭಾವದಿಂದ ಈ ಮಾತು ಹೇಳಿಬಿಡಿ ನಿಮ್ಮ ಕಷ್ಟಗಳು ಕಳೆದಂತೆ.!

 

ಸೋಮವಾರ ಎಂದ ತಕ್ಷಣ ಎಲ್ಲರಿಗೂ ಶಿವನ ವಾರ ಎಂದೇ ನೆನಪಾಗುತ್ತದೆ. ಹೌದು ಸೋಮವಾರದ ದಿನವೂ ಶಿವನನ್ನು ಪ್ರಾರ್ಥಿಸುವುದಕ್ಕೆ ಆತನನ್ನು ಆರಾಧಿಸುವುದಕ್ಕೆ ಅತ್ಯಂತ ಸೂಕ್ತವಾದ ಶಿವನಿಗೆ ಪ್ರಿಯವಾದ ದಿನವಾಗಿದೆ. ಸೋಮವಾರದ ದಿನದಂದು ಶಿವ ಪೂಜೆ ಮಾಡುವುದರಿಂದ ಇಷ್ಟಾರ್ಥ ಸ‌ ಪ್ರಾಪ್ತಿಯಾಗುತ್ತವೆ ಮತ್ತು ಕಷ್ಟಕಾರ್ಪಣ್ಯಗಳು ಕಳೆಯುತ್ತವೆ ನಮ್ಮ ಪಾಪಗಳು ಪರಿಹಾರ ಆಗುತ್ತವೆ.

ಆದರೆ ಯಾವುದೇ ಪೂಜೆ ಮಾಡುವುದಕ್ಕೂ ಕೂಡ ವಿಧಿ ವಿಧಾನಗಳು ಇವೆ. ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಣೆ ಮಾಡುವುದರಿಂದ ಮಾತ್ರ ಇಂತಹ ಫಲಗಳನ್ನು ಪಡೆಯಬಹುದು ಇದರೊಂದಿಗೆ ಇದಕ್ಕಿಂತಲೂ ಶ್ರೇಷ್ಠವಾದ ಸಂಗತಿ ಏನೆಂದರೆ ಪ್ರತಿಯೊಂದು ಪೂಜೆ ಹಿಂದೆ ಇರುವ ಕಾರಣವನ್ನು ಅರಿತುಕೊಳ್ಳುವುದು.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಶಿವನ ಪೂಜೆ ಮಾಡುವುದನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಸಂಶಯ ಇಲ್ಲ. ಶಿವ ಎಂದರೆ ಆತ ಭೈರಾಗಿ ಶಿವನಿಗೆ ಪ್ರಿಯವಾದ ವಸ್ತು ವಿಭೂತಿ ಆತ ವಾಸಿಸುವ ಸ್ಥಳ ಸ್ಮಶಾನ ಮತ್ತು ಆತನ ವೇಷಭೂಷಣ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇದೆ ಮತ್ತು ಲಿಂಗ ರೂಪದ ಶಿವನನ್ನು ನಾವು ಆರಾಧಿಸುತ್ತೇವೆ.

ಇದೆಲ್ಲವೂ ನಮಗೆ ಬದುಕು ನಶ್ವರ ಎನ್ನುವ ವೈರಾಗ್ಯ ಮನೋಭಾವ ಮೂಡುವಂತೆ ಮಾಡುತ್ತದೆ. ಭವಬಂಧನಗಳನ್ನು ಮೀರಿ ಭಗವಂತನೇ ಸತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ ಆದರೆ ಇಂತಹ ಸ್ಥಾನ ತಲುಪುವುದಕ್ಕೆ ಒಮ್ಮೆಲೆ ಸಾಧ್ಯವಾಗುವುದಿಲ್ಲ ನಿಧಾನವಾಗಿ ಶಿವನನ್ನು ಆರಾಧಿಸುತ್ತಾ ಇಂತಹದೊಂದು ಜ್ಞಾನ ಮನದೊಳಗೆ ಹರಿಯುತ್ತದೆ.

ಆ ಅರಿವು ಗುರುವಾಗಿ ನಮಗೆ ಭಗವಂತನ ಸಾಕ್ಷಾತ್ಕಾರವನ್ನು ಕೊಡುತ್ತದೆ ಇದು ಸಾಧ್ಯವಾಗಬೇಕು ಎಂದರೆ ಅದಕ್ಕೆ ಶ್ರದ್ಧೆ ಬರಬೇಕು, ಮನಸ್ಸಿನಲ್ಲಿ ಏಕಾಗ್ರತೆ ಬರಬೇಕು, ಭಯ ಭಕ್ತಿ ಬರಬೇಕು. ಇದೆಲ್ಲವೂ ನಾವು ಪದ್ಧತಿ ಪ್ರಕಾರವಾಗಿ ಶಿವನನ್ನು ಪೂಜೆ ಮಾಡುವಾಗ ಸ್ವಲ್ಪ ಸ್ವಲ್ಪವಾಗಿ ಪರಿವರ್ತನೆಗೊಳ್ಳುತ್ತಾ ಬರುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಶಿವನಿಗೆ ಅಲಂಕಾರ ಇಷ್ಟ ಇಲ್ಲ ಇದು ಆತನ ಸರಳತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶಿವನಿಗೆ ಬಿಲ್ವಪತ್ರೆ ಹಾಗೂ ಸುಗಂಧ ಭರಿತವಾದ ಬಿಳಿ ಬಣ್ಣದ ಹೂವುಗಳು ಪ್ರಿಯ. ಮೂರು ದಳ ಇರುವ ಬಿಲ್ಪತ್ರೆ ಶಿವನನ್ನು ಪ್ರತಿನಿಧಿಸುತ್ತದೆ ಮತ್ತು ಬಿಲ್ವದ ಕಾಯಿ ನೈವೇದ್ಯ ಮಾಡಿ ಅರ್ಪಿಸುವುದರಿಂದ ಶಿವ ಪ್ರಸನ್ನರಾಗುತ್ತಾರೆ ಎನ್ನುವ ಮಾತು ಇದೆ ಹಾಗಾಗಿ ಈ ಮರವನ್ನು ಶಿವನ ರೂಪದಲ್ಲಿಯೇ ಕಾಣಲಾಗುತ್ತದೆ.

ಶಿವನಿಗೆ ಅಭಿಷೇಕ ಇಷ್ಟ ಜಲಾಭಿಷೇಕ, ಕ್ಷೀರಾಭಿಷೇಕ ಹಾಗೂ ಬಿಳಿ ಬಣ್ಣದ ಅಕ್ಷತೆಯಲ್ಲಿ ಅಭಿಷೇಕ ಮಾಡುವುದರಿಂದ ಶಿವ ಪ್ರಸನ್ನರಾಗುತ್ತಾರೆ ಇವುಗಳನ್ನು ಮಾಡುವುದರ ಜೊತೆಗೆ ಅರ್ಪಣಾ ಮನೋಭಾವ ಬಹಳ ಮುಖ್ಯ.

ಇವುಗಳನ್ನು ಮಹಾದೇವನಿಗೆ ಅರ್ಪಿಸಿ ಇದುವರೆಗೆ ಯಾವುದೇ ವಿಷಯ ಗೊತ್ತೋ ಗೊತ್ತಿಲ್ಲದೆಯೋ ತಪ್ಪಾಗಿದ್ದರೂ ಇನ್ನು ಮುಂದೆ ತಿದ್ದುಕೊಂಡು ಮನುಷ್ಯನಾಗಿ ಬದುಕುತ್ತೇನೆ ನನ್ನ ತಪ್ಪುಗಳನ್ನು ಕ್ಷಮಿಸು ಎಂದು ಸನ್ಮಾರ್ಗದ ಕಡೆ ದಾರಿ ತೋರಿಸು ಎಂದು ಈಶ್ವರನನ್ನು ಪ್ರಾರ್ಥಿಸಬೇಕು.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಶಿವನಂತೆ ಸದಾ ಶಾಂತ ಭಾವದಲ್ಲಿ ಇರಬೇಕು ಮತ್ತು ಶಿವನಿಗೆ ಪ್ರಿಯವಾಗಬೇಕು ಎಂದರೆ ಶಿವ ಪ್ರಪಂಚವನ್ನು ಕಾಪಾಡುವುದಕ್ಕಾಗಿ ವಿಷ ಕುಡಿದ ರೀತಿಯಲ್ಲಿ ಪರೋಪಕಾರ ಮನೋಭಾವನೆ ಹೊಂದಬೇಕು ಇದನ್ನು ಮನಃಸ್ಪೂರ್ತಿಯಾಗಿ ಮಾಡಬೇಕು.

ಇದು ಸಾಧ್ಯವಾಗದಿದ್ದರೆ ಮತ್ತೊಬ್ಬರ ಜೀವನದಲ್ಲಿ ಹೋಗಿ ತೊಂದರೆ ಕೊಡಬಾರದು ಯಾವಾಗದು ಮನುಷ್ಯತ್ವದಿಂದ ದೈವತ್ವದ ಕಡೆಗೆ ಹೋಗಲು ಪ್ರಯತ್ನಿಸಬೇಕು ಹೊರತು ರಾಕ್ಷಸತ್ವ ಗುಣದ ಕಡೆ ಹೋಗಿ ಪಶುಗಳಾಗಬಾರದು. ಶಿವನ ಧ್ಯಾನದಲ್ಲಿ ಇರುವುದರ ಜೊತೆಗೆ ಶಿವನ ಪ್ರತಿಯೊಂದು ಆಚರಣೆ ಹಿಂದೆ ಇರುವ ಕಾರಣ ಅರಿತು ಅಳವಡಿಸಿಕೊಳ್ಳುವುದರಿಂದ ಮಾತ್ರ ಶಿವ ಪೂಜೆಯ ಫಲಗಳು ಸಿಗುತ್ತವೆ.

ಮನೆ ಕ್ಲೀನಿಂಗ್ ಕಷ್ಟವಾಗಿದೆಯೇ?, ಕೇವಲ ಐದು ನಿಮಿಷಗಳಲ್ಲಿ ಆಶ್ಚರ್ಯ ಪಡುವಂತೆ ಪೂರ್ತಿ ಸ್ವಚ್ಛ ಮಾಡಬಹುದು.!

ಮನೆ ಕ್ಲೀನಿಂಗ್ ಮಾಡುವುದು ಹೇಳಿದಷ್ಟು ಸಿಂಪಲ್ ವಿಚಾರ ಅಲ್ಲವೇ ಅಲ್ಲ. ಸಣ್ಣ ಸಂಸಾರ ಇರುವ ಮನೆ ಆದರೂ ಕೂಡ ಮನೆ ಕ್ಲೀನಿಂಗ್ ಮಾಡುವ ದಿನವಂತು ಇಷ್ಟು ಚಿಕ್ಕ ಮನೆಯಲ್ಲಿ ಇಷ್ಟು ಕೆಲಸವೇ ಎಂದು ಅನಿಸದೇ ಇರದು ಸಾಮಾನ್ಯವಾಗಿ ಪ್ರತಿನಿತ್ಯವೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿರುತ್ತೇವೆ.

ಪ್ರತಿದಿನ ಕಸ ಗುಡಿಸುತ್ತೇವೆ ಮನೆಯನ್ನು ಒರೆಸುತ್ತೇವೆ ಮೂರು ಹೊತ್ತು ಕೂಡ ಅಡುಗೆಯಾದ ಮೇಲೆ ಊಟ ಮಾಡಿದ ಮೇಲೆ ಪಾತ್ರೆ ತೊಳೆಯುತ್ತೇವೆ ಆದರೂ ಕ್ಲೀನಿಂಗ್ ಎಂದು ತಿಂಗಳಿಗೆ ಒಂದು ದಿನ ಆದರೂ ಎಕ್ಸ್ಟ್ರಾ ಸ್ಪೆಷಲ್ ಸಮಯ ಕೊಟ್ಟು ಮೇಂಟೆನೆನ್ಸ್ ಮಾಡಲೇಬೇಕು ಇಲ್ಲವಾದರೆ ಮನೆಯ ಲುಕ್ ಹೋಗಿಬಿಡುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಇದನ್ನು ಎಲ್ಲಿಂದ ಶುರು ಮಾಡುವುದು ಎನ್ನುವುದನ್ನು ಡಿಸೈಡ್ ಮಾಡುವುದೇ ಕ್ಲೀನ್ ಮಾಡೋದಕ್ಕಿಂತ ಮೊದಲಿನ ಟಾಸ್ಕ್. ಮನೆಯಲ್ಲಿ ಅಡುಗೆ ಮನೆಯ ಪಾತ್ರೆಗಳು ಕಲೆ ಕಟ್ಟಿರುತ್ತದೆ ಅವುಗಳ ಕಲೆ ತೆಗೆಯುವುದರಿಂದ ಮತ್ತು ಕಿಚನ್ ಟೈಲ್ಸ್ ಗಳಲ್ಲಿ ಎಣ್ಣೆ ಸಾಂಬಾರ್ ಅಥವಾ ಇನ್ನಿತರ ಒಗ್ಗರಣೆ ಘಾಟು ತಗಲಿ ಆಗಿರುವ ಗಲೀಜನ್ನು ತೆಗೆಯುವ ಕೆಲಸದಿಂದ ಹಿಡಿದು ಸಾಕಷ್ಟು ಕೆಲಸ ಇರುತ್ತದೆ.

ಅಡಿಗೆ ಮನೆ ಮೂಲೆ ಮೂಲೆಗಳಲ್ಲೂ ಕಸ ತೆಗೆದು ಹೊಸ ಲುಕ್ ಕೊಡಬೇಕು ಇನ್ನು ದೇವರ ಕೋಣೆಯಲ್ಲಂತೂ ದೇವರ ಫೋಟೋ ಒರೆಸುವುದು, ಹಿತ್ತಾಳೆ ತಾಮ್ರ ಕಂಚಿನ ದೇವರ ಪೂಜೆ ಸಾಮಗ್ರಿಗಳು ಇವುಗಳು ಫಳಫಳ ಹೊಳೆಯುವಂತೆ ತೊಳೆಯಬೇಕು. ಇದನ್ನು ಮಾಡುವುದು ಕೂಡ ಹೆಚ್ಚು ಸಮಯ ಹಿಡಿಯುತ್ತದೆ ಮತ್ತು ಹೆಚ್ಚು ನೀರು ಖರ್ಚಾಗುವ ಕೆಲಸ ಆಗಿರುತ್ತದೆ.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುವವರು ನೀರಿಗೂ ಕೂಡ ನಾವು ತಿಂಗಳಿನಲ್ಲಿ ಖರೀದಿಸುವ ಹಾಲಿಗಿಂತ ಹೆಚ್ಚಿನ ಬೆಲೆ ಕೊಡುವುದರಿಂದ ನೀರಿನ ಸೌಕರ್ಯವನ್ನು ಕೂಡ ಗಮನದಲ್ಲಿ ಇಟ್ಟುಕೊಂಡೇ ಕ್ಲಿನಿಕ್ ಕೆಲಸಕ್ಕೆ ಕೈ ಹಾಕಬೇಕು. ಹಳ್ಳಿಗಾಡಿನಲ್ಲಿ ಕೂಡ ಈಗ ಪ್ರತಿನಿತ್ಯ ನೀರು ಬಿಡುವ ವ್ಯವಸ್ಥೆ ಇಲ್ಲ ಅವರು ಸಹ ಕಡಿಮೆ ನೀರಿನ ಖರ್ಚಿನಲ್ಲಿ ಕ್ಲೀನ್ ಮಾಡುವಂತಹ ಟ್ರಿಕ್ ಗಳನ್ನು ಬಳಸಿದರೆ ಅವರಿಗೂ ಮತ್ತೆ ನೀರು ತುಂಬಿಸುವ ಶ್ರಮ ಕಡಿಮೆ ಆಗುತ್ತದೆ.

ದೇವರ ಮನೆ ಕೆಲಸ ಆದ ಮೇಲೆ ಲಿವಿಂಗ್ ರೂಮ್ ಗಳನ್ನು ಇರುವ ಫರ್ನಿಚರ್ಗಳು ಫ್ಯಾನ್ ಗಳು ಶೋಕೇಸ್ ನಲ್ಲಿರುವ ವಸ್ತುಗಳು ಅದರ ಮೇಲಿನ ಧೂಳು ತೆಗೆಯುವುದು ಕೂಡ ಕಡಿಮೆ ಸಮಯ ಹಿಡಿಯುವ ಕೆಲಸ ಅಲ್ಲವೇ ಅಲ್ಲ ಮತ್ತು ಅದರಲ್ಲಿ ಕೆಲವು ಶೈನಿಂಗ್ ಇರುವ ವಸ್ತುಗಳನ್ನು ಕೂಡ ತೊಳೆದು ಕ್ಲೀನ್ ಮಾಡಿ ಇಡಬೇಕು ಹಳೆ ಕೊಳೆ ಕುಳಿತರೆ ಯಾವುದು ಕೂಡ ಚೆನ್ನಾಗಿ ಕಾಣುವುದಿಲ್ಲ.

ಈ ಸುದ್ದಿ ಓದಿ:-ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಇದೆಲ್ಲ ಮುಗಿದ ಮೇಲೆ ವಾಶ್ರೂಮ್ ಕೆಲಸವೂ ಸಹ ಇನ್ನೂ ದೊಡ್ಡ ತಲೆನೋವು. ಟೈಲ್ಸ್ ಗಳಿರುವ ಬಿಸಿ ನೀರಿನ ಕಲೆಗಳ, ಕೊಳೆ ಕಲೆ ಬಾತ್ರೂಮ್ ಡೋರ್‌ ಗಳು ಆ ಬಕೆಟ್ ಗಳು ಟಾಯ್ಲೆಟ್ ಬೇಸಿನ್ ಕ್ಲೀನಿಂಗ್, ಅಡಿಗೆಮನೆ ಸಿಂಕ್ ಇದನ್ನು ಫಳಫಳ ಎನಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.

ಈ ರೀತಿ ನಿಮಗೂ ಕೂಡ ಸುಸ್ತಾಗಿದ್ದರೆ ಮಹಿಳೆಯರೇ ಇನ್ನು ಮುಂದೆ ಟೆನ್ಶನ್ ತೆಗೆದುಕೊಳ್ಳಬೇಡಿ. ಎಷ್ಟು ಹಳೆಯ ಕಲೆ, ಗಲೀಜು ಆಗಿದ್ದರು ಐದು ನಿಮಿಷಗಳಲ್ಲಿ ಅವುಗಳನ್ನು ಕ್ಲೀನ್ ಮಾಡಿ ಹೊಸ ಲುಕ್ ಕೊಡುವ ಚಮತ್ಕಾರಿ ಪ್ರಾಡಕ್ಟ್ ಗಳನ್ನು ತಯಾರಾಗಿದೆ. ಇವುಗಳ ಸಹಾಯದಿಂದ ನೀವು ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲಾ ಪಾತ್ರೆಗಳನ್ನು ಗೋಡೆಗಳನ್ನು ಕ್ಲೀನ್ ಮಾಡಬಹುದು.

ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

Cleanso Product ಗಳಲ್ಲಿ ಪಾತ್ರೆಗಳಿಗೆ ಸಪರೇಟ್, ಟೈಲ್ಸ್ ಕ್ಲೀನ್ ಮಾಡಲು ಸೆಪರೇಟ್, ಸ್ಟೀಲ್ ಪಾತ್ರೆಗಳಿಗೆ ಸಪರೇಟ್ ಸಲ್ಯೂಷನ್ಗಳು ಇವೆ. ಈ ವಿಡಿಯೋವನ್ನು ನೀವು ಪೂರ್ತಿ ಗಮನಿಸಿ ನಿಮಗೆ ಇದೆಲ್ಲದರ ಮಾಹಿತಿ ತಿಳಿಯುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮತ್ತು ಈ ಪ್ರಾಡಕ್ಟ್ ಖರೀದಿ ಮಾಡುವುದಿದ್ದರೆ ಈ ಕೆಳಕಂಡ ಸಂಖ್ಯೆಗಳನ್ನು ಕೂಡ ಪ್ರಯತ್ನಿಸಿ.
9742333671 / 9611777766

ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ.!

 

ತಲೆ ಕೂದಲಿಗೆ ಸ್ನಾನ ಮಾಡಿ ದಿನ ನಾವು ಹೆಚ್ಚು ಫ್ರೆಶ್ ಆಗಿ ಕಾಣುತ್ತೇವೆ ಮತ್ತು ಸ್ವಲ್ಪ ರಿಲ್ಯಾಕ್ಸ್ ಅನುಭವ ಆಗುತ್ತದೆ. ದೇಹ ಮತ್ತು ಮನಸ್ಸಿಗೆ ಮುದ ನೀಡುವ ಇಂತಹ ಆಚರಣೆಗಳಿಗೂ ಕೂಡ ಒಂದು ನಿಯಮವಿದೆ. ಶಾಸ್ತ್ರಗಳಲ್ಲಿ ಮಾತ್ರವಲ್ಲದೆ ಆಯುರ್ವೇದ ಪದ್ಧತಿಯಲ್ಲೂ ಕೂಡ ಸ್ನಾನಕ್ಕೆ ವಿಶೇಷ ಸ್ಥಾನಮಾನಗಳಿದ್ದು ಸ್ನಾನವನ್ನು ಕೂಡ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

ಸ್ನಾನ ಎನ್ನುವುದು ಸರಳವಾದ ವಿಚಾರ ಖಂಡಿತ ಅಲ್ಲ, ಯಾವ ಸಮಯದಲ್ಲಿ ತಲೆ ಸ್ನಾನ ಮಾಡಬೇಕು? ಪ್ರತಿದಿನವೂ ಮಾಡಬಹುದೇ? ತಣ್ಣೀರು ಸ್ನಾನ ಉತ್ತಮವೇ? ಬಿಸಿನೀರ ಸ್ನಾನ ಉತ್ತಮವೇ? ಇಂತಹ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇದರಲ್ಲಿ ಯಾವುದು ಸರಿ? ಯಾವುದು ಉತ್ತಮ? ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

* ತಣ್ಣೀರು ಸ್ನಾನ ಮಾಡಿದಾಗ ದೇಹದ ಉಷ್ಣವು ಉದರಕ್ಕೆ ಹೋಗಿ ಸೇರಿಕೊಳ್ಳುತ್ತದೆ ಹೀಗಾಗಿ ತಣ್ಣೀರು ಸ್ನಾನ ಮಾಡಿದವರಿಗೆ ತಕ್ಷಣ ಹೆಚ್ಚು ಹಸಿವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು ತಣ್ಣೀರು ಸ್ನಾನ ಮಾಡುವುದು ಉತ್ತಮ. ಆದರೆ ಚಿಕ್ಕ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಬಾಣಂತಿಯರು, ವಾತ ದೇಹ ಪ್ರಕೃತಿಯವರು, ರೋಗಿಗಳು ತಣ್ಣೀರ ಸ್ನಾನ ಮಾಡುವುದು ಸೂಕ್ತವಲ್ಲ

* ತಣ್ಣೀರ ಸ್ನಾನ ಮಾಡುವಾಗ ಮೊದಲು ನೀರನ್ನು ತಲೆಗೆ ಹಾಕಬೇಕು ಬಿಸಿನೀರು ಸ್ನಾನ ಮಾಡುವಾಗ ನೀರನ್ನು ಮೊದಲಿಗೆ ನೀರನ್ನು ಕಾಲಿಗೆ ಹಾಕಿ ಆರಂಭಿಸಬೇಕು ಎನ್ನುವವ ನಿಯಮ ಇದೆ ಅನೇಕರಿಗೆ ಇದು ತಿಳಿದಿಲ್ಲ, ಇದು ದೇಹದಲ್ಲಿ ರಕ್ತ ಪರಿಚಲನೆ ಹಾಗೂ ನರವ್ಯೂಹದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಹಾಗಾಗಿ ಇಂದಿನಿಂದಲೇ ಅನುಸರಿಸಿ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

* ಪ್ರತಿದಿನವೂ ಮತ್ತು ದಿನದ ಯಾವ ಸಮಯದಲ್ಲಾದರೂ ತಣ್ಣೀರ ಸ್ನಾನ ಮಾಡುವುದು ಎಲ್ಲರಿಗೂ ಅಷ್ಟೊಂದು ಹೊಂದುವುದಿಲ್ಲ ಇದರ ಬದಲು ಬಹಳ ಬೇಸಿಗೆ ಇರುವಾಗ ತಣ್ಣೀರು ಸ್ನಾನ ಮಾಡುವುದು, ಬಹಳ ತಂಪು ಅಥವಾ ಚಳಿ ಇರುವಾಗ ಬೆಚ್ಚಗಿನ ನೀರಿನ ಸ್ನಾನ ಮಾಡುವುದು ಒಳ್ಳೆಯದು. ಬಹಳ ಸುಡುವ ನೀರನ್ನು ತಲೆಗೆ ಹಾಕಿ ಸ್ನಾನ ಮಾಡುವುದು ಅಷ್ಟೊಂದು ಉತ್ತಮವಲ್ಲ

* ರಕ್ತಪಿತ್ತ ಸಮಸ್ಯೆ ಇರುವವರು ಕೂಡ ತಣ್ಣೀರ ಸ್ನಾನ ಮಾಡುವುದು ಉತ್ತಮ. ಮೂಗಿನಲ್ಲಿ ರಕ್ತ ಬರುವುದು, ಮಹಿಳೆಯರಿಗೆ ಅನಿಯಮಿತ ಮುಟ್ಟು, ಪೈಲ್ಸ್ ಸಮಸ್ಯೆಯಿಂದ ರಕ್ತ ಬೀಳುವುದು ಇಂತಹ ಸಮಸ್ಯೆಗಳು ಇರುವವರು ಕೂಡ ತಣ್ಣೀರ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

* ದೇಹದಲ್ಲಿ ಉಷ್ಣ ಹೆಚ್ಚಾದಾಗಲೂ ನೆಗಡಿ ಆಗುತ್ತದೆ ಇಂತಹ ಸಮಸ್ಯೆ ಇದ್ದಾಗ ತಣ್ಣೀರು ಸ್ನಾನ ಮಾಡಿದರೆ ತಕ್ಷಣ ನಿಲ್ಲುತ್ತದೆ.
* ಬಿಸಿ ನೀರಿನ ಸ್ನಾನವು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ ವಾತ ಹಾಗೂ ಕಫ ದೋಷಗಳು ಇದ್ದರೆ ಇದನ್ನು ಸರಿಪಡಿಸುತ್ತದೆ

* ಸುಡುವ ನೀರನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲ ಉದುರುವಿಕೆ ಹೆಚ್ಚಾಗಿರುವುದು ಎಂದು ಹೇಳಲಾಗುತ್ತದೆ. ಕೂದಲು ಆರೋಗ್ಯದಿಂದ ಇರಲು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ತುಂಬಾ ಸಹಾಯಕ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಸುಡುವ ನೀರಿನ ಸ್ನಾನದಿಂದ ಕೂದಲು ದುರ್ಬಲವಾಗುವುದು ಮಾತ್ರವಲ್ಲದೆ ಇಂದ್ರಿಯಗಳ ಶಕ್ತಿಯು ಕೂಡ ಕುಂದಿ ಹೋಗುತ್ತದೆ. ಹಾಗಾಗಿ ತಲೆಗೆ ಹೆಚ್ಚು ಸುಡುವ ನೀರನ್ನು ಹಾಕಬಾರದು ಎಂದು ಆಯುರ್ವೇದ ಹೇಳುತ್ತದೆ.

* ಪ್ರತಿದಿನವೂ ಕೂಡ ತಲೆಗೆ ಸ್ನಾನ ಮಾಡುವುದು ಮತ್ತು ಪ್ರತಿದಿನವೂ ಸ್ಥಾನಕ್ಕೆ ಶಾಂಪೂ ಬಳಸುವುದು ಅಷ್ಟೊಂದು ಒಳ್ಳೆಯದಲ್ಲ. ಕೂದಲಿಗೆ ಸ್ನಾನದ ಜೊತೆಗೆ ಎಣ್ಣೆಯ ಅವಶ್ಯಕತೆ ಕೂಡ ಅಷ್ಟೇ ಇರುತ್ತದೆ ಮತ್ತು ತಲೆಗೆ ಎಣ್ಣೆ ಹಾಕುವುದು ಸ್ನಾನ ಮಾಡುವುದು ಕೂದಲಿನ ಆರೋಗ್ಯದ ವಿಷಯ ಮಾತ್ರವಲ್ಲದೆ ಇಡೀ ದೇಹದ ಮತ್ತು ನರಮಂಡಲದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಕೂಡ ಹೌದು. ತಲೆ ಕೂದಲು ತೊಳೆಯಲು ಆದಷ್ಟು ನ್ಯಾಚುರಲ್ ಆದ ವಸ್ತುಗಳನ್ನು ಉಪಯೋಗಿಸುವುದು ಹೆಚ್ಚು ಉತ್ತಮ ಎಂದು ಆಯುರ್ವೇದ ಹೇಳುತ್ತದೆ.

ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

 

ಹಸ್ತ ಸಾಮುದ್ರಿಕ ಶಾಸ್ತ್ರ ಎನ್ನುವುದು ಬಹಳ ವಿಶೇಷವಾದ ವಿಚಾರವಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬನ ದೇಹದ ಅಂಗಾಂಗಗಳು ರಚನೆ ಆಗಿರುವ ಅವುಗಳು ತೋರುತ್ತಿರುವ ಲಕ್ಷಣಗಳನ್ನು ನೋಡಿ ಅವರ ಭೂತ, ವರ್ತಮಾನ, ಭವಿಷ್ಯ ಹೇಳುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು ಬಹಳ ಕುತೂಹಲ ಹುಟ್ಟಿಸುವಂತಹ ವಿಷಯವಾಗಿದ್ದು ಕೇಳಿದಷ್ಟು ತಿಳಿದುಕೊಂಡಷ್ಟು ಮುಗಿಯದೇ ಇರುವಷ್ಟು ಆಳವಾಗಿದೆ.

ಇದರಲ್ಲಿ ಮನುಷ್ಯನ ಜೀವನ ಸರಳವಾಗಲು ಅನುಸರಿಸಬೇಕಾದ ಎಲ್ಲಾ ಉಪಾಯಗಳ ಬಗ್ಗೆ ತಿಳಿಸಿಕೊಟ್ಟಿದ್ದರು ಮನುಷ್ಯ ಮುಂದೆ ಬರುವ ದೋಷಗಳನ್ನು ತಿಳಿದು ಪರಿಹಾರ ಮಾಡಿಕೊಳ್ಳದೇ ನಿರ್ಲಕ್ಷ ಮಾಡಿ ಸಮಸ್ಯೆಗೆ ಸಿಲುಕುತ್ತಾನೆ. ನೀವು ಕೂಡ ಇದರಲ್ಲಿ ನಂಬಿಕೆ ಇಡುವುದಾದರೆ ಇಂದು ಈ ಲೇಖನದಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೆಬ್ಬೆರಳ ಮೇಲೆ ಬರುವ ಆರ್ಧಚಂದ್ರಾಕೃತಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಮನುಷ್ಯನಿಗೆ ಕೈನಲ್ಲಿರುವ ಅಷ್ಟು ಬೆರಳುಗಳು ಕೂಡ ಮುಖ್ಯವೇ ಆದರೆ ಹೆಬ್ಬೆರಳು ಇದೆಲ್ಲದಕ್ಕಿಂತಲೂ ಮುಖ್ಯ ಹಾಗಾಗಿ ಇದನ್ನು ಹಿರಿಯ ಬೆರಳು ಮುಖ್ಯವಾದ ಬೆರಳು ಎಂದು ಕರೆಯುವುದು, ಇದನ್ನು ಬೆರಳುಗಳ ರಾಜ ಎಂದು ಕೂಡ ಕರೆಯುತ್ತಾರೆ. ಮನುಷ್ಯನ ದೇಹದ ಅನೇಕ ವಿಚಾರಗಳನ್ನು ನಿಯಂತ್ರಣ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ಹೆಬ್ಬೆರಳು ವಹಿಸುತ್ತದೆ.

ಹೆಬ್ಬೆರಳಿಗೆ ಯಾವುದಾದರೂ ಗಾಯ ಅಥವಾ ಹಾನಿ ಆದಾಗ ಅದರ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಇದಿಷ್ಟು ಮಾತ್ರವಲ್ಲದೆ ಒಬ್ಬ ಮನುಷ್ಯನ ಆಸೆ, ದೌರ್ಬಲ್ಯ, ಶಕ್ತಿ, ಸಾಮರ್ಥ್ಯ, ಕೋ’ಪ ರೋಗ ರಹಸ್ಯ ಇತ್ಯಾದಿ ಸ್ವಭಾವವನ್ನು ಕೂಡ ವ್ಯಕ್ತಪಡಿಸುವಂತಹ ಪುಸ್ತಕ ಹೆಬ್ಬೆರಳು ಆಗಿರುತ್ತದೆ ಎಂದು ಕೂಡ ಹೇಳುತ್ತಾರೆ ಇಂತಹ ಹೆಬ್ಬೆರಳು ಕೊಡುವ ಸೂಚನೆಗಳಲ್ಲಿ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.

ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಹೆಬ್ಬೆರಳು ಇರುವ ಲಕ್ಷಣ ಮತ್ತು ಅದರ ಮೇಲೆ ಮೂಡುವ ರೇಖೆ ಮಾತ್ರ ಅಲ್ಲದೆ ಹೆಬ್ಬೆರಳ ಉಗುರಿನ ಮೇಲೆ ಮೂಡುವ ಅರ್ಧಚಂದ್ರಾಕೃತಿ ಕೂಡ ನಿಮಗೆ ಮುಂದೆ ಬರುವ ವಿಷಯಗಳ ಸೂಚನೆ ಕೊಡುತ್ತದೆ. ಈ ಅರ್ಧಚಂದ್ರಾಕೃತಿಯನ್ನು ನೀವು ಕೂಡ ಗಮನಿಸಿರುತ್ತೀರಿ ಅಥವಾ ಈ ಬಗ್ಗೆ ಮಾತನಾಡುವಾಗ ನೀವು ಕೂಡ ಕೇಳಿರುತ್ತೀರಿ.

ಇದು ಮೂರು ರೀತಿ ಕಾಣುತ್ತದೆ. ಅರ್ಧ ಬೆರಳಿನಷ್ಟು ಚಂದ್ರನಂತೆ ಆವರಿಸಿಕೊಂಡಿರುತ್ತದೆ ಅಥವಾ ಬುಡ ಭಾಗದಲ್ಲಿ ಸ್ವಲ್ಪ ಮಾತ್ರ ಇರುತ್ತದೆ ಅಥವಾ ಅರ್ಧಚಂದ್ರಾಕೃತಿಯೇ ಇರುವುದಿಲ್ಲ ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಈ ಚಂದ್ರಾಕೃತಿ ಉಂಟಾಗಿದೆ ಎನ್ನುವುದು ಆಧಾರದ ಮೇಲೆ ಕೂಡ ಶುಭಾಶುಭ ಫಲಗಳು ನಿರ್ಧಾರ ಆಗಿರುತ್ತದೆ.

ಈ ಸುದ್ದಿ ಓದಿ:- ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಆ ಪ್ರಕಾರವಾಗಿ ಬುಡ ಭಾಗದಲ್ಲಿ ಅರ್ಧಚಂದ್ರಾಕೃತಿ ಇರುವುದು ಮತ್ತು ಅರ್ಧಚಂದ್ರಾಕೃತಿ ಇಲ್ಲದೆ ಇರುವುದು ಇವೆರಡೂ ಕೂಡ ಅಷ್ಟೇನೂ ಗಂಭೀರವಾದ ಪರಿಣಾಮ ಬೀರುವುದಿಲ್ಲ ಹಾಗೆ ಅಷ್ಟೇನೂ ಬಲವಾದ ಶುಭಯೋಗಗಳನ್ನು ಕೂಡ ಪ್ರತಿನಿಧಿಸುವುದಿಲ್ಲ ಎಂದು ಹೇಳುತ್ತಾರೆ.

ಆದರೆ ಅಕಸ್ಮಾತ್ ಅರ್ಧ ಉಗುರಿನಷ್ಟು ಅರ್ಧಚಂದ್ರಾಕೃತಿ ಉಂಟಾಗಿದ್ದರೆ ನೀವು ಶೀಘ್ರದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದೀರಿ ಎನ್ನುವ ಸೂಚನೆ ಕೊಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಕೂಡ ಇದನ್ನು ಲುನುಲಾ ಎಂದು ಕರೆಯಲಾಗುತ್ತದೆ.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ದೇಹದಲ್ಲಿ ಕೆಲ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಹೀಗೆ ಆಗುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡಾಗ ತಪ್ಪದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿ ಪರಿಹಾರ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.

ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

 

ಜಾತಕ ಈ ಪದ ಕೇಳಿದ ತಕ್ಷಣವೇ ಜನರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಇದರ ಬಗ್ಗೆ ಎಷ್ಟು ಕುತೂಹಲ ಇರುತ್ತದೆಯೋ ಕೇಳಿದ ಮೇಲೆ ಅಷ್ಟೇ ಭ’ಯ ಹುಟ್ಟುತ್ತದೆ. ಹಾಗಾಗಿ ಅನೇಕರು ಜಾತಕ ಬರೆಸುವುದು ಜಾತಕ ವಿಮರ್ಶೆ ಮಾಡಿಸುವುದು ಈ ಘೀಳಿಗೆ ಹೋಗುವುದಿಲ್ಲ.

ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು ಅಷ್ಟೊಂದು ಯಾರೂ ತೀರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ನಿಧಾನವಾಗಿ ಎಲ್ಲರೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ವಿಚಾರ ಬಂದಾಗ ಜಾತಕ ಹೊಂದಾಣಿಕೆ ಮಾಡಿಸುವುದಕ್ಕೆ ವಿಪರೀತ ತಲೆ ಕೆಡಿಸಿಕೊಂಡು ಓಡಾಡುತ್ತಾರೆ ಅವರಿಗೆಲ್ಲ ಕಿವಿ ಮಾತನ್ನು ಈ ಲೇಖನದ ಮೂಲಕ ತಿಳಿಸಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ವಿಪರೀತವಾಗಿ ಜಾತಕ ಎನ್ನುವುದಕ್ಕೆ ತಲೆ ಕೆಡಿಸಿಕೊಂಡು ದುಃ’ಖ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಜಾತಕದಲ್ಲಿ ಗ್ರಹ ಕೃತಿಗಳ ಪ್ರಭಾವ ಇದೆ ಎನ್ನುವುದು ಎಷ್ಟು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ ಒಂದು ವೇಳೆ ಇದ್ದರೂ ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಯೋತಿಷ್ಯ ಶಾಸ್ತ್ರಜ್ಞರು ಈಗಿನ ಕಾಲದಲ್ಲಿ ಬಹಳ ವಿರಳ ಸಂಖ್ಯೆಯಲ್ಲಿ ಸಿಗುತ್ತಾರೆ.

ಕಡಿಮೆ ಇದ್ದರೂ ಇದನ್ನು ಕುಲಂಕುಶವಾಗಿ ಅಳೆಯುವುದಕ್ಕೆ ಒಂದು ದಿನ ಸಾಕಾಗುವುದೇ ಇಲ್ಲ ಆದರೆ ನೋಡಿದ 5-10 ನಿಮಿಷದಲ್ಲಿ ನಿಮ್ಮ ಜಾತಕ ನೋಡಿ ಲೆಕ್ಕಾಚಾರ ಹಾಕಿ ಅವರೇನಾದರೂ ಆ ಕಂ’ಠ’ಕ ಇದೆ, ಈ ದೋಷ ಇದೆ, ಅಷ್ಟು ಸಾವಿರ ಖರ್ಚು ಮಾಡಿ ಪರಿಹಾರ ಮಾಡಿಸಬೇಕು ಎಂದೆಲ್ಲಾ ಸಲಹೆ ಕೊಟ್ಟರೆ ಅದನ್ನು ತುಂಬಾ ಲೈಟ್ ಆಗಿ ತೆಗೆದುಕೊಳ್ಳಿ.

ಯಾಕೆಂದರೆ ಜಾತಕ ಹೊಂದಾಣಿಕೆ ಆಗದೆ ಇದ್ದರೂ ಮನಸ್ಸು ಹೊಂದಾಣಿಕೆ ಆಗಿ ಮದುವೆ ಆದವರು ಬಹಳಷ್ಟು ಜನ ಸಂತೋಷವಾಗಿ ಬದುಕುತ್ತಿದ್ದಾರೆ. ಹಾಗೆಯೇ ಜಾತಕ ನೋಡಿಸಿ ಮದುವೆ ಆಗಿದ್ದರು ಮದುವೆಯಾದ ಸ್ವಲ್ಪ ದಿನದಲ್ಲೇ ದು’ರಂ’ತವಾದ ‌ ಉದಾಹರಣೆಯೂ ಸುತ್ತಮುತ್ತಲೇ ಸಿಕ್ಕಿರುತ್ತದೆ ಹಾಗಾಗಿ ಇದರ ಬಗ್ಗೆ ನಂಬಬೇಕೋ ಬೇಡವೋ ಎನ್ನುವ ಕನ್ಫ್ಯೂಷನ್ ಹುಟ್ಟದೆ ಇರದು.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ನೀವು ಮನಸ್ಸಿಗೆ ಸಮಾಧಾನ ಸಿಗಬೇಕು ಎಂದರೆ ಅಥವಾ ಈಗಾಗಲೇ ಜಾತಕ ತೋರಿಸಿ, ಯಾವುದೋ ಒಂದು ವಿಷಯ ನಿಮ್ಮನ್ನು ಕಾಡುತ್ತಿದ್ದರೆ ಅದು ನೋ’ವುಂ’ಟು ಮಾಡುವ ವಿಷಯ ಆಗಿದ್ದರೆ ಅದನ್ನು ಮನಸ್ಸಿನಿಂದ ತೆಗೆದು ಹಾಕಿ ಎಲ್ಲವನ್ನು ಕೂಡ ಯುನಿವರ್ಸ್ ಗೆ ಬಿಟ್ಟು ಬಿಡಿ ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಸಂಪೂರ್ಣ ಸುಳ್ಳು ಎಂದು ಇಲ್ಲಿ ವಿತಂಡವಾದ ಮಾಡಲು ನಾವು ಸಿದ್ದರಿಲ್ಲ.

ಆದರೆ ಸೂರ್ಯ ಚಂದ್ರ ಶುಕ್ರ ಮಂಗಳ ಪ್ರಭಾವ ಭೂಮಿ ಮೇಲೆ ಎಷ್ಟಿದೆಯೋ ಅದೇ ರೀತಿ ಜಾತಕದಲ್ಲಿ ಹೇಳುವ ಗ್ರಹಗಳ ಪ್ರಭಾವವು ಅಷ್ಟೇ ಇರುತ್ತದೆ ಎನ್ನುವುದು ಸಂಶಯಾಸ್ಪದವಾಗಿ ಮತ್ತು ಕಣ್ಣೆದುರೇ ಪ್ರಾಕ್ಟಿಕಲ್ ಆಗಿ ಅರಿಯಲಾಗದಂತಹ ವಿಷಯ ಆಗಿದೆ ಹಾಗಾಗಿ ಎಲ್ಲರೂ ಇದನ್ನು ಒಪ್ಪಬೇಕು ಎನ್ನುವುದು ತಪ್ಪಾಗುತ್ತದೆ.

ಜಾತಕಕ್ಕಿಂತಲೂ ಮನಸ್ಸು ಶುದ್ದವಾಗಿರುವುದು, ಆತ್ಮವಿಶ್ವಾಸದಂತೆ ಇರುವುದು, ಸದಾ ಪಾಸಿಟಿವ್ ಆಗಿ ಥಿಂಕ್ ಮಾಡಿ ನಗು ನಗುತ್ತ ಬಾಳುವುದು ಬಹಳ ಮುಖ್ಯವಾದದ್ದು ಈ ರೀತಿ ಇದ್ದರೆ ಆಯಸ್ಸು ಆರೋಗ್ಯ ಅದೃಷ್ಟ ಸಂಪತ್ತು ಎಲ್ಲವೂ ಕೂಡ ಒಲಿದು ಬರುತ್ತದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಹಾಗಾಗಿ ಜಾತಕ ಬಳಸಿ ವಿಮರ್ಶ ಮಾಡಿಸಿ ಸಂ’ಕ’ಟ ಪಡುವ ಬದಲು ಇವುಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ನೀವು ಮಾಡುವ ಕೆಲಸ ಕಾರ್ಯ ಕರ್ಮಗಳ ಬಗ್ಗೆ ನಿಗವಹಿಸಿ ಎಚ್ಚರಿಕೆಯಿಂದ ಬದುಕಿ ಒಳ್ಳೆಯದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದು ಕೂಡ ಬಹಳ ಮುಖ್ಯ ಸಂಗತಿಯಾಗಿದ್ದು ತಪ್ಪದೇ ಇದನ್ನು ಕಮೆಂಟ್ ಮೂಲಕ ತಿಳಿಸಿ

ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಟ್ರಾವೆಲ್ ಮಾಡಲು ಎಲ್ಲರಿಗೂ ಇಷ್ಟ. ಆದರೆ ಟ್ರಾವೆಲಿಂಗ್ ನಲ್ಲಿ ಪ್ರಯಾಣ ಮಾಡಿಯೇ ಸುಸ್ತಾಗುತ್ತದೆ ಎನ್ನುವುದು ಬಹಳ ಬೇಸರದ ವಿಚಾರ. ಆದರೆ ಆರಾಮವಾಗಿ ಸುತ್ತಾಡಬೇಕು ಎಂದರೆ ಅಷ್ಟೇ ದೊಡ್ಡ ಬಜೆಟ್ ನ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಮಧ್ಯಮ ವರ್ಗದವರು ಕಡಿಮೆ ಖರ್ಚಿಗೆ ಈ ರೀತಿ ರಿಸ್ಕ್ ಕೂಡ ಇಲ್ಲದೆ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು ಅಥವಾ ವಿದೇಶ ಪ್ರಯಾಣ ಮಾಡುವ ಯೋಚನೆ ಇದ್ದರೆ ಬೆಂಗಳೂರಿನ bestbus.in ಈ ಟ್ರಾವೆಲ್ ಸಂಪರ್ಕಿಸಿ.

ಬಸ್ಸು ರೈಲು ವಿಮಾನ ಪ್ರಯಾಣಗಳಿಗೆ ಈ ಟ್ರಾವೆಲ್ ಹೆಸರುವಾಸಿಯಾಗಿದೆ. ನಿಮ್ಮನ್ನು ಮನೆ ಮಂದಿ ಎಷ್ಟು ಜೋಪಾನ ಮಾಡಿ ಕರೆದುಕೊಂಡು ಹೋಗಿ ಸಂತೋಷವಾಗಿ ನೋಡಿಕೊಂಡು ಬರುತ್ತಾರೋ ಅಷ್ಟೇ ಕ್ಷೇಮವಾಗಿ ಮನೆಗೆ ತಂದು ತಲುಪಿಸುತ್ತಾರೆ. ಸದ್ಯಕ್ಕೆ ಈ ಟ್ರಾವೆಲ್ಸ್ ನ ಧರ್ಮಸ್ಥಳದ ಪ್ಯಾಕೇಜ್ ಉದಾಹರಣೆಯೊಂದಿಗೆ ಇವರ ಸರ್ವಿಸ್ ಬಗ್ಗೆ ವಿವರಿಸಲು ಇಚ್ಚಿಸುತಿದ್ದೇನೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ರೂ.799 ರಿಂದ ಇವರ ಪ್ಯಾಕೇಜ್ ಆರಂಭ ಆಗುತ್ತದೆ. ಹಿಂದಿನ ದಿನದ ರಾತ್ರಿ ನಿಮ್ಮನ್ನು ಹತ್ತಿರದಲ್ಲಿರುವ ಪಿಕಪ್ ಪಾಯಿಂಟ್ ಗಳಿಗೆ ವೇಟ್ ಮಾಡಲು ಹೇಳುತ್ತಾರೆ ಅವರು ಯಾವ ಸಮಯಕ್ಕೆ ಹೇಳುತ್ತಾರೆ ಆ ಸಮಯದ ಐದು ನಿಮಿಷಗಳ ಒಳಗೆ ಬಂದು ನಿಮ್ಮನ್ನು ಪಿಕ್ ಅಪ್ ಮಾಡ್ತಾರೆ ಎನ್ನುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ ಕೆಲವೊಮ್ಮೆ ಬಸ್‌ ಗಳಿಗೆ ಕಾದು ಕಾದೇ ನಮಗೆ ಟ್ರಾವೆಲ್ ಮಾಡುವ ಮೂಡ್ ಹೊರಟು ಹೋಗಿರುತ್ತದೆ.

ಆದರೆ ಈ ಟ್ರಾವೆಲ್ ಕಂಪನಿ ಆ ತೊಂದರೆ ಕೊಡುವುದಿಲ್ಲ. ಬಹಳ ಚೆನ್ನಾಗಿ ಟೈಮ್ ಮ್ಯಾನೇಜ್ ಮಾಡುತ್ತಾರೆ ಆರಂಭದಾಯಕವಾದ ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ನೀವು ಪ್ರಯಾಣಿಸಬಹುದು ಮತ್ತು ನೀವು ಇಡುವ ಲಗೇಜ್ ಮೊಬೈಲ್ ಚಪ್ಪಲಿ ಸಮೇತವಾಗಿ ಎಲ್ಲವನ್ನು ಬಸ್ ನಲ್ಲಿ ಜೋಪಾನ ಮಾಡುತ್ತಾರೆ.

ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ನೀವು ದೇವಸ್ಥಾನಕ್ಕೆ ಹೋಗುವಾಗ ಬರುವಾಗ ಮೊಬೈಲ್ ‌ ಗಳು ತೆಗೆದುಕೊಂಡು ಹೋಗಲು ಪರ್ಮಿಷನ್ ಇಲ್ಲದ ಕಾರಣ ಮತ್ತು ಬ್ಯಾಗ್, ಸ್ಲಿಪ್ಪರ್ಸ್ ಇವುಗಳನ್ನು ಬಿಟ್ಟು ಹೋಗಲು ಬೇರೆ ಕಡೆ ವ್ಯವಸ್ಥೆ ಮಾಡಿದರೆ ಅದಕ್ಕೂ ಚಾರ್ಜ್ ಕೊಡಬೇಕಾಗುತ್ತದೆ. ಆದರೆ ಇಲ್ಲಿ ಬಸ್ ನಲ್ಲಿಯೇ ಬಿಟ್ಟು ಹೋಗಬಹುದು ಈ ಬಸ್ ಸಿಬ್ಬಂದಿ ಅದನ್ನು ಜೋಪಾನ ಮಾಡುತ್ತಾರೆ ಮತ್ತು ಟ್ರಾವೆಲ್ ಸಮಯದಲ್ಲಿ ಗೈಡ್ ಕೂಡ ಇರುತ್ತಾರೆ.

ಅವರು ನಿಮ್ಮನ್ನು ಯಾವ ಯಾವ ಸ್ಥಳಕ್ಕೆ ಯಾವ ಸಮಯಕ್ಕೆ ಕರೆದುಕೊಂಡು ಹೋಗಬೇಕು ಅಲ್ಲಿಗೆ ತಲುಪಿಸುತ್ತಾರೆ, ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆ ನೋಡಿಕೊಳ್ಳುವವರೆಗೆ ನಿಗಾ ವಹಿಸುತ್ತಾರೆ, ಉಚಿತವಾದ ಊಟದ ವ್ಯವಸ್ಥೆ ಕೂಡ ಇರುತ್ತದೆ ನೀವು ತಿರುಪತಿ ರೀಚ್ ಆದರೆ ಫ್ರೆಶ್ ಆಗಲು ರೂಮ್ ಕೊಡುತ್ತಾರೆ. ನೀವೇ ಬುಕ್ ಮಾಡಿದರೆ ಕನಿಷ್ಠ ರೂ.2000 ಮೇಲೆ ಬಾಡಿಗೆ ಆಗಬಹುದು ಆ ರೀತಿಯ VIP ರೂಮ್ ಗಳನ್ನು ಬುಕ್ ಮಾಡಿರುತ್ತಾರೆ.

ಈ ಸುದ್ದಿ ಓದಿ:- ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇಬಾರದು ಇಂದಿನಿಂದಲೇ ಈ ಅಭ್ಯಾಸಗಳನ್ನು ಬದಲಾಯಿಸಿ…

ಆರಾಮಾಗಿ ನೀವು ಸ್ವಲ್ಪ ರೆಸ್ಟ್ ಮಾಡಿ ಬೆಳಿಗ್ಗೆ ಅಷ್ಟರಲ್ಲಿ ಎದ್ದು ಫ್ರೆಶ್ ಅಪ್ ಆಗಬೇಕು ಅವರೇ ಹೇಳಿದ ಬೆಳಗಿನ ಜಾವದ ಸಮಯಕ್ಕೆ ರೆಡಿ ಆದರೆ ಎಲ್ಲವನ್ನು ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ ಅಲ್ಲೂ ಕೂಡ ನೀವು ಬಸ್ ಲಿ ಲಗ್ಗೇಜ್ ಇಟ್ಟು ದರ್ಶನ ಮಾಡಿದರೆ ಟಿಫನ್ ಟೈಮ್ ಗೆ ಟಿಫನ್ ಬರುತ್ತದೆ. ಅದಾದ ನಂತರ ತಿರುಪತಿ ತಲುಪಿಸುತ್ತಾರೆ.

ಅಲ್ಲಿಂದ ತಿರುಮಲಕ್ಕೆ ಹೋಗಲು ಮತ್ತೊಂದು ಬಸ್ ಇರುತ್ತದೆ ಎಲ್ಲರನ್ನೂ ಅಲ್ಲಿಗೆ ಶಿಫ್ಟ್ ಮಾಡುತ್ತಾರೆ ಹಾಗೆ ಹೊರಗಡೆ ಒಂದು ಶಾಪ್ ನಂಬರ್ ಹೇಳುತ್ತಾರೆ ಅಲ್ಲಿ ನಿಮ್ಮ ಫೋನ್ ಇತ್ಯಾದಿಗಳನ್ನು ಸ್ಟೋರ್ ಮಾಡಬಹುದು. ಒಳಗೆ ಹೋಗಿ ದರ್ಶನ ಮಾಡಿ ಬಂದು ಪ್ರಸಾದ ಸ್ವೀಕರಿಸಿ ಲಡ್ಡು ಖರೀದಿಸಿ ಬಸ್ ನಲ್ಲಿ ಕುಳಿತರೆ ಆರಾಮಾಗಿ ನಿಮ್ಮನ್ನು ಡ್ರಾಪ್ ಪಾಯಿಂಟ್ ಗೆ ತಂದು ಬಿಡುತ್ತಾರೆ. ನೀವು ಹೋಗಿದ್ದು ಗೊತ್ತಾಗುವುದಿಲ್ಲ, ಬಂದದ್ದು ಗೊತ್ತಾಗುವುದಿಲ್ಲ ಅಷ್ಟು ಚೆನ್ನಾಗಿ ನಿಮ್ಮನ್ನು ಜೋಪಾನ ಮಾಡುತ್ತಾರೆ.