Home Blog Page 240

ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?

0

 

ಕನ್ನಡದ ಸಾಹುಕಾರ (Sahukara) ಎನ್ನುವ ಸೂಪರ್ ಹಿಟ್ ಸಿನಿಮಾದ ರಂಗನಾಯಕಿ (Ranganayaki) ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ಯುವರಾಣಿ, ಮಹಾರಾಣಿ ಎಂದರೆ ಹೇಗಿರುತ್ತಾರೆ ಎಂದು ಇದ್ದ ಕಲ್ಪನೆಗೆ ಅಚ್ಚು ಹಾಕಿ ಇಳಿಸಿದ ಹಾಗೆ ಇದ್ದರು ರಂಭಾ (Rambha) . ರಂಭಾ ಅವರ ಸಾಹುಕಾರ ಸಿನಿಮಾದ ಪಾತ್ರ ಮತ್ತು ಅಭಿನಯ ಆ ಸಿನಿಮಾದಲ್ಲೂ ಕೂಡ ನಾಟಕಗಳಲ್ಲಿ ಪಾರ್ಟ್ ಮಾಡುವ ಹುಡುಗಿಯ ಪಾತ್ರದಲ್ಲಿ ರಂಭ ಅವರು ಕಾಣಿಸಿಕೊಂಡಿದ್ದರು.

ಸಿನಿಮಾದ ಬಹುತೇಕ ಅರ್ಧಭಾಗ ಯುವರಾಣಿಯ ಕಾಸ್ಟ್ಯೂಮ್ ಅಲ್ಲಿಯೇ ಕಂಗೊಳಿಸುತ್ತಿದ್ದರು. ಹೆಸರಿಗೆ ತಕ್ಕ ಹಾಗೆ ರಂಭ ಅವರು ನಿಜವಾಗಿಯೂ ಅಪ್ಸರೆಯಂತಹ ಸ್ಫುರದ್ರೂಪಿ ಚೆಲುವೆ. ಆ ಚೆಲುವಿಗೆ ತಕ್ಕ ಹಾಗೆ ಅಭಿನಯದ ಚಾತುರ್ಯತೆ. ಈ ಕಾರಣಗಳಿಂದ ಆ ಸಮಯದ ಸ್ಟಾರ್ ಕಲಾವಿದರೊಂದಿಗೆ ನಾಯಕಿಯಾಗಿ ಅಭಿನಯಿಸುವ ಅದೃಷ್ಟ ಪಡೆದುಕೊಂಡಿದ್ದರು. ಕನ್ನಡದವರು ಅಲ್ಲದಿದ್ದರೂ ಕನ್ನಡದವರೇ ಎನ್ನುವ ರೀತಿ ಕನ್ನಡಿಗ ಕಲಾ ಪ್ರೇಮಿಗಳಿಗೆ ಹತ್ತಿರವಾಗಿದ್ದರು ರಂಭಾ ಅವರು.

1975ರ ಜೂನ್ 5ರಂದು ಆಂಧ್ರಪ್ರದೇಶದ (Andraparadesh) ವಿಜಯವಾಡದಲ್ಲಿ ಜನಿಸಿದ ಇವರ ಮೂಲ ಹೆಸರು ವಿಜಯಲಕ್ಷ್ಮಿ ರಂಭಾ (Vijayalakshmi Rambha) . ಚಿತ್ರರಂಗಕ್ಕೆ ಬಂದ ಕಡಿಮೆ ಸಮಯದಲ್ಲಿಯೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಪಂಚಭಾಷಾ ತಾರೆ ಎನಿಸಿಕೊಂಡರು. ಅದರಲ್ಲೂ ಎಲ್ಲಾ ಚಿತ್ರರಂಗದಲ್ಲೂ ಕೂಡ ಮೇರ ನಟರೊಂದಿಗೆ ನಟಿಸಿದ ಖ್ಯಾತಿ ಇವರದ್ದು.

ಕನ್ನಡದಲ್ಲಿ ಸಹ ರವಿಚಂದ್ರನ್ ಅವರೊಂದಿಗೆ ಓ ಪ್ರೇಮವೇ ಸಾಹುಕಾರ ಮತ್ತು ಪಾಂಡುರಂಗ ವಿಠಲ, ಶಿವರಾಜ್ ಕುಮಾರ್ ಅವರೊಂದಿಗೆ ಬಾವ ಬಾಮೈದ ಮತ್ತು ಗಂಡುಗಲಿ ರಾಮ, ದರ್ಶನ್ ಅವರೊಂದಿಗೆ ಅನಾಥರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದ ಇವರು ಸಿನಿಮಾ ರಂಗದಿಂದ ದೂರವಾಗಿಯೇ 11 ವರ್ಷಗಳು ಕಳೆದವು. ಕೊನೆಯ ಬಾರಿಗೆ 11 ವರ್ಷಗಳ ಹಿಂದೆ ತಮಿಳು ಸಿನಿಮಾದಲ್ಲಿ ನಟಿಸಿ ಸಿನಿ ನಂಟನ್ನು ಕಡಿದುಕೊಂಡ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕೆನಡಾ (Canada) ಮೂಲದ ಉದ್ಯಮಿ ಒಬ್ಬರನ್ನು ವಿವಾಹವಾದ ಇವರು ಅಲ್ಲೇ ಹೋಗಿ ಸೆಟಲ್ ಆಗಿದ್ದಾರೆ. ಮುದ್ದಾದ ಮೂರು ಮಕ್ಕಳಿಗೂ ತಾಯಿಯಾಗಿದ್ದಾರೆ ಆದರೆ ಕಳೆದ ಕೆಲವು ವರ್ಷಗಳ ಹಿಂದೆ ನಟಿ ರಂಭಾ ಬದುಕಲ್ಲಿ ಬಿರುಗಾಳಿ ಎದ್ದಿದೆ, ಅವರ ಪತಿ ಅವರಿಗೆ ಮೋಸ ಮಾಡಿದ್ದಾರೆ ಎನ್ನುವ ಕುರಿತು ಪತ್ರಿಕೆಗಳಲ್ಲಿ ಹಾಗೂ ಟಿವಿ ಮಾಧ್ಯಮದಲ್ಲೂ ವರದಿ ಆಗಿತ್ತು. ರಂಭಾ ಅವರ ಜೊತೆ ವಿವಾಹವಾಗುವ ಮೊದಲೇ ಒಂದು ಮದುವೆ ಇವರಿಗೆ ಆಗಿತ್ತಂತೆ.

ಆದರೂ ಕೂಡ ಆ ವಿಚಾರ ಮುಚ್ಚಿಟ್ಟು ರಂಭಾ ಅವರಿಗೆ ಮೋಸ ಮಾಡಿ ಮದುವೆ ಆಗಿದ್ದಾರಂತೆ. ಈ ಮೋಸದ ಜೊತೆಯಲ್ಲಿ ರಂಭಾ ಅವರಿಗೆ ನಾನಾ ರೀತಿಯ ಕಿ.ರು.ಕು.ಳ ಹಾಗೂ ಹಿಂ.ಸೆಯನ್ನು ಕೂಡ ಕೊಡುತ್ತಿದ್ದರಂತೆ. ಬಳಿಕ ಇವರಿಬ್ಬರಿಗೂ ವಿ.ಚ್ಛೇ.ದ.ನ ಆಗಿದೆ ಹಾಗೂ ರಂಭಾ ಪತಿ ಅವರನ್ನು ಮೋಸ ಮಾಡಿ ವಿದೇಶದಲ್ಲಿ ಒಂಟಿಯಾಗಿ ಬಿಟ್ಟಿದ್ದಾರೆ ಹೀಗೆಲ್ಲ ಗಾಳಿ ಸುದ್ದಿಗಳು ಹರಡಿದ್ದವು.

2018 ರಲ್ಲಿ ರಂಭಾ ಅವರು ಆ.ತ್ಮ.ಹ.ತ್ಯೆ (Succide) ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯು ಕೂಡ ವರದಿ ಆಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಕೊಟ್ಟ ಸ್ಪಷ್ಟನೆಯಲ್ಲಿ ಆ ದಿನ ಅವರ ಮನೆಯಲ್ಲಿ ಲಕ್ಷ್ಮಿ ಪೂಜೆ ಇದ್ದ ಕಾರಣ ದಿನಪೂರ್ತಿ ಉಪವಾಸ ಇದ್ದಿದ್ದರಿಂದ ಆ ರೀತಿ ಪ್ರಜ್ಞೆ ತಪ್ಪಿದ್ದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಈಗಲೂ ಅಭಿಮಾನಿಗಳು ಅವರಿಂದ ಬಲವಂತವಾಗಿ ಆ ರೀತಿ ಹೇಳಿಸಲಾಗಿದೆ ಎಂದೇ ಅನುಮಾನ ಪಡುತ್ತಿದ್ದಾರೆ.

ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

0

 

 

ಅಪ್ಪು “ಅಭಿಮಾನಿಗಳೇ ನಮ್ಮನೇ ದೇವ್ರು” ಅಂತ ಟ್ಯಾಟೋ ಹಾಕಿಸಿಕೊಳ್ಳಬೇಕು ಅಂತ ಹೇಳಿದ್ರು. ಅವ್ರು ಹೇಳಿದ್ನ ಕೇಳಿ ಈಗ ದರ್ಶನ್ ಟ್ಯಾಟೋ ಹಾಕಿಸಿಕೊಂಡಿದ್ದರೆ ಅಂತಿದ್ದಾರೆ ಫ್ಯಾನ್ಸ್. ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟೂ, ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿಕೊಂಡಿದ್ದರು ಅಪ್ಪು ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಅಭಿಮಾನಿಗಳಿಗಾಗಿ ಸರ್ಪ್ರೈಸ್ ಮಾಡಿದ್ದಾರೆ ಎದೆ ಮೇಲೆ ನನ್ನ ಸೆಲೆಬ್ರೆಟೀಸ್ ಎಂದು ಹಚ್ಚೆ (Tatoo) ಹಾಕಿಸಿಕೊಳ್ಳುವ ಮೂಲಕ ಪ್ರತಿ ಸಲ ತನ್ನನ್ನು ಕೈ ಹಿಡಿಯುತ್ತಿರುವ ಅಭಿಮಾನಿಗಳಿಗೆ ಅಭಿಮಾನದ ಟ್ರಿಬ್ಯೂಟ್ ಸಲ್ಲಿಸಿದ್ದಾರೆ.

ಮೊದಲಿಗೆ ಇದನ್ನು ಸಿನಿಮಾ ಶೂಟಿಂಗ್ ಗಾಗಿ ಹಾಕಿರುವ ತಾತ್ಕಾಲಿಕ ಟ್ಯಾಟು ಅಥವಾ ಎಡಿಟ್ ಮಾಡಿರುವ ಫೋಟೋ ಎಂದು ಭಾವಿಸಲಾಗಿತ್ತು ಸ್ವತಃ. ದರ್ಶನ್ ಅವರೇ ತಮ್ಮ ಅಧಿಕೃತ ಖಾತೆಯ ಮೂಲಕ ಇದನ್ನು ಕನ್ಫರ್ಮ್ ಮಾಡುವ ಮೂಲಕ ಇದು ಶಾಶ್ವತವಾಗಿ ಅವರ ಎದೆ ಮೇಲೆ ಇರಬೇಕು ಎಂದು ಅಭಿಮಾನಿಗಳಿಗೋಸ್ಕರ ಹಾಕಿಸಿಕೊಂಡಿರುವ ಹಚ್ಚೆ ಎಂದು ಖಚಿತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿ ಬಾಸ್ ಅಭಿಮಾನಿಗಳೆಲ್ಲಾ ದಿಲ್ ಖುಷ್ ಆಗಿದ್ದಾರೆ.

ಆದರೆ ಕೆಲವರು ಇದರಲ್ಲೂ ಸಹ ಕೊಂಕು ತೆಗೆದು ಮಾತನಾಡಿದ್ದಾರೆ ಅದೇನೆಂದರೆ ಕಳೆದ ಹಲವು ತಿಂಗಳಿಂದ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ (Fan’s war) ನಡೆಯುತ್ತಿದೆ ಅದು ತೀರ ಯಾವ ಹಂತಕ್ಕೆ ತಲುಪಿತ್ತು ಎಂದು ಎಲ್ಲರಿಗೂ ತಿಳಿದೇ ಇದೆ. ಈಗ ದರ್ಶನ್ ಅವರ ಪ್ರತಿ ಹೆಜ್ಜೆಯನ್ನು ಕೂಡ ಅಪ್ಪು (Apuu) ಜೊತೆ ಹೋಲಿಕೆ ಮಾಡುತ್ತಿರುವ ಅಪ್ಪು ಅಭಿಮಾನಿಗಳು ಇದು ಕೂಡ ಅಪ್ಪು ಅವರ ಆಸೆಯೇ ಆಗಿತ್ತು ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಜೇಮ್ಸ್ (James producer) ಸಿನಿಮಾ ನಿರ್ದೇಶಕರಾದ ಕಿಶೋರ್ ಪತಿಕೊಂಡ (Kishor Pathikonda) ಅವರಳು ಒಂದು ಸಂದರ್ಶನದಲ್ಲಿ ಅಪ್ಪು ಜೇಮ್ಸ್ ಚಿತ್ರ ಮುಗಿದ ಮೇಲೆ ಅಭಿಮಾನಿ ದೇವರುಗಳು ಎಂದು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಕೊಂಡಿದ್ದರು ಎನ್ನುವ ವಿಚಾರವನ್ನು ಹೇಳಿಕೊಂಡಿದ್ದರು. ಈಗ ಆ ವಿಡಿಯೋವನ್ನು ಹಂಚಿಕೊಂಡಿರುವ ಪುನೀತ್ ರಾಜಕುಮಾರ್ ಅಭಿಮಾನಿಗಳು ಅಪ್ಪು ಅವರಿಗೆ ಒಂದು ದೊಡ್ಡ ಆಸೆ ಇತ್ತು‌.

“ಅಭಿಮಾನಿಗಳೇ ನಮ್ಮನೆ ದೇವರು” ಎಂದು ಅವರ ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಇದನ್ನು ಯಾವನೋ ಒಬ್ಬ ಕೇಳಿಸಿಕೊಂಡು ನನ್ನ ಸೆಲೆಬ್ರಿಟಿಸ್ ಎಂದು ಹಾಕಿಸಿಕೊಂಡು ಮೆರೆಯುತ್ತಿದ್ದಾನೆ. ಮೊದಲಿನಿಂದ ಇದೆ ಆಯ್ತು ಎಲ್ಲಾ ವಿಷಯದಲ್ಲೂ ಅಪ್ಪು ಅನ್ನು ಫಾಲೋ ಮಾಡುವುದೇ ಆಯಿತು ಸ್ವಂತಿಕೆ ಅನ್ನೋದು ಇಲ್ಲವೇ ಇಲ್ಲ ಎಂದು ದರ್ಶನ್ ಬಗ್ಗೆ ಕೊಂಕವಾಡಿದ್ದಾರೆ.

ಸೋಶಿಯಲ್ ಮೀಡಿಯೋದಲ್ಲಿ ಇದು ಬಾರಿ ಚರ್ಚೆ ಕೂಡ ಆಗುತ್ತಿದೆ ಇದಕ್ಕೆ ಸೆಡ್ಡು ಹೊಡೆದಿರುವ ದಚ್ಚು ಅಭಿಮಾನಿಗಳು ಬರಿ ಬಾಯಿ ಮಾತಿಗೆ ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ಯಾರು ಬೇಕಾದರೂ ಹೇಳುತ್ತಾರೆ, ಆದರೆ ನಿಜವಾಗಿಯೂ ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ದಮ್ ಬೇಕು ಎಂದಿದ್ದಾರೆ. ಜೊತೆಗೆ ಅಣ್ಣ ಅಣ್ಣ ಎಂದುಕೊಂಡೆ ಜೇಮ್ಸ್ ಚಿತ್ರದ ನಿರ್ಮಾಪಕ ಅಣ್ಣನ ಸಾ.ವಿ.ನ ಸುದ್ದಿಯಲ್ಲಿ ಬಿಸಿನೆಸ್ ಮಾಡಿಕೊಂಡ ಎಂದು ತಾವು ಸಹ ತಿರಿಗೇಟು ನೀಡುತ್ತಿದ್ದಾರೆ.

ಆದರೆ ದರ್ಶನ್ ಅವರು ಪ್ರತಿ ಬಾರಿ ಬಿದ್ದಾಗಲೂ ಅವರ ಅಭಿಮಾನಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಎಷ್ಟೋ ವಿವಾದಗಳು ಆಗಿದ್ದರೂ ದರ್ಶನ್ ಅವರ ಮೇಲೆ ಮಾತ್ರ ಅಭಿಮಾನಿಗಳಿಗೆ ಇರುವ ಪ್ರತಿ ಕೊಂಚವೂ ಕಡಿಮೆ ಆಗಿಲ್ಲ. ಈಗ ಕ್ರಾಂತಿ ಸಿನಿಮಾ ಕೂಡ ಅತ್ಯಂತ ದೊಡ್ಡ ಹೋರಾಟವಾಗಿತ್ತು ಮಾಧ್ಯಮದವರನ್ನು ಎದುರು ಹಾಕಿಕೊಂಡು ಮಾಧ್ಯಮದ ಪ್ರಚಾರ ಇಲ್ಲದೆ ಅಭಿಮಾನಿಗಳೇ ಪ್ರಚಾರ ಮಾಡಿ ಗೆಲ್ಲಿಸಿದ ಕ್ರಾಂತಿ (Kranthi) ಚಿತ್ರ ನೂರು ಕೋಟಿ ಕ್ಲಬ್ ದಾಟಿದ ದಾಖಲೆ ಮಾಡಿದೆ.

ತನ್ನನ್ನು ಇಷ್ಟು ಪ್ರೀತಿಯಿಂದ ಕಾಣುತ್ತಿರುವ ಅಭಿಮಾನಿಗಳಿಗಾಗಿ ಏನಾದರೂ ಮಾಡಲೇಬೇಕು ಆ ಪ್ರೀತಿಗೆ ಎಷ್ಟು ಮಾಡಿದರೂ ಕಡಿಮೆಯೇ, ಹಾಗಾಗಿ ಇದು ಶಾಶ್ವತವಾಗಿ ನನ್ನ ಜೊತೆ ಇರಬೇಕು ಎಂದು ಹೇಳಿಕೊಂಡೆ ದರ್ಶನವರು ಈ ರೀತಿ ಟ್ಯಾಟು ಹಾಕಿಸಿಕೊಂಡಿದ್ದಾರೆ. ದರ್ಶನ್ ಟ್ಯಾಟೋ ಹಾಕಿಸಿಕೊಂಡಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದು ಯಾರು ಗೊತ್ತ.? ನಿಜಕ್ಕೂ ನೀವು ನಂಬಲ್ಲ ಆದರೂ ಕೂಡ ಇದು ಸತ್ಯ.

 

ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಹೀರೋ ಆಗಲು ಇವರೇ ಕಾರಣವಂತೆ, ಕೊನೆಗೂ ಹೊರ ಬಿದ್ದ ಸತ್ಯಾಂಶ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಮೂರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ. ಎರಡು ದಶಕಗಳಿಗಿಂತ ಹೆಚ್ಚು ಸಮಯ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಈ ತನಕ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ (Box office Sulthan) ಎನಿಸಿಕೊಂಡಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ ದರ್ಶನ್ ಅವರು ಈ ಹಿಂದೆ ಎಷ್ಟೇ ಹಿಟ್ ಸಿನಿಮಾ ಕೊಟ್ಟಿದ್ದರು ಮುಂದೆ ಕೂಡ ಎಷ್ಟೇ ಸಿನಿಮಾ ಮಾಡಿದರು ಅವರ ಪಾಲಿಗೆ ಮೆಜೆಸ್ಟಿಕ್ (Mejestic) ಸಿನಿಮಾ ತುಂಬಾ ಸ್ಪೆಷಲ್.

ಈ ಸಿನಿಮಾ ಗೆ ಇಂದು 21 ವರ್ಷ ತುಂಬಿದ ಸಂಭ್ರಮ. ಇದೇ ಸಂದರ್ಭದಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತ ಕೆಲವೊಂದು ಸತ್ಯಾಂಶ ಹೊರ ಬಿದ್ದಿದೆ. ಈ ಸಿನಿಮಾ ಗೆ ದರ್ಶನ್ ಅವರನ್ನು ಯಾರು ರೆಫರ್ ಮಾಡಿದ್ದು ಎನ್ನುವುದೇ ಒಂದು ದೊಡ್ಡ ವಿವಾದ ಆಗಿದ್ದು ಎಲ್ಲರಿಗೂ ತಿಳಿದೇ ಇದೆ ದರ್ಶನ್ (Darshan) ಹಾಗೂ ಸುದೀಪ್ (Sudeep) ನಡುವಿದ್ದ ಸ್ನೇಹ ಸಂಬಂಧಕ್ಕೆ ಹುಳಿ ಹಿಂಡಿದ್ದೆ ಈ ವಿಷಯ ಎಂದು ಹೇಳಬಹುದು ಯಾಕೆಂದರೆ ಒಂದು ಸಮಯದ ನಂತರ ದರ್ಶನ್ ಹಾಗೂ ಸುದೀಪ್ ಅವರು ಬಹಳ ಆತ್ಮೀಯರಾಗಿದ್ದರು.

ಚಡ್ಡಿ ದೋಸ್ತ್ ಗಳಂತೆ ಎಲ್ಲೆಡೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ವರ್ಷದ ಪರಿಚಯ ಗೆಳೆತನ ಎನ್ನುವಂತೆ ಇವರಿಬ್ಬರ ಮನಸಿನಲ್ಲಿ ಒಬ್ಬರಿಗೊಬ್ಬ ಮೇಲೆ ಒಬ್ಬರಿಗೆ ಪ್ರೀತಿ ಗೌರವ ಎಲ್ಲವೂ ಇತ್ತು. ಆದರೆ ಮೆಜೆಸ್ಟಿಕ್ ಸಿನಿಮಾ ವಿಷಯ ಅದೆಲ್ಲವನ್ನು ಕೆಡಿಸಿ ಬಿಟ್ಟಿತ್ತು. ಸುದೀಪ್ ಅವರು ದರ್ಶನ್ ಅನ್ನು ಆ ಸಿನಿಮಾಗೆ ರೆಫರ್ ಮಾಡಿದ್ದು ನಾನು, ಮೊದಲಿಗೆ ಅವಕಾಶ ನನಗೆ ಬಂದಿತ್ತು ಎಂದು ಹೇಳಿದ್ದರು ಅದೇ ವಿಷಯ ಇವರಿಬ್ಬರ ಸ್ನೇಹ ಕೆಡಲು ಮುಖ್ಯ ಕಾರಣ ಆಯ್ತು ಎನ್ನುವುದು ಇವರಿಬ್ಬರ ಹತ್ತಿರದವರು ಹೇಳುವ ಮಾತು.

ಆದರೆ ಸತ್ಯಾಂಶ ಏನು ಎಂದರೆ ಮೊದಲಿಗೆ ಈ ಸಿನಿಮಾಗೆ ಹೀರೋ ಆಗಲು ಆಫರ್ ಸುದೀಪ್ ಅವರಿಗೆ ಹೋಗಿತ್ತು. ಸುದೀಪ್ ಅವರು ಆಗ ಹುಚ್ಚ ಸಿನಿಮಾ ಗೆದ್ದ ಸಂಭ್ರಮದಲ್ಲಿ ಇದ್ದರು ಆಗ ಅವರು ಈಗ ಈ ಸಿನಿಮಾದಲ್ಲಿ ನಾನು ಅಭಿನಯಿಸುವುದಿಲ್ಲ ಎಂದು ಹೇಳಿದರಂತೆ ಅಷ್ಟೇ ಆದರೆ ಸುದೀಪ್ ಹೇಳಿಕೊಳ್ಳುವಂತೆ ನಾನು ಮಾಡಲು ಆಗುವುದಿಲ್ಲ ಆದರೆ ನೀವು ದರ್ಶನ್ ಬಳಿ ಹೋಗಿ ಎಂದಿದ್ದರಂತೆ ಆನಂತರ ನಿರ್ದೇಶಕರು ದರ್ಶನ್ ಅವರ ಬಳಿ ಹೋದರಂತೆ.

ಈ ಸಿನಿಮಾದಲ್ಲಿ ಛಾಯಾಗ್ರಹಕರಾಗಿರುವ ಅಣಜಿ ನಾಗರಾಜ್ (Anaji Nagaraj) ಅವರು ಈ ಮೊದಲೇ ದರ್ಶನ್ ಅವರಿಗೆ ಪರಿಚಯ ಇದ್ದರಂತೆ. ಹಾಗಾಗಿ ನಿರ್ದೇಶಕ ಪಿ.ಎನ್ ಸತ್ಯ ನಿರ್ಮಾಪಕ ರಾಮಮೂರ್ತಿ ಮತ್ತು ಮತ್ತು ಛಾಯಾಗ್ರಹಕ ಅಣಜಿ ನಾಗರಾಜ್ ಈ ಮೂರು ಜನ ಮೆಜೆಸ್ಟಿಕ್ ಸಿನಿಮಾಗೆ ಕಾರಣಕರ್ತರು ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ ಭಾಮ ಹರೀಶ್ ಅವರು ಸಹ ಈ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ.

ಆ ತನಕ ದರ್ಶನ್ ಅವರು ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದರು. ಮೊದಲ ಬಾರಿಗೆ ತೆರೆ ಮೇಲೆ ಹೀರೋ ಆಗಿ ಲಾಂಚ್ ಆಗಿದ್ದೆ ಈ ಸಿನಿಮಾ ಮೂಲಕ. ಆನಂತರ ಅದು ಒಂದು ಇತಿಹಾಸವೇ ಆಗಿ ಹೋಯಿತು ಮೆಜೆಸ್ಟಿಕ್ ಸಿನಿಮಾದ ದರ್ಶನ್ ಅವರ ಅಭಿನಯ ಇಂದು ಅವರು ಈ ಮಟ್ಟಕ್ಕೆ ತಲುಪಲು ಕಾರಣ ಆಯಿತು. ಕಳೆದ ವರ್ಷ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೆಜೆಸ್ಟಿಕ್ ಸಿನಿಮಾವನ್ನೇ ಮತ್ತೆ ರಿಲೀಸ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ಸಿನಿಮಾ 21 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲರೂ ಈ ಸಿನಿಮಾವನ್ನು ನೆನೆಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿ ಆಗಿ ರೇಖಾ (Rekha) ಅವರು ಕಾಣಿಸಿಕೊಂಡಿದ್ದರು.

ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ಕಾಲ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂಬ ಹೆಸರಿನಿಂದ ಕರೆಯುವುದನ್ನು ನೀವು ನೋಡೇ ಇರುತ್ತೀರ. ಇನ್ನು ಡಿ ಬಾಸ್ ತಮ್ಮ ಕುಟುಂಬದವರಿಗಿಂತಲೂ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಈ ವಿಚಾರವನ್ನು ಸಾಕಷ್ಟು ಬಾರಿ ದರ್ಶನ್ ಅವರು ಕೂಡ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನನಗೆ ನನ್ನ ಸೆಲೆಬ್ರಿಟಿಗಳೆ ಮುಖ್ಯ ಕುಟುಂಬ ಎರಡನೆಯ ಆಯ್ಕೆ ಅಂತ ಹೇಳಿದ್ದಾರೆ ಈ ಕಾರಣಕ್ಕಾಗಿಯೇ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವುದು.

ನಟ ದರ್ಶನ್ ಅವರ ಸಂಕಷ್ಟದ ಕಾಲದಲ್ಲಿ ಅವರ ಕೈ ಹಿಡಿದಿರುವುದು ಕೂಡ ಈ ಸೆಲೆಬ್ರೇಟಿಗಳೆ ಈ ಕಾರಣಕ್ಕಾಗಿ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಾಗಿ ಒಂದು ಸರ್ಪ್ರೈಸ್ ಅನ್ನು ಕೊಟ್ಟಿದ್ದಾರೆ. ಹೌದು ಇಂದು ದರ್ಶನ್ ಅವರು ತಮ್ಮ ಎದೆಯ ಮೇಲೆ ನನ್ನ ಪ್ರೀತಿಯ ಸೆಲೆಬ್ರಿಟಿ ಎಂದು ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ದರ್ಶನ್ ಅವರೇ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ದರ್ಶನ್ ಮೇಲೆ ಇನ್ನಷ್ಟು ಹೆಚ್ಚಿನ ಗೌರವ ಹಾಗೂ ಪ್ರೀತಿಯನ್ನು ತೋರಿಸಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಅಭಿಮಾನಿಗಳು ಎಲ್ಲಾ ನಟ ನಟಿಯರ ಹೆಸರನ್ನು ಹಾಗೂ ಅವರ ಭಾವಚಿತ್ರವನ್ನು ತಮ್ಮ ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇದೇ ಮೊದಲ ಬಾರಿಗೆ ಈ ಪ್ರಪಂಚದಲ್ಲಿ ಒಬ್ಬ ನಟ ತನ್ನ ಅಭಿಮಾನಿಗಳಿಗೋಸ್ಕರ ಹಚ್ಚೆ ಹಾಕಿಸಿಕೊಂಡಿರುವುದು.

ಈ ಕಾರಣದಿಂದಲೇ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ನಾವು ನೋಡಬಹುದಾಗಿದೆ. ದರ್ಶನ್ ಹಾಗೂ ಅಭಿಮಾನಿಗಳ ನಡುವೆ ಎಷ್ಟು ಅವಿನಾಭವನ ಸಂಬಂಧ ಇದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ನಿಜಕ್ಕೂ ಇಲ್ಲಿ ನಾವು ದರ್ಶನ್ ಅವರನ್ನು ಮೆಚ್ಚಲೇಬೇಕು ಏಕೆಂದರೆ ತಮ್ಮ ಅಭಿಮಾನಿಗಳಿಗಾಗಿ ಇಂಥದ್ದೊಂದು ಸತ್ಕಾರ್ಯವನ್ನು ಮಾಡಿರುವುದಕ್ಕಾಗಿ. ದರ್ಶನ್ ಕಷ್ಟದ ಕಾಲದಲ್ಲಿ ಇರುವಾಗ ಇವರ ಕೈ ಹಿಡಿದಿದ್ದು ಅಭಿಮಾನಿಗಳು ಆ ಕಾರಣಕ್ಕಾಗಿ ಅವರ ಋಣ ತೀರಿಸುವುದಕ್ಕಾಗಿ ಈ ಪರಿಯಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಾರಥಿ ಸಿನಿಮಾ ಬಿಡುಗಡೆಯಾದಾಗ ದರ್ಶನ್ ಜೈ.ಲಿ.ನಲ್ಲಿದ್ದರು ಆಗಿದ್ದರು ಕೂಡ ಈ ಸಿನಿಮಾ ನೂರು ದಿನಗಳ ಕಾಲ ಪೂರೈಸಿತ್ತು ದರ್ಶನ್ ಅವರಿಗೆ ಸಾತ್ ಕೊಟ್ಟಿತು. ಇದಾದ ನಂತರ ಕ್ರಾಂತಿ ಸಿನಿಮಾ ಬಿಡುಗಡೆಯಾದ ಸಮಯದಲ್ಲಿಯೂ ಮೀಡಿಯಾ ಬ್ಯಾನ್ ಮಾಡಿತ್ತು ಹಾಗಾಗಿ ಈ ಸಿನಿಮಾ ಸೋಲುತ್ತದೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಇವರನ್ನು ಕೈ ಬಿಡಲಿಲ್ಲ ಬಿಡುಗಡೆಯಾದ ಒಂದೇ ವಾರಕ್ಕೆ ಸುಮಾರು 110 ಕೋಟಿ ಕಲೆಕ್ಷನ್ ಮಾಡಿತು.

ಇದೆಲ್ಲವನ್ನು ನೋಡಿದಂತಹ ದರ್ಶನ್ ತನ್ನ ಪ್ರೀತಿಯ ಅಭಿಮಾನಿಗಳಿಗಾಗಿ ನಾನು ಇಷ್ಟಾದರೂ ಮಾಡಲೇಬೇಕು ಅವರ ಋಣವನ್ನು ನಾನು ಯಾವ ಪ್ರೀತಿ ತೀರಿಸಬೇಕು ತಿಳಿದಿಲ್ಲ ಹಾಗಾಗಿ ಇದೊಂದು ಪ್ರೀತಿಯ ಕಾಣಿಕೆಯ ಮೂಲಕ ನಾನು ಅವರ ಋಣ ತೀರಿಸುತ್ತೇನೆ ಅಂತ ಹೇಳಿ ದರ್ಶನ್ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿ ಅಂತ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.

 

ಶಕ್ತಿಪ್ರಸಾದ್ ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಎನ್ನುವ ಗ್ರಾಮದಲ್ಲಿ. ಇವರ ತಂದೆ ಹೆಸರು ಚಿಕ್ಕಣ್ಣ. 1929ರಲ್ಲಿ ಮಾರ್ಚ್ 13 ರಂದು ಶಕ್ತಿ ಪ್ರಸಾದ್ ಅವರು ಜನಿಸುತ್ತಾರೆ, ಇವರಿಗೆ ರಾಮಸ್ವಾಮಿ ಎಂದು ಮೊದಲಿಗೆ ಹೆಸರಿಡಲಾಗಿರುತ್ತದೆ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರಿಗಿಂತ ಒಂದು ತಿಂಗಳು ಹಿರಿಯರು ಅಷ್ಟೇ. ಮಧುಗಿರಿ ಎನ್ನುವ ಬೆಟ್ಟ ಗುಡ್ಡಗಳಿಂದ ಕೂಡಿದ ಆ ಪ್ರದೇಶದಲ್ಲಿ ಎಲ್ಲ ಮನೆಯ ಮಕ್ಕಳು ಶಾಲಾ ವಿದ್ಯಾಭ್ಯಾಸದ ಜೊತೆ ದೊಣ್ಣೆ ವರೆಸೆ ಕಲಿಯುತ್ತಿರುತ್ತಾರೆ.

ಶಕ್ತಿಪ್ರಸಾದ್ ಅಲಿಯಾಸ್ ರಾಮಸ್ವಾಮಿ ಅವರು ಸಹ ಈ ದೊಣ್ಣೆ ವರೆಸಿ ಕಲಿಯುತ್ತಿರುತ್ತಾರೆ ಜೊತೆಗೆ ಅಲ್ಲಿಯ ಭಾಗದ ಜನರು ವ್ಯಾಯಾಮ ಶಾಲೆಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರಿಂದ ಇವರೂ ಕೂಡ ಅವರ ಜೊತೆ ವ್ಯಾಯಾಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾ ದೇಹ ಹುರಿಗೊಳಿಸಿಕೊಳ್ಳುತ್ತಾರೆ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನ ಆರ್ಸಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಾರೆ. ಪದವಿದರದ ಇವರಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸ ಸಿಗುತ್ತದೆ.

ಚಾಮರಾಜಪೇಟೆಯ ಫೋರ್ಟ್ ಹೈಸ್ಕೂಲಿನಲ್ಲಿ ವಾಣಿಜ್ಯ ಶಿಕ್ಷಕರಾಗಿ ನೇಮಕಗೊಂಡರು ಕೂಡ ಎಲ್ಲರೂ ಇವರನ್ನು ಪಿ.ಟಿ ಮಾಸ್ಟರ್ ಎಂದಂ ಭಾವಿಸಿರುತ್ತಾರೆ. ಯಾಕೆಂದರೆ ಬಿಡುವಿನ ಸಮಯದಲ್ಲಿ ತಾವು ಕಲಿತಿದ್ದ ವ್ಯಾಯಾಮಗಳನ್ನು ಹಾಗೂ ಆ ಶಾಲೆಯ ಮಕ್ಕಳಿಗೂ ಕಲಿಸುತ್ತಿರುತ್ತಾರೆ. ಶಾಲೆಗಳಲ್ಲಿ ಗುರುಗಳನ್ನು ಇನಿಷಿಯಲ್ ಇಂದ ಕರೆಯುವುದು ಪ್ರತೀತಿ ಹಾಗಾಗಿ ಇವರನ್ನು ಎಲ್ಲರೂ ಜೆಸಿಆರ್ ಮೇಷ್ಟು ಎನ್ನುತ್ತಿರುತ್ತಾರೆ. ಜೆ ಸಿ ಆರ್ ಎಂದರೆ ಜಕ್ಕೇನಹಳ್ಳಿ ಚಿಕ್ಕಣ್ಣನವರ ಮಗ ರಾಮಸ್ವಾಮಿ. ಆದರೆ ಆನಂತರ ಜೆಸಿಆರ್ ಮೇಷ್ಟ್ರು ಶಕ್ತಿಪ್ರಸಾದ್ ಆದ ಕಥೆಯ ರೋಚಕ.

ಶಕ್ತಿಪ್ರಸಾದ್ ಅವರ ತಂದೆ ಪಟೇಲರಾಗಿರುತ್ತಾರೆ ಹಾಗಾಗಿ ಇವರಿಗೆ ನಾಟಕಗಳ ಅಭಿರುಚಿ ಇರುತ್ತದೆ. ಶಕ್ತಿಪ್ರಸಾದ್ ಅವರ ತಂದೆಯೇ ಇವರಿಗೆ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಪ್ರೋತ್ಸಾಹ ಮಾಡುತ್ತಾರೆ. ಬಿ ಎ ಅರಸುಕುಮಾರ್ ಅವರ ಒಡನಾಟದಲ್ಲಿ ಅನೇಕ ನಾಟಕಗಳಿಗೆ ಬಣ್ಣವನ್ನು ಹಚ್ಚುತ್ತಾರೆ. ನಂತರ ಕನ್ನಡ ಕಲಾಕ್ಷೇತ್ರ ಎನ್ನುವ ತಮ್ಮದೇ ಆದ ಸಂಸ್ಥೆ ಕಟ್ಟಿ ಅಲ್ಲೂ ಅನೇಕ ನಾಟಕಗಳನ್ನು ಮಾಡುತ್ತಾರೆ. ಟಿಪ್ಪು ಸುಲ್ತಾನ್ ನಾಟಕದಲ್ಲಿ ಟಿಪ್ಪು ಪಾತ್ರದಲ್ಲಿ ಇವರನ್ನು ನೋಡಿದ ಕೂರಾ ಸೀತಾರಾಮಶಾಸ್ತ್ರಿ ಅವರು ಇವರನ್ನು ಮದ್ರಾಸಿಗೆ ಕರೆದುಕೊಂಡು ಹೋಗುತ್ತಾರೆ.

ಆ ದಿನಗಳಲ್ಲಿ ಕರಗಶಕ್ತಿ ಎನ್ನುವ ಒಂದು ಸಿನಿಮಾ ನಿರ್ಮಾಣ ಆಗುತ್ತಿರುತ್ತದೆ ಆ ಸಿನಿಮಾದಲ್ಲಿ ಶಕ್ತಿ ಪ್ರಸಾದ್ ಅವರಿಗೆ ಒಂದು ಅವಕಾಶ ಸಿಗುತ್ತದೆ. ಆ ಸಿನಿಮಾ ಕಾರಣಾಂತರಗಳಿಂದ ಪೂರ್ತಿ ಆಗುವುದಿಲ್ಲ ಆದರೆ ಆ ಸಿನಿಮಾದಿಂದ ಪ್ರಭಾವಿತರಾದ ಶಕ್ತಿಪ್ರಸಾದ್ ಅವರು ಕೂರಾ ಸೀತಾರಾಮ ಶಾಸ್ತ್ರಿ ಅವರ ಬಳಿ ಹೋಗಿ ನಮ್ಮ ಮನೆ ದೇವರು ಚೌಡೇಶ್ವರಿ ಅವರ ಪ್ರಸಾದ ಹಾಗೂ ತಾಯಿಯ ಶಕ್ತಿ ಎರಡು ಸೇರಿ ಶಕ್ತಿ ಪ್ರಸಾದ್ ಎಂದು ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ಕೇಳುತ್ತಾರೆ.

ಹೆಸರು ಚೆನ್ನಾಗಿದ್ದ ಕಾರಣ ಸೀತಾರಾಮ ಶಾಸ್ತ್ರಿ ಅವರು ಸಹ ಬೇಡ ಎನ್ನುವುದಿಲ್ಲ ಅಂದಿನಿಂದ ಶಕ್ತಿಪ್ರಸಾದ್ ಎಂದೇ ಸಿನಿಮಾ ರಂಗದಲ್ಲಿ ಖ್ಯಾತಿಯಾಗಿ ಸುಮಾರು 150ಕ್ಕಿಂತ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ 25 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಐತಿಹಾಸಿಕ ಸಿನಿಮಾಗಳು, ಪೌರಾಣಿಕ ಸಿನಿಮಾಗಳಲ್ಲೂ ಕೂಡ ಪಾತ್ರ ಮಾಡಿ ನ್ಯಾಯ ದಕ್ಕಿಸಿದ್ದಾರೆ.

ಶಕ್ತಿಪ್ರಸಾದ್ ಅವರ ಪೂರ್ವಿಕರು ಪಾಳೇಗಾರ ಸರ್ಜನಾಯಕನ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನುವ ವಿಷಯ ಶಕ್ತಿಪ್ರಸಾದ್ ಅವರಿಗೆ ತಿಳಿದ ಬಳಿಕ ಆ ಹೆಸರನ್ನು ಉಳಿಸಿಕೊಳ್ಳುವ ಇಚ್ಛೆಯಿಂದ ಅವರ ಇಬ್ಬರು ಗಂಡು ಮಕ್ಕಳಿಗೆ ಅದೇ ಹೆಸರಿಡುತ್ತಾರೆ. ಅರ್ಜುನ್ ಸರ್ಜಾ ಮತ್ತು ಕಿಶೋರ್ ಅರ್ಜಾ ಅವರಿಗೆ ಅದೇ ಸರ್ ನೇಮ್ ಆಗಿ ಬರುತ್ತದೆ ಮತ್ತು ಹೆಣ್ಣುಮಗಳಾದ ಲಕ್ಷ್ಮೀ ದೇವಮ್ಮಣ್ಣಿ ಅವರ ಮಕ್ಕಳಾದ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರಿಗೂ ಅದೇ ಉಪನಾಮ ಮುಂದುವರೆಯುತ್ತದೆ.

ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.

0

 

ವಿನಯಾ ಪ್ರಸಾದ್ ಅವರು ಕನ್ನಡದ ಒಬ್ಬ ಪ್ರತಿಭಾನ್ವಿತ ನಟಿ. ದೇವರಾಜ್, ಅಂಬರೀಶ್, ವಿಷ್ಣುವರ್ಧನ್, ಅನಂತನಾಗ್ ಮುಂತಾದ ನಟರುಗಳಿಗೆ ಅತ್ಯುತ್ತಮ ಜೋಡಿಯಾಗಿ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳ ಕೊಡುಗೆ ನೀಡಿರುವ ಇವರು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಎರಡನೇ ಮದುವೆ ಇಂದ ಆದ ಸಮಸ್ಯೆಗಳ ಬಗ್ಗೆ ಮತ್ತು ಮಕ್ಕಳ ಬಗ್ಗೆ ಸಹ ಮಾತನಾಡಿ ಹಲವು ಅರ್ಥಪೂರ್ಣ ಸಂದೇಶಗಳನ್ನು ಈ ಜನರೇಶನ್ ಅವರಿಗೆ ನೀಡಿದ್ದಾರೆ.

ಅವರ ಮಾತುಗಳಲ್ಲಿ ಅವರ ಬದುಕಿನ ಬಗ್ಗೆ ಕೇಳುವುದಾದರೆ ಈ ರೀತಿ ಇತ್ತು. ನಾನು ಎರಡನೇ ಮದುವೆ ಆದಾಗ ನನ್ನ ಮಗಳಿಗೆ 14 ವರ್ಷ ಆಸು ಪಾಸು ಹಾಗೂ ನಾನು ಮದುವೆಯಾದ ಜ್ಯೋತಿ ಪ್ರಕಾಶ್ ಅವರಿಗೂ ಸಹ ಮದುವೆಯಾಗಿ ನನ್ನ ಮಗಳಷ್ಟೇ ವಯಸ್ಸಿನ ಮಗನಿದ್ದ. ಹಾಗಾಗಿ ನಮ್ಮಿಬ್ಬರ ಮಕ್ಕಳಿಗೂ ಅದರಲ್ಲೂ ನನ್ನ ಮಗಳಿಗೆ ಅದನ್ನು ಅರಗಿಸಿಕೊಳ್ಳಲು ಬಹಳ ಕಷ್ಟ ಆಯ್ತು.

ಯಾಕೆಂದರೆ ಅವಳು ತುಂಬಾ ಪ್ರೋಸೆಸಿವ್ ಇದ್ದಳು. ಅಮ್ಮನನ್ನು ಬಿಟ್ಟು ಕೊಡುವುದು ಅವಳಿಗೆ ತುಂಬಾ ಕಷ್ಟ ಆಗಿತ್ತು ಆದರೆ ಅವಳು ಅದರ ಸಾಕಷ್ಟು ತುಡಿತಗಳನ್ನು ಅನುಭವಿಸಿದ್ದಾಳೆ. ಆ ಎಲ್ಲಾ ಸಂಘರ್ಷಗಳ ನಡುವೆಯೂ ಅವಳು ತನ್ನ ಅಸಮಾಧಾನಗಳನ್ನು ನೀಗಿಸಿಕೊಂಡು ಸಮಾಧಾನವಾಗಿ ಇಲ್ಲಿಯ ತನಕ ಎಲ್ಲವನ್ನು ತಂದು ನಿಲ್ಲಿಸುವ ಅವಕಾಶ ಕೊಟ್ಟಿದ್ದಾಳೆ ಅದಕ್ಕಾಗಿ ನಾನು ಅವಳಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ತಾಯಿಯಾಗಿ ನನಗೆ ನನ್ನ ಬದುಕು ಗೊತ್ತು ಆದರೆ ಮಗಳಾಗಿ ಅವಳಲ್ಲಿ ಇನ್ನೆಷ್ಟು ಗೊಂದಲಗಳು ಆಗಿದ್ದವು, ಆದರೆ ಇಂದು ಅವಳಿಗೂ ಮದುವೆ ಆಗಿ ಮಗು ಇದೆ ಅವಳು ನನ್ನ ಪತಿ ಜೊತೆ ಚೆನ್ನಾಗಿ ಮಾತನಾಡುತ್ತಾಳೆ, ನನ್ನ ತಂದೆ ತಾಯಿ ನನ್ನ ಪತಿ ಜೊತೆ ಚೆನ್ನಾಗಿ ಮಾತನಾಡುತ್ತಾರೆ, ನನ್ನ ತಂದೆ ನಾವು ಊರಿಗೆ ಹೋದಾಗ ನನಗಿಂತ ಹೆಚ್ಚಾಗಿ ಅವರನ್ನು ಚೆನ್ನಾಗಿ ವಿಚಾರಿಸಿ ಕೊಳ್ಳುತ್ತಾರೆ ನನ್ನ ತಾಯಿ ಕರೆ ಮಾಡಿದಾಗಲೆಲ್ಲ ನನ್ನ ಪತಿಯ ಇಷ್ಟ ಕಷ್ಟದ ವಿಷಯಗಳ ಬಗ್ಗೆ ಮಾತನಾಡುತ್ತಾರೆ.

ಎರಡನೇ ಮದುವೆ ಆದರೂ ಸರಿಯಾದ ಜೋಡಿ ಆರಿಸಿಕೊಂಡಿದ್ದೀಯ ಎಂದು ನನ್ನ ಅಮ್ಮನೇ ಹೇಳುತ್ತಾರೆ ಜ್ಯೋತಿಪ್ರಕಾಶ್ ಅವರ ಮಗನು ಸಹ ನನ್ನನ್ನು ತಾಯಿ ಎಂದು ನೋಡುತ್ತಾನೆ ಯಾಕೆಂದರೆ ಅವನು ಮೂರು ತಿಂಗಳ ಮಗು ಆಗಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದ. ಅವನಿಗೂ ಮದುವೆ ಆಗಿ ಮಗು ಇದೆ ಆ ಮಗುವಿನ ಉಪನಯನಕ್ಕೆ ನನ್ನನ್ನು ನನ್ನ ಮಗಳು ಪ್ರಥಮ ಎಲ್ಲರನ್ನೂ ಆಹ್ವಾನಿಸಿದ್ದ, ನಾವೆಲ್ಲರೂ ಹೋಗಿದ್ದೆವು ನನ್ನ ಮಗಳೇ ಅವನ ಮಗನಿಗೆ ಅಲಂಕಾರ ಮಾಡಿದಳು ಇದನ್ನೆಲ್ಲಾ ನೋಡಿದಾಗ ತುಂಬಾ ಸಮಾಧಾನ ಆಗುತ್ತದೆ.

ಆದರೆ ಆರಂಭದ ದಿನದಲ್ಲಿ ನನಗೂ ಹಾಗೂ ಜ್ಯೋತಿ ಪ್ರಕಾಶ್ ಅವರಿಗೂ ಬಹಳ ಭಯ ಇತ್ತು, ಗೊಂದಲ ಇತ್ತು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂದು. ಆದರೆ ಮಕ್ಕಳು ಕಾಲಕ್ರಮೇಣ ಅರ್ಥ ಮಾಡಿಕೊಂಡರು ಯಾರ ಸಿಂಪತಿಗಾಗಿಯೂ ನಾನು ಇಲ್ಲಿ ನನ್ನ ಕಥೆ ಹೇಳಲು ಇಷ್ಟ ಪಡುವುದಿಲ್ಲ ಆದರೆ ಬದುಕಿನ ಬಗ್ಗೆ ಭರವಸೆ ಇರಬೇಕು ನಿರ್ಧಾರಗಳ ಬಗ್ಗೆ ಬದ್ಧತೆ ಇರಬೇಕು ಎನ್ನುವುದನ್ನು ಅರಿತುಕೊಳ್ಳಲಿ ಎಂದು ಹೇಳುತ್ತಿದ್ದೇನೆ.

ನಾವೇನು ದೇವಮಾನವರಲ್ಲ ನಮ್ಮ ಮಧ್ಯೆಯೂ ಕೂಡ ನೈಸರ್ಗಿಕವಾಗಿ ಎಲ್ಲರ ಕುಟುಂಬದಲ್ಲೂ ಮೂಡುವಂತೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುತ್ತವೆ ಆದರೆ ಜಗಳವು ಆಗುತ್ತವೆ. ಅದನ್ನೆಲ್ಲ ಮೀರಿ ನಿನಗೆ ನಾನಿದ್ದೇನೆ ನನಗೆ ನೀನಿರುವೆ ಎನ್ನುವ ಧೈರ್ಯ ನಂಬಿಕೆ ಬರಬೇಕು. ಜೊತೆಗೆ ಇಬ್ಬರಲ್ಲೂ ಕಾಮನ್ ಇಂಟರೆಸ್ಟ್ ಇದ್ದಾಗ ದಾಂಪತ್ಯ ಗಟ್ಟಿಯಾಗಿ ನಿಲ್ಲುತ್ತದೆ ಆ ವಿಷಯದಲ್ಲಿ ನಾನು ತುಂಬಾ ಲಕ್ಕಿ ನನಗೂ ಹಾಗೂ ಜ್ಯೋತಿ ಪ್ರಕಾಶ್ ಅವರಿಗೂ ಸಂಗೀತ ಸಾಹಿತ್ಯದ ವಿಷಯದಲ್ಲಿ ಅಷ್ಟೇ ಆಸಕ್ತಿ ಇದೆ.

ನಾವಿಬ್ಬರು ಕಳೆಯುವ ತುಂಬಾ ಕ್ವಾಲಿಟಿ ಟೈಮ್ ಅದರ ಕುರಿತೇ ಆಗಿರುತ್ತದೆ. ಹೀಗೆ ಒಬ್ಬರಿಗೊಬ್ಬರು ಒಬ್ಬರ ಕ್ಷೇತ್ರದಲ್ಲಿ ಮತ್ತೊಬ್ಬರು ಸಹಾಯ ಮಾಡಿಕೊಂಡು ಸಂಬಾಳಿಸಿಕೊಂಡು ಸಂತೋಷದಿಂದ ಬದುಕುತ್ತಿದ್ದೇವೆ. ನನಗಂತೂ ಈಗ ನನ್ನ ಬದುಕು ಸಮಾಧಾನ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ 2ನೇ ಮದುವೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.

0

 

ಒಳ್ಳೆ ಹುಡುಗ ಪ್ರಥಮ್ (Olle hudga Pratham) ಎಂದೇ ಕರ್ನಾಟಕದಲ್ಲಿ ಖ್ಯಾತಿ ಆಗಿರುವ ಪ್ರಥಮ್ ಅವರು ಆಗಾಗ ಫೇಸ್ಬುಕ್ ಲೈವ್ ಬರುತ್ತಿರುತ್ತಾರೆ. ಸದಾ ಸಿನಿಮಾರಂಗದ ವಿಚಾರ ಅಥವಾ ಅವರ ಅಭಿನಯದ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುವ ಪ್ರಥಮ್ ಅವರು ಅಭಿನಯಿಸಿರುವ ನಟಭಯಂಕರ (Natabhayankara) ಸಿನಿಮಾ ರಿಲೀಸ್ ಆಗಿದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಸಂದರ್ಶವನ್ನು ಕೊಡುತ್ತಿದ್ದ ಪ್ರಥಮ್ ಅವರು ಈಗ ಫೇಸ್ಬುಕ ಲೈವ್ ಬರುವ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತಿದ್ದಾರೆ.

ಮೊನ್ನೆ ಅಷ್ಟೇ ಸಿನಿಮಾ ಚೆನ್ನಾಗಿದ್ದರೂ ಥಿಯೇಟರ್ ಕಡೆ ಯಾರು ಬರುತ್ತಿಲ್ಲ, ಬೇಕೆಂದಲೇ ಕೆಲವರು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ, ಕನ್ನಡದ ಒಂದೊಳ್ಳೆ ಸಿನಿಮಾ ಮಿಸ್ ಮಾಡಿಕೊಳ್ಳುತ್ತಿದ್ದೀರಿ, ನನ್ನ ಭವಿಷ್ಯವೇ ಈ ಸಿನಿಮಾದಲ್ಲಿ ಇದೆ, ನನ್ನ ಕೆರಿಯರ್ ಗೆ ನನ್ನ ಕನಸುಗಳಿಗೆ ಈ ಸಿನಿಮಾ ಸೋತರೆ ತೊಂದರೆ ಆಗುತ್ತದೆ ದಯವಿಟ್ಟು ಕನ್ನಡ ಸಿನಿಮಾ ಅನ್ನು ನೋಡಿ ನನ್ನನು ಕಾಪಾಡಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದರು.

ಈಗ ಮತ್ತೆ ಫೇಸ್ಬುಕ್ ಲೈವ್ (facebook live) ಬಂದಿರುವ ಇವರು ಈ ಬಾರಿ ದರ್ಶನ್ ಅಭಿಮಾನಿಗಳಿಗೆ (Darshan fan’s) ಮನವಿ ಸಲ್ಲಿಸಿದ್ದಾರೆ. ಅದೇನೆಂದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ್ ಅವರ ಮೊದಲ ಸಿನಿಮಾ ಕಲೆಕ್ಷನ್ ಬಗ್ಗೆ ಫೇಕ್ ಪೋಸ್ಟರ್ ಹರಿದಾಡುತ್ತಿದೆ ಅದನ್ನು ಕ್ರಾಂತಿ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಜೊತೆ ಕಂಪೇರ್ ಮಾಡಿ ಕ್ರಾಂತಿ (Kranthi) ಮೊದಲ ದಿನದ ಕಲೆಕ್ಷನ್ ಗಿಂತಲೂ ಹೆಚ್ಚು ಕಲೆಕ್ಷನ್ ಪ್ರಥಮ್ ನ ನಟ ಭಯಂಕರ ಸಿನಿಮಾ ಮಾಡಿದೆ ಎನ್ನುವ ರೀತಿ ಬಿಂಬಿಸಲಾಗುತ್ತಿದೆ.

ಒಂದರ್ಥದಲ್ಲಿ ಇದನ್ನು ಟ್ರೋಲ್ ಮಾಡುತ್ತಿರುವುದು ಎಂದೇ ಹೇಳಬಹುದು, ಆದರೆ ಅದು ಪ್ರಥಮ ಮನಸ್ಸಿಗೆ ಬೇಸರವಾಗಿದೆ. ಇದನ್ನೇ ಮಾತನಾಡಿದ ಪ್ರಥಮ್ ಅವರು ಲೈವ್ ಬಂದು ಎರಡು ವಿಷಯ ಹೇಳಲು ಇಚ್ಛೆ ಪಡುತ್ತಿದ್ದೇನೆ ಎಂದಿದ್ದಾರೆ. ಮೊದಲಿಗೆ ಈಗ ನನ್ನ ಸಿನಿಮಾ ಚೆನ್ನಾಗಿ ಹೋಗುತ್ತಿದೆ ಇದು ಕನ್ನಡಿಗರ ಆಶೀರ್ವಾದ ಹಾಗೂ ಎಲ್ಲಾ ಕಲಾವಿದರ, ದೊಡ್ಡ ದೊಡ್ಡ ಸ್ಟಾರ್ ಗಳ ಆಶೀರ್ವಾದ ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

ಮತ್ತೊಂದು ವಿಷಯವೇನೆಂದರೆ ದಯವಿಟ್ಟು ಯಾರು ಈ ರೀತಿ ದರ್ಶನ್ ಅವರ ಜೊತೆ ನನ್ನ ಸಿನಿಮಾ ಹೋಲಿಕೆ ಮಾಡಿ ಮಾತನಾಡಬೇಡಿ, ನನ್ನ ಸಿನಿಮಾ ಚೆನ್ನಾಗಿ ಹೋಗುತ್ತಿದೆ ಸುಮ್ಮನೆ ನೀವು ಈ ರೀತಿ ಮಾಡುವುದರಿಂದ ಅದು ಅವರನ್ನು ಪ್ರೊವೋಕ್ ಮಾಡಿದ ರೀತಿ ಆಗುತ್ತದೆ. ದರ್ಶನ್ ಅವರು ಯಾವತ್ತಿದ್ದರೂ ದೊಡ್ಡವರು ಅವರು ಎಷ್ಟು ದೊಡ್ಡ ಸ್ಟಾರ್ ಅವರ ಮಟ್ಟಕ್ಕೆ ನಾನು ಎಲ್ಲಿ ಹೋಗಲು ಸಾಧ್ಯ. ಅವರ ಮೇಲೆ ನನಗೆ ಬಹಳ ಪ್ರೀತಿ ವಿಶ್ವಾಸ ಇದೆ ಅದನ್ನು ತೋರ್ಪಡಿಸಬೇಕಾಗಿಲ್ಲ.

ಅವರ ಕ್ರಾಂತಿ ಸಿನಿಮಾ ಕೂಡ ರಿಲೀಸ್ ಆಗಿದೆ, ನಾನು ಹೋಗಿ ನೋಡಿದ್ದೇನೆ. ಈಗ ನನ್ನ ಸಿನಿಮಾ ಕೂಡ ರಿಲೀಸ್ ಆಗಿದೆ ಆ ಸಿನಿಮಾ ಗೆ ನನ್ನ ಸಿನಿಮಾ ಕಾಂಪಿಟೇಷನ್ ಆಗಲು ಸಾಧ್ಯವೇ ಇಲ್ಲ. ಆದರೂ ಅವರ ಜೊತೆ ಕಂಪೇರ್ ಮಾಡಿ ವಿವಾದ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದೀರಿ, ಇದೆಲ್ಲ ನೆಗೆಟಿವ್ ಆಗುತ್ತದೆ ಮತ್ತು ಇದು ನನ್ನ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರುತ್ತದೆ. ನಾನು ಎಲ್ಲೂ ಕೂಡ ದರ್ಶನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಈ ರೀತಿ ಮಾಡುವುದರಿಂದ ಬೇರೆಯವರಿಗೆ ಕೆಟ್ಟ ಸಂದೇಶ ಹೋಗುತ್ತದೆ. ಯಾಕೆ ಈ ರೀತಿಯಲ್ಲಾ ಮಾಡಿ ತೊಂದರೆ ಕೊಡುತ್ತಿದ್ದೀರಿ ದಯವಿಟ್ಟು ಯಾರು ಈ ರೀತಿ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು

0

 

ಹೋದೆಯ ದೂರ ಓ ಜೊತೆಗಾರ ಎನ್ನುವ ಕನ್ನಡದ ಎವರಿನ್ ಗ್ರೀನ್ ಸಾಂಗ್ ಅಲ್ಲಿ ಅಭಿನಯಿಸಿರುವ ನಟಿ ಅಭಿನಯ ( Abhinaya) ಯಾರಿಗೆ ಗೊತ್ತಿಲ್ಲ ಹೇಳಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಭಾಗ್ಯವಂತ, ದೇವತಾ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮ್ಮ 13ನೇ ವಯಸ್ಸಿನಲ್ಲಿ ಕಾಶಿನಾಥ್ ಅವರ ಅನುಭವ (Anubhava) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಾಯಕ ನಟಿಯಾಗಿ ಗುರುತಿಸಿಕೊಂಡರು.

ಇಲ್ಲಿತ ತನಕವೂ ಪೋಷಕ ಪಾತ್ರಧಾರಿಯಾಗಿ ಮತ್ತು ಇತ್ತೀಚೆಗೆ ಸೀರಿಯಲ್ ಕಲಾವಿದೆಯಾಗಿ ಕನ್ನಡಿಗರನ್ನು ರಂಜಿಸುತ್ತಿದ್ದ ನಟಿ ಅಭಿನಯ ಅವರು ಈಗ ತಲೆ ಮರೆಸಿಕೊಂಡಿದ್ದಾರೆ. ನಟಿ ಅಭಿನಯ ಅವರ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜ್ ಈ ಮೂವರ ಮೇಲೆ ವರದಕ್ಷಿಣಕ್ಕೆ ಕೇಸ್ (dowri case) ದಾಖಲಾಗಿತ್ತು, ಆರೋಪಿಗಳನ್ನು ಬಂಧಿಸಿ ಕೋರ್ಟಿನ ಎದುರು ನಿಲ್ಲಿಸಬೇಕಾಗಿತ್ತು ಅಷ್ಟರಲ್ಲಿ ಮೂರು ಜನ ಕೂಡ ತಲೆ ಮರೆಸಿಕೊಂಡಿದ್ದಾರೆ.

ಅಭಿನಯ ಅವರ ಅಣ್ಣನ ಹೆಂಡತಿಯಾದ ಲಕ್ಷ್ಮಿ ದೇವಿ ( Lakshmi devi) ಎನ್ನುವವರಿಗೆ ವರದಕ್ಷಿಣೆ ಕಿರುಕುಳ ಕೊಟ್ಟಿರುವುದರಿಂದ ಅಭಿನಯ ಹಾಗೂ ಅವರ ಅಣ್ಣ ಮತ್ತು ತಾಯಿಯ ಮೇಲೆ ದೂರು ನೀಡಲಾಗಿತ್ತು. ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ (session court) ಶಿ.ಕ್ಷೆ ಕೂಡ ವಿಧಿಸಿತ್ತು, ಇದರ ವಿರುದ್ಧ ಅಭಿನಯ ಅವರು ಹೈಕೋರ್ಟಿಗೆ (High court) ಮೇಲ್ಮನವಿ ಸಹ ಸಲ್ಲಿಸಿದ್ದರು. ಆದರೆ ಉಚ್ಚ ನ್ಯಾಯಾಲಯ ಸೆಷನ್ಸ್ ನ್ಯಾಯಾಲದ ತೀರ್ಪನ್ನೇ ಎತ್ತಿ ಹಿಡಿದಿದೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲದ ಮುಂದೆ ಹಾಜರು ಪಡಿಸಬೇಕಾಗಿತ್ತು. ಆದರೆ ಈ ಮೂವರು ಈಗ ಪೊಲೀಸರ ಕೈಗೆ ಸಿಗದಂತೆ ಎಸ್ಕೇಪ್ ಆಗಿದ್ದಾರೆ. ಹಾಗಾಗಿ ಇವರ ಮೇಲೆ ಚಂದ್ರ ಲೇಔಟ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕರೆ ಪೊಲೀಸ್ ರಿಗೆ ತಿಳಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ನಟಿ ಅಭಿನಯ ಅವರು ಪೋಷಕರ ಜೊತೆ ಸೇರಿಕೊಂಡು ಅತ್ತಿಗೆಯಾದ ಲಕ್ಷ್ಮಿ ದೇವಿಯವರಿಗೆ ಹಿಂ.ಸೆ ಕೊಟ್ಟಿದ್ದಾರೆ ಎನ್ನುವ ಆರೋಪ ಅವರ ಮೇಲೆ ಇತ್ತು. ಅವರಿಗೆ ಕೋರ್ಟ್ ಶಿ.ಕ್ಷೆ ಜಾರಿ ಮಾಡಿದ ಮೇಲೆ ಮಾಧ್ಯಮದವರೊಂದಿಗೆ ಅತ್ತಿಗೆಯಾದ ಲಕ್ಷ್ಮಿ ದೇವಿ ಅವರು ಸಹ ಮಾತನಾಡಿ ತನಗಾದ ಎಲ್ಲಾ ನೋವನ್ನು ಹಾಗೂ ಅವರು ನೀಡಿದ್ದ ಚಿತ್ರ ಹಿಂಸೆಯನ್ನು ಬಯಲು ಮಾಡಿದ್ದರು.

ಅಭಿನಯ ಅವರ ನಿಜರೂಪ ಎಂತಹದ್ದು ಎಂದು ಎಲ್ಲರಿಗೂ ತಿಳಿದು ಹೋಗಿತ್ತು. ತಾವು ಸಹ ಒಬ್ಬ ಮಹಿಳೆಯಾಗಿ ತಮ್ಮ ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಹಣಕ್ಕಾಗಿ ಪೀಡಿಸಿ ಅಷ್ಟು ಮಾತ್ರ ಅಲ್ಲದೆ ಮಾಡಿ ಹ.ಲ್ಲೆ ಮಾಡಿ ನೋಯಿಸಿದ್ದರು. ಇಂದು ಅದಕ್ಕೆ ಪ್ರತಿಫಲವಾಗಿ ಕೋರ್ಟ್ ಶಿ.ಕ್ಷೆ ಅನುಭವಿಸುವಂತೆ ಆಗಿದೆ. ಆದರೆ ಬಂಧನದ ಬಗ್ಗೆ ಭಯ ಬಿದ್ದ ಇವರು ಪರಾರಿ ಆಗಿದ್ದಾರೆ ಕಾನೂನಿನ ಮುಂದೆ ಯಾರು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಅಭಿನಯ ಅವರ ನಿಜಮುಖ ಬಯಲಾದ ಮೇಲೆ ಅವರಿಗೆ ಶಿ.ಕ್ಷೆ ಆಗಲೇಬೇಕು, ಇದರಿಂದ ಇನ್ನಷ್ಟು ಜನ ಬುದ್ಧಿ ಕಲಿಯಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಪೊಲೀಸರ ಹದ್ದಿನ ಕಣ್ಣಿನಿಂದ ಇವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸದ್ಯದಲ್ಲೇ ಸೆರೆ ಸಿಕ್ಕಿ ಶಿಕ್ಷೆ ಅನುಭವಿಸಲಿದ್ದಾರೆ. ಇತ್ತೀಚೆಗೆ ಜೀ ಕನ್ನಡ ( Zee kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler kalyana ) ಎನ್ನುವ ಧಾರಾವಾಹಿಯಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಕೇಸ್ ಬಗ್ಗೆ ಎಲ್ಲೆಡೆ ಸುದ್ದಿ ಆಗಲಿ ಶುರುವಾಯಿತು ಆ ಪಾತ್ರದಿಂದ ಇವರು ರಿಪ್ಲೇಸ್ ಆಗಿದ್ದಾರೆ.

ಮುಖ್ಯಮಂತ್ರಿ ಚಂದ್ರು ವಿರುದ್ಧ FIR ದಾಖಲು ಬಂಧನದ ಬೀತಿಯಲ್ಲಿ ಚಂದ್ರು.

0

ಮುಖ್ಯಮಂತ್ರಿ ಚಂದ್ರು ಅವರ ಮೇಲೆ ದಾಖಲಾದ ಕೇಸ್, ಬಂಧನಕ್ಕಾಗಿ ಆಗ್ರಹ. ಮುಖ್ಯಮಂತ್ರಿ ಚಂದ್ರು (Mukyamanthri Chandru) ಅವರು ತರಳಬಾಳು ಹುಣ್ಣಿಮೆ (Tharalabalu hunnime)  ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಮಾತನಾಡುವ ಸಂದರ್ಭದಲ್ಲಿ ಇಂದು ದೇಶದ ಯುವ ಜನತೆ ಯಾವ ರೀತಿ ದೇಶಾಭಿಮಾನ ತೋರಬೇಕು, ನಾಗರಿಕರು ನಮ್ಮ ದೇಶದ ವಿಷಯದಲ್ಲಿ ಯಾವ ರೀತಿ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಎಚ್ಚರಿಸಿ ಮಾತನಾಡುವಾಗ ರಾಜಕೀಯ ವಿಚಾರವಾಗಿ ರಾಜಕಾರಣಿಗಳನ್ನು (politicians) ಸರಿಯಾಗಿ ತರಾಟೆಗೆ ತೆಗೆದುಕೊಂಡರು.

ನಾನು ಯಾವುದೇ ಪಕ್ಷದ ವಿಷಯವಾಗಿ ಮಾತನಾಡುತ್ತಿಲ್ಲ ಪಕ್ಷೇತರವಾಗಿ ಎಲ್ಲ ರಾಜಕಾರಣಿಗಳನ್ನು ಸೇರಿಸಿ ಹೇಳುತ್ತಿದ್ದೇನೆ ನೀವು ಯಾರು ಈಗ ರಾಜಕೀಯ ಮಾಡಲು ಯೋಗ್ಯರಲ್ಲ. ನಾನು 70 ವರ್ಷದ ಬಳಿಕ ರಾಜಕೀಯಕ್ಕೆ ಬರುವುದಿಲ್ಲ ಚುನಾವಣೆಗೆ ನಿಲ್ಲುವುದಿಲ್ಲ ಎಂದು ದೃಢ ನಿರ್ಧಾರ ಮಾಡಿ ಯುವ ಜನತೆಗೆ ಜಾಗ ಮಾಡಿ ಕೊಟ್ಟಿದ್ದೇನೆ ನೀವು ಸಹ ಹಾಗೆ ಮಾಡಿ ನಿಮಗೆ ವಯಸ್ಸಾಗಿದ್ದರು ವೀಲ್ ಛೇರಲ್ಲಿ ಓಡಾಡುತ್ತಿದ್ದರು ಇನ್ನೂ ಅಧಿಕಾರದ ಆಸೆ ಹೋಗುವುದೇ ಇಲ್ಲ ಎಂದಿದ್ದಾರೆ.

ತಮ್ಮ ಭಾಷಣದ ಉದ್ದಕ್ಕೂ ಸರ್ಕಾರ (government) ಜನರಿಗೆ ಮೋಸ ಮಾಡುತ್ತಿದೆ, ಹಸಿದಿರುವ ಮಕ್ಕಳಿಗೆ ಅನ್ನ ಹಾಗೂ ಜ್ಞಾನದ ಹಸಿವು ಇರುವವರಿಗೆ ಉಚಿತವಾಗಿ ಶಿಕ್ಷಣ ಕೊಟ್ಟು ಅವರ ಸಮವಸ್ತ್ರ ಮತ್ತು ಉನ್ನತ ಶಿಕ್ಷಣ ಎಲ್ಲವನ್ನು ನೋಡಿಕೊಳ್ಳಬೇಕು. ಯಾರ್ಯಾರೋ ಮೋಸ ಮಾಡಿ ಹೋದವರ ಸಾವಿರಾರು ಕೋಟಿಗಳನ್ನು ಮನ್ನಾ ಮಾಡುತ್ತೀರಾ ಬಡ ಮಕ್ಕಳ  ಬಗ್ಗೆ ಕೇಳಿದರೆ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತೀರಾ.

ಮುಂದಿನ ಭವಿಷ್ಯ ನಿರ್ಮಿಸುವವರು ಈಗಿನ ವಿದ್ಯಾರ್ಥಿಗಳೇ ಅಲ್ಲವೇ, ಸರ್ಕಾರ ಈ ಕಡೆ ಗಮನ ಕೊಡಬೇಕು ಬಡವನ ಮಕ್ಕಳು ಕೂಡ ಐಎಎಸ್ ಮೆಡಿಕಲ್ ಓದುವ ರೀತಿ ಯೋಜನೆಗಳನ್ನು ರೂಪಿಸಿ ನವ ಭಾರತವನ್ನು ನಿರ್ಮಾಣ ಮಾಡಬೇಕು ಮತ್ತು ಆರೋಗ್ಯದ ವಿಚಾರದಲ್ಲಿ ನಾಗರಿಕರಿಗೆ ಉಪಕಾರ ಆಗುವ ರೀತಿ ಯೋಜನೆ ತಂದು ನೋಡಿಕೊಳ್ಳಬೇಕು ಎಂದು ಇದನ್ನು ಒಂದು ಸರ್ಕಾರ ಅಲ್ಲ ಯಾವುದೇ ಸರ್ಕಾರ ಬಂದರೂ ಹೀಗೆ ಮಾಡಬೇಕು ಎಂದು ಸಲಹೆ ನೀಡಿದರು.

ಆದರೆ ಕೊನೆಯಲ್ಲಿ ಆಡಿದ ಒಂದು ಮಾತಿನಿಂದ ಈಗ ಅವರ ಮೇಲೆ ದೂರು ದಾಖಲಾಗಿದೆ. ವಿಶೇಷ ಚೇತನರನ್ನು ಅವರ ಭಾಷಣದಲ್ಲಿ ನಿಂದಿಸಿ ಮಾತನಾಡಿದ್ದಾರೆ ಅವರು ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವುದರ ಜೊತೆಗೆ ಸರ್ವೋದಯ ಕ್ಷೇಮಾಭಿವೃದ್ಧಿ ವಿಕಲಚೇತನ ಸಂಘದಿಂದ ಮುಖ್ಯಮಂತ್ರಿ ಚಂದ್ರು ಅವರ ಮೇಲೆ ಮದ್ದೂರಿನಲ್ಲಿ ದೂರು (case) ದಾಖಲಾಗಿದೆ.

ತಹಶೀಲ್ದಾರರಿಗೆ ಭೇಟಿಯಾಗಿ ದೂರು ದಾಖಲಿಸಿದ್ದಾರಂತೆ ಈಗ ಅದು ಅವರ ಮೂಲಕ ಮುಖ್ಯಮಂತ್ರಿಗಳವರೆಗೂ ತಲುಪಿದೆಯಂತೆ. ಇಷ್ಟಕ್ಕೂ ಅವರು ಮಾಡಿಕೊಂಡಿರುವ ವಿವಾದ ಏನೆಂದರೆ,  ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಚಂದ್ರು ಅವರು ನೀವು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವಾಗ ಯಾರಿಗಾದರೂ ಕೊಟ್ಟು ಬಿಡುತ್ತೀರಾ ಅವರು ಕುಂಟರೋ ಕುರುಡರೋ ಹೆಳವರೋ ಭ್ರಷ್ಟಾಚಾರಿಗಳೋ ಕಳ್ಳರೋ ಬಲಿಷ್ಠರೋ ದುರ್ಬಲರೋ ನಿರುದ್ಯೋಗಿಗಳೋ ಎಲ್ಲವನ್ನು ನೋಡುತ್ತೀರಿ.

ಹಾಗೆ ಐದು ವರ್ಷಗಳ ದೇಶದ ಭವಿಷ್ಯವನ್ನು ಅವರಿಗೆ ಕೊಟ್ಟು ಅಧಿಕಾರ ಕೊಡುವ ನೀವು ಆ ವಿಚಾರದಲ್ಲಿ ಅವರು ಕುಂಟರೋ ಕುರುಡರೋ ಹೇಳವರೋ  ಕುಡುಕರೋ ಕಟುಕರೋ ಅನಾಚಾರಿಗಳೋ ಜೈಲಿಗೆ ಹೋಗಿ ಬಂದಿರುವ ಖದೀಮರೋ ಎಂದು ನೋಡುವುದಿಲ್ಲ ಯಾಕೆ ಎಂದು ಅಲ್ಲಿದ್ದವರಿಗೆ ಬುದ್ಧಿ ಹೇಳಿದ್ದಾರೆ. ಆದರೆ ಈ ಮಾತಿನ ಮೂಲಕ ವಿಶೇಷ ಚೇತನರಿಗೆ ನೋವು ಆಗಿದೆ. ಈ ಮಾತಿನ ಮೂಲಕ ಅವರನ್ನು ನಿಂದಿಸಲಾಗಿದೆ ಎಂದು ಕೇಸ್ ದಾಖಲಿಸಲಾಗಿದೆ.

ಅಪ್ಪು ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಇಷ್ಟು ದಿನ ಮೌನದಿಂದಿದ್ದ ಸುಮಲತಾ ಈಗ ಹೇಳಿರುವುದೇನು ಗೊತ್ತಾ.?

0

 

ಪುನೀತ್ ರಾಜ್ ಕುಮಾರ್ (Puneeth raj kumar) ಈ ಹೆಸರು ಆಕಾಶ, ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಣ್ಣಾವ್ರ ವಂಶದ ಕುಡಿಯಾಗಿ ಭೂಮಿಗೆ ಬಂದ ಈ ಪರಮಾತ್ಮ ಇಂದು ಅಭಿಮಾನಿಗಳ ದೇವವವಾಗಿದ್ದಾರೆ, ಹಾಗೂ ಕರ್ನಾಟಕದ ಕೋಟ್ಯಾಂತರ ಮಂದಿಯ ಮನಸ್ಸಿನಲ್ಲಿ ಪೂಜೆ ಮಾಡಿಸಿಕೊಳ್ಳುವ ದೈವವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಮಾಜ ಸೇವೆಗೆ ಅವರಿಗೆ ಎಷ್ಟು ಪ್ರಶಸ್ತಿ ಬಂದರೂ ಕಡಿಮೆಯೇ.

ಅವರ ಮ.ರ.ಣೋ.ತ್ತ.ರವಾಗಿ ಮೈಸೂರು ವಿಶ್ವವಿದ್ಯಾಲಯವು (Mysore University) ಗೌರವ “ಡಾಕ್ಟರೇಟ್” (Doctorate) ನೀಡಿ ಗೌರವಿಸಿತು, ಇದಾದ ಬಳಿಕ ಕಳೆದ ವರ್ಷ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕ ಸರ್ಕಾರವು (Karnataka government) ಪುನೀತ್ ರಾಜಕುಮಾರ್ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದೀಗ ನೆನ್ನೆ ಅಷ್ಟೇ ಮತ್ತೊಂದು ಪ್ರೀತಿಯ ಕಾಣಿಕೆ ಅಪ್ಪುವ ಹೆಸರಿಗೆ ಸಂದಿದೆ.

ಬೆಂಗಳೂರಿನ ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಸೇರುವ 12 ಕಿಲೋಮೀಟರ್ ಉದ್ದದ ರಿಂಗ್ ರೋಡ್ ಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ (Puneeth raj kumar road) ಎಂದು ಹೆಸರಿಡಲಾಗಿದೆ. ಇದರ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅದ್ದೂರಿಯಿಂದ ಮಾಡಿದರು. ಕನ್ನಡ ಚಲನಚಿತ್ರ ಮಂಡಳಿ ಜೊತೆ ಸರ್ಕಾರವು ಜೊತೆಗಿದ್ದು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಎಂದಿನಂತೆ ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಶ್, ವಸಿಷ್ಠ ಸಿಂಹ ಇನ್ನೂ ಮುಂತಾದ ಅನೇಕ ಕಲಾವಿದರು ಎಲ್ಲರೂ ಸೇರಿ ಕಾರ್ಯಕ್ರಮವನ್ನು ನಡೆಸಿ ಅಪ್ಪು ಹೆಸರಿಗೆ ಗೌರವ ತಂದರು. ಇದೀಗ ಸುಮಲತಾ ಅಂಬರೀಶ್ (Sumalatha Ambarish) ಅವರು ವಿಷಯದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಪ್ಪು ಹೆಸರನ್ನು ಹನ್ನೆರಡು ಕಿಲೋಮೀಟರ್ ರಿಂಗ್ ರಸ್ತೆಗೆ ಇಡುವ ಸರ್ಕಾರದ ನಿರ್ಧಾರವನ್ನು ಹೃದಯಪೂರ್ವಕವಾಗಿ ಪ್ರಶಂಸಿಸುವೆ. ಅಪ್ಪು ನಮ್ಮೆಲ್ಲರ ಹೃದಯಕ್ಕೂ ಹತ್ತಿರವಾಗಿದ್ದವರು. ಈಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕಂದಾಯ ಮಂತ್ರಿಗಳಾದ ಆರ್ ಅಶೋಕ್ ಮತ್ತು ಕನ್ನಡ ಚಲನಚಿತ್ರ ಮಂಡಳಿಯ ಸರ್ವರಿಗೂ ಧನ್ಯವಾದಗಳು ಎಂದು ಆ ರಸ್ತೆಯ ಫೋಟೋ ಜೊತೆ ಅಪ್ಪು ಫೋಟೋವನ್ನು ಕೂಡ ಸೇರಿಸಿ ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ಅವರು ಸುಮಲತಾ ಅವರಿಗೆ ಬಹಳ ಆತ್ಮೀಯರಾಗಿದ್ದರು. ಸುಮಲತಾ ಅಂಬರೀಶ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದೆ ಪಾರ್ವತಮ್ಮ ರಾಜಕುಮಾರ್ ಅವರು. ರಾಜ್ ಕುಮಾರ್ ಅವರ ರವಿಚಂದ್ರ ( Ravichandra) ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಸುಮಲತಾ ಅಂಬರೀಶ್ ಅವರು ಕನ್ನಡ ಚಿತ್ರರಂಗಕ್ಕೆ ಬಂದರು. ಹಲವು ವೇದಿಕೆಗಳಲ್ಲಿ ಈ ಕುರಿತು ಅವರು ಧನ್ಯವಾದ ಸಲ್ಲಿಸಿದ್ದಾರೆ.

ಮತ್ತು ಅಪ್ಪು ಅವರ ಜೊತೆಗಿದ್ದ ಅನುಬಂಧದ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅಪ್ಪು ಅವರು ಬಾಲ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ನೋಡಿ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದರಂತೆ. ಅಪ್ಪು ಅವರು ಅವರ ಸಾ.ವಿ.ನ ಹಿಂದಿನ ದಿನವೂ ಕೂಡ ಎಲ್ಲರೂ ಸೇರಿ ಮಾಡಿದ್ದ ಪಾರ್ಟಿಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಗಣೇಶ್ ಜೊತೆ ಸೇರಿ ನಾ ನಿನ್ನ ಆಸೆ ಕಂಡು ಬೆರಗಾಗಿ ಮೂಕನಾದೆ ಹಾಡನ್ನು ಹಾಡಿದ್ದರು. ಅಪ್ಪುಅನ್ನು ಕಳೆದುಕೊಂಡು ಅತೀವ ದುಃಖ ಅನುಭವಿಸುತ್ತಿರುವ ಆತ್ಮೀಯರಲ್ಲಿ ಸುಮಲತಾ ಅಂಬರೀಶ್ ಅವರು ಕೂಡ ಒಬ್ಬರಾಗಿದ್ದಾರೆ.