Home Blog Page 146

ಹಳೆ ವಾಹನಕ್ಕೂ ಇನ್ಮುಂದೆ ಹೊಸ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ, ಇಲ್ಲದಿದ್ರೆ ದಂಡ ಫಿಕ್ಸ್.! ಜಾರಿ ಆಯ್ತು ಹೊಸ ರೂಲ್ಸ್

 

ದೇಶದಲ್ಲಿ ಹಲವಾರು ಬಾರಿ ಸಂಚಾರ ನಿಯಮಗಳು ಮೋಟಾರು ವಾಹನ ಕಾಯ್ದೆಗಳು ಬದಲಾವಣೆ ಆಗಿವೆ. ಕೆಲವೊಮ್ಮೆ ಅದು ವಾಹನ ಸವಾರರ ಹಾಗೂ ದೇಶದ ಹಿತ ದೃಷ್ಟಿಯಿಂದ ಅವಶ್ಯಕ ಕೂಡ ಹೌದು. ಅಂತಹದೇ ಒಂದು ಹೊಸ ನಿಯಮಯನ್ನು ಕೇಂದ್ರ ಸರ್ಕಾರದ ಸೂಚನೆ ಆಧಾರದ ಮೇಲೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕೂಡ ವಿಧಿಸಿದೆ.

ಅದೇನೆಂದರೆ, ಏಪ್ರಿಲ್ 1, 2019ಕ್ಕೂ ಮುನ್ನ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP (High Security Number Plate) ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವಂತೆ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸೂಚಿಸಿದೆ. ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಇದು ಕಡ್ಡಾಯವಾಗಿದ್ದು ಕೇಂದ್ರ ಸರ್ಕಾರದ ಆದೇಶದ ನಂತರ ಅದೇ ಮಾರ್ಗಸೂಚಿ ಪ್ರಕಾರ ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 18, 2023ರಂದು ಈ ಕುರಿತು ಆದೇಶ ಹೊರ ಬಿದ್ದಿದೆ.

2019 ಏಪ್ರಿಲ್ 1 ರಿಂದ ಈಚೆಗೆ ಖರೀದಿಸಿರುವ ಎಲ್ಲಾ ವಾಹನಗಳಲ್ಲೂ ಕೂಡ ನೈಸರ್ಗಿಕವಾಗಿ HSRP ನಂಬರ್ ಪ್ಲೇಟ್ ಇರುವುದರಿಂದ ಹಳೆಯ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮಾಲೀಕರು ಒರಿಜಿನಲ್ ಇಕ್ಯುಪ್ಮೆಂಟ್ ಮ್ಯಾನುಫ್ಯಾಕ್ಚರ್ (OIM Portal) ಪೋರ್ಟಲ್ ನಲ್ಲಿ ಮೊದಲಿಗೆ ನೋಂದಾಯಿಸಿಕೊಂಡು ನಂತರ ಹತ್ತಿರದ ಶೋರೂಮ್ ಅಥವಾ ಡೀಲರ್ ಬಳಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬಹುದು.

ರಾಜ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಡೀಲರ್ ಕೇಂದ್ರಗಳಿತ್ತು, ಸ್ಥಳ ಹಾಗೂ ದಿನಾಂಕ ಇತ್ಯಾದಿ ಮಾಹಿತಿಗಳನ್ನು ಕೂಡ ಅಲ್ಲೇ ಪಡೆಯಬಹುದಾಗಿದೆ ಇದರಿಂದ ವಾಹನ ಸವಾರರು ತಮಗೆ ಅನುಕೂಲಕರವಾದದನ್ನು ಆರಿಸಿಕೊಳ್ಳಬಹುದಾಗಿದೆ. ಈ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಬದಲಾಯಿಸಿಕೊಳ್ಳಲು ವಾಹನ ಸವಾರರಿಗೆ 400 ರಿಂದ 500 ಚಾರ್ಜಸ್ ಆಗಬಹುದು.

ಸರ್ಕಾರ ನೀಡಿರುವ ಈ ಕಾಲಾವಧಿ ಒಳಗಡೆ ನಂಬರ್ ಪ್ಲೇಟ್ ಬದಲಾಯಿಸದೆ ಇದ್ದಲ್ಲಿ ಕನಿಷ್ಠ 1000ರೂ. ವರೆಗೂ ದಂಡ (fine) ಬೀಳುವ ಸಾಧ್ಯತೆ ಇದೆ. ಈ ವಿಷಯ ಕುರಿತು ಸರ್ಕಾರ ಇಷ್ಟು ಆಸಕ್ತಿ ತೋರಿಸಲು ಸಾಕಷ್ಟು ಕಾರಣ ಇದೆ. ಯಾಕೆಂದರೆ ಈ ರೀತಿ ದೇಶದಾದ್ಯಂತ ಏಕರೂಪದ HSRP ಅಳವಡಿಸಿಕೊಳ್ಳುವುದರಿಂದ ಈ ಸಮಯದಲ್ಲಿ ವಾಹನ ಮಾಲೀಕರು ನೀಡುವ ಮಾಹಿತಿಗಳು ವಾಹನ ತಂತ್ರಾಂಶದಲ್ಲಿ ಲಭ್ಯವಿರುತ್ತದೆ ಮತ್ತು ಅದು ಕೇಂದ್ರ ಮಾಹಿತಿಯ ವಿಭಾಗದಲ್ಲೂ ಕೂಡ ರೆಕಾರ್ಡ್ ಆಗಿ ಉಳಿಯಲಿದೆ.

ಇದರಿಂದಾಗಿ ವಾಹನಕ್ಕೆ ಹೆಚ್ಚು ಸುರಕ್ಷತೆ ಸಿಗುತ್ತದೆ ವಾಹನ ಕಳುವಾದ ಸಮಯದಲ್ಲಿ ಅಥವಾ ವಾಹನಗಳನ್ನು ಅಕ್ರಮ ಚಟುವಟಿಕೆಗೆ ಒಳಸಿಕೊಳ್ಳುವಾಗ ಅಥವಾ ಅನಧಿಕೃತ ವಾಹನಗಳು ರಸ್ತೆ ಮೇಲೆ ಓಡಾಡುವಾಗ ಶೀಘ್ರವಾಗಿ ಅದನ್ನು ಪತ್ತೆ ಮಾಡಲು ಇದು ಅನುಕೂಲಕ್ಕೆ ಬರಲಿದೆ. ಹಾಗಾಗಿ ಪರೋಕ್ಷವಾಗಿ ಇದು ರಾಷ್ಟ್ರೀಯ ಸುರಕ್ಷತೆಯ ವಿಷಯದಲ್ಲಿ ಕೂಡ ಮಹತ್ವದ ಪಾತ್ರ ವಹಿಸಿರುವುದರಿಂದ ಇಷ್ಟು ಕಟ್ಟುನಿಟ್ಟಾಗ ನಿಯಮಗಳನ್ನು ಕೈಗೊಳ್ಳಲಾಗಿದೆ.

ಒಂದು ವೇಳೆ ಸರ್ಕಾರ ನೀಡಿರುವ ಈ ನಿಗದಿತ ಅವಧಿ ಒಳಗೆ ಪ್ರಕ್ರಿಯೆ ಪೂರ್ತಿ ಗೊಳಿಸಿದವರಿಗೆ ಮುಂದೆ ಹಲವು ಸಂದರ್ಭದಲ್ಲಿ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಇದೆ. HSRP ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ RC, ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ ಇತ್ಯಾದಿಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಮಾಲೀಕರಿಗೆ ದಂಡದ ಜೊತೆ ಇನ್ನು ಅನೇಕ ಸಮಸ್ಯೆಗಳಾಗುವುದರಿಂದ ಸರ್ಕಾರದ ನಿಯಮದ ಪ್ರಕಾರ ವಾಹನ ಮಾಲೀಕರು ತಪ್ಪದೆ ತಮ್ಮ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬೇಕಾಗಿದೆ.

ಇನ್ಮುಂದೆ ಕೇವಲ 450 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್, ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ…

ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ (Central government) ಎಲ್ಲಾ ಗೃಹಣಿಯರಿಗೂ ಕೂಡ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ಹಣದುಬ್ಬರ ಕಾರಣದಿಂದಾಗಿ ದೇಶದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಅದನ್ನು ನಿಯಂತ್ರಣ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ (Gas cylinder rate) 200ರೂ. ಇಳಿಕೆ ಮಾಡಿದೆ.

ಇದರಿಂದಾಗಿ ಉಜ್ವಲ್ ಯೋಜನೆ (Ujwal Scheme) ಪ್ರಯೋಜನ ಪಡೆದ ಕುಟುಂಬಗಳಿಗೆ 200ರೂ. ಸಬ್ಸಿಡಿ ಸಿಗುತ್ತಿದ್ದ ಕಾರಣ ಹೊಸ ಘೋಷಣೆ ಸೇರಿ 400ರೂ. ಇಳಿಕೆಯಾಗಿದೆ. ಜೊತೆಗೆ ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಹೊಸದಾಗಿ 75 ಲಕ್ಷ ಅರ್ಜಿಗಳನ್ನು ಸ್ವೀಕರಿಸುದಾಗಿ ಹೇಳಿಕೆ ಕೊಟ್ಟು ದೇಶದ ಜನತೆಗೆ ಸಿಲಿಂಡರ್ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರ ದುಪ್ಪಟ್ಟು ಸಿಹಿಸುದ್ದಿ ನೀಡಿದೆ.

ಈ ವಿಚಾರವಾಗಿ ಗೋವಾ (Goa) ಸರ್ಕಾರವು ಕೂಡ ತನ್ನ ರಾಜ್ಯದ ನಾಗರಿಕರಿಗೆ ಪ್ರತಿ ಸಿಲಿಂಡರ್ ಬುಕ್ಕಿಂಗ್ ಮೇಲೆ 275ರೂ. ಸಹಾಯಧನ ನೀಡುವುದಕ್ಕೆ ಘೋಷಿಸಿತ್ತು. ಈಗ ಪಡಿತರ ಚೀಟಿ ಹೊಂದಿದ್ದ ಎಲ್ಲಾ ಕುಟುಂಬಗಳು ಕೂಡ ಇದರ ಪ್ರಯೋಜನವನ್ನು ಪಡೆಯುತ್ತಿವೆ. ಈಗ ಇದೇ ಸಾಲಿಗೆ ಮತ್ತೊಂದು ರಾಜ್ಯ ಕೂಡ ಸೇರುತ್ತದೆ. ಮಧ್ಯಪ್ರದೇಶದ (Madyapradesh) ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ BJP ಸರ್ಕಾರವು ಮಧ್ಯಪ್ರದೇಶದ ಜನತೆಗೆ ಈ ಕುರಿತು ಸಿಹಿ ಸುದ್ದಿ ನೀಡಿದೆ.

ಸದ್ಯ ಮಧ್ಯ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 900 ರೂ. ಇದ್ದು, ಬಳಕೆದಾರರು 450 ರೂ ನೀಡಿದರೆ ಸಾಕು. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಸೆಪ್ಟೆಂಬರ್​​ 1ರಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತು ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆ (PM Ujwal Scheme and Ladli Bahana Scheme) ಮೂಲಕ ಗ್ಯಾಸ್ ಸಂಪರ್ಕ ಪಡೆದುಕೊಂಡ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದರೆ, ಗ್ಯಾಸ್ ರೀಫಿಲ್ಲಿಂಗ್ ಸೆಂಟರ್ ಗಳಲ್ಲಿ ಅಥವಾ ಡೋರ್ ಡೆಲಿವರಿ ಮೂಲಕ ಗ್ಯಾಸ್ ಸಿಲಿಂಡರ್ ತೆಗೆದುಕೊಂಡ ಗ್ರಾಹಕರು ಇದರಿಂದ ವಂಚಿತರಾಗಲಿದ್ದಾರೆ.

ಅವರು ಸಿಲಿಂಡರ್​​ಗೆ ಪೂರ್ತಿ ಬೆಲೆಯನ್ನು ಪಾವತಿ ಮಾಡಲೇಬೇಕು ಅವರಿಗೆ ಈಗ ಘೋಷಣೆಯಾಗಿರುವ ಹೊಸ ಯೋಜನೆ ಲಾಭ ಲಭ್ಯವಾಗುವುದಿಲ್ಲ. ಆದರೆ ಕೇಂದ್ರ ಸರ್ಕಾರ ಘೋಷಿಸಿರುವ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಮಾರುಕಟ್ಟೆಯಲ್ಲಿನ ಬೆಲೆ ವ್ಯತ್ಯಾಸವಾದಾಗಲು ಈ ಯೋಜನೆಗೆ ಅರ್ಹರಾಗಿರುವವರು ಫಲಾನುಭವಿಗಳು ಆ ಬೆಲೆಯ ಅರ್ಧ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆಯು ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಯೋಜನೆಯಾಗಿದ್ದು ಅಲ್ಲಿನ ಅನೇಕ ಕುಟುಂಬಗಳು ಈ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿವೆ. 2023-24ನೇ ಸಾಲಿನಲ್ಲೂ ಕೂಡ ಉಜ್ವಲ್ ಯೋಜನೆ ಮೂಲಕ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವವರು ಸಹಾ ಪ್ರಯೋಜನ ಪಡೆಯಬಹುದು ಅಥವಾ
ಗ್ರಾಮ ಪಂಚಾಯಿತಿ ಕಚೇರಿ, ಶಿಬಿರ ಕಚೇರಿ, ಅಂಗನವಾಡಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ.

ಪ್ರಧಾನ ಮಂತ್ರಿ ಲಾಡ್ಲಿ ಬಹನಾ ಯೋಜನೆಗೆ ನೋಂದಾಯಿಸಿಕೊಂಡು ಫಲಾನುಭವಿಗಳಾದಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಧ್ಯಪ್ರದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಇದೆ ಆದ್ದರಿಂದ ಇದು ಚುನಾವಣೆಯಲ್ಲಿ ಮತಗಳನ್ನು ಸಲ್ಲಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ ಘೋಷಣೆ ಮಾಡಿದ ಸಮಯದಲ್ಲೂ ಕೂಡ ಇದು ಲೋಕಸಭಾ ಚುನಾವಣೆ ಪ್ರಯುಕ್ತ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು.

ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬಾರದು, ಊಟ ಮಾಡುವ ಸರಿಯಾದ ನಿಯಮಗಳು ಇವು.!

 

● ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು ಎನ್ನುತ್ತಾರೆ. ಇದರ ಅರ್ಥ ನಾವು ಕಷ್ಟಪಟ್ಟು ದುಡಿದ ಹಣದಿಂದ ಹೊಟ್ಟೆ ತುಂಬಿಸಿಕೊಂಡಾಗ ಮಾತ್ರ ಅದು ಶ್ರೇಷ್ಠ.
● ಊಟಕ್ಕೆ ಕುಳಿತುಕೊಳ್ಳುವ ಮುನ್ನ ಆ ಜಾಗ ಶುಚಿಯಾಗಿರಬೇಕು
● ಊಟಕ್ಕೂ ಮುನ್ನ ಕೈ ಕಾಲು ಮುಖ ತೊಳೆದು, ಬಾಯಿಯನ್ನು ಮುಕ್ಕಳಿಸಿ, ಹಣೆಗೆ ಭಸ್ಮ ಧರಿಸಿ ನಂತರ ಊಟಕ್ಕೆ ಕುಳಿತುಕೊಳ್ಳಬೇಕು

● ಬರೀ ನೆಲದ ಮೇಲೆ ಕುಳಿತು ಊಟ ಮಾಡಬಾರದು ಯಾವುದಾದರೂ ಚಿಕ್ಕ ಚಾಪೆಯನ್ನು ಹಾಕಿಕೊಳ್ಳಬೇಕು
● ಚೇರ್ ಸ್ಟೂಲ್ ಬದಲು ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತುಕೊಂಡು ಊಟ ಮಾಡುವುದೇ ಸೂಕ್ತ
● ಊಟಕ್ಕೆ ಕುಳಿತುಕೊಳ್ಳುವಾಗ ತಲೆಯ ಮೇಲೆ ಟವಲ್, ಪೇಟ ಸುತ್ತಿದ್ದರೆ ಅಥವಾ ಟೋಪಿ ಹಾಕಿದ್ದರೆ ಅದನ್ನು ತೆಗೆದು ಪಕ್ಕಕ್ಕೆ ಇಡಬೇಕು.
● ಗುರು ನಾಮ ಸ್ಮರಣೆ ಮಾಡಿ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.

● ಊಟ ಮಾಡುವಾಗ ಹ್ಯಾಂಡ್ ಕರ್ಚೀಫ್ ಆಥವಾ ಚಿಕ್ಕ ಟವೆಲ್ ನಿಮ್ಮ ಜೊತೆ ಇದ್ದರೆ ಸೂಕ್ತ.
● ಊಟಕ್ಕೆ ತೆಗೆದುಕೊಳ್ಳುವ ತಟ್ಟೆ ಲೋಟಗಳು ಈಗಾಗಲೇ ಶುಚಿಯಾಗಿದ್ದರು ಮತ್ತೊಮ್ಮೆ ನೀರಿನಿಂದ ತೊಳೆದು ಅವುಗಳನ್ನು ಬಳಸಬೇಕು
● ಊಟ ಮಾಡುವಾಗ ಪಾದರಕ್ಷೆಗಳನ್ನು ಧರಿಸಬಾರದು
● ಊಟ ಮಾಡುವಾಗ ಕಸ ಗುಡಿಸಬಾರದು,
ಊಟ ಮಾಡುವವರನ್ನು ಒಂದೇ ಸಮನೆ ದಿಟ್ಟಿಸಿ ನೋಡಬಾರದು.

● ಊಟಕ್ಕೆ ಕುಳಿತಿರುವ ಜಾಗದಲ್ಲಿ ಸುಖಾ ಸುಮ್ಮನೆ ಓಡಾಡಬಾರದು
● ಯಾವಾಗಲು ಕುಡಿಯುವ ನೀರು ತುಂಬಿರುವ ಚಂಬು ಪಕ್ಕದಲ್ಲಿ ಇರಬೇಕು
● ಗಂಟಲು ಮೇಲೆತ್ತಿ ನೀರು ಕುಡಿಯಬೇಕು ಕಚ್ಚಿಕೊಂಡು ನೀರು ಕುಡಿಯಬಾರದು
● ನಾಯಿಮರಿ ಅಥವಾ ಇನ್ಯಾವುದೇ ಪ್ರಾಣಿಗಾಗಿ ಒಂದು ತುತ್ತು ಎತ್ತಿ ಇಟ್ಟು ನಂತರ ಊಟ ಮಾಡಬೇಕು.
● ನೀರು ಅಥವಾ ಸಾರಿನಲ್ಲಿ ಅಂಗೈ ತೇವ ಮಾಡಿಕೊಂಡು ನಂತರ ಊಟ ಶುರು ಮಾಡಬೇಕು.

● ಅಂಗೈ ಮುಂಗೈ ಮೂತಿಗಳಿಗೆ ಊಟ ಮೆತ್ತಿಕೊಳ್ಳದಂತೆ ಕ್ಲೀನ್ ಆಗಿ ಅಚ್ಚುಕಟ್ಟಾಗಿ ಊಟ ಮಾಡಬೇಕು
● ಊಟ ಮಾಡುವಾಗ ತೊಡೆ ಮೇಲೆ ನೆಲದ ಮೇಲೆ ಎಡಗೈ ಊರಿಕೊಂಡು ಇರಬಾರದು
● ಊಟ ಮಾಡುವಾಗ ಊಟದ ಮೇಲೆ ಗಮನ ಇರಬೇಕು. ತಲೆ ಕೆರೆದುಕೊಳ್ಳುವುದು, ಕಣ್ಣು ಮುಚ್ಚಿಕೊಳ್ಳುವುದು ಇವುಗಳನ್ನು ಮಾಡಬಾರದು.

● ನಾವು ಊಟ ಮಾಡುವ ಶಬ್ಧ ಪಕ್ಕದವರಿಗೆ ಕೇಳಬಾರದು, ಆ ರೀತಿ ಊಟ ಮಾಡಬೇಕು. ಊಟ ಮಾಡುವಾಗ ನಿಧಾನವಾಗಿ ತಿನ್ನಬೇಕು. ಗಬ ಗಬ ಎಂದು ತಿನ್ನಬಾರದು.
● ಊಟ ಮಾಡುವಾಗ ಅಳತೆ ಮಾಡಬಾರದು, ರೊಟ್ಟಿ ಚಪಾತಿ ದೋಸೆ ಲೆಕ್ಕ ಹಾಕಬಾರದು, ಊಟಕ್ಕೆ ಬಡಿಸುವವರು ಆಳು ನೋಡಿ ಅವರಿಗೆ ತಕ್ಕ ಹಾಗೆ ಊಟ ಬಡಿಸಬೇಕು ಯಾವತ್ತು ಯಾರನ್ನು ಅರ್ಧ ಹೊಟ್ಟೆ ಮಾಡಬಾರದು.

● ಊಟಕ್ಕೆ ಕರೆದು ಅವರು ಊಟ ಮಾಡಿ ಹೋದ ಮೇಲೆ ಅಷ್ಟು ತಿಂದ ಇಷ್ಟು ತಿಂದ ಎಂದು ಆಡಿಕೊಳ್ಳಬಾರದು.
● ಊಟ ಮಾಡುವಾಗ ಗಂಭೀರವಾದ ಯಾವುದೇ ವಿಷಯಗಳ ಬಗ್ಗೆ ಮಾತನಾಡಬಾರದು ಟಿವಿ ಮೊಬೈಲ್ ಇವುಗಳಿಂದ ದೂರ ಇದ್ದು ಊಟ ಮಾಡಬೇಕು.
● ಒಂದು ಕುಟುಂಬದಲ್ಲಿ ಊಟ ಬಡಿಸುವವರು ಬಿಟ್ಟು ಉಳಿದವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಒಳ್ಳೆಯ ಲಕ್ಷಣ.

● ಊಟ ಮಾಡುವಾಗ ತಂಗಳು ಇದ್ದರೂ ಕೂಡ ಬಿಸಿ ಎಂದುಕೊಂಡು ಕಣ್ಣಿಗೆ ಒತ್ತಿಕೊಂಡು ಊಟ ಮಾಡಬೇಕು, ಊಟದ ಮೇಲೆ ಅಹಂಕಾರ ತೋರಬಾರದು ಒಂದು ತುತ್ತು ಕೂಡ ವೇಸ್ಟ್ ಮಾಡಬಾರದು.
● ಊಟ ಮಾಡಿದ ಮೇಲೆ ಅಗತ್ಯವಿರುವಷ್ಟು ನೀರು ಕುಡಿಯಬೇಕು
● ಊಟದ ಬಳಿಕ ಅಭ್ಯಾಸವಿದ್ದರೆ ತಾಂಬೂಲ ಸೇವಿಸಬಹುದು, ಚಿನಕುರುಳಿ, ಕಡಲೆಕಾಯಿ ಅಥವಾ ಹಣ್ಣುಗಳ ಸೇವನೆ ಮಾಡಬಹುದು. ಇದೇ ರೀತಿಯ ಇನ್ನಷ್ಟು ನಿಯಮಗಳು ಇದ್ದು ಊಟ ಮಾಡುವ ಸರಿಯಾದ ವಿಧಾನ ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ನಿಮ್ಮ ಜಮೀನನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿ ಬಿಡದೆ ಇದ್ದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಒಬ್ಬ ರೈತನು ಸರ್ವೇ ಇಲಾಖೆಗೆ ಅರ್ಜಿ ಹಾಕಿ ಅಳತೆ ಮಾಡಿಸಿ ತನ್ನ ಜಮೀನನ್ನ ಬೌಂಡರಿಯನ್ನು ಗುರುತಿಸಿ ಕೊಳ್ಳುತ್ತಾನೆ. ಇದನ್ನು ಜಮೀನು ಹದ್ದುಬಸ್ತು ಮಾಡಿಸಿಕೊಳ್ಳುವುದು ಎನ್ನುತ್ತಾರೆ. ಯಾಕೆಂದರೆ ಈಗಾಗಲೇ ನಮ್ಮ ಬಳಿ ಇರುವ ದಾಖಲೆ ಪ್ರಕರಣವಾಗಿ ಜಮೀನು ಇರುವುದಿಲ್ಲ ಅಂತಹ ಸಮಯದಲ್ಲಿ ಕಾನೂನು ಪ್ರಕಾರ ಈ ರೀತಿ ಸರ್ವೇ ಮಾಡಿಸುತ್ತಾರೆ.

ಆಗ ಒತ್ತುವರಿ ಆಗಿರುವುದು ಕಂಡು ಬಂದರೆ ಅದನ್ನು ಬಿಡುವಂತೆ ಕೇಳಿದಾಗ ಅಕ್ಕಪಕ್ಕದ ಜಮೀನಿನ ರೈತರ ಜೊತೆ ವಾಗ್ವಾದ ನಡೆಯುತ್ತದೆ. ಆದರೂ ಕೂಡ ಸರ್ಕಾರದ ಇಲಾಖೆಯಿಂದ ಗಡಿ ಗುರುತಿಸಿದ ಮೇಲು ಅವರು ಆ ಜಾಗವನ್ನು ಬಿಟ್ಟು ಕೊಡದಿದ್ದರೆ ಕಾನೂನು ಪ್ರಕಾರ ಯಾವ ರೀತಿ ಕ್ರಮ ಕೈಗೊಳ್ಳಬಹುದು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ತಾಯಿ ಮಹಾಲಕ್ಷ್ಮಿಯು ನಿಮ್ಮ ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು.!

● ಮೊದಲಿಗೆ ನೀವು ನಿಮ್ಮ ಜಮೀನು ಹದ್ದು ಬಸ್ತ್ ಮಾಡಿಸಿಕೊಳ್ಳಲು ಸೂಕ್ತ ದಾಖಲೆಗಳನ್ನು ಕೊಟ್ಟು ಭೂ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
● ಭೂ ಸರ್ವೆ ಇಲಾಖೆಯಿಂದ ಅಕ್ಕಪಕ್ಕದ ರೈತರಿಗೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ, ಅದಕ್ಕಾಗಿ ಅರ್ಜಿ ಸಲ್ಲಿಸುವ ರೈತನು ಆತನ ಜಮೀನಿನ ಅಕ್ಕ ಪಕ್ಕದ ರೈತರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಬೇಕು. ಸಾಧ್ಯವಾದರೆ ರೈತನು ಕೂಡ ಅವರಿಗೆ ಮಾಹಿತಿ ತಿಳಿಸಿರಬೇಕು ಸರ್ವೇ ಮಾಡುವ ದಿನದಂದು ಅಕ್ಕಪಕ್ಕದ ಜಮೀನಿನ ಮಾಲೀಕರು ಕೂಡ ಸ್ಥಳದಲ್ಲೇ ಹಾಜರಿದ್ದರೆ ಎಲ್ಲರಿಗೂ ಅನುಕೂಲ, ಗ್ರಾಮದ ಕೆಲ ಮುಖ್ಯಸ್ಥರನ್ನು ಕೂಡ ರೈತನು ಆ ಸಮಯದಲ್ಲಿ ಜಮೀನಿಗೆ ಕರೆ ತರಬೇಕು.

● ಸರ್ವೆ ಆದ ಬಳಿಕ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳಬೇಕು. ನಿಮ್ಮ ಜಮೀನು ಒತ್ತುವರಿ ಆಗಿದ್ದರೆ ಚಿತ್ರ ಸಮೇತ ವರದಿ ಕೊಡುತ್ತಾರೆ ಅಥವಾ ಒಂದು ವಾರದ ಬಳಿಕ ನಾಡಕಚೇರಿಯಲ್ಲಿ ಕೂಡ ಈ ವರದಿಯನ್ನು ಪಡೆದುಕೊಳ್ಳಬಹುದು.

ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

● ನಿಮ್ಮ ಜಮೀನು ಒತ್ತುವರಿ ಆಗಿದ್ದರೆ ಚಿತ್ರ ಸಮೇತ ನಿಮ್ಮಲ್ಲಿ ದಾಖಲೆ ಇರುತ್ತದೆ, ಆಗ ನೀವು ನಿಮ್ಮ ಅಕ್ಕ ಪಕ್ಕದ ರೈತರಿಗೆ ಈ ಬಗ್ಗೆ ತಿಳಿಸಿ ಹೇಳಬೇಕು. ಕೇಳದೆ ಇದ್ದಲ್ಲಿ ಊರಿನಲ್ಲಿಯೇ ಮುಖ್ಯಸ್ಥರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಇಲಾಖೆಯಿಂದ ನೀಡಿರುವ ದಾಖಲೆಯ ಕುರಿತು ವಿವರಿಸಿ ಹೇಳಿ, ಒಪ್ಪದೆ ಇದ್ದರೆ ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಆ ದೂರಿನ ಸಮಯದಲ್ಲಿ ಸರ್ವೆ ಇಲಾಖೆಯಿಂದ ಕೊಟ್ಟಿರುವ ದಾಖಲೆ, ಪಂಚಾಯಿತಿ ನಡೆಸಿರುವುದಾಗಿ ಸಾಕ್ಷಿಗಳ ಹೇಳಿಕೆ, ನಿಮ್ಮ ಜಮೀನಿನ ವರದಿ ನೀಡಿ ರಕ್ಷಣೆ ಕೋರುವಂತೆ ಕೇಳಿಕೊಳ್ಳಬೇಕು ಮತ್ತು ನೀವು ದೂರು ಸಲ್ಲಿಸಿರುವುದಕ್ಕೆ ರಿಸಿಪ್ಟ್ ಪಡೆದುಕೊಳ್ಳಬೇಕು.

● ಮತ್ತೊಮ್ಮೆ ಹದ್ದುಬಸ್ತು ಮಾಡಿಸುವಂತೆ ಆ ರೈತ ಸೂಚಿಸಿದರೆ ಅದಕ್ಕೂ ಒಪ್ಪಿಕೊಳ್ಳಿ. ಇಷ್ಟಾದ ಮೇಲೂ ಆತ ಜಮೀನು ಬಿಡದೆ ಇದ್ದರೆ ವಕೀಲರ ಸಹಾಯದಿಂದ ಹತ್ತಿರದಲ್ಲಿರುವ ನ್ಯಾಯಾಲಯದಲ್ಲಿ ಈ ಕುರಿತು ದಾವೇ ದಾಖಲಿಸಿ.
● ಈ ರೀತಿ ಭೂ ವಿವಾದ ದಾಖಲಾದರೆ ಅದು ವಿಚಾರಣೆ ನಡೆದು ತೀರ್ಪು ಬರುವವರೆಗೂ ಕೂಡ ಕನಿಷ್ಠವೆಂದರೂ 10 ವರ್ಷ ಹಿರಿಯುತ್ತದೆ. ಆದ್ದರಿಂದ ರೈತರು ಈ ರೀತಿ ಕೋರ್ಟು ಕಚೇರಿ ಅಲೆದು ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಳ್ಳುವುದರ ಬದಲು ರಾಜಿ ಸಂಧಾನದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಇನ್ನು ಉತ್ತಮ ಎನ್ನುವುದು ಹಲವರ ಅಭಿಪ್ರಾಯ. ನಿಮಗೆ ಯಾವುದು ಸೂಕ್ತ ಆ ಮಾರ್ಗವನ್ನು ಆರಿಸಿಕೊಂಡು ಆದಷ್ಟು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.

ತಾಯಿ ಮಹಾಲಕ್ಷ್ಮಿಯು ನಿಮ್ಮ ಜೀವನದಲ್ಲಿ ಆಗಮಿಸುವ ಮುನ್ನ ನೀಡುವ ಸೂಚನೆಗಳು ಇವು.!

● ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡಿದ್ದರೆ ಸದ್ಯದಲ್ಲೇ ನಿಮಗಿದ್ದ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ ಎನ್ನುವ ಅರ್ಥ. ಕಪ್ಪು ಇರುವೆಗಳು ಮನೆ ಒಳಗೆ ಬರುವುದು ಶುಭ ಸೂಚಕವಾಗಿದೆ ಅದು ಶೀಘ್ರದಲ್ಲಿ ಧನಾಗಮನ ಆಗುವ ಲಕ್ಷಣವನ್ನು ಸೂಚಿಸುತ್ತದೆ.
● ಬೆಳಿಗ್ಗೆ ನೀವು ಏಳುತ್ತಿದ್ದ ಕೂಡಲೇ ಗಂಟೆ ನಾದ ಅಥವಾ ಶಂಖನಾದವನ್ನು ಹೇಳಿದರೆ ಅದು ಬಹಳ ಒಳ್ಳೆಯದು ನಿಮ್ಮ ಸಂಪತ್ತಿನ ವೃದ್ಧಿ ಆಗುತ್ತದೆ ಎನ್ನುವ ಸಂಕೇತವದು.

● ನೀವು ಬೆಳಗ್ಗೆ ಎದ್ದು ದೇವರ ಫೋಟೋ ನೋಡಿ, ಮನೆಯಿಂದ ಹೊರಗೆ ಬಂದಾಗ ಯಾರಾದರು ಕಸ ಗುಡಿಸುತ್ತಿರುವುದನ್ನು ನೋಡಿದರೆ ಅದು ಕೂಡ ಶುಭ ತರುವ ಸೂಚನೆ.
● ದೇವರಿಗೆ ಪೂಜೆ ಮಾಡುವ ಹಾಗೂ ಪ್ರಾರ್ಥನೆ ಮಾಡುವ ಸಮಯದಲ್ಲಿ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಅರ್ಪಿಸಿರುವ ಹೂವು ಬಲಗಡೆಯಿಂದ ಬಿದ್ದರೆ ನಿಮ್ಮ ಕೋರಿಕೆಗಳು ದೇವರಿಗೆ ಕೇಳಿಸಿದೆ ಶೀಘ್ರದಲ್ಲಿ ಅವು ನೆರವೇರುತ್ತದೆ ಎಂದು ಅರ್ಥ.

ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

● ಬ್ರಾಹ್ಮಿ ಮುಹೂರ್ತ ಎಂದರೆ ಮುಂಜಾನೆ 5-7 ಗಂಟೆ ಸಮಯ. ಇದು ದೇವತೆಗಳು ಎಚ್ಚರದಿಂದ ಇರುವ ಸಮಯ ಎನ್ನುತ್ತಾರೆ. ಈ ಸಮಯದಲ್ಲಿ ಎಚ್ಚರವಾದರೆ ನಿಮ್ಮ ಮೇಲೆ ದೇವರ ಕೃಪಾಕಟಾಕ್ಷ ಉಂಟಾಗಿದೆ ಎಂದರ್ಥ. ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಇತ್ಯಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡುವುದರಿಂದ ನಿಮ್ಮ ಅದೃಷ್ಟ ಇಮ್ಮಡಿಕೊಳ್ಳುತ್ತದೆ.

● ಮನೆಗೆ ಹಲ್ಲಿಗಳು ಬಂದು ವಾಸ ಮಾಡಲು ಶುರು ಮಾಡಿದರೆ ಅದು ಕೂಡ ಧನಾಗಮನವಾಗುವ ಸೂಚನೆ. ಒಂದೇ ಸ್ಥಳದಲ್ಲಿ ಮನೆಯಲ್ಲಿ ಮೂರು ಹಲ್ಲಿಗಳನ್ನು ಕಂಡರೆ ಅದು ಕೂಡ ನಿಮ್ಮ ಮನೆಗೆ ಶೀಘ್ರದಲ್ಲಿಯೇ ಒಳ್ಳೆಯದಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಿಂದ ಹಲ್ಲಿಗಳನ್ನು ಹೊರಗೆ ಹಾಕಲು ಅಥವಾ ಕೊಲ್ಲಲು ಪ್ರಯತ್ನ ಮಾಡಬೇಡಿ.

ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

● ಪೊಲಕೆ, ಗೂಬೆ, ಆನೆ, ಹಲ್ಲಿ, ಹೊಸ್ತಿಲು, ಹಸು, ರಂಗೋಲಿ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೀರಿ ಎನ್ನುವುದರ ಸೂಚನೆಯಾಗಿದೆ.
● ಶುಕ್ರವಾರದಂದು ಮನೆಗೆ ಯಾರಾದರೂ ಹೂವು, ಹಣ್ಣು, ಧಾನ್ಯ, ಬಳೆ, ಕುಂಕುಮ ಇವುಗಳನ್ನು ತಂದು ಕೊಟ್ಟರೆ ಬೇಡ ಎನ್ನಬೇಡಿ. ಯಾಕೆಂದರೆ ಇದೆಲ್ಲ ತಾಯಿ ಮಹಾಲಕ್ಷ್ಮಿಯ ಸಂಕೇತ. ತಪ್ಪದೇ ಅವುಗಳನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿ ಅದು ಕೂಡ ತಾಯಿ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಶೀಘ್ರದಲ್ಲಿ ಬರಲಿದ್ದಾರೆ ಎನ್ನುವುದನ್ನು ಸೂಚಿಸುವ ಲಕ್ಷಣಗಳಾಗಿವೆ.

● ಮನೆ ಮುಂದೆ ಹಾಕಿರುವ ತುಳಸಿ ಗಿಡವು ಅಚ್ಚಹಸಿರಾಗಿ ಬೆಳೆದಿದ್ದು ಸಮೃದ್ಧಿಯಾಗಿ ಕಾಣುತ್ತಿದ್ದರೆ ಆ ಮನೆಯು ಕೂಡ ಅದೇ ರೀತಿ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ ಹಾಗಾಗಿ ಮನೆ ಮುಂದೆ ನಿಂತಿರುವ ತುಳಸಿ ಗಿಡವನ್ನು ಚೆನ್ನಾಗಿ ಪೂಜಿಸಿ ಅದರ ಲಕ್ಷಣ ಆಧಾರದ ಮೇಲೆ ಮನೆಯ ಏಳಿಗೆಯನ್ನು ಕೂಡ ಅರಿತುಕೊಳ್ಳಬಹುದು.
● ಮನೆಯಲ್ಲಿ ಜರಿ ಕಾಣಿಸಿದರೆ ಅದು ಕೂಡ ತಾಯಿ ಮಹಾಲಕ್ಷ್ಮಿ ಆಗಮನದ ಸಂಕೇತ ಯಾವುದಾದರೂ ಒಂದು ರೂಪದಲ್ಲಿ ನಿಮ್ಮ ಬಳಿಗೆ ಹಣ ಬಂದು ಬರುತ್ತದೆ ಎನ್ನುವುದನ್ನು ಅದು ಸೂಚಿಸುತ್ತದೆ.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

● ಗೋಮಾತೆಯು ಪದೇ ಪದೇ ಬಂದು ನಿಮ್ಮ ಮನೆಯ ಮುಂದೆ ನಿಲ್ಲುತ್ತಿದ್ದರೆ ಇದು ಕೂಡ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷದ ಉಂಟಾಗುವುದರ ಸೂಚನೆ. ಗೋವುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ಇವುಗಳನ್ನು ನೀಡಿ ಸಂಕ್ಷಿಪ್ತಗೊಳಿಸಿ ಕಳುಹಿಸಿ ತಾಯಿ ಕೃಪೆಗೆ ಒಳಗಾಗಿ.
● ಮುಸ್ಸಂಜೆ ಸಮಯದಲ್ಲಿ ಯಾರಾದರೂ ನಿಮಗೆ ತುಂಬಿದ ಬಿಂದಿಗೆಯನ್ನು ಕೊಟ್ಟರೆ ಸಿಹಿ ಕೊಟ್ಟರೆ ಹಾಲು ಕೊಟ್ಟರೆ ಅದು ಕೂಡ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎನ್ನುವುದನ್ನು ಸೂಚಿಸುವ ಸೂಚನೆ ಆಗಿದೆ
● ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬಿದ್ದು ಎಚ್ಚರವಾದರೆ ಅದು ಕೂಡ ಶುಭ ಸಂಕೇತ.

ದೇವರ ಬಳಿ ಬೇಡಿಕೊಳ್ಳುವಾಗ ಅಥಾವ ಪ್ರಾರ್ಥನೆ ಮಾಡುವಾಗ ಯಾವುದೇ ಕಾರಣಕ್ಕೂ ಈ ರೀತಿ ತಪ್ಪುಗಳನ್ನು ಮಾಡಬೇಡಿ.!

ಪ್ರತಿಯೊಂದು ಧರ್ಮದಲ್ಲೂ ಕೂಡ ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಆದರೆ ಹಲವರು ಪ್ರಾರ್ಥನೆ ಹೆಸರಿನಲ್ಲಿ ಅವರ ಆಸೆಯ ಪಟ್ಟಿಗಳನ್ನು ಸೇರಿಸುತ್ತಾರೆ ಎಂದೇ ಹೇಳಬಹುದು, ಈ ರೀತಿ ಮಾಡಿದರೆ ಅದು ಪ್ರಾರ್ಥನೆಯಾಗುವುದಿಲ್ಲ. ಪ್ರಾರ್ಥನೆ ಎಂದರೆ ನಿಮ್ಮನ್ನು ಹಾಗೂ ದೇವರನ್ನು ಬೆಸೆಯುವ ಒಂದು ವಿಶೇಷವಾದ ಬಂಧ ಎಂತಹ ಸಮಯದಲ್ಲೂ ನೀವು ನಿಮ್ಮ ಇಹಲೋಕದ ಇಚ್ಛೆಗಳ ಬಗ್ಗೆ ಯೋಚಿಸಬಾರದು.

ಹಲವರು ಪೂಜೆ, ವ್ರತ, ತಪಗಳನ್ನು ಅಥವಾ ಪ್ರಾರ್ಥನೆಗಳನ್ನು ಈ ರೀತಿ ಭಗವಂತನನ್ನು ಬೇಡಿಕೊಳ್ಳಲೆಂದೇ ಮಾಡುತ್ತಾರೆ. ನಿಜವಾಗಿಯೂ ಭಗವಂತನಲ್ಲಿ ಬೇಡಿಕೊಳ್ಳುವುದಾದರೆ ನನಗೆ ಮದುವೆ ಮಾಡಿಸು, ಉದ್ಯೋಗ ಬರುವಂತೆ ಮಾಡು, ನನ್ನ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುವಂತೆ ಮಾಡು ನನಗೆ ಕಾರು ತೆಗೆದುಕೊಳ್ಳುವಂತೆ ಮಾಡು ನನಗೆ ಹಣ ಬರುವಂತೆ ಮಾಡು ಎಂದು ಬೇಡಿಕೊಳ್ಳಬಾರದು.

ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

ಅದಕ್ಕಾಗಿ ಹಿರಿಯರು ಹೇಳುವುದು ಹಣೆಯಲ್ಲಿ ಬರೆದಂತೆ ಆಗುತ್ತದೆ ಹಣೆ ಬರಹವನ್ನು ಬದಲಾಯಿಸಲು ಯಾರಿಂದಲೂ ಆಗುವುದಿಲ್ಲ ಎಂದು, ಇದನ್ನೇ ನಂಬಿದರೆ ಬಹಳ ಒಳ್ಳೆಯದು. ಯಾಕೆಂದರೆ ನಾವು ಪ್ರಾರ್ಥನೆ ಮಾಡುವುದರಿಂದ ಈಗಾಗಲೇ ನಮ್ಮ ಹಣೆಯಲ್ಲಿ ಬರೆದಿರುವ ಅದೃಷ್ಟ ಕಡಿಮೆ ಆಗಬಹುದು.

ಯಾವಾಗಲೂ ನಾವು ಮಾಡುವ ಯೋಜನೆಗಳಿಂದ ಭಗವಂತನ ಯೋಜನೆಯು ಶ್ರೇಷ್ಠವಾಗಿರುತ್ತದೆ, ನಾವು ಭಗವಂತನಲ್ಲಿಯೇ ಹೋಗಿ ನಮಗೆ ಏನು ಬೇಕು ಅದನ್ನು ಕೇಳುವುದರಿಂದ ಆ ಲಕ್ ಕಡಿಮೆ ಆಗಬಹುದು. ಆದ್ದರಿಂದ ಎಂದಿಗೂ ಕೂಡ ನಿಮ್ಮ ಆಸೆ ಆಕಾಂಕ್ಷೆಗಳು ಆಮಿಷಗಳನ್ನು ಭಗವಂತನ ಮುಂದೆ ಇಡಬೇಡಿ. ಅದರ ಬದಲು ದೇವರಿಗೆ ಪ್ರಾರ್ಥನೆ ಮಾಡುವಾಗ ನನ್ನ ಕರ್ಮಕ್ಕೆ ತಕ್ಕ ಪ್ರತಿಫಲ ಕೊಡು ನನ್ನ ಬದುಕಿನಲ್ಲಿ ಏನೇ ಬಂದರೂ ಕೂಡ ನೀನು ಜೊತೆಗಿದ್ದು ನನಗೆ ಧೈರ್ಯ ಹೇಳಿ ಎಲ್ಲವನ್ನು ನಿಭಾಯಿಸುವ ಶಕ್ತಿ ಕೊಡು ಎಲ್ಲರಿಗೂ ಎಲ್ಲವೂ ಒಳಿತಾಗುವಂತೆ ಮಾಡು ನನ್ನನ್ನು ಸರಿಯಾದ ದಾರಿಯಲ್ಲಿ ನಡೆಸು ಈ ರೀತಿಯಾಗಿ ಕೇಳಿಕೊಳ್ಳಬೇಕು.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

ಸಾಧ್ಯವಾದರೆ ಪರೋಪಕಾರಕ್ಕಾಗಿ ಪ್ರಾರ್ಥನೆ ಮಾಡಬಹುದು. ಹೇಗೆಂದರೆ ಯಾರಾದರೂ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಇನ್ನೊಬ್ಬರ ಬದುಕಿನಲ್ಲಿ ನಿಮ್ಮ ಕೈಯಿಂದ ಪರಿಹರಿಸಲಾಗದ ಸಮಸ್ಯೆ ಇದ್ದಾಗ ನೀವು ಅವರಿಗೆ ದಾರಿ ತೋರಿಸುವ ಭಗವಂತ ಎಂದು ಇನ್ನೊಬ್ಬರಿಗಾಗಿ ಪ್ರಾರ್ಥನೆ ಮಾಡಬಹುದು ಹೊರತು ಸ್ವಾರ್ಥಕಾಗಿ ಬೇಡಿಕೆ ಇಡುವುದನ್ನೇ ಪ್ರಾರ್ಥನೆ ಎಂದು ಕೊಳ್ಳಬಾರದು.

ನಿಮ್ಮ ಬದುಕಿನಲ್ಲಿ ನೀವು ಏನನ್ನಾದರೂ ಸಾಧಿಸಬೇಕು ಅಥವಾ ಪಡೆದುಕೊಳ್ಳಬೇಕು ಎನ್ನುವುದು ನಿಮ್ಮ ಮನಸ್ಸಿನಲ್ಲಿ ಹುಟ್ಟಿದ್ದರೆ ನೀವು ಅದಕ್ಕಾಗಿ ಕಷ್ಟ ಪಡಬೇಕು, ಜೊತೆಗೆ ಅದನ್ನು ಸನ್ಮಾರ್ಗದಿಂದ ಸಂಪಾದಿಸಿಕೊಳ್ಳಲು ಪ್ರಯುತ್ನ ಪಡಬೇಕು. ನೀವು ಈ ರೀತಿ ನ್ಯಾಯವಾದ ದಾರಿಯಲ್ಲಿ ಹೋಗಿ ನೀವು ಇಷ್ಟ ಪಟ್ಟಿದ್ದನ್ನು ಪಡೆದುಕೊಳ್ಳಲು ಕಷ್ಟ ಪಡುತ್ತಿದ್ದರೆ ಭಗವಂತ ಅದನ್ನು ನೋಡಿ ಸುಮ್ಮನೆ ಇರುವುದಿಲ್ಲ ಖಂಡಿತವಾಗಿಯೂ ಕೂಡ ನಿಮ್ಮ ದಾರಿಯಲ್ಲಿ ಅದು ಸಿಗುವಂತೆ ಮಾಡುತ್ತಾನೆ.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

ಹಾಗಾಗಿ ಏನೇ ಬೇಕೆಂದರೂ ಸ್ವಂತ ಪರಿಶ್ರಮದಿಂದ ಪಡೆದುಕೊಳ್ಳಲು ಪ್ರಯತ್ನಿಸಿ, ನಿಮಗೆ ಏನೇ ಬೇಕು ಎಂದು ಅನಿಸಿದರೂ ಕೂಡ ಅದು ನಿಮ್ಮ ಮನಸ್ಸಿನ ಆಳದಿಂದ ಬರಬೇಕು ಹೊರತು ಮತ್ತೊಬ್ಬರ ಬಳಿ ಇರುವುದನ್ನು ನೋಡಿ ಅವರ ಮೇಲಿನ ಹೊಟ್ಟೆ ಕಿಚ್ಚಿನಿಂದ ಬರಬಾರದು. ಸಾಧ್ಯವಾದಷ್ಟು ನಾವು ಬದುಕಿನ ಭವ ಬಂಧನಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ಹಾಗೂ ಯಾವಾಗ ಬೇಕಾದರೂ ಎಲ್ಲವನ್ನು ಬಿಟ್ಟು ಹೋಗುವುದಕ್ಕೆ ತಯಾರಿರಬೇಕು. ಆಗ ಮಾತ್ರ ದುರಾಸೆಗೆ ಬೀಳದೆ ಒಳ್ಳೆಯ ರೀತಿಯಲ್ಲಿ ನಮ್ಮ ಬದುಕನ್ನು ಕಳೆದು ದೇವರಿಗೆ ಹತ್ತಿರವಾಗುತ್ತೇವೆ. ಇನ್ನು ಮುಂದೆ ಆದರೂ ನೀವು ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ತಿದ್ದಿಕೊಳ್ಳಿ.

ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷ ಮಾಡಬೇಡಿ, ಹೃದಯ.ಘಾ.ತ.ದ ಎಚ್ಚರಿಕೆ ನೀಡುವ ಲಕ್ಷಣಗಳು ಇವು.!

ಹೃದಯಕ್ಕೆ ರಕ್ತದ ಹರಿವು ತೀವ್ರ ಕಡಿಮೆಯಾದಾಗ ಅಥವಾ ರಕ್ತದ ಹರಿವು ನಿಂತು ಹೋದಾಗ ಹೃದಯಘಾತ ಆಗುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಅಥವಾ ಇತರ ಪದಾರ್ಥಗಳ ಶೇಖರಣೆಯಿಂದಾಗಿ ಈ ರೀತಿ ಆಗುತ್ತದೆ. ಹೃದಯಘಾತ ಆಗುವುದಕ್ಕೂ ಮುನ್ನ ಕೆಲ ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷಿಸದೆ ಅರ್ಥ ಮಾಡಿಕೊಂಡು ತಕ್ಷಣವೇ ಎಚ್ಚೆತ್ತುಕೊಂಡರೆ ಪ್ರಾಣಪಾಯ ಆಗುವುದನ್ನು ತಪ್ಪಿಸಬಹುದು. ಹಾಗಾಗಿ ಹೃದಯಘಾತ ಆಗುವುದಕ್ಕೂ ಮುನ್ನ ಕಂಡುಬರುವ ಕೆಲವು ಪ್ರಮುಖ ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

● ಬೇಗ ಸುಸ್ತಾಗುವುದು:- ನಡೆಯುವಾಗ, ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವುದಾಗ ಇಲ್ಲವೇ ಸ್ವಲ್ಪ ಕೆಲಸ ಮಾಡಿದ ತಕ್ಷಣವೇ ಬಹಳ ಸುಸ್ತಾಗುತ್ತಿದ್ದರೆ ನೀವು ತಪ್ಪದೇ ವೈದ್ಯರನ್ನು ಭೇಟಿ ಮಾಡಲೇಬೇಕು. ಮಹಿಳೆಯರಿಗೆ ತೀವ್ರ ಸುಸ್ತು ಹಾಗೂ ಆಯಾಸವಾಗುತ್ತಿದ್ದರೆ ಅದನ್ನು ಕಡೆಗಣಿಸುವಂತಿಲ್ಲ, ಅದು ಹೃದ್ರೋಗದ ಲಕ್ಷಣವಾಗಿರಬಹುದು. ಹಾಗಾಗಿ ತಪ್ಪದೇ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

● ತೋಳಿನ ನೋವು:- ಕೆಲವರಿಗೆ ಹೃದಯಘಾತದ ಲಕ್ಷಣವು ದೇಹದ ಎಡಭಾಗದ ನೋವುಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೂಡ ಹೃದಯದ ಎಡ ಭಾಗದಲ್ಲಿ ಹೆಚ್ಚು ನೋವಿದ್ದು, ಹೃದಯದ ಕೆಳಗೆ ವಿಪರೀತವಾಗಿ ಮತ್ತು ಅದು ತೋಳಿನವರೆಗೂ ಕೂಡ ಹಬ್ಬಿರುತ್ತದೆ. ಹಾಗಾಗಿ ಈ ರೀತಿ ಲಕ್ಷಣಗಳು ಇರುವವರು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಇರುತ್ತಾರೆ ಎಂದು ಊಹಿಸಬಹುದು. ಇಂಥವರು ಕೂಡ ತಪ್ಪದೆ ಒಮ್ಮೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಹೃದಯದ ಆರೋಗ್ಯಕ್ಕೆ ಸಂಬಂಧಪಟ್ಟ ಪರೀಕ್ಷೆಗೆ ಒಳಪಡುವುದು ಒಳ್ಳೆಯದು.

● ಎದೆ ನೋವು ಅಥವಾ ಅಸ್ವಸ್ಥತೆ:- ವಿಪರೀತವಾದ ಎದೆ ನೋವು ಕೂಡ ಮುಂದೆ ಹೃದಯಘಾತ ಉಂಟಾಗಬಹುದಾದ ಲಕ್ಷಣ. ಅತಿಯಾದ ಒತ್ತಡ ಇದಕ್ಕೆ ಕಾರಣವಾಗಿರಬಹುದು. ಯಾವಾಗಲೂ ಹೃದಯಕ್ಕೆ ನೋವನ್ನುಂಟು ಮಾಡುವ ಭಾವನೆಗಳು ಹಾಗೂ ಹೃದಯದ ಭಾಗದಲ್ಲಿ ವಿಪರೀತವಾದ ಬಿಗಿತ ಅನಾರೋಗ್ಯ ಪೀಡಿತ ಹೃದಯದ ಲಕ್ಷಣ ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

● ತಲೆ ತಿರುಗುವುದು:- ಅನೇಕ ಕಾರಣಗಳಿಂದ ತಲೆತಿರುಗು ಉಂಟಾಗುತ್ತದೆ, ಹೃದಯಾಘಾತ ಒಂದೇ ಕಾರಣವಲ್ಲ ಆದರೆ ಅದು ಒಂದು ಲಕ್ಷಣ ಕೂಡ ಹೌದು. ಬೇರೆ ಯಾವುದೇ ಗಂಭೀರ ಸಮಸ್ಯೆ ಇಲ್ಲದೆ ತಲೆ ತಿರುಗು ಬರುತ್ತಿದ್ದರೆ ಲೋ ಬಿಪಿ ಆಗಿರಬಹುದು, ಈ ರೀತಿ ಕಡಿಮೆ ರಕ್ತದ ಒತ್ತಡ ಇದ್ದಾಗ ಹೃದಯ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಆಗುವುದಿಲ್ಲ, ಈ ರೀತಿ ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾದಾಗ ಹೃದಯಘಾತ ಉಂಟಾಗುತ್ತದೆ. ಹಾಗಾಗಿ ಈ ರೀತಿಯ ಲಕ್ಷಣ ಕಾಣಿಸಿಕೊಂಡಾಗ ಕೂಡ ತಪ್ಪದೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡಿ.

● ಗಂಟಲು ನೋವು ಅಥವಾ ದವಡೆ ನೋವು:- ಇತ್ತೀಚಿನ ಅನೇಕ ಪ್ರಕರಣಗಳಲ್ಲಿ ಹೃದಯಘಾತ ಆಗುವುದಕ್ಕೂ ಮುನ್ನ ಆನೇಕರಿಗೆ ಹಲ್ಲುನೋವು ಹಾಗೂ ಗಂಟಲು ನೋವು ಕಾಣಿಸಿಕೊಂಡಿದೆ. ಹಾಗಾಗಿ ಶೀತ, ನೆಗಡಿ, ಸೈನಸ್ ನಂತಹ ಸಮಸ್ಯೆಗಳು ಬಿಟ್ಟು ಬೇರೆ ಯಾವುದೇ ಕಾರಣದಿಂದ ಗಂಟಲು ನೋವು ಅಥವಾ ದವಡೆ ನೋವು ಇದ್ದರೆ ಅದು ಕೂಡ ಇದನ್ನೇ ಸೂಚಿಸುತ್ತದೆ. ಆದ್ದರಿಂದ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಎಚ್ಚರವಾಗಿರಿ ಮತ್ತು ಸೂಕ್ತ ವೈದ್ಯರನ್ನು ಭೇಟಿಯಾಗಿ ಸಮಸ್ಯೆ ಇದ್ದರೆ ಕೂಡಲೇ ಒಳ್ಳೆಯ ಚಿಕಿತ್ಸೆ ಪಡೆದುಕೊಳ್ಳಿ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

● ಆಯಾಸ, ಅಜೀರ್ಣ ಹಾಗೂ ಹೊಟ್ಟೆ ನೋವು:- ಕೆಲವರಿಗೆ ಹೃದಯಘಾತ ಆಗುವಾಗ ಅಜೀರ್ಣ, ವಾಕರಿಕೆ, ಹೊಟ್ಟೆ ನೋವು, ವಾಂತಿ ಉಂಟಾಗಿದೆ. ಈಗಾಗಲೇ ನೀವು ಈ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣವನ್ನು ಹೊಂದಿದ್ದು ಅದರ ಜೊತೆಗೆ ಈ ರೀತಿಯಾಗುತ್ತಿದ್ದರೆ ಅಂತಹ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಸಾಧ್ಯವಾದಷ್ಟು ತಕ್ಷಣವೇ ಆಸ್ಪತ್ರೆಗೆ ಹೋಗಲು ಪ್ರಯತ್ನಿಸಬೇಕು.

ಕನಸಿನಲ್ಲಿ ಯಾವ ವಸ್ತುವನ್ನು ಕಂಡರೆ ಏನು ಅರ್ಥ ಬರುತ್ತದೆ ಗೊತ್ತಾ.?

ಕನಸುಗಳನ್ನು ಎಲ್ಲರೂ ಕಾಣುತ್ತಾರೆ, ಅದರಲ್ಲಿ ಎರಡು ರೀತಿ ಇದೆ. ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಸದಾ ಯೋಚನೆ ಮಾಡುತ್ತಾ ಇದ್ದರೆ ಖಂಡಿತವಾಗಿಯೂ ಆ ವಿಷಯಗಳು ಆತನ ಸಬ್ ಕಾನ್ಷಿಯಸ್ ಮೈಂಡ್ ಅಲ್ಲಿ ಉಳಿದುಕೊಂಡು ಆತ ಅದರ ಬಗ್ಗೆಯೇ ಕನಸು ಕಾಣುತ್ತಾನೆ. ಇದನ್ನು ವಿದ್ಯಾರ್ಥಿಗಳಲ್ಲಿ ಅಥವಾ ಉದ್ಯೋಗ ಆಕಾಂಕ್ಷಿಗಳಲ್ಲಿ, ಮಹತ್ವಾಕಾಂಕ್ಷೆ ಉಳ್ಳವರಲ್ಲಿ ಕಾಣಬಹುದು. ಸಾಮಾನ್ಯ ಜನರೂ ಕೂಡ ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ ಕೆಲವು ಕನಸುಗಳು ಎಚ್ಚರವಾದಗ ನೆನಪಿಗೆ ಬರುವುದಿಲ್ಲ, ಆದರೆ ಇನ್ನು ಕೆಲವು ಅಚ್ಚಳಿಯದಂತೆ ಉಳಿದುಕೊಳ್ಳುತ್ತವೆ.

ಈ ರೀತಿ ಬೀಳುವ ಕನಸನ್ನು ಬರಿ ಕನಸು ಮಾತ್ರವಲ್ಲ ಮುಂದೆ ಬರುವ ವಿಷಯವನ್ನು ತಿಳಿಸುವ ಮುನ್ಸೂಚನೆ ಎಂದು ಕೂಡ ಅಂದುಕೊಳ್ಳಬಹುದು. ಈ ರೀತಿಯ ಕನಸಿನಿಂದ ನಮಗೆ ಭವಿಷ್ಯದಲ್ಲಿ ಬರುವ ಆಗುಹೋಗುಗಳ ಬಗ್ಗೆ ಸುಳಿವು ಇರುತ್ತದೆ ಅದನ್ನು ಸ್ವಪ್ನ ಫಲ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅದರಲ್ಲಿ ಕೆಲವು ಪ್ರಮುಖವಾದ ಕೆಲ ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

● ಕನಸಿನಲ್ಲಿ ಕುಂಕುಮವನ್ನು ಕಂಡರೆ ಕೀರ್ತಿ ಲಭಿಸುತ್ತದೆ, ಅದು ಅದೃಷ್ಟದ ಸಂಕೇತ.
● ಕನಸಿನಲ್ಲಿ ಅಡುಗೆ ಮನೆಯನ್ನು ಕಂಡರೆ ಶೀಘ್ರದಲ್ಲಿ ಸುಖ ಭೊಜನ ಪ್ರಾಪ್ತಿಯಾಗುತ್ತದೆ ಮತ್ತು ಸಾಲದಿಂದ ಮುಕ್ತಿ ದೊರೆಯುತ್ತದೆ ಎಂದರ್ಥ
● ಕನಸಿನಲ್ಲಿ ದೇವಸ್ಥಾನ ಅಥವಾ ದೇವರನ್ನು ಕಂಡರೆ ನಿಮಗಿರುವ ಕಷ್ಟ ಕಾಲ ಕಳೆದು ಒಳ್ಳೆಯ ಸಮಯ ಬರುತ್ತಿದೆ ಎಂದು ಅರ್ಥ.
● ಕನಸಿನಲ್ಲಿ ಶುದ್ಧವಾದ ನೀರನ್ನು ಕಂಡರೆ ನಿಮಗೆ ಶೀಘ್ರದಲ್ಲಿ ಶುಭವಾಗಲಿ, ಶುಭ ಸಮಾಚಾರ ಕೇಳುತ್ತೀರಿ ಎಂದುಕೊಳ್ಳಬಹುದು.

● ಅಶುದ್ಧವಾದ ನೀರನ್ನು ಕನಸಿನಲ್ಲಿ ಕಂಡರೆ ಅದು ಅಶುಭ, ನಷ್ಟ ಹಾಗೂ ಕೆಟ್ಟ ಸುದ್ದಿಯನ್ನು ಕೇಳುತ್ತಿರಿ ಎನ್ನುವುದರ ಸೂಚನೆ.
● ಕನಸಿನಲ್ಲಿ ನಿಧಿಯನ್ನು ಕಂಡರೆ ಸಂಪತ್ತು ಪ್ರಾಪ್ತಿ ಆಗುತ್ತದೆ ಎನ್ನುವುದರ ಮುನ್ಸೂಚನೆ.
● ಗಂಧವನ್ನು ಕನಸಿನಲ್ಲಿ ಕಂಡರೆ ಅದು ಕೂಡ ಶುಭ ಸಂಕೇತ
● ಕನಸಿನಲ್ಲಿ ನೋಟನ್ನು ಅಥವಾ ನೋಟಿನ ಕಂತೆಗಳನ್ನು ಕಂಡರೆ ನಿಮಗೂ ಕೂಡ ಧನ ಲಾಭವಾಗಲಿದೆ ಎನ್ನುವುದರ ಸೂಚನೆ.
● ಚಿಲ್ಲರೆ ಹಣವನ್ನು ಕಂಡರೆ ನಿಮ್ಮ ಹಣ ಖರ್ಚಾಗುತ್ತದೆ ಎನ್ನುವ ಅರ್ಥ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

● ಕನಸಿನಲ್ಲಿ ಉರಿಯುತ್ತಿರುವ ದೀಪವನ್ನು ಕಂಡರೆ ಅದು ಸಮೃದ್ಧಿಯ ಸಂಕೇತ
● ಅರಳಿರುವ ಹೂಗಳನ್ನು ಕನಸಿನಲ್ಲಿ ಕಂಡರೆ ನಿಮಗಿದ್ದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದರ ಸೂಚನೆಯದು.
● ಪುಸ್ತಕಗಳನ್ನು ಕನಸಿನಲ್ಲಿ ಕಂಡರೆ ಅದು ನಿಮ್ಮ ಪ್ರಬುದ್ಧತೆ ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
● ಯಾವುದೇ ರೀತಿಯ ಆಯುಧಗಳನ್ನು ಕನಸಿನಲ್ಲಿ ಕಂಡರೆ ನಿಮ್ಮ ನಿಂತು ಹೋಗಿದ್ದ ಕೆಲಸಗಳು ಮತ್ತೆ ಶುರು ಆಗುತ್ತದೆ ಎನ್ನುವುದರ ಸೂಚನೆ.

● ಕಾಗೆಗಳನ್ನು ಕನಸಿನಲ್ಲಿ ಕಂಡರೆ ನೀವು ಆದಷ್ಟು ಎಲ್ಲ ವಿಷಯದಲ್ಲೂ ಕೂಡ ಜಾಗೃತಿಯಲ್ಲಿರಬೇಕು ಎನ್ನುವ ಸೂಚನೆ.
● ತಲಪಾಯ ಕನಸಿನಲ್ಲಿ ಕಂಡರೆ ಗೌರವ ಹೆಚ್ಚಾಗುತ್ತದೆ
● ಕನಸಿನಲ್ಲಿ ಸತ್ತು ಹೋದ ಹಿರಿಯರು ಕಾಣಿಸಿಕೊಂಡರೆ ಅವರ ಆಶೀರ್ವಾದ ದೊರೆತಿದೆ ಎಂದು ಅಂದುಕೊಳ್ಳಬೇಕು.
● ಕನಸಿನಲ್ಲಿ ವಾಹನಗಳನ್ನು ಕಂಡರೆ ನೀವು ಸದ್ಯದಲ್ಲೇ ಪ್ರಯಾಣವನ್ನು ಬೆಳೆಸಬೇಕಾಗಿ ಬರುತ್ತದೆ ಎನ್ನುವುದರ ಸೂಚನೆ.

ಹೆಣ್ಣುಮಕ್ಕಳು ಹಾಕುವ ಶಾಪ ನಮ್ಮನ್ನು ಜೀವನ ಪೂರ್ತಿ ನರಳುವಂತೆ ಮಾಡುತ್ತದೆ.! ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ, ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಕನ್ನಡಿ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಯಾವುದೇ ಮಹತ್ವಕಾಂಕ್ಷೆ ನೆರವೇರುತ್ತದೆ ಎಂದು ಅರ್ಥ
● ಸಂಖ್ಯೆಗಳನ್ನು ಕನಸಿನಲ್ಲಿ ಕಂಡರೆ ನಿಮಗೆ ಲಾಟರಿಯಲ್ಲಿ ಲಾಭವಾಗುತ್ತದೆ ಎನ್ನುವುದರ ಮುನ್ಸೂಚನೆ.
● ನೀವು ಕುದುರೆ ಮೇಲೆ ಸವಾರಿ ಮಾಡುತ್ತಿರುವ ರೀತಿ ಕನಸಿನಲ್ಲಿ ಕಂಡರೆ ನೀವು ಕೈಗೊಳ್ಳಬೇಕು ಎಂದು ಹಾಕಿಕೊಂಡಿರುವ ಯೋಜನೆಯಲ್ಲಿ ಯಶಸ್ವಿಯಾಗುತ್ತೀರಿ ಎಂದು ಅರ್ಥ.
● ಕನಸಿನಲ್ಲಿ ಮುತ್ತೈದೆಯರನ್ನು ಕಂಡರೆ ಅದು ಕೂಡ ಶುಭ.

ಗೃಹಣಿಯರಿಗೆ ಉಪಯುಕ್ತವಾಗುವ ಕೆಲವು ಅಡುಗೆಮನೆ ಟಿಪ್ಸ್.!

ಮನೆ ಎಂದ ಮೇಲೆ ಹೆಣ್ಣು ಮಕ್ಕಳಿಗೆ ಸಾಕಷ್ಟು ಕೆಲಸ ಇರುತ್ತದೆ. ಅಡಿಗೆ ಮಾಡುವುದು, ಆ ಪಾತ್ರೆಗಳನ್ನು ಸ್ವಚ್ಛ ಮಾಡುವುದು, ಮನೆಯಲ್ಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಬಟ್ಟೆ ಒಣಗಿಸುವುದು ಅವುಗಳಲ್ಲಿ ಇರುವ ಸ್ಥಳದಲ್ಲಿ ನೀಟಾಗಿ ಜೋಡಿಸುವುದು, ಮನೆಗೆ ಬೇಕಾದ ವಸ್ತುಗಳನ್ನು ಇಲ್ಲ ಶಾಪಿಂಗ್ ಮಾಡಿ ತರುವುದು, ಈ ಪಟ್ಟಿ ಮುಗಿಯುವುದೇ ಇಲ್ಲ.

ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಅಥವಾ ಚಿಕ್ಕ ಮಕ್ಕಳು ಮನೆಯಲ್ಲಿರುವ ಕುಟುಂಬದ ಸ್ತ್ರೀಯರಿಗೆ ಸಮಯ ಸಾಲುವುದೇ ಇಲ್ಲ, ಆದರೆ ಕೂಡ ಎಲ್ಲವನ್ನು ಸಂಭಾಳಿಸಿಕೊಂಡು ಅಚ್ಚುಕಟ್ಟಾಗಿ ಅವರ ಕೆಲಸವನ್ನು ಬೇಗ ಬೇಗ ಮುಗಿಸಬೇಕಾಗುತ್ತದೆ. ಅಂತಹ ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಅಡುಗೆ ಮನೆ ಕೆಲಸ ಸುಲಭ ಮಾಡುವ ಕೇಲ ಟಿಪ್ ಗಳನ್ನು ನೀಡುತ್ತಿದ್ದೇವೆ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

● ಹಾಲನ್ನು ಸ್ವಚ್ಛವಾದ ಮಡಿಕೆಯಲ್ಲಿ ಇಟ್ಟರೆ ಎರಡು ದಿನಗಳಾದರೂ ಕೂಡ ಹಾಲು ಕೆಡುವುದಿಲ್ಲ
● ತರಕಾರಿಗಳನ್ನು ಬೇಯಿಸುವಾಗ ಅದರ ಜೊತೆಗೆ ಒಂದು ಚಿಟಿಕೆ ಅಡಿಗೆ ಸೋಡಾ ಹಾಕುವುದರಿಂದ ತರಕಾರಿಗಳ ಬಣ್ಣ ಬದಲಾಗುವುದಿಲ್ಲ
● ಚಪಾತಿಯು ಮೃದುವಾಗಿ ಆಗಬೇಕು ಎಂದರೆ ಹಿಟ್ಟು ಕಲಸುವಾಗ ಹಾಲು ಅಥವಾ ಬಿಸಿನೀರನ್ನು ಸೇರಿಸಿ, ಚಪಾತಿಗೆ ನೀರು ಹೆಚ್ಚಾದರೆ ಅದು ಬೇಯುವುದಿಲ್ಲ. ನೀರು ಕಡಿಮೆ ಆದರೆ ಗಟ್ಟಿಯಾಗುತ್ತದೆ. ಹಾಗಾಗಿ ಚಪಾತಿ ಚೆನ್ನಾಗಿ ಬರಬೇಕು ಎಂದರೆ ಹಿಟ್ಟನ್ನು ಕಲಸುವಾಗಲೇ ಸರಿಯಾದ ಹದಕ್ಕೆ ಕಲಸಬೇಕು.

● ಸಕ್ಕರೆ ಡಬ್ಬಕ್ಕೆ ಇರುವೆಗಳು ಬರಬಾರದು ಎಂದರೆ ಸಕ್ಕರೆಯ ಜೊತೆ ಎರಡು ಮೂರು ಲವಂಗವನ್ನು ಡಬ್ಬದಲ್ಲಿ ಹಾಕಿ ಇಡಬೇಕು
● ಕುಕ್ಕರ್ ನಲ್ಲಿ ಆವಿಯಾಗಲು ಇಡುವ ನೀರಿನಲ್ಲಿ ನಿಂಬೆಹಣ್ಣಿನ ತುಂಡನ್ನು ಸೇರಿಸಿ ಇಡುವುದರಿಂದ ತಳದಲ್ಲಿ ಬಣ್ಣ ಬದಲಾಗುವುದಿಲ್ಲ, ಹಳೆ ಕಲೆಗಳು ಇದ್ದರೂ ಕೂಡ ಸ್ವಚ್ಛವಾಗುತ್ತದೆ
● ಸೀಸೆ ಅಥವಾ ಉಪ್ಪಿನಕಾಯಿ ಜಾಡಿಯಲ್ಲಿ ಇಟ್ಟಿರುವ ಉಪ್ಪಿನ ಕಾಯಿಯನ್ನು ತೆಗೆಯಲು ಪ್ಲಾಸ್ಟಿಕ್ ಅಥವಾ ಇಂಡಾಲಿಯಂ ಚಮಚ ಬಳಸುವುದರ ಬದಲು ಮರದ ಚಮಚವನ್ನು ಉಪಯೋಗಿಸಿ ಇದರಿಂದ ಉಪ್ಪಿನಕಾಯಿ ಕೆಡುವುದಿಲ್ಲ ಜಾಸ್ತಿ ದಿನ ಬರುತ್ತದೆ.

ಹೆಣ್ಣುಮಕ್ಕಳು ಹಾಕುವ ಶಾಪ ನಮ್ಮನ್ನು ಜೀವನ ಪೂರ್ತಿ ನರಳುವಂತೆ ಮಾಡುತ್ತದೆ.! ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ, ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಚಪಾತಿ ಹಿಟ್ಟು ಕಲಸುವಾಗ ಅದರ ಜೊತೆ ಸ್ವಲ್ಪ ಹರಳಣ್ಣೆ ಮಿಕ್ಸ್ ಮಾಡಿಕೊಂಡರೆ ಚಪಾತಿ ಬಹಳ ಮೃದುವಾಗಿ ಬರುತ್ತದೆ
● ಅಕ್ಕಿ ಬೇಳೆ ಈ ರೀತಿ ಯಾವುದೇ ಧಾನ್ಯಗಳಿಗಾದರೂ ಅವುಗಳನ್ನು ಇಡುವ ಡಬ್ಬದಲ್ಲಿ ಸ್ವಲ್ಪ ಮೆಣಸಿನಕಾಯಿಯನ್ನು ಹಾಕಿ ಇಡುವುದರಿಂದ ಇರುವೆ, ಕೀಟ ಇವುಗಳು ಹತ್ತುವುದಿಲ್ಲ
● ಎಣ್ಣೆ ಕಾಯಲು ಇಟ್ಟಾಗ ಅದು ಕಾದ ಮೇಲೆ ಉಕ್ಕುತ್ತದೆ. ಈ ರೀತಿ ಉಕ್ಕಿ ಸುರಿಯಬಾರದು ಎಂದರೆ ಎಣ್ಣೆಯನ್ನು ಕಾಯಲು ಇಡುವ ಮುನ್ನವೇ ಎರಡು ಮೂರು ಸೀಬೆ ಎಳೆಯಲು ಅದಕ್ಕೆ ಅದ್ದಿ ಹೊರ ತೆಗೆಯಬೇಕು. ಈ ರೀತಿ ಮಾಡಿ ಕುದಿಸಿದರೆ ಎಣ್ಣೆ ಉಕ್ಕುವುದಿಲ್ಲ.

● ಮಾಂಸವನ್ನು ಫ್ರಿಡ್ಜ್ ನಲ್ಲಿ ಇಟ್ಟು ನಂತರ ಅಡುಗೆ ಮಾಡಲು ಉಪಯೋಗಿಸಿದರೆ ಅಡುಗೆಗೆ ಬಳಸುವ ಮುನ್ನ ಅದನ್ನು ಚೆನ್ನಾಗಿ ತೊಳೆಯಬೇಕು
● ಮೊಟ್ಟೆಯನ್ನು ಬೇಯಲು ಇಟ್ಟಾಗ ಕೆಲವೊಮ್ಮೆ ಅದು ಒಡೆಯುತ್ತದೆ. ಈ ರೀತಿ ಆಗಬಾರದು ಎಂದರೆ ಅವುಗಳ ಮೇಲೆ ಸ್ವಲ್ಪ ನಿಂಬೆ ರಸವನ್ನು ಚಿಮ್ಮಿಸಿ ಇರಗಬೇಕು, ಆಗ ಒಡೆಯುವುದಿಲ್ಲ.
● ಹೆಸರುಬೇಳೆ ಚೆನ್ನಾಗಿ ಬೇಯಬೇಕು ಎಂದರೆ ಬೇಯಲು ಇಡುವಾಗಲೇ ಒಂದು ಚೂರು ತೆಂಗಿನಕಾಯಿ ಚೂರನ್ನು ಹಾಕಿ ಇಡಬೇಕು ಆಗ ಚೆನ್ನಾಗಿ ಬೇಯುತ್ತದೆ.

● ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಚಹಾ ಪುಡಿಗೆ ಮಿಕ್ಸ್ ಮಾಡಿದರೆ ಇದರಿಂದ ಮಾಡುವ ಚಹಾಗೆ ವಿಶೇಷ ರುಚಿ ಬರುತ್ತದೆ
● ಬೇಳೆ ಅಥವಾ ಇನ್ಯಾವುದೇ ಕಾಳುಗಳನ್ನು ಅಥವಾ ತರಕಾರಿಯನ್ನು ಬೇಯಲು ಇಡುವಾಗ ಚೆನ್ನಾಗಿ ಬೇಯಬೇಕು ಎಂದರೆ ಅದಕ್ಕೆ ಒಂದೆರಡು ಹನಿ ಹರಳೆಣ್ಣೆಯನ್ನು ಸೇರಿಸಬೇಕು.
● ಹಾಲು ಕಾಯಲು ಇಡುವಾಗ ಅದು ಉಕ್ಕಬಾರದು ಎಂದರೆ ಹಾಲಿನ ಮಟ್ಟಕ್ಕಿಂತ ಮೇಲೆ ಬರುವಂತೆ ಸ್ಟೀಲ್ ಚಮಚವನ್ನು ಅದರಲ್ಲಿ ಹಾಕಬೇಕು. ಆಗ ಹಾಲು ಉಕ್ಕುವುದಿಲ್ಲ.

ಶುಕ್ರವಾರದಂದು ಯಾವುದೇ ಕಾರಣಕ್ಕೂ ಈ 6 ತಪ್ಪುಗಳನ್ನು ಮಾಡಲೇಬೇಡಿ.!

ಶುಕ್ರವಾರ ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ದಿನ. ಅದರಲ್ಲೂ ಕೂಡ ತಾಯಿ ಮಹಾಲಕ್ಷ್ಮಿ ಪೂಜೆಗೆ ಪ್ರಾಶಸ್ತ್ಯವಾದ ದಿನ. ಆ ದಿನ ಮನೆ ಮನೆಗಳಲ್ಲೂ ಕೂಡ ಮಹಾಲಕ್ಷ್ಮಿಯ ಆರಾಧನೆ ಮಾಡುತ್ತಾರೆ. ಭಕ್ತಿಯಿಂದ ತಾಯಿಯ ಆರಾಧನೆ ಮಾಡಿ ಮಹಾಲಕ್ಷ್ಮಿ ದೇವಿಯ ಕೃಪಕಟಾಕ್ಷಕ್ಕೆ ಒಳಗಾಗಲು ಕಟ್ಟುನಿಟ್ಟಾದ ಕ್ರಮಗಳನ್ನ ಅನುಸರಿಸುತ್ತಾರೆ.

ಈ ರೀತಿ ಶುಕ್ರವಾರದಂದು ಮಹಾಲಕ್ಷ್ಮಿ ಉಪಾಸನೆ ಮಾಡುವ ಕಾರಣ ಕೆಲ ತಪ್ಪುಗಳನ್ನು ಮಾಡಬಾರದು. ಶುಕ್ರವಾರದಂದು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಅನಿಷ್ಟ ಸುತ್ತುತ್ತದೆ, ದಟ್ಟ ದಾರಿದ್ರ್ಯಕ್ಕೆ ಒಳಗಾಗ ಬೇಕಾಗುತ್ತದೆ. ಹಾಗಾಗಿ ಇಂತಹ ವಿಷಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು ಮತ್ತು ಈ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳಬೇಕು.

ಹೆಣ್ಣುಮಕ್ಕಳು ಹಾಕುವ ಶಾಪ ನಮ್ಮನ್ನು ಜೀವನ ಪೂರ್ತಿ ನರಳುವಂತೆ ಮಾಡುತ್ತದೆ.! ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ, ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಶುಕ್ರವಾರ ಮನೆಯಲ್ಲಿ ಉಪ್ಪು ಹಾಗೂ ಅರಿಶಿಣ ಖಾಲಿಯಾಯಿತು ಎಂದು ಹೇಳಬಾರದು. ಯಾವತ್ತೂ ಕೂಡ ಉಪ್ಪು ಹಾಗೂ ಅರಿಶಿಣ ಖಾಲಿ ಆಗುವವರೆಗೂ ಕೂಡ ಕಾಯಬಾರದು. ಆ ಡಬ್ಬಗಳು ಖಾಲಿ ಇರಬಾರದು, ಅದು ಇನ್ನೂ ಇದೆ ಎನ್ನುವಾಗಲೇ ಇವುಗಳನ್ನು ತಂದು ತುಂಬಿಸಿ ಇಟ್ಟುಕೊಳ್ಳಬೇಕು.

● ಪ್ರತಿಯೊಂದು ಮನೆಯಲ್ಲೂ ಕೂಡ ಅಕ್ಕಿ ಡಬ್ಬದ ಒಳಗೆ ಅಳತೆ ಮಾಡಲು ಒಂದು ಲೋಟವನ್ನು ಇಟ್ಟುಕೊಳ್ಳುತ್ತಾರೆ. ಈ ರೀತಿ ಲೋಟಗಳು ಯಾವಾಗಲೂ ನೇರವಾಗಿ ಇರಬೇಕು. ತಲೆಕೆಳಗಾದ ರೀತಿ ಅಕ್ಕಿ ಡಬ್ಬದ ಒಳಗಡೆ ಆಗಲಿ ಮೇಲೆ ಆಗಲಿ ಆ ಲೋಟವನ್ನು ಇಡಬಾರದು. ಅದರಲ್ಲೂ ಶುಕ್ರವಾರದಂದು ನೀವೇ ನಿಮ್ಮ ಕೈಯಾರೆ ಈ ರೀತಿ ಆ ಲೋಟವನ್ನು ಉಲ್ಟಾ ಮಾಡಿ ಇಡಬಾರದು ಈ ರೀತಿ ತಪ್ಪು ಮಾಡಿದರೂ ಕೂಡ ದರಿದ್ರ ಬರುತ್ತದೆ.

ಅತ್ತೆ-ಸೊಸೆ ನಡುವೆ ಜಗಳ ಹೇಗೆ ಶುರುವಾಗುತ್ತದೆ.? ಈ ರೀತಿ ಆದಾಗ ಗಂಡನ ಮನಸ್ಥಿತಿ ಹೇಗಿರುತ್ತದೆ.? ಅದು ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡಿ.!

● ರಾತ್ರಿ ಹೊತ್ತು ಊಟ ಆದ ಬಳಿಕ ಎಲ್ಲಾ ಪಾತ್ರೆಗಳನ್ನು ತೊಳೆದಿಡುವುದು ಅಭ್ಯಾಸ. ಆದರೆ ನೆನಪಿರಲಿ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಪೂರ್ತಿಯಾಗಿ ಖಾಲಿ ಮಾಡಿ ಇಡಬಾರದು. ಯಾವುದಾದರೂ ಚಿಕ್ಕ ಬಾಕ್ಸ್ ಅಲ್ಲಿ ಆದರೂ ಸ್ವಲ್ಪ ಅನ್ನ ಅಥವಾ ಇತರ ಯಾವುದೇ ಮಾಡಿರುವ ಆಹಾರ ಪದಾರ್ಥವನ್ನು ಎತ್ತಿ ಇಡಬೇಕು. ಹಿಂದಿನ ಕಾಲದಲ್ಲಿ ಈ ರೀತಿ ಪದ್ಧತಿ ಪಾಲಿಸುತ್ತಿದ್ದರು, ಯಾಕೆಂದರೆ ರಾತ್ರಿ ಹೊತ್ತು ಲಕ್ಷ್ಮಿ ದೇವಿ ಬಂದು ಅಡುಗೆ ಮನೆ ನೋಡುವುದರಿಂದ ಈ ರೀತಿ ಖಾಲಿ ಇದ್ದರೆ ಅವರು ಬೇಸರಿಸಿಕೊಂಡು ಶಪಿಸಿ ಹೋಗುತ್ತಾರೆ ಎನ್ನುವ ನಂಬಿಕೆ. ಹಾಗಾಗಿ ಅದರಲ್ಲೂ ಶುಕ್ರವಾರದಂದು ಅಡುಗೆ ಮನೆಯನ್ನು ಸ್ವಲ್ಪವೂ ಆಹಾರ ಇರದಂತೆ ಬಿಡಬಾರದು.

● ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ, ಚಿಕ್ಕವರಾಗಲಿ ದೊಡ್ಡವರಾಗಲಿ ಮನೆಯಿಂದ ಹೊರ ಹೋಗುವಾಗ ಖಾಲಿ ಹಣೆಯಲ್ಲಿ ಹೋಗಬಾರದು. ಅದರಲ್ಲೂ ಶುಕ್ರವಾರದಂದು ಈ ರೀತಿ ಮಾಡಲೇಬಾರದು. ಹಣೆಗೆ ಕುಂಕುಮ ಇಟ್ಟುಕೊಂಡು ಹೋಗುವುದರಿಂದ ಮಹಾಲಕ್ಷ್ಮಿ ಆಶಿರ್ವಾದ ಪ್ರಾಪ್ತಿಯಾಗುತ್ತದೆ, ನೀವು ಹೋದ ಕೆಲಸದಲ್ಲಿ ಜಯಗಳಿಸುತ್ತೀರಿ.

ಕೇಂದ್ರ ಸರ್ಕಾರದಿಂದ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್ ನೀಡುತ್ತಿದ್ದಾರೆ ಆಸಕ್ತರು ಅರ್ಜಿ ಸಲ್ಲಿಸಿ.!

● ಶುಕ್ರವಾರದಂದು ಯಾವುದೇ ಕಾರಣಕ್ಕೂ ಉಗುರುಗಳನ್ನು ಕಟ್ ಮಾಡಬಾರದು. ಮುಂಜಾನೆ ಮಧ್ಯಾಹ್ನ ಸಂಜೆ ರಾತ್ರಿ ಯಾವ ಸಮಯದಲ್ಲೂ ಕೂಡ ಆ ದಿನ ಉಗುರುಗಳನ್ನು ಕಟ್ ಮಾಡಬಾರದು.ಬೇರೆ ದಿನ ಉಗುರು ಕಟ್ ಮಾಡಿದರೂ ಕೂಡ ಮನೆ ಒಳಗಡೆ ಕುಳಿತು ಉಗುರು ಕಟ್ ಮಾಡಬಾರದು.

● ಶುಕ್ರವಾರದಂದು ಮನೆಗಳಲ್ಲಿ ಬಟ್ಟೆಗಳನ್ನು ಒಗೆಯಬಾರದು, ಇದರಿಂದ ಆರ್ಥಿಕ ಸಮಸ್ಯೆ ಬರುತ್ತದೆ. ಜೊತೆಗೆ ಶುಕ್ರವಾರದಂದು ಸ್ನಾನ ಮಾಡಿದ ಮೇಲೆ ಮಡಿ ಬಟ್ಟೆಗಳನ್ನೇ ಧರಿಸಬೇಕು. ಧರಿಸಿದ್ದ ಬಟ್ಟೆಯನ್ನು ಮತ್ತೆ ಮತ್ತೆ ಧರಿಸುವುದರಿಂದ ದರಿದ್ರ ಬರುತ್ತದೆ, ಶುಕ್ರವಾರದಂದು ಗೃಹಿಣಿಯರು ಮುಂಜಾನೆ ಎದ್ದು ಸೂರ್ಯೋದಯದ ಆಗುವ ವೇಳೆಗೆ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿರಬೇಕು.