Home Blog Page 14

ಇಂದು ಅಕ್ಷಯ ತೃತೀಯ ಈ ವಸ್ತು ದಾನ ಮಾಡಿ ನೀವು ಖಂಡಿತವಾಗಿಯೂ ಮನೆ ಕಟ್ಟಿಸುತ್ತೀರಿ.!

 

ನಾಳೆ ಮೇ 10ನೇ ತಾರೀಕು ಶುಕ್ರವಾರದ ದಿನ ವಿಶೇಷವಾದ ಅಕ್ಷಯ ತೃತೀಯ ಬಂದಿದೆ ಈ ದಿನದ ಮಹತ್ವವೇನು ಹಾಗೂ ಈ ದಿನ ಯಾವ ಕೆಲವು ವಸ್ತುಗಳನ್ನು ಖರೀದಿ ಮಾಡಿ ತರಬೇಕು ಹಾಗೂ ಯಾವ ಕೆಲವು ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಕಷ್ಟ ಕಳೆದು ಶಾಶ್ವತ ಶಿವಾನು ಗ್ರಹಕ್ಕೆ ಸಾಕ್ಷಾತ್ ಲಕ್ಷ್ಮಿ ಕುಬೇರ ಹಾಗೂ ವಿಷ್ಣುದೇವರ ಅನುಗ್ರಹಕ್ಕೆ ಯಾವೆಲ್ಲ ನಿಯಮಗಳನ್ನು ತಪ್ಪದೆ ನಾಳೆ ಪಾಲಿಸಬೇಕು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಅಕ್ಷಯ ತೃತೀಯ ಹಬ್ಬದ ದಿನ ಸಾಕ್ಷಾತ್ ಶ್ರೀ ಮಹಾವಿಷ್ಣುದೇವರು ಲಕ್ಷ್ಮಿ ದೇವಿಗೆ ತನ್ನ ವಕ್ಷಸ್ಥಳ ಅಂದರೆ ಎದೆಯ ಜಾಗದಲ್ಲಿ ಸ್ಥಾನವನ್ನು ಕೊಟ್ಟ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ. ಮಹಾಶಿವನು ಕುಬೇರ ದೇವ ಹಾಗೂ ಮಹಾಲಕ್ಷ್ಮಿ ದೇವಿಗೆ ಪ್ರಪಂಚಕ್ಕೆ ಐಶ್ವರ್ಯವನ್ನು ನೀಡಲು ನೇಮಿಸಿದರು ಎಂದೂ ಪುರಾಣಗಳು ತಿಳಿಸುತ್ತದೆ.

ಈ ಸುದ್ದಿ ಓದಿ:-ಗಂಡ ಹೆಂಡತಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು.!

ಶಿವನು ತನಗೆ ಬಂದಂತಹ ಬ್ರಹ್ಮ ಹತ್ಯ ದೋಷದಿಂದ ಮುಕ್ತನಾಗಲು ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಳಿ ಅನ್ನವನ್ನು ಸ್ವೀಕರಿಸಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನ. ಬಡತನದಲ್ಲಿ ಇದ್ದಂತಹ ಕುಚೇಲನು ತನ್ನ ಮಿತ್ರನಾಗಿರುವಂತಹ ಶ್ರೀ ಕೃಷ್ಣನನ್ನು ನೋಡಲು ಬಂದು ತನ್ನ ಬಳಿ ಇದ್ದಂತಹ ಮೂರು ಹಿಡಿ ಅವಲಕ್ಕಿಯನ್ನು ನೀಡಿದ. ಇದನ್ನು ಸೇವಿಸಿದಂತಹ ಶ್ರೀ ಕೃಷ್ಣನು ಕುಚೇಲನನ್ನು ಕುಬೇರ ನನ್ನಾಗಿ ಮಾಡಿದ ದಿನವೇ ಈ ಒಂದು ಅಕ್ಷಯ ತೃತೀಯ ದಿನವಾಗಿದೆ.

ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಮಾಡಲೇಬೇಕೆಂದು ಯಾವ ಶಾಸ್ತ್ರಗಳಲ್ಲಿಯೂ ಯಾವ ಪುರಾಣಗಳಲ್ಲಿಯೂ ಕೂಡ ತಿಳಿಸಿಲ್ಲ. ಬದಲಿಗೆ ಸ್ವರ್ಣ ಅಂದರೆ ಚಿನ್ನ ದಾನವನ್ನು ಹಾಗೂ ವಿವಿಧ ದಾನಗಳನ್ನು ದಾನ ಮಾಡಿ ಅದರಿಂದ ನಿಮಗೆ ಪುಣ್ಯಫಲ ಲಭಿಸಿ ಏಳಿಗೆ ಪಡೆಯುತ್ತೀರಿ ಎಂದು ಶಾಸ್ತ್ರ ಹೇಳುತ್ತದೆ.

ಈ ಸುದ್ದಿ ಓದಿ:-3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

ಈ ಅಕ್ಷಯ ತೃತೀಯದ ದಿನ ತಪ್ಪದೇ ನಿಮ್ಮ ಮನೆಗೆ ತುಳಸಿ ಗಿಡವನ್ನು ತರಬೇಕು. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಪದೇ ಪದೇ ತುಳಸಿ ಗಿಡ ಒಣಗಿ, ತುಳಸಿ ಗಿಡ ಇಲ್ಲದ ಮನೆ ಆಗಿರುತ್ತದೆಯೋ ಅಂಥವರು ನಾಳೆ ಅಂದರೆ ಅಕ್ಷಯ ತೃತೀಯ ದಿನದಂದು ಅದನ್ನು ನೆಟ್ಟು ಅದನ್ನು ಪೋಷಿಸುತ್ತಾ ಪೂಜಿಸುತ್ತಾ ಬರಬೇಕು. ಬಂಗಾರದ ಬದಲು ಬೆಳ್ಳಿಯನ್ನು ತರಬೇಕು. ಹಾಗೂ ಹೊಸ ಕಸಪೊರಕೆಯನ್ನು ಮನೆಯಲ್ಲಿ ತಂದಿಡಬೇಕು.

ಸಂಪಾದನೆ ಮಾಡಿದಂತಹ ಹಣವನ್ನು ತರಬೇಕು ಜೊತೆಗೆ ಹರಿಶಿನ ಕುಂಕುಮ ಕಲ್ಲುಪ್ಪು ಇವುಗಳನ್ನು ಸಹ ಅಕ್ಷಯ ತೃತೀಯ ಹಬ್ಬದ ದಿನ ತರುವುದು ಅತ್ಯಂತ ಶುಭಕರ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾ ಗಿದೆ. ಲಕ್ಷ್ಮಿ ದೇವಿಯು ನೆಲೆಸಿರುವಂತಹ ವಸ್ತುಗಳಲ್ಲಿ ಈ ವಸ್ತುಗಳು ಕೂಡ ಬಹಳ ಪ್ರಮುಖವಾದವು. ಸಾಧ್ಯವಾದರೆ ಅಕ್ಷಯ ತೃತೀಯದ ದಿನ ಅರಿಶಿಣ ಬಣ್ಣದ ಬಟ್ಟೆಯನ್ನು ತಂದಿಡುವುದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಕುಕ್ಕರ್ ನಲ್ಲಿ ಅಡುಗೆ ಮಾಡುವವರು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ.!

ಈ ಬಾರಿ ಬಂದಿರುವಂತಹ ಅಕ್ಷಯ ತೃತೀಯ ದ ದಿನ ದೇವರಕೋಣೆಯಲ್ಲಿ ಲಕ್ಷ್ಮಿ ಕುಬೇರ ವಿಷ್ಣು ಹಾಗೂ ಶಿವನ ದೇವರ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಬೇಕು. ಪಂಚಾಮೃತ ಪರಮಾನ್ನ ಮೊಸರನ್ನವನ್ನು ಲಕ್ಷ್ಮಿ ಕುಬೇರರಿಗೆ ನೈವೇದ್ಯವಾಗಿ ಅರ್ಪಿಸಿ ಅವರ ಸೇವೆಯನ್ನು ಮಾಡಿಕೊಳ್ಳಬೇಕು. ಅವತ್ತಿನ ದಿನ ಮನೆಯಲ್ಲಿ ಬಂಗಾರದಂತಹ ಮಾತುಗಳನ್ನು ಆಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗಂಡ ಹೆಂಡತಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು.!

 

* ಗಂಡ ಹೆಂಡತಿ ಜಗಳದ ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ ಆದರೆ ಅದು ತಪ್ಪು. ಇಬ್ಬರ ನಡುವೆ ಯಾರು ತಪ್ಪು ಮಾಡಿದರೂ ಪರಸ್ಪರ ಕ್ಷಮೆಯಾಚಿಸಿ ಮುಂದೆ ಹೋಗುವುದು ಒಳ್ಳೆಯದು. ಇದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ ಬದಲಿಗೆ ನಡೆದಿರುವಂತಹ ಕೆಟ್ಟ ಸಂದರ್ಭವನ್ನು ಪದೇಪದೇ ನೆನಪಿಸಿಕೊಳ್ಳುತ್ತಾ ಇದ್ದರೆ ನಿಮ್ಮ ಜೀವನದಲ್ಲಿ ಮತ್ತಷ್ಟು ಬಿರುಕು ಹೆಚ್ಚಾಗುತ್ತದೆ ಆದ್ದರಿಂದ ಏನೇ ಜಗಳ ನಡೆದರೂ ಕೂಡ ಅದನ್ನು ಮರೆತು ಮುಂದಿನ ಜೀವನ ನಡೆಸುವುದು ಒಳ್ಳೆಯದು.

* ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬಂದಾಗ ಮೊಬೈಲ್ ನಲ್ಲಿ ಸ್ಟೇಟಸ್‌ ಹಾಕಲು ಹೋಗಬೇಡಿ ಯಾಕೆಂದರೆ ಗಂಡ ಹೆಂಡತಿ ನಡುವೆ ಮೂರನೇ ಅವರು ಪ್ರವೇಶ ಮಾಡಬಾರದು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ ಯಾವುದೇ ಸಂದರ್ಭ ಬಂದರೂ ಕೂಡ ನಾವು ಅದನ್ನು ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳಬಾರದು ಕೆಲವೊಂದಷ್ಟು ವಿಷಯಗಳನ್ನು ಆದಷ್ಟು ನಾವು ಮುಚ್ಚಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು ಇಲ್ಲವಾದರೆ ನಾವೇ ನಮ್ಮ ಸಮಸ್ಯೆಯನ್ನು ನಮ್ಮ ಬಳಿ ಕರೆದುಕೊಂಡು ಬಂದಂತೆ ಆಗುತ್ತದೆ.

* ಪತಿ-ಪತ್ನಿಯರಲ್ಲಿ ಮುಖ್ಯವಾಗಿ ನಂಬಿಕೆ ಇರಬೇಕು ಯಾವ ಸಂಬಂಧ ದಲ್ಲಿ ನಂಬಿಕೆ ಎನ್ನುವುದು ಇರದೇ ಅನುಮಾನ ಬರುತ್ತದೆಯೋ ಅಂತಹ ಸಂಬಂಧವನ್ನು ಎಷ್ಟೇ ಸರಿಪಡಿಸಿದರು ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತದೆ.
* ಸತಿ ಆಗಿರಲಿ ಅಥವಾ ಪತಿಯೇ ಆಗಿರಲಿ ಅವರನ್ನು ಇನ್ನೊಬ್ಬರಿಗೆ ಹೋಲಿಸಿ ಮಾತನಾಡಬಾರದು ಇದರಿಂದ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

* ಪತಿ – ಪತ್ನಿಯರು ತಮ್ಮ ರಹಸ್ಯವನ್ನು ತಾವು ತಮ್ಮಲ್ಲೇ ಇಟ್ಟುಕೊಳ್ಳದೆ ಮೂರನೇಯವರಿಗೆ ಹೇಳಿದರೆ ಮುಂದೆ ಅವಮಾನವನ್ನು ಎದುರಿಸ ಬೇಕಾಗುತ್ತದೆ. ಹಾಗಾಗಿ ಇದು ದಾಂಪತ್ಯದಲ್ಲಿ ಬಿರುಕನ್ನು ಮೂಡಿಸಬಹುದು ಹಾಗೂ ಬೇರೆಯವರು ನಿಮ್ಮ ಕೆಲವೊಂದಷ್ಟು ರಹಸ್ಯ ಮಾಹಿತಿಗಳನ್ನು ತಿಳಿದುಕೊಂಡು ಮತ್ತೆ ಕೆಲವೊಂದಷ್ಟು ಜನರಿಗೆ ಹೇಳಬಹುದು ಇದರಿಂದ ನಿಮ್ಮ ಸಂಸಾರದಲ್ಲಿ ನೀವೇ ಬಿರುಕು ತಂದುಕೊಂಡಂತೆ ಆಗುತ್ತದೆ ಆದಷ್ಟು ನಿಮ್ಮ ರಹಸ್ಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಸೂಕ್ತ.

* ಗಂಡನ ಕಷ್ಟದಲ್ಲಿ ಹೆಂಡತಿ, ಹೆಂಡತಿಯ ಕಷ್ಟದಲ್ಲಿ ಗಂಡ ಯಾವತ್ತು ಬಿಟ್ಟುಕೊಡದೆ ಪರಸ್ಪರ ಜೊತೆಗೆ ನಿಂತರೆ ಮುಂದೆ ಕಷ್ಟ ಇದ್ದರೂ ಸುಖವಿದ್ದರೂ ಅಂತಹ ಸಂಬಂಧ ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ.
* ಪತಿ-ಪತ್ನಿಯರಿಬ್ಬರೂ ತಮ್ಮ ಆದಾಯವನ್ನು ನೋಡಿಕೊಂಡು ಖರ್ಚು ಮಾಡುವುದು ಮುಖ್ಯವಾಗಿರುತ್ತದೆ. ಇಬ್ಬರೂ ಯಾವಾಗಲೂ ಇನ್ನೊಬ್ಬರ ಜೀವನವನ್ನು ನೋಡಿ ತಾವು ಬದುಕಲು ಹೋಗಬಾರದು.

* ಗಂಡ ಆಗಿರಲಿ ಹೆಂಡತಿ ಆಗಿರಲಿ ಹೆಚ್ಚಾಗಿ ಅವರನ್ನು ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳಲು ಹೋಗಬಾರದು. ಎಷ್ಟೊತ್ತಿಗೆ ಏಳಬೇಕು ಇವರ ಬಳಿ ಮಾತ್ರ ಮಾತನಾಡಬೇಕು, ಏನು ಕೆಲಸ ಮಾಡಬೇಕು ಕುಟುಂಬದಲ್ಲಿ ಯಾರೊಂದಿಗೆ ಹೇಗಿರಬೇಕು ಎಂದು ಹೆಚ್ಚಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೋಗಬಾರದು.

* ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸುಳ್ಳು ಹೇಳುವುದು ಮೋಸ ಮಾಡುವುದು ಅಥವಾ ಯಾವುದೋ ಒಂದು ದೊಡ್ಡ ಸತ್ಯವನ್ನು ಮುಚ್ಚಿಡುವುದು ಹೀಗೆ ಮಾಡಲು ಹೋಗಬೇಡಿ ಇದರಿಂದ ಸಂಸಾರವೇ ಹಾಳಾಗಬಹುದು ಎಚ್ಚರವಿರಲಿ.
* ಗಂಡ ಹೆಂಡತಿ ಕೋಪದಿಂದ ದೂರವಿದ್ದರೆ ಒಳ್ಳೆಯದು. ಒಂದು ವೇಳೆ ಸಣ್ಣ ಪುಟ್ಟ ಕೋಪಗಳಿದ್ದರೆ ಮೌನವಾಗಿರುವುದು ಉತ್ತಮ. ಇದು ಸಂಬಂಧವನ್ನು ಕಾಪಾಡುತ್ತದೆ.

* ಗಂಡ ಹೆಂಡತಿ ಆದವರಲ್ಲಿ ಏನೇ ಸಮಸ್ಯೆ ಇದ್ದರೂ ಗಂಡನಾಗಲಿ, ಹೆಂಡತಿಯಾಗಲಿ ಇನ್ನೊಬ್ಬರ ಮುಂದೆ ಅವರನ್ನು ಅವಮಾನ ಮಾಡಿ ಮಾತನಾಡಬಾರದು. ಇಬ್ಬರು ಕುಳಿತುಕೊಂಡು ಬಗೆಹರಿಸಿಕೊಳ್ಳುವುದು ಉತ್ತಮ.

3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!

 

ಬೇಸಿಗೆ ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಆ ಒಂದು ಸಂದರ್ಭದಲ್ಲಿ ಹಪ್ಪಳ ಸಂಡಿಗೆ ಇಂತಹ ಕೆಲವೊಂದು ಪದಾರ್ಥಗಳನ್ನು ಮಾಡಿಟ್ಟು ಕೊಳ್ಳುವಂತಹ ಸಮಯ ಎಂದೇ ತಿಳಿದುಕೊಂಡಿದ್ದಾರೆ. ಆದರೆ ಈ ಒಂದು ಸಂದರ್ಭದಲ್ಲಿ ನಾವು ಕೆಲವೊಂದಷ್ಟು ತಂಪಾಗಿರುವಂತಹ ಆಹಾರ ಪದಾರ್ಥಗಳನ್ನು ಸಹ ಮಾಡಿಕೊಂಡು ಸೇವನೆ ಮಾಡಬಹುದು.

ಹಾಗಾದರೆ ಬೇಸಿಗೆಯ ಸಂದರ್ಭದಲ್ಲಿ ತಂಪಾಗಿರುವಂತಹ ಐಸ್ ಕ್ರೀಮ್ ಅನ್ನು ನಾವೇ ಹೇಗೆ ಸುಲಭವಾಗಿ ಕೇವಲ ಮೂರೇ ಮೂರು ಪದಾರ್ಥ ಬಳಕೆ ಮಾಡಿಕೊಂಡು ಹೇಗೆ ಅಂಗಡಿಗಳಲ್ಲಿ ಸಿಗುವಂತಹ ಐಸ್ ಕ್ರೀಮ್ ನಂತೆಯೇ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಯಾವ ವಿಧಾನ ಅನುಸರಿಸುವುದರ ಮೂಲಕ ಐಸ್ ಕ್ರೀಮ್ ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!

ಬೇಸಿಗೆಯ ಸಂದರ್ಭದಲ್ಲಿ ನಾವು ಎಲ್ಲಿ ನೋಡಿದರೂ ಕೂಡ ನಮ್ಮ ಕಣ್ಣಿಗೆ ಮಾವಿನ ಹಣ್ಣು ಕಾಣಿಸುತ್ತಿರುತ್ತದೆ. ಇಂತಹ ಒಂದು ಮಾವಿನ ಹಣ್ಣನ್ನು ಉಪಯೋಗಿಸಿಕೊಂಡು ಈ ದಿನ ಐಸ್ ಕ್ರೀಮ್ ಅನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ. ಮೊದಲು ಈ ಒಂದು ಮಾವಿನ ಹಣ್ಣಿನ ಐಸ್ ಕ್ರೀಮ್ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ತಿಳಿಯೋಣ.

* ಒಂದು ಲೀಟರ್ ಹಾಲು
* ಸಕ್ಕರೆ
* ಮಾವಿನ ಹಣ್ಣು
ಈ ಮೂರು ಪದಾರ್ಥ ಇದ್ದರೆ ಸಾಕು ಮಾವಿನ ಹಣ್ಣಿನ ಐಸ್ ಕ್ರೀಮ್ ಅನ್ನು ನಾವೇ ನಮ್ಮ ಮನೆಯಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು.

ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!

ಮಾಡುವ ವಿಧಾನ :- ಮೊದಲು ಗಟ್ಟಿಯಾಗಿರುವಂತಹ ಹಸುವಿನ ಹಾಲು ಅಥವಾ ಎಮ್ಮೆಯ ಹಾಲನ್ನು ತೆಗೆದುಕೊಳ್ಳಬೇಕು ಅದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಯಾವುದೇ ರೀತಿಯ ನೀರನ್ನು ಮಿಶ್ರಣ ಮಾಡದೆ ಅದನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಂಡು ಅದರಲ್ಲಿ ಯಾವುದೇ ರೀತಿಯ ಕೆನೆ ಬರದ ಹಾಗೆ ಅದನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳುತ್ತಾ ಒಂದು ಲೀಟರ್ ಹಾಲು ಅರ್ಧ ಲೀಟರ್ ಆಗುವ ತನಕ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.

ನಂತರ ಆ ಒಂದು ಹಾಲಿಗೆ ಸಕ್ಕರೆಯನ್ನು ಹಾಕಿ ಕರಗಿಸಿಕೊಳ್ಳಬೇಕು ಆನಂತರ ಅದನ್ನು ತಣ್ಣಗಾಗಲ್ಲ ಬಿಡಬೇಕು ತಣ್ಣಗಾದ ನಂತರ ಮಾವಿನ ಹಣ್ಣನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಹಾಲಿನ ಜೊತೆ ಹಾಕಿ ಮಿಶ್ರಣ ಮಾಡಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು.

ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!

ಈ ರೀತಿ ರುಬ್ಬಿಕೊಂಡಂತಹ ಮಿಶ್ರಣವನ್ನು ಚೆನ್ನಾಗಿ ಮತ್ತೆ ಮಿಕ್ಸ್ ಮಾಡಿಕೊಂಡು ಐಸ್ ಕ್ರೀಮ್ ಹದ ಬರುವ ಹಾಗೆ ಮಾಡಿಕೊಳ್ಳಬೇಕು. ಆನಂತರ ನಿಮ್ಮ ಮನೆಯಲ್ಲಿ ಐಸ್ ಕ್ರೀಂ ಮಾಡುವ ಟ್ರೇ ಗಳು ಇದ್ದರೆ ಅದರ ಒಳಗಡೆ ಹಾಕಿ ಅದನ್ನು ಫ್ರೀಜರ್ ನಲ್ಲಿ ಐದರಿಂದ ಹತ್ತು ನಿಮಿಷ ಬಿಟ್ಟರೆ ಸಾಕು ರುಚಿಯಾದಂತಹ ಮಾವಿನ ಹಣ್ಣಿನ ಜ್ಯೂಸ್ ಅನ್ನು ಸುಲಭವಾಗಿ ನೀವೇ ತಯಾರಿಸಬಹುದು.

ಐಸ್ ಕ್ರೀಮ್ ಮಾಡುವ ಟ್ರೇ ಇಲ್ಲದೆ ಇದ್ದರೂ ಸಹ ನೀವು ಅದನ್ನು ಸಣ್ಣ ಸಣ್ಣದಾಗಿರುವಂತಹ ಲೋಟಕ್ಕೆ ಹಾಕಿ ಅದಕ್ಕೆ ಕಟ್ಟಿಗೆಯ ಚಮಚವನ್ನು ಹಾಕಿ ಫ್ರೀಜರ್ ನಲ್ಲಿ ಇಟ್ಟರೂ ಸಹ ನೀವು ಐಸ್ ಕ್ರೀಮ್ ಅನ್ನು ತಯಾರಿಸಬಹುದು.

ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!

ಹೀಗೆ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ತಂಪಾಗಿರುವಂತಹ ಹಾಗೂ ರುಚಿ ಯಾಗಿರುವಂತಹ ಆರೋಗ್ಯಕರವಾಗಿರುವಂತಹ ಐಸ್ ಕ್ರೀಮ್ ಅನ್ನು ನೀವು ತಯಾರಿಸಿ ಕೊಡಬಹುದು ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಮಿಕಲ್ ಐಸ್ ಕ್ರೀಮ್ ಅನ್ನು ಕೊಡಿಸುವುದು ತುಂಬಾ ಕೆಡುಕು ಆದ್ದರಿಂದ ಇದನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿ ಕೊಡುವುದು ಉತ್ತಮ.

ಕುಕ್ಕರ್ ನಲ್ಲಿ ಅಡುಗೆ ಮಾಡುವವರು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ.!

 

ಮನೆಯಲ್ಲಿ ನಾವು ಅಡುಗೆ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮನೆಯಲ್ಲಿರುವ ಮಹಿಳೆಯರಿಗಾಗಿರಬಹುದು ಅಥವಾ ಕೆಲಸಗಳಿಗೆ ಹೋಗುವಂತಹ ಮಹಿಳೆಯರಿಗೆ ಆಗಬಹುದು ಈಗ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ.

ಹಾಗೂ ಅಡುಗೆ ಮನೆಯಲ್ಲಿ ಮಾಡುವಂತಹ ಕೆಲವೊಂದಷ್ಟು ಕೆಲಸವನ್ನು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿ ಮಾಡುವುದರಿಂದ ಕೆಲಸ ಬೇಗನೆ ಆಗುತ್ತದೆ. ಹಾಗೂ ಕಡಿಮೆ ಸಮಯದಲ್ಲಿ ನೀವು ಆ ಒಂದು ಕೆಲಸವನ್ನು ಮಾಡಿ ಮುಗಿಸಬಹುದು. ಇದರಿಂದ ನಿಮಗೆ ಸಮಯ ಹಾಗೂ ನಿಮ್ಮ ಶ್ರಮ ಎರಡು ಕೂಡ ಉಳಿತಾಯವಾಗುತ್ತದೆ.

ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!

ಜೊತೆಗೆ ಹೆಚ್ಚಿನ ಗ್ಯಾಸ್ ಸಿಲಿಂಡರ್ ಬಳಕೆಯು ಸಹ ಆಗುವುದಿಲ್ಲ. ಹಾಗಾದರೆ ಈ ಈ ದಿನ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಯಾವುದೇ ರೀತಿಯಾದಂತಹ ಅಡುಗೆಯನ್ನು ಮಾಡಬೇಕು ಎಂದರೆ ಕುಕ್ಕರ್ ಇದೆ ಅದನ್ನು ಉಪಯೋಗಿಸಿಕೊಂಡು ಹಾಗೂ ಹೇಗೆ ಕಡಿಮೆ ಸಮಯದಲ್ಲಿ ಕೆಲವೊಂದು ಸುಲಭವಾಗಿ ತಯಾರಿಸಬಹುದು ಅಂದರೆ ಕುಕ್ಕರ್ ಗೆ ಸಂಬಂಧಿಸಿದಂತೆ 11 ಟಿಪ್ಸ್ ಗಳನ್ನು ಈ ದಿನ ತಿಳಿದುಕೊಳ್ಳೋಣ.

* ಸಾಮಾನ್ಯವಾಗಿ ನಾವೆಲ್ಲರೂ ಕೂಡ ಕಾಳುಗಳನ್ನು ಕುಕ್ಕರ್ ನಲ್ಲಿ ಬೇಯಿಸುವಂತಹ ಸಂದರ್ಭದಲ್ಲಿ ಅದನ್ನು ಸ್ವಲ್ಪ ಹೊತ್ತು ನೆನೆ ಹಾಕಿ ಅಥವಾ ಕುಕ್ಕರ್ ನಲ್ಲಿ ಕಾಳು ಹಾಕಿ ಉಪ್ಪು ಹಾಕಿ ಐದ ರಿಂದ ಆರು ವಿಶಲ್ ಕೂಗಿಸುತ್ತೇವೆ. ಆದರೆ ಇದಕ್ಕೆ ಹೆಚ್ಚಿನ ಗ್ಯಾಸ ಸಿಲಿಂಡರ್ ಬಳಕೆ ಬೇಕು ಹಾಗು ಹೆಚ್ಚು ಸಮಯವು ಬೇಕು. ಆದರೆ ಈ ಒಂದು ವಿಧಾನ ಅನುಸರಿಸುವ ಮುಂಚೆ.

ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!

ಮೊದಲು ನೀವು ಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ನೆನೆ ಹಾಕಿ ಆ ನಂತರ ಕುಕ್ಕರ್ ನಲ್ಲಿ ಕಾಳನ್ನು ಹಾಕಿ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಅದರ ಒಳಗಡೆ ತೆಂಗಿನ ಕಾಯಿಯ ಚಿಪ್ಪು ಇದನ್ನು ಚೆನ್ನಾಗಿ ಶುದ್ಧ ಮಾಡಿ ತೊಳೆದು ಅದನ್ನು ಕಾಳಿನ ಜೊತೆ ಹಾಕಿ ಕುಕ್ಕರ್ ನಲ್ಲಿ ಎರಡು ವಿಷಲ್ ಕೂಗಿಸಿದರೆ ಸಾಕು ಯಾವುದೇ ಕಾಳಿದ್ದರೂ ಸಹ ಅದು ಸಂಪೂರ್ಣವಾಗಿ ಬೇಯುತ್ತದೆ. ಇದಕ್ಕೆ ಹೆಚ್ಚಿನ ಸಮಯ ಕೂಡ ಬೇಕಾಗಿಲ್ಲ.

* ಕುಕ್ಕರ್ ನಲ್ಲಿ ಹಾಕುವಂತಹ ಬೆಲ್ಟ್ ಅನ್ನು ನಾವು ಸದಾ ಕಾಲ ನೀರಿನಲ್ಲಿ ಇಟ್ಟು ಅದನ್ನು ಉಪಯೋಗಿಸುತ್ತಿರುತ್ತೇವೆ ಆದರೆ ಆ ರೀತಿ ಮಾಡುವುದರ ಬದಲು ಟ್ಯಾಪ್ ಬಳಿ ಅದನ್ನು ಸಿಕ್ಕಿಸಿದರೆ ನಾವು ಪ್ರತಿ ಬಾರಿ ಕೈಯನ್ನು ತೊಳೆಯುವಂತಹ ಸಂದರ್ಭದಲ್ಲಿ ನೀರು ಅದಕ್ಕೆ ತಾಕುತ್ತದೆ.

ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!

ಆದ್ದರಿಂದ ಅದನ್ನು ಪ್ರತಿ ಬಾರಿ ನೀರಿನಲ್ಲಿ ಹಾಕಿಡುವುದರಿಂದ ರಬ್ಬರ್ ಹಾಳಾಗುವ ಸಾಧ್ಯತೆ ಇರುತ್ತದೆ. ಸ್ವಲ್ಪ ಕೈಯಿಂದ ಎಳೆದು ಆನಂತರ ಹಾಕುವುದರಿಂದ ಕುಕ್ಕರ್ ನಲ್ಲಿ ಯಾವುದೇ ರೀತಿಯ ನೀರು ಲೀಕೇಜ್ ಆಗುವುದಿಲ್ಲ ಹಾಗೂ ಹೆಚ್ಚು ದಿನಗಳ ಕಾಲ ಕುಕ್ಕರ್ ರಬ್ಬರ್ ಬಾಳಿಕೆಗೆ ಬರುತ್ತದೆ.

* ಸಾಧಾರಣವಾಗಿ ನಾವು ಯಾವುದೇ ಸಾಂಬಾರ್ ಅನ್ನು ಕುಕ್ಕರ್ ನಲ್ಲಿ ಮಾಡಲು ಇಟ್ಟರೆ ಅದು ಸ್ವಲ್ಪ ಕುದಿ ಬಂದು ಆಚೆ ಚೆಲ್ಲುತ್ತಿರುತ್ತದೆ. ಆ ರೀತಿ ಆದಂತಹ ಸಂದರ್ಭದಲ್ಲಿ ನಾವು ಕುಕ್ಕರ್ ಒಳಗಡೆಗೆ ಒಂದು ಚಿಕ್ಕದಾಗಿರುವಂತಹ ಸ್ಟೀಲ್ ಬೌಲ್ ಅಥವಾ ಒಂದು ಸ್ಪೂನ್ ಅನ್ನು ಕುಕ್ಕರ್ ಒಳಗಡೆ ಹಾಕಿ ಸಾಂಬಾರ್ ಮಾಡುವುದರಿಂದ ಯಾವುದೇ ರೀತಿಯ ಲೀಕೇಜ್ ಆಗುವುದಿಲ್ಲ. ಈ ಒಂದು ವಿಧಾನ ಬಹಳ ಅಚ್ಚರಿ ಎನಿಸಬಹುದು ಆದರೆ ಇದು ಸತ್ಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!

 

ಅಕ್ಷಯ ತೃತೀಯ ಹಬ್ಬದ ದಿನ ನಾವು ಯಾವುದೇ ರೀತಿಯ ವಸ್ತು ಗಳನ್ನು ತೆಗೆದುಕೊಂಡರು ಕೂಡ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ 5 ರೆಮಿಡಿಗಳನ್ನು ಅಕ್ಷಯ ತೃತೀಯ ಹಬ್ಬದ ದಿನ ಮಾಡಿಕೊಳ್ಳುವುದರಿಂದ ನೀವು ವರ್ಷ ತುಂಬುವಷ್ಟರಲ್ಲಿ ದೊಡ್ಡ ಶ್ರೀಮಂತರಾಗುತ್ತೀರಿ ಎನ್ನಬಹುದು.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಹಬ್ಬದ ದಿನ ಹೆಚ್ಚಿನ ಜನರು ತಮ್ಮ ಕೈಲಾದಷ್ಟು ಹಣವನ್ನು ಇಟ್ಟುಕೊಂಡು ಆ ಒಂದು ಹಣದಿಂದ ಚಿನ್ನ ಬೆಳ್ಳಿ ಹೀಗೆ ಬೆಲೆಬಾಳು ವಂತಹ ಆಭರಣಗಳನ್ನು ಖರೀದಿ ಮಾಡುತ್ತಿರುತ್ತಾರೆ. ಅಂದರೆ ಅವರ ಅನುಕೂಲಕ್ಕೆ ತಕ್ಕಂತೆ ಖರೀದಿ ಮಾಡುತ್ತಾರೆ.

ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!

ಏಕೆಂದರೆ ಆ ಒಂದು ಅಕ್ಷಯ ತೃತೀಯ ಹಬ್ಬದ ದಿನ ನಾವು ಯಾವುದನ್ನು ಖರೀದಿ ಮಾಡುತ್ತೇವೋ ಅದು ಮುಂದಿನ ದಿನದಲ್ಲಿ ಅಕ್ಷಯವಾಗುತ್ತದೆ ಅಂದರೆ ದುಪಟ್ಟಾಗುತ್ತದೆ ಎನ್ನುವಂತಹ ನಂಬಿಕೆ ಬಹಳ ಹಿಂದಿ ನಿಂದಲೂ ಕೂಡ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಅಕ್ಷಯ ತೃತೀಯ ಹಬ್ಬದ ದಿನ ಪ್ರತಿಯೊಬ್ಬರೂ ಕೂಡ ಸ್ವಲ್ಪ ಪ್ರಮಾಣದ ಮಟ್ಟಿಗಾದರೂ ಚಿನ್ನ ಅಥವಾ ಬೆಳ್ಳಿ ಪದಾರ್ಥಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ.

ಆದರೆ ಪ್ರತಿಯೊಬ್ಬರೂ ಕೂಡ ಚಿನ್ನ ಮತ್ತು ಬೆಳ್ಳಿಯನ್ನು ಆ ಒಂದು ದಿನ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಅಂಥವರು ಈಗ ನಾವು ಹೇಳುವಂತಹ ಈ ಐದು ರೆಮಿಡಿಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಮುಂದಿನ ವರ್ಷ ತುಂಬುವಷ್ಟರಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಏಳಿಗೆ ಎನ್ನುವುದು ಆಗುತ್ತದೆ.

ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!

ಹಾಗಾದಈ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷಯ ತೃತೀಯ ಹಬ್ಬದ ದಿನ ಯಾವ ಐದು ರೆಮಿಡಿಗಳನ್ನು ಮಾಡಿಕೊಳ್ಳಬೇಕು ಅದನ್ನು ಯಾವ ಸಮಯದಲ್ಲಿ ಹೇಗೆ ಯಾವ ವಿಧಾನ ಅನುಸರಿಸುವುದರ ಮೂಲಕ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಮೊದಲನೆಯದಾಗಿ ಈಗ ನಾವು ಹೇಳುವಂತಹ ಈ ಒಂದು ಚಿತ್ರಪಟಗಳನ್ನು ಉಪಯೋಗಿಸಿಕೊಂಡು ಈ ಒಂದು ರೆಮಿಡಿಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ ಮೊದಲನೆಯದಾಗಿ ಕುದುರೆ ಎರಡನೆಯದಾಗಿ ಆನೆ ಹಾಗೂ ಮೂರನೆಯದಾಗಿ ಗೋಮಾತೆ ಈ ಮೂರು ಫೋಟೋಗಳನ್ನು ಉಪಯೋಗಿಸಿಕೊಂಡು ಈಗ ನಾವು ಹೇಳುವಂತಹ ಈ ಒಂದು ಉಪಾಯ ಮಾಡಬೇಕಾಗುತ್ತದೆ. ಹಾಗಾದರೆ ಅದನ್ನು ಹೇಗೆ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

* ನಮ್ಮ ಹಿಂದೂ ಧರ್ಮದಲ್ಲಿ ಹಸುವಿಗೆ ಬಹಳ ಮಹತ್ತರವಾದ ಸ್ಥಾನವಿದೆ ಏಕೆಂದರೆ ಹಸುವಿನಲ್ಲಿ ಮುಕ್ಕೋಟಿ ದೇವಾನು ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ನಾವು ಹಸುವನ್ನು ದೈವೀ ಸ್ವರೂಪದ ಗೋಮಾತೆ ಎಂದು ಹೇಳುತ್ತೇವೆ.

* ಇನ್ನು ಎರಡನೆಯದಾಗಿ ಆನೆ ಗಜಮುಖನನ್ನು ನಾವು ಆರಾಧನೆ ಮಾಡಿದರೆ ಎಷ್ಟು ಒಳ್ಳೆಯದಾಗುತ್ತದೆಯೋ ಅದೇ ರೀತಿ ಈ ಆನೆಯನ್ನು ನೋಡುವುದರಿಂದಲೂ ಕೂಡ ನಾವು ಅತಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

* ಇನ್ನು ಮೂರನೆಯದಾಗಿ ಕುದುರೆ ಈ ಕುದುರೆಯನ್ನು ಪ್ರಗತಿ ಅಭಿವೃದ್ಧಿ ಏಳಿಗೆಯ ಸಂಕೇತ ಎಂದು ಹೇಳಲಾಗುತ್ತದೆ.
• ಮೊದಲನೆಯ ರೆಮಿಡಿ :- ಅಕ್ಷಯ ತೃತೀಯ ಹಬ್ಬದ ದಿನ ಸಾಯಂ ಕಾಲ ಮನೆಯ ಹೊಸ್ತಿಲಿನ ಅಕ್ಕ ಪಕ್ಕದಲ್ಲಿ ಎರಡು ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ಹಚ್ಚುವುದರಿಂದ ವರ್ಷ ಪೂರ್ತಿ ಮನೆಯಲ್ಲಿ ಧನ ಕನಕ ಸಂಪತ್ತು ಅಭಿವೃದ್ಧಿ ಏಳಿಗೆ ಎನ್ನುವುದು ಹೆಚ್ಚಾಗುತ್ತದೆ. ತುಪ್ಪದ ದೀಪವನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!

 

ಬೇಸಿಗೆಯಲ್ಲಿ ನಾವು ಯಾವುದೇ ಆಹಾರ ಪದಾರ್ಥವನ್ನು ಹೆಚ್ಚಿನ ಸಮಯದವರೆಗೆ ಬಿಸಿ ಮಾಡದೆ ಹಾಗೆ ಇಟ್ಟರೆ ಅದು ಹುಳಿಯಾಗುತ್ತದೆ ಅದೇ ರೀತಿಯಾಗಿ ನಾವು ಹಾಲನ್ನು ಸಹ ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ ಬಿಸಿ ಮಾಡದೆ ಇದ್ದರೆ ಆ ಹಾಲು ಕೆಟ್ಟು ಹೋಗುತ್ತದೆ. ಕೆಲ ವೊಂದಷ್ಟು ಜನ ಕೆಟ್ಟ ಹೋದಂತಹ ಹಾಲನ್ನು ಮೊಸರು ಮಾಡಿಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಕುತ್ತಾರೆ.

ಆದರೆ ಈ ರೀತಿಯಾದಂತಹ ಹಾಲನ್ನು ಇನ್ನು ಮುಂದೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಸರಿಪಡಿಸಿ ಅದನ್ನು ಮತ್ತೆ ನೀವು ಕಾಫಿ ಟೀ ಮಾಡುವುದಕ್ಕೆ ಬಳಸಬಹುದು. ಹಾಗಾದರೆ ಯಾವ ಒಂದು ಪದಾರ್ಥವನ್ನು ಇದಕ್ಕೆ ಹಾಕುವುದರಿಂದ ಕೆಟ್ಟು ಹೋದಂತಹ ಹಾಲನ್ನು ಸರಿಪಡಿಸಬಹುದು ಮತ್ತೆ ಅದನ್ನು ಹೇಗೆ ಪುನರ್ ಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

* ಅಂಗಡಿಯಿಂದ ನಾವು ಹಾಲಿನ ಪ್ಯಾಕೆಟ್ ಅನ್ನು ತಂದು ಅದರಲ್ಲಿ ಸ್ವಲ್ಪ ಪ್ರಮಾಣದ ಹಾಲನ್ನು ಬಳಕೆ ಮಾಡಿ ಮತ್ತೆ ಸ್ವಲ್ಪ ಹಾಲನ್ನು ಪ್ಯಾಕೆಟ್ ನಲ್ಲಿ ಬಿಟ್ಟು ಅದನ್ನು ಬಿಸಿ ಮಾಡದೆ ಮರೆತಿರುತ್ತೇವೆ ಅದನ್ನು ಮಧ್ಯಾಹ್ನದ ಸಮಯದಲ್ಲಿ ಬಿಸಿ ಮಾಡಲು ಇಟ್ಟಾಗ ಅದು ಕೆಟ್ಟು ಹೋಗುತ್ತದೆ ಅಂತಹ ಒಂದು ಸಂದರ್ಭದಲ್ಲಿ ಈಗ ನಾವು ಹೇಳುವ ಈ ಒಂದೇ ಒಂದು ಪದಾರ್ಥವನ್ನು ಅದಕ್ಕೆ ಹಾಕಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿದರೆ ಸಾಕು ಕೆಟ್ಟು ಹೋಗುತ್ತಿರುವಂತಹ ಹಾಲನ್ನು ಸರಿಪಡಿಸಬಹುದು.

ಹಾಗಾದರೆ ಆ ಒಂದು ಪದಾರ್ಥ ಯಾವುದು ಒಡೆದು ಹೋಗುವಂತಹ ಹಾಲನ್ನು ಸರಿಪಡಿಸುವಂತಹ ಗುಣ ಯಾವುದಕ್ಕೆ ಇದೆ ಎಂದು ನೋಡುವುದಾದರೆ. ನಾವು ಕೆಲವೊಂದಷ್ಟು ಅಡುಗೆಗೆ ಉಪಯೋಗಿಸುವಂತಹ ಅಡುಗೆ ಸೋಡಾ ಹೌದು, ಅಡುಗೆ ಸೋಡವನ್ನು ಬಳಸುವುದರ ಮೂಲಕ ಕೆಟ್ಟು ಹೋಗುತ್ತಿರುವಂತಹ ಹಾಲನ್ನು ಸರಿಪಡಿಸಬಹುದು.

ಅದು ಹೇಗೆ ಎಂದು ನೋಡುವುದಾದರೆ ಮೊದಲು ಹಾಲನ್ನು ಪಾತ್ರೆಗೆ ಹಾಕಿದ ತಕ್ಷಣ ಅದು ತಳ ಹಿಡಿಯುವಾಗ ಅದು ಕೆಟ್ಟು ಹೋಗುತ್ತಿರುತ್ತದೆ ಅಂತಹ ಒಂದು ಸಂದರ್ಭದಲ್ಲಿ ಚಿಟಿಕೆ ಅಡಿಗೆ ಸೋಡವನ್ನು ಆ ಒಂದು ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಮಿಶ್ರಣ ಮಾಡಿದ ತಕ್ಷಣವೇ ಕೆಟ್ಟು ಹೋಗುತ್ತಿರುವಂತಹ ಹಾಲು ಸರಿಹೋಗುತ್ತದೆ. ತಳ ಹಿಡಿಯುವುದಿಲ್ಲ ಈ ರೀತಿ ಮಾಡಿದಂತಹ ಹಾಲನ್ನು ಚೆನ್ನಾಗಿ ಕುದಿ ಬರುವ ಹಾಗೆ ಬಿಸಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ.!

ಹೀಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ಕೆಟ್ಟು ಹೋಗುತ್ತಿರುವಂತಹ ಹಾಲನ್ನ ತಕ್ಷಣದಲ್ಲಿಯೇ ಸರಿಪಡಿಸಿಕೊಳ್ಳುವುದರ ಮೂಲಕ ಮತ್ತೆ ನೀವು ಆ ಒಂದು ಹಾಲನ್ನು ಉಪಯೋಗಿಸಿಕೊಂಡು ಟಿ ಕಾಫಿ ಹಾಲು ಮಾಡಿಕೊಂಡು ಸೇವನೆ ಮಾಡಬಹುದು ಬದಲಿಗೆ ಅದನ್ನು ಆಚೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ.

ಹಾಗಾಗಿ ಯಾರೆಲ್ಲ ಕೆಟ್ಟ ಹೋಗುತ್ತಿರುವಂತಹ ಹಾಲನ್ನು ಬಿಸಾಕುತ್ತಿರುತ್ತಾರೋ ಅವರು ಇಂತಹ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಹಾಲನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ಮನೆಯಲ್ಲಿರುವ ಮಹಿಳೆಯು ಕೂಡ ಇಂತಹ ಕೆಲವೊಂದಷ್ಟು ಕಿಚನ್ ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ಹಾಗೂ ಅನುಸರಿಸುವುದು ತುಂಬಾ ಒಳ್ಳೆಯದು.

ಇದರಿಂದ ನಾವು ಯಾವುದೇ ಆಹಾರ ಪದಾರ್ಥವನ್ನು ವೇಸ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಹೇಗೆ ಸರಿಪಡಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!

https://youtu.be/QDLfSo0qWzw?si=05OIaj7gusqIcG4J

ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!

 

ಮನೆ ಎಂದ ಮೇಲೆ ಅಲ್ಲಿ ಹಲವಾರು ಕ್ರಿಮಿಕೀಟಗಳು ಕೆಲವೊಂದಷ್ಟು ಜಿರಳೆಗಳು ಪಲ್ಲಿಗಳು ಇವೆಲ್ಲವೂ ಕೂಡ ಇರುವುದು ಸರ್ವೇಸಾಮಾನ್ಯ ಆದರೆ ಇವುಗಳನ್ನು ನಾವು ದೂರ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪ ಯೋಗಿಸಿ ಅವುಗಳನ್ನು ದೂರ ಮಾಡುತ್ತಿರುತ್ತೇವೆ.

ಆದರೆ ಯಾವುದೇ ಕಾರಣಕ್ಕೂ ಆ ರೀತಿಯಾದಂತಹ ತಪ್ಪು ವಿಧಾನವನ್ನು ಅನುಸರಿಸ ಬಾರದು ಏಕೆ ಎಂದರೆ ಆ ಒಂದು ಕೆಮಿಕಲ್ ಪದಾರ್ಥದಲ್ಲಿ ಹಲವಾರು ರೀತಿಯ ವಿಷಕಾರಿ ಪದಾರ್ಥಗಳು ಇರುವುದರಿಂದ ಅದೇನಾದರೂ ಬೇರೆ ಆಹಾರ ಪದಾರ್ಥದ ಮೇಲೆ ಬಿದ್ದು ಅದನ್ನು ನಾವು ತಿಂದರೆ ನಮ್ಮ ಆರೋಗ್ಯದ ಮೇಲೆ ಅದು ಅತಿ ಹೆಚ್ಚಿನ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.

ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!

ಆದ್ದರಿಂದ ಅವುಗಳನ್ನು ಉಪಯೋಗಿಸುವುದು ತಪ್ಪು ಅದರಲ್ಲೂ ಮಕ್ಕಳು ಇರುವಂತಹ ಮನೆಯಲ್ಲಿ ಇಂತಹ ವಿಧಾನ ಅನುಸರಿಸುವುದು ದೊಡ್ಡ ತಪ್ಪು ಬದಲಿಗೆ ಕೆಲವೊಂದಷ್ಟು ಸಮಸ್ಯೆಗಳನ್ನು ಅಂದರೆ ನಮ್ಮ ಮನೆಯಲ್ಲಿ ಕೆಲವೊಂದಷ್ಟು ಟಿಪ್ಸ್ ಗಳನ್ನು ನಾವು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ಸುಲಭವಾಗಿ ನಾವು ಆ ಒಂದು ಸಮಸ್ಯೆಗೆ ಪರಿಹಾರ ಎನ್ನುವುದನ್ನು ನಾವೇ ಮಾಡಿಕೊಳ್ಳಬಹುದು.

ಹಾಗಾದರೆ ಈ ದಿನ ಅಡುಗೆ ಮನೆಯ ವಿಚಾರವಾಗಿ ಹಾಗೂ ಮನೆಯಲ್ಲಿ ಯಾವ ಕೆಲವೊಂದು ಕೆಲಸಗಳನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಅದನ್ನು ನಾವು ಹೇಗೆ ಮಾಡುವುದರಿಂದ ಆ ಕೆಲಸ ನಮಗೆ ಪ್ರಯೋಜನಕಾರಿಯಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಅಡುಗೆ ಮನೆಯ ಕೆಲವೊಂದಷ್ಟು ಟಿಪ್ಸ್ ಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

* ಈಗ ಅತಿ ಹೆಚ್ಚು ಬಿಸಿಲು ಇರುವುದರಿಂದ ಗಿಡಗಳಿಗೆ ಎಷ್ಟೇ ನೀರು ಹಾಕಿದರೂ ಅದು ಬೇಗನೆ ಹೀರಿಕೊಳ್ಳುತ್ತದೆ ಅಂದರೆ ಹೆಚ್ಚಿನ ಸಮಯ ದವರೆಗೆ ಗಿಡದ ಬುಡದಲ್ಲಿ ನೀರಿನ ಅಂಶ ಇರುವುದಿಲ್ಲ. ಇದರಿಂದ ಗಿಡಗಳು ಬೇಗನೆ ಒಣಗುತ್ತಿರುತ್ತದೆ ಆದರೆ ಇದಕ್ಕೆ ಪರಿಹಾರವಾಗಿ ನಾವು ಕಾಯಿಯನ್ನು ಬಿಡಿಸುವಂತಹ ಗುಂಜು ಇದನ್ನು ನಿಮ್ಮ ಗಿಡದ ಬುಡಕ್ಕೆ ಹಾಕಿ ಅದರ ಮೇಲೆ ನೀರನ್ನು ಹಾಕುವುದರಿಂದ ಗಿಡದ ಬುಡದಲ್ಲಿ ಹೆಚ್ಚಿನ ಸಮಯದವರೆಗೆ ನೀರಿನ ಅಂಶ ಇರುತ್ತದೆ.

ನೀರನ್ನು ಹೀರಿ ಕೊಳ್ಳುವಂತಹ ಶಕ್ತಿ ಆ ಒಂದು ಕಾಯಿ ಗುಂಜಿಗೆ ಇರುವುದರಿಂದ ಇದನ್ನು ನಿಮ್ಮ ಗಿಡದ ಬುಡಗಳಿಗೆ ಹಾಕಿ ನೀರನ್ನು ಹಾಕುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ನಾವು ನಮ್ಮ ಕಾಲುಗಳಲ್ಲಿ ಉಂಟಾದಂತಹ ಬಿರುಕುಗಳನ್ನು ದೂರ ಮಾಡುವುದಕ್ಕೆ ಹಲವಾರು ಕ್ರೀಮ್ ಗಳನ್ನು ಹಚ್ಚುತ್ತೇವೆ.

ಈ ಸುದ್ದಿ ಓದಿ:- ಕನ್ನಡಿ ಇಲ್ಲಿ ಇಟ್ಟು ನೋಡಿ ಅದೃಷ್ಟ ಬದಲಾಗುತ್ತೆ.!

ಅದರ ಬದಲು ಒಂದು ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಒಂದರಿಂದ ಎರಡು ಚಮಚ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಕರಗಿಸಿಕೊಳ್ಳಬೇಕು ಆನಂತರ 10 ನಿಮಿಷ ನಿಮ್ಮ ಕಾಲುಗಳನ್ನು ಅದರಲ್ಲಿ ಇಟ್ಟು ಆನಂತರ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ವಿಕ್ಸ್ ಬೇಬಿ ರಬ್ ಅನ್ನು ಹಾಕುವುದರಿಂದ ನಿಮ್ಮ ಒಡೆದ ಕಾಲು ಅಂದರೆ ಕಾಲುಗಳಲ್ಲಿ ಇರುವಂತಹ ಬಿರುಕುಗಳು ಕಡಿಮೆಯಾಗುತ್ತಾ ಬರುತ್ತದೆ.

* ಜಿರಳೆಗಳನ್ನು ಓಡಿಸುವುದಕ್ಕೆ ಮೊದಲು ಸ್ವಲ್ಪ ಪ್ರಮಾಣದ ಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಆನಂತರ ಅದಕ್ಕೆ 1 ರಿಂದ 2 ಚಮಚ ಗೋಧಿ ಹಿಟ್ಟು ಹಾಗೂ 1 ಚಮಚ ಟೀ ಪುಡಿ ಹಾಗೂ 2 ಚಮಚ ಬೋರಿಕ್ ಆಸಿಡ್ ಪೌಡರ್ ಹಾಗೂ ಚಿಟಿಕೆ ಅಡುಗೆ ಸೋಡಾ ಇಷ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಜಿರಳೆ ಓಡಾಡುವ ಸ್ಥಳಕ್ಕೆ ಇಡುವುದರಿಂದ ಅದನ್ನು ಜಿರಳೆ ತಿನ್ನುವುದರಿಂದ ಅದು ಸಾಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!

 

ಪುರಾಣದಲ್ಲಿ ಅದೃಷ್ಟದ ಬಗ್ಗೆ ಸ್ಪಷ್ಟ ವಿವರಣೆ ಇದ್ದು ಇದು ನಮ್ಮ ನಂಬಿಕೆಯ ಮೇಲೆ ಆಧಾರಿತವಾಗಿದೆ ಅಂತ ಹೇಳಲಾಗಿದೆ. ಆದರೆ ಕೆಲವು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಒಲಿಯುವ ಸಾಧ್ಯತೆ ಇರುತ್ತದೆ ಅಂತ ಹೇಳಲಾಗುತ್ತದೆ. ಈ ಅಚ್ಚರಿ ಸಂಗತಿ ನಿಮಗೆ ತಿಳಿದಿದೆಯಾ? ಕೆಲವೊಮ್ಮೆ ಕೆಲವು ವಸ್ತುಗಳ ದರ್ಶನ ವಾದರೂ ನಿಮಗೆ ಅದೃಷ್ಟ ಒಲಿಯುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ಇಂತಹ ಅಚ್ಚರಿಯ ವಿಷಯವನ್ನು ಈ ದಿನ ತಿಳಿಯೋಣ.

ಈ ವಸ್ತುಗಳನ್ನು ದಾರಿಯಲ್ಲಿ ನೋಡುವುದು ಒಳ್ಳೆಯ ಸಂಕೇತ ಎಂದು ಹೇಳಲಾಗಿದೆ. ನೀವು ಮನೆಯಿಂದ ಕೆಲಸಕ್ಕೆ ಹೊರಟಂತಹ ಸಂದರ್ಭದಲ್ಲಿ ಶಂಖ, ನಾಣ್ಯ ಕುದುರೆ ಇವುಗಳು ದಾರಿಯಲ್ಲಿ ಕಂಡು ಬಂದರೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ದಾರಿಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ನೋಡುವುದು ಅಥವಾ ಸ್ವಸ್ತಿಕ ಚಿನ್ಹೆ ಗುರುತಿರುವಂತಹ ಯಾವುದೇ ವಸ್ತು ಕಂಡರೂ ಕೂಡ ಅದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಇಂತಹ ಮಂಗಳಕರ ವಸ್ತುಗಳನ್ನು ನೋಡಿದರೆ ನೀವು ಹೋಗುವಂತಹ ಕೆಲಸ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಹಲವು ಬಾರಿ ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಕೆಲವು ವಸ್ತುಗಳು ಸಿಕ್ಕಿದರೆ ಅದು ಕೂಡ ನಮ್ಮ ಅದೃಷ್ಟದ ಸಂಕೇತ ಎಂದು ಹೇಳುತ್ತಾರೆ ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ರಸ್ತೆಯಲ್ಲಿ ಬಿದ್ದಿರುವಂತಹ ಹಣವನ್ನು ನೋಡಿಯೂ ನೋಡದಂತೆ ಹೋದರೆ ತಾಯಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ. ಹಾಗಾಗಿ ರಸ್ತೆಯಲ್ಲಿ ಸಿಕ್ಕಂತಹ ಹಣಕ್ಕೆ ನಾವು ಅ ಗೌರವ ತೋರಿಸ ಬಾರದು ಬದಲಿಗೆ ಅದನ್ನು ಯಾವುದೇ ಕೆಲಸಕ್ಕೂ ಖರ್ಚು ಮಾಡದೆ ಅದನ್ನು ನಿಮ್ಮ ಜೊತೆ ಇಟ್ಟುಕೊಳ್ಳುವುದರಿಂದ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.

ದಾರಿಯಲ್ಲಿ ಹಣ ನಿಮಗೆ ಸಿಕ್ಕರೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೃಪೆ ತೋರಿಸಿದ್ದಾಳೆ ಎಂದು ಅರ್ಥ ಜೀವನದಲ್ಲಿ ಆರ್ಥಿಕ ಸಮಸ್ಯೆ ಯಿಂದ ಬಳಲುತ್ತಿರುವವರಿಗೆ ತಮ್ಮ ಆರ್ಥಿಕ ಸಮಸ್ಯೆ ಇನ್ನೇನು ಕೆಲವೇ ದಿನಗಳಲ್ಲಿ ದೂರವಾಗುತ್ತದೆ ಎನ್ನುವುದರ ಸಂಕೇತವು ಕೂಡ ಇದಾಗಿದೆ. ನಿಮಗೆ ರಸ್ತೆಯಲ್ಲಿ ಅಥವಾ ಎಲ್ಲಿಯಾದರೂ ಪೂಜಾ ಸಾಮಗ್ರಿಗಳು ಸಿಕ್ಕರೆ ಅದು ಕೂಡ ನಿಮಗೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ. ದೇವಾನುದೇವತೆಗಳು ನಿಮ್ಮ ಮೇಲೆ ಪ್ರಸನ್ನ ರಾಗಿದ್ದಾರೆ ಎಂಬ ಅರ್ಥ ಇದಾಗಿರುತ್ತದೆ.

ಹಾಗಾಗಿ ದೇವರ ಸಾಮಾಗ್ರಿಗಳು ನಿಮಗೆ ಸಿಕ್ಕರೆ ಅದು ಕೆಟ್ಟದ್ದಲ್ಲ ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ. ನೀವು ಮನೆಯಿಂದ ಹೊರಬಂದ ತಕ್ಷಣ ಕಬ್ಬಿನ ರಾಶಿಯನ್ನು ನೋಡಿದರೆ ಅದು ತುಂಬಾ ಮಂಗಳಕರವಾದ ಸಂಕೇತ. ಇದು ನಿಮ್ಮ ಮುಂದಿನ ಜೀವನದಲ್ಲಿ ಸುಖ ಸಂತೋಷ ಹಾಗೂ ನೆಮ್ಮದಿಯ ಜೀವನವನ್ನು ನಡೆಸುತ್ತೀರಿ ಎನ್ನುವು ದರ ಸಂಕೇತ ಇದಾಗಿರುತ್ತದೆ. ಗಣೇಶನ ಚಿತ್ರ ಅಥವಾ ವರ್ಣ ಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸುವುದು ತುಂಬಾ ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ.

ಭಗವಾನ್ ಗಣೇಶನ ಕೃಪೆಯಿಂದ ಜೀವನದ ಎಲ್ಲ ತೊಂದರೆಗಳು ಕೂಡ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಬೆಳ್ಳಿಯು ಅತ್ಯಂತ ಪರಿಶುದ್ಧ ಲೋಹಗಳಲ್ಲಿ ಒಂದಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಯಿಂದ ಮಾಡಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಮತ್ತು ಸ್ವೀಕರಿಸುವುದು ತುಂಬಾ ಶುಭ ತರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

 

ವಿವಾಹವಾದ ನಂತರ ಪ್ರತಿಯೊಬ್ಬರೂ ಕೂಡ ತಮ್ಮ ಮದುವೆಯನ್ನು ನೋಂದಣಿ ಮಾಡಿಸಬೇಕು. ಯಾಕೆಂದರೆ ಮುಂದಿನ ದಿನಗಳಲ್ಲಿ ಹಲವಾರು ಕಾರಣಕ್ಕಾಗಿ ಈ ಒಂದು ದಾಖಲೆಗಳನ್ನು ಕೇಳುತ್ತಾರೆ. ಹಾಗಾಗಿ ಮದುವೆ ಆದ ಆರು ತಿಂಗಳ ಒಳಗೆ ಅಥವಾ ಸಾಧ್ಯವಾದಷ್ಟು ಬೇಗ ವಿವಾಹ ಪ್ರಮಾಣ ಪತ್ರ (Marriage Certificate) ಪಡೆದುಕೊಳ್ಳಬೇಕು.

ಈ ಮೊದಲು ತಮ್ಮ ವ್ಯಾಪ್ತಿಗೆ ಬರುವ ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಪ್ರಮಾಣ ಪತ್ರ ಪಡೆಯುತ್ತಿದ್ದರು ಆದರೆ ಈಗ ಇದನ್ನು ಆನ್ಲೈನ್ ನಲ್ಲಿ ಕೂಡ ಪಡೆಯಬಹುದಾಗಿದೆ. ಕಾವೇರಿ 2.0 ತಂತ್ರಾಂಶದ (Kaveri 2.0) ಮೂಲಕವಾಗಿ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಏನಿಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಯಾವಾಗಲೂ ಆರಾಮಾಗಿ ನೆಮ್ಮದಿ ಆಗಿರಬೇಕಾ.? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಬೇಕಾಗುವ ದಾಖಲೆಗಳು:-

* ವಧು ಮತ್ತು ವರರು ಜೋಡಿಯಾಗಿ ತೆಗೆಸಿರುವ ಭಾವಚಿತ್ರ
* ಮದುವೆಯ ಇನ್ವಿಟೇಶನ್ ಕಾರ್ಡ್
* ಜನ್ಮ ದಿನಾಂಕದ ಪುರಾವೆಗಾಗಿ (ಜನನ ಪ್ರಮಾಣ ಪತ್ರ / TC / ಪಾನ್ ಕಾರ್ಡ್ / ಪಾಸ್ಪೋರ್ಟ್ / ವೋಟರ್ ಐಡಿ ಇತ್ಯಾದಿಗಳಲ್ಲಿ ಯಾವುದಾದರೂ ಒಂದು)
* ವಿಳಾಸ ಪುರಾವೆಗಾಗಿ (ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್/ ಅಥವಾ ವೋಟರ್ ಐಡಿ ಇತ್ಯಾದಿಗಳಲ್ಲಿ ಯಾವುದಾದರೂ ಒಂದು)
* ಸಾಕ್ಷಿಗಳ ಸಹಿ
* ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* https://kaveri.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ
* ಮೊದಲಿಗೆ ರಿಜಿಸ್ಟರ್ ಮಾಡಿ ಈಗಾಗಲೇ ರಿಜಿಸ್ಟರ್ ಆಗಿದ್ದರೆ ಲಾಗಿನ್ (Login) ಕ್ಲಿಕ್ ಮಾಡಿ ಐಡಿ ಮತ್ತು ಪಾಸ್ವರ್ಡ್ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಲಾಗಿನ್ ಆಗಿ
* ಸ್ಕ್ರೀನ್ ಮೇಲೆ ಮದುವೆ ನೋಂದಣಿ ಪ್ರಮಾಣ ಪತ್ರ ಎನ್ನುವ ಆಪ್ಶನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ ಮುಂದುವರೆಯಿರಿ

* ವಧು ಹಾಗೂ ವರರ ವೈಯುಕ್ತಿಕ ವಿವರಗಳನ್ನು ಕೇಳಲಾಗುತ್ತದೆ ಈ ಎಲ್ಲಾ ಆಪ್ಷನ್ಗಳಲ್ಲಿ ವಧುವಿನ ಹೆಸರು, ವಯಸ್ಸು, ತಂದೆಯ ಹೆಸರು, ಆಕೆಯ ವಾಸ ಸ್ಥಳ, ಹೋಬಳಿ, ತಾಲೂಕು ಜಿಲ್ಲೆ, ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಹಾಗೆ ವರನ ವಿವರವನ್ನು ಭರ್ತಿ ಮಾಡಿ.

ಈ ಸುದ್ದಿ ಓದಿ:- ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!

* ವಿವಾಹ ನಡೆದ ಸ್ಥಳ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿವರ ಭರ್ತಿ ಮಾಡಲು ಸೂಚಿಸಲಾಗಿರುತ್ತದೆ. ಅದರಲ್ಲಿ ವಿವಾಹದ ದಿನಾಂಕ ಮತ್ತು ವಿವಾಹ ನಡೆದ ಸ್ಥಳದ ವಿಳಾಸ ಎಲ್ಲವನ್ನು ಸರಿಯಾಗಿ ಭರ್ತಿ ಮಾಡಿ
* ಕೇಳಿರುವ ಫಾರ್ಮೆಟ್ ನಲ್ಲಿ ಪೂರಕ ದಾಖಲೆಗಳನ್ನು ಹಾಗೂ ಫೋಟೋ ಇತ್ಯಾದಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ

* ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆದುಕೊಳ್ಳಲು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಆನ್ಲೈನ್ ಮೂಲಕ ನೀವು ಈ ಶುಲ್ಕವನ್ನು ಪಾವತಿ ಮಾಡಬಹುದು
* ಒಂದು ವೇಳೆ ವಿವಾಹವು ಕರ್ನಾಟಕದಿಂದ ಹೊರಗೆ ಬೇರೆ ರಾಜ್ಯಗಳಲ್ಲಿ ಆಗಿದ್ದರೆ ಅಫಿಡವಿಟ್ ಸಲ್ಲಿಸಬೇಕಿರುತ್ತದೆ.

ಈ ಸುದ್ದಿ ಓದಿ:- ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!

* ಸಹಿ ಅವಶ್ಯಕತೆ ಇರುತ್ತದೆ, ಇ-ಸೈನ್ ವಿಧಾನದಲ್ಲಿ ವಧು, ವರ ಪೋಷಕರು ಹಾಗೂ ಸಾಕ್ಷಿಗಳ ಸಹಿ ತೆಗೆದುಕೊಳ್ಳಲಾಗುತ್ತದೆ ಇದಾದ ಮೇಲೆ ನಿಮಗೆ ಒಂದು ಅಕ್ನಾಲಜಿಮೆಂಟ್ ಲೆಟರ್ ಕೊಡಲಾಗುತ್ತದೆ.
* ನೀವು ಅದರಲ್ಲಿರುವ ಅರ್ಜಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ಸರ್ಟಿಫಿಕೇಟ್ ಅನುಮೋದನೆ ಆಗಿದೆಯೇ ಎನ್ನುವುದನ್ನು ಪರೀಶೀಲಿಸಿಕೊಳ್ಳಬಹುದು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅನುಮೋದಿಸಿದ ನಂತರ ನಿಮಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಸಿಗುತ್ತದೆ.

https://youtu.be/IkQD6VZnAGI?si=C9cL6PsRVXkxuUwu

ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ.!

 

ಮೊದಲು ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
* ಮಾವಿನಕಾಯಿ
* ತಣ್ಣಗಾಗಿರುವಂತಹ ಅನ್ನ
* ಅರ್ಧ ಚಮಚ ಮೆಂತ್ಯ ಕಾಳು
* ಒಂದು ಚಮಚ ಸಾಸಿವೆ
* ಎರಡು ಚಮಚ ಕಡಲೆಕಾಯಿ ಬೀಜ
* ಕಾಲು ಚಮಚ ಜೀರಿಗೆ
* ಇಂಗು
* ಒಂದು ಚಮಚ ಕಡಲೆ ಬೇಳೆ, ಉದ್ದಿನ ಬೇಳೆ
* ಆರು ಹಸಿ ಮೆಣಸಿನಕಾಯಿ
* ಉಪ್ಪು
* ತೆಂಗಿನಕಾಯಿ ತುರಿ
* ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :- ಮೊದಲು ಒಂದು ಬಾಣಲೆಗೆ ಅರ್ಧ ಚಮಚ ಮೆಂತ್ಯ ಕಾಳು ಹಾಗೂ ಅರ್ಧ ಚಮಚ ಸಾಸಿವೆ ಇವೆರಡನ್ನು ಸಹ ಚೆನ್ನಾಗಿ ಹುರಿದು ಒಂದು ಕುಟ್ಟಣಿಗೆಯಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಆನಂತರ ಕಡಲೆಬೀಜವನ್ನು ಸಹ ಎಣ್ಣೆಯಲ್ಲಿ ಹುರಿದು ಇಟ್ಟುಕೊಳ್ಳಬೇಕು.

ಈ ಸುದ್ದಿ ಓದಿ:- ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!

ಆನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಕಡಲೆ ಬೆಳೆ ಉದ್ದಿನ ಬೆಳೆ ಇಷ್ಟನೂ ಹಾಕಿ ಚೆನ್ನಾಗಿ ಹುರಿದುಕೊಂಡು ಆನಂತರ ಸಣ್ಣದಾಗಿ ಕತ್ತರಿಸಿಕೊಂಡಂತಹ ಹಸಿ ಮೆಣಸಿನಕಾಯಿ ಇದನ್ನು ಸಹ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ಮಾವಿನಕಾಯಿ ಹುಳಿ ಇರುವುದರಿಂದ ಅದಕ್ಕೆ ಕಾರ ಹೆಚ್ಚಾಗಿ ಹಾಕುವು ದರಿಂದ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಈ ರೀತಿ ಹುರಿದುಕೊಂಡಂತಹ ಎಲ್ಲ ಮಿಶ್ರಣಕ್ಕೆ ಇಂಗು , ಕಡಲೇ ಕಾಯಿ ಬೀಜ, ತುರಿದಿಟ್ಟುಕೊಂಡಂತಹ ಮಾವಿನಕಾಯಿಯನ್ನು ಹಾಕಿ ಐದರಿಂದ 10 ನಿಮಿಷಗಳ ಕಾಲ ಹುರಿಯ ಬೇಕು ಆನಂತರ ರುಚಿಗೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ ಕೊನೆಯಲ್ಲಿ ಅನ್ನ ಹಾಕಿ. ಅದರ ಮೇಲೆ ಸಾಸಿವೆ ಮತ್ತು ಮೆಂತ್ಯ ಕಾಳಿನ ಪುಡಿ ಇದನ್ನು ಹಾಕಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿರುಚಿಯಾದಂತಹ ಮಾವಿನ ಕಾಯಿ ಚಿತ್ರಾನ್ನ ತಯಾರಾಗುತ್ತದೆ.

ಈ ಸುದ್ದಿ ಓದಿ:- ಮಂತ್ರಾಲಯದ ಮಂತ್ರಾಕ್ಷತೆ ಮಹಿಮೆ ಎಂಥದ್ದು ಗೊತ್ತ.?

ಮೇಲೆ ಹೇಳಿದ ಈ ವಿಧಾನದಲ್ಲಿ ನೀವು ಮಾವಿನಕಾಯಿ ಚಿತ್ರಾನ್ನ ಮಾಡಿದರೆ ಪ್ರತಿಯೊಬ್ಬರಿಗೂ ಕೂಡ ಇಷ್ಟುವಾಗುತ್ತದೆ. ಹಾಗೂ ಅದರ ರುಚಿ ಕೂಡ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಈ ವಿಧಾನ ಅನುಸರಿಸಿ ಮಾವಿನಕಾಯಿ ಚಿತ್ರಾನ್ನ ಮಾಡುವುದು ತುಂಬಾ ಸೂಕ್ತ ಹಾಗೂ ಕಡಿಮೆ ಸಮಯದಲ್ಲಿ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಮಾಡುವುದರಿಂದ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ.